Homeಮುಖಪುಟ‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR

‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR

ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಆ ಹಲ್ಲೆಯನ್ನು ಸಮರ್ಥಿಸಿಕೊಂಡು ಈ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ.

- Advertisement -
- Advertisement -

ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಮಾರ್ಚ್ 20 ಮತ್ತು 21 ರಂದು 150-200 ದೇವಾಲಯಗಳ ಹೊರಭಾಗದಲ್ಲಿ, ‘ಹಿಂದೂಗಳಲ್ಲದವರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’ ಎಂಬ ಪೋಸ್ಟರ್‌ಗಳನ್ನು ಹಾಕಿದ ಆರೋಪದಲ್ಲಿ ಹಿಂದೂ ಯುವ ವಾಹಿನಿ ಎಂಬ ಬಲಪಂಥೀಯ ಸಂಘಟನೆಯ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ದಾಸ್ನಾ ಊರಿನ ದೇವಸ್ಥಾನವೊಂದರಲ್ಲಿ ನಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಆ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದ ಈ ಸಂಘಟನೆ ಇತ್ತೀಚೆಗೆ ಈ ಪೋಸ್ಟರ್ ‘ಅಭಿಯಾನ’ ನಡೆಸಲು ನಿರ್ಧರಿಸಿದೆ.

ಕೊಟ್ವಾಲಿಯ ಠಾಣಾಣಾಧಿಕಾರಿ (ಎಸ್‌ಎಚ್‌ಒ) ಶಿಶುಪಾಲ್ ಸಿಂಗ್ ನೇಗಿ ಅವರು ಮಾರ್ಚ್ 21 ರ ಸಂಜೆ ಈ ವಿವಾದಾತ್ಮಕ ಪೋಸ್ಟರ್‌ಗಳನ್ನು ತೆಗೆದುಹಾಕಲು ಸಂಘಟನೆಯ ಸದಸ್ಯರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಅವರ ಸಭೆ ಮುಗಿದ ಕೂಡಲೇ ಹಿಂದೂ ಯುವ ವಾಹಿನಿಯ ಪ್ರಧಾನ ಕಾರ್ಯದರ್ಶಿ ಜೀತು ರಾಂಧವ ದಿ ಕ್ವಿಂಟ್ ವರದಿಗಾರರ ಜೊತೆ ಮಾತನಾಡಿದ್ದು, ‘ನಗರದಲ್ಲಿ ಇಂತಹ ಪೋಸ್ಟರ್‌ಗಳನ್ನು ಹಾಕದಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆ. ಅವರು ಈ ರೀತಿ ಮುಸ್ಲಿಮರ ಪರವಾಗಿರಲು ಏಕೆ ಪ್ರಯತ್ನಿಸುತ್ತಿದ್ದಾರೆ? ಉತ್ತರಾಖಂಡದಂತಹ ಸ್ಥಳದಲ್ಲಿ ಇದು ನಡೆಯುತ್ತಿದೆ ಎಂದು ನಾನು ನಂಬಲು ಸಾಧ್ಯವಿಲ್ಲ. ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡರೆ ನಾನೇನು ಹೆದರುವುದಿಲ್ಲ, ಆದರೆ ಉತ್ತರಾಖಂಡದ ಪ್ರತಿಯೊಂದು ದೇವಾಲಯದ ಹೊರಗೆ ಈ ಪೋಸ್ಟರ್‌ಗಳು ಇರುವುದನ್ನು ನಾನು ಖಚಿತಪಡಿಸಿಕೊಳ್ಳಲಿದ್ದೇನೆ ” ಎಂದು ಅವರು ಕೋಪದಿಂದ ಹೇಳಿದ್ದರು.

ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ (ಧರ್ಮ, ಜನಾಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಿಂದೂ ಯುವ ವಾಹಿನಿ ಸದಸ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕ್ವಿಂಟ್ ಎಸ್‌ಎಚ್‌ಒ ನೇಗಿ ಮೂಲಕ ದೃಢಪಡಿಸಿಕೊಂಡಿದೆ.

ದಿ ಕ್ವಿಂಟ್ ಡೆಹ್ರಾಡೂನ್ ಎಸ್‌ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಪ್ರದೀಪ್ ಸಿಂಗ್ ರಾವತ್ ಅವರೊಂದಿಗೆ ಮಾತನಾಡಿತ್ತು. ಆಗ ‘ಈ ಪೋಸ್ಟರ್‌ಗಳ ಸುದ್ದಿ ಬೆಳಕಿಗೆ ಬಂದಿದೆ, ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ ಮತ್ತು ಮಾರ್ಚ್ 21 ರ ಮಧ್ಯಾಹ್ನದ ವೇಳೆಗೆ ಹಲವಾರು ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ರಾವತ್ ಹೇಳಿದ್ದರು.

ಎಲ್ಲಾ ಪೋಸ್ಟರ್‌ಗಳನ್ನು ತೆಗೆಯಲಾಗಿದೆಯೆ ಎಂದು ಪುನರ್ ದೃಢಪಡಿಸಿಕೊಳ್ಳಲು ನಾವು ಹಿಂದೂ ಯುವ ವಾಹಿನಿಯ ರಾಂಧವಾ ಅವರಿಗೆ ಕರೆ ಮಾಡಿದೆವು. ಕೆಲವು ಪೋಸ್ಟರ್‌ಗಳನ್ನು ತೆಗೆದಿರುವುದು ನಿಜ, ಆದರೆ ಅನೇಕರು ಪೋಸ್ಟರ್ ಹಾಕುವ ಕೆಲಸ ಮುಂದುವರೆಸಿದ್ದಾರೆ ಎಂದು ಹೇಳಿದರು. “ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ನಾನು ಹೆದರುವುದಿಲ್ಲ, ಪೋಸ್ಟರ್‌ಗಳನ್ನು ತೆಗೆಯದಂತೆ ನಾವು ನೋಡಿಕೊಳ್ಳುತ್ತೇವೆ. ನನ್ನ ಸಮುದಾಯದ ಜನರು ನನ್ನೊಂದಿಗೆ ನಿಲ್ಲುತ್ತಾರೆ, ಇಡೀ ಹಿಂದೂ ಸಮುದಾಯವು ನನ್ನೊಂದಿಗೆ ನಿಲ್ಲುತ್ತದೆ. ನೀವು ನೋಡುತ್ತೀರಿ!’ ಎಂದು ತಿಳಿಸಿದರು.

ಬ್ಯಾನರ್‌ಗಳನ್ನು ಏಕೆ ಹಾಕಲಾಯಿತು? ಇದಕ್ಕೆ ಪ್ರೇರಣೆ ಏನು?

“ಈ ತಾಣವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ, ಹಿಂದೂಗಳಲ್ಲದವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸ್ನಾದ ದೇವಸ್ಥಾನದ ಎದುರು ಅಲ್ಲಿನ ಅರ್ಚಕ ನರಸಿಂಗಾನಂದ ಇಂಥದ್ದೇ ಪೋಸ್ಟರ್ ಹಾಕಿದ್ದಾರೆ. ಇದು 14 ವರ್ಷದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆಗೆ ಕಾರಣವಾಯಿತು. ಈ ಘಟನೆಯ ನಂತರ ಹಿಂದೂ ಯುವ ವಾಹಿನಿ ಸದಸ್ಯರು ಮುಖ್ಯ ಅರ್ಚಕ ನರಸಿಂಗಾನಂದರನ್ನು ಭೇಟಿಯಾಗಿ ಬೆಂಬಲಿಸಿದ್ದರು.

ದೆಹಲಿ ಗಲಭೆ ಮತ್ತು ನರಸಿಂಗಾನಂದ ಸ್ವಾಮಿ

ದೆಹಲಿ ಗಲಭೆಯ ಅಸಲಿ ಪಿತೂರಿಕೋರರು ಭಾಗ 2ರಲ್ಲಿ ನಾನುಗೌರಿ.ಕಾಂ ದಿ ವೈರ್ ಉಲ್ಲೇಖಿಸಿ ಈ ಸ್ವಾಮಿಯ ಪ್ರಚೋದನೆ, ಪಾತ್ರಗಳ ಕುರಿತು ಬರೆದಿತ್ತು. ಈ ವರದಿಯಲ್ಲಿ, ತಾವು ಪೋಸ್ಟರ್ ಹಾಕಲು ನರಸಿಂಗಾನಂದ ಸ್ವಾಮಿಯೇ ಪ್ರೇರಣೆ ಎಂದು ಹಿಂದೂ ಯುವ ವಾಹಿನಿ ಹೇಳಿದೆ. ಯಾರೀತ? ಉತ್ತರಪ್ರದೇಶದ ದಾಸ್ನಾದ ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ಮಾಡಲಾಗಿತು. ಆ ದೇವಸ್ಥಾನದ ಪ್ರಧಾನ ಅರ್ಚಕ ಈ ನರಸಿಂಗಾನಂದ ಸ್ವಾಮಿಯೇ. ಈತನಿಗೆ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಇರುವುದುನ್ನು, ದೆಹಲಿ ಗಲಭೆಗೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳ ವಿಡಿಯೋಗಳನ್ನು ಈತ ವೈರಲ್ ಮಾಡಿದ್ದನ್ನು ದಿ ವೈರ್ ಸಾಬೀತು ಮಾಡಿತ್ತು. ನಾನುಗೌರಿ ಕೂಡ ಅದನ್ನು ಪ್ರಕಟಿಸಿತ್ತು.

ಮಾರ್ಚ್ 20 ರಂದು ಅಭಿಯಾನ ಪ್ರಾರಂಭವಾಯಿತು ಎಂದು ಹಿಂದೂ ಯುವ ವಾಹಿನಿ ಅಧ್ಯಕ್ಷ 47 ವರ್ಷದ ಗೋವಿಂದ್ ವಾಧ್ವಾ ಹೇಳಿದ್ದಾರೆ. 150-200 ದೇವಾಲಯಗಳಲ್ಲಿ ಸ್ವಯಂಸೇವಕರು ಈಗಾಗಲೇ ಸ್ಥಳೀಯರ ಸಹಾಯದಿಂದ ಪೋಸ್ಟರ್‌ಗಳನ್ನು ಹಾಕಿದ್ದರು ಮತ್ತು ಮುಂದಿನ ವಾರದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. “ಕೆಲವೊಮ್ಮೆ ನಮ್ಮ ವಿಗ್ರಹಗಳು ಒಡೆಯಲ್ಪಡುತ್ತವೆ, ಅಥವಾ ಜನರು ಶಿವ ವಿಗ್ರಹಗಳ ಮೇಲೆ ಇಣುಕಿ ನೋಡುತ್ತಾರೆ, ನೀವು ಇದನ್ನೆಲ್ಲಾ ನೋಡಿರಬೇಕು. ಅದು ಪದೇ ಪದೇ ಸಂಭವಿಸುತ್ತದೆ. ಇದನ್ನು ಹಿಂದೂ ಸಮುದಾಯದ ಸದಸ್ಯರು ಎಂದಿಗೂ ಮಾಡುವುದಿಲ್ಲ, ಆದರೆ ಹಿಂದೂಯೇತರರು ಮಾಡುತ್ತಾರೆ. ಅಂತಹ ಹಿಂದೂಯೇತರರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳಲ್ಲದವರು ಬರದಂತೆ ಮತ್ತು ದೇವಾಲಯಗಳ ಪಾವಿತ್ರ‍್ಯವು ಅಳಿಯದಂತೆ ನೋಡಿಕೊಳ್ಳಲು ಈ ಬ್ಯಾನರ್‌ಗಳನ್ನು ಹಾಕಿದ್ದೇವೆ’ ಎಂದರು.

ಹಿಂದೂಯೇತರರು ಆಕ್ಷೇಪಾರ್ಹವಾದುದನ್ನು ಮಾಡಿದ್ದಾರೆಯೇ ಮತ್ತು ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿವೆಯೇ ಎಂಬ ಪ್ರಶ್ನೆಗೆ ವಾಧ್ವಾ, “ಇತ್ತೀಚೆಗೆ ಡೆಹ್ರಾಡೂನ್ ಅಥವಾ ಉತ್ತರಾಖಂಡದಲ್ಲಿ ಎಲ್ಲಿಯೂ ಈ ರೀತಿಯ ಪ್ರಕರಣಗಳು ಸಂಭವಿಸಿಲ್ಲ. ಆದರೆ ರಕ್ಷಣೆಯ ಉದ್ದೇಶದಿಂದ ನಾವು ಇದನ್ನು ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ” ಎಂದಿದ್ದಾರೆ.

ಡೆಹ್ರಾಡೂನ್‌ನ ದೇವಾಲಯಗಳಿಗಷ್ಟೇ ಇದು ಸಿಮೀತವಲ್ಲ ಎಂದು ವಾಧ್ವಾ ಹೇಳಿದ್ದಾರೆ. “ಉತ್ತರಾಖಂಡದಾದ್ಯಂತದ ನಾಲ್ಕು ಮಹತ್ವದ ದೇವಾಲಯಗಳಲ್ಲಿ ಒಂದೇ ರೀತಿಯ ಪೋಸ್ಟರ್‌ಗಳನ್ನು ಹಾಕುವ ಯೋಜನೆ ನಮ್ಮಲ್ಲಿದೆ. ಇದಕ್ಕಾಗಿ ನಾವು ಒಂದು ಯೋಜನೆಯನ್ನು ರೂಪಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಉತ್ತರಾಖಂಡದ ಸಿಎಂ ಅವರನ್ನು ಭೇಟಿ ಮಾಡಲಿದ್ದೇವೆ ಎನ್ನುವ ಅವರು, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರಿನಾಥ್ ನಾಲ್ಕು ಪವಿತ್ರ ಹಿಂದೂ ಕ್ಷೇತ್ರಗಳು ಎಂದು ಉಲ್ಲೇಖಿಸಿದರು.

ಈ ಪೋಸ್ಟರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ಕೇಳಿದಾಗ, “ನನ್ನ ಮನೆಯನ್ನು ರಕ್ಷಿಸಲು ನನಗೆ ಪೊಲೀಸರಿಂದ ಅನುಮತಿ ಬೇಕೇ?” ಎಂದಿದ್ದಾರೆ. ‘ಈ ದೇವಾಲಯಗಳು ಯಾರ ವ್ಯಾಪ್ತಿಗೆ ಬರುತ್ತವೆ, ಅವು ಸರ್ಕಾರಿ ಸ್ವಾಮ್ಯದಲ್ಲಿವೆಯೇ ಅಥವಾ ಖಾಸಗಿ ಟ್ರಸ್ಟ್‌ನವರ ಕೈಯಲ್ಲಿವೆಯೇ?’ ಎಂದು ಕೇಳಿದಾಗ, “ಇದು ಹಿಂದೂ ಸಮುದಾಯದ ಆಸ್ತಿ ಮತ್ತು ಯಾವುದೇ ಒಬ್ಬ ವ್ಯಕ್ತಿಗೆ ಸೇರಿಲ್ಲ. ಇಲ್ಲಿ ಪೋಸ್ಟರ್ ಹಾಕಲು ಯಾವ ಅನುಮತಿಯೂ ಬೇಕಿಲ್ಲ’ ಎಂದಿದ್ದಾರೆ. ಅಲ್ಲದೇ ನಮ್ಮದು 2002 ರಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸ್ಥಾಪಿಸಿದ ಹಿಂದೂ ಯುವ ವಾಹಿನಿ ಅಲ್ಲ, ಇದೇ ಬೇರೆ ಎಂದು ವಾಧ್ವಾ ಸ್ಪಷ್ಟಪಡಿಸಿದರು.

ಪಶ್ಚಿಮ ಯುಪಿಯ ದಾಸ್ನಾದಲ್ಲಿ ದೇವಾಲಯದಲ್ಲಿ ಮುಸ್ಲಿಂ ಬಾಲಕನಿಗೆ ಥಳಿಸಿದ ನಂತರ, ಬಿಎಸ್ಪಿಯ ಧೌಲಾನಾ ಅಸ್ಲಂ ಚೌಧರಿ ದಾಸ್ನಾದಲ್ಲಿನ ದೇವಾಲಯವು ತನ್ನ ಪೂರ್ವಜರಿಗೆ ಸೇರಿದ್ದು ಮತ್ತು ಆಡಳಿತ ಮಂಡಳಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ. ಚೌಧರಿ ಹೀಗೆ ಹೇಳಿದ ನಂತರ, ವಾಧ್ವಾ ದಾಸ್ನಾದ ದೇವಾಲಯದ ಪ್ರಧಾನ ಅರ್ಚಕನನ್ನು ಭೇಟಿಯಾದರು ಮತ್ತು ಉತ್ತರಾಖಂಡದ ಇನ್ನೂ ಹಲವಾರು ದೇವಾಲಯಗಳ ಹೊರಗೆ ಇಂತಹ ಪೋಸ್ಟರ್‌ಗಳನ್ನು ಹಾಕುವುದಾಗಿ ಹೇಳಿದರು.

(ಕೃಪೆ: ದಿ ಕ್ವಿಂಟ್)


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...