Homeಮುಖಪುಟ‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR

‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR

ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಆ ಹಲ್ಲೆಯನ್ನು ಸಮರ್ಥಿಸಿಕೊಂಡು ಈ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ.

- Advertisement -
- Advertisement -

ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಮಾರ್ಚ್ 20 ಮತ್ತು 21 ರಂದು 150-200 ದೇವಾಲಯಗಳ ಹೊರಭಾಗದಲ್ಲಿ, ‘ಹಿಂದೂಗಳಲ್ಲದವರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’ ಎಂಬ ಪೋಸ್ಟರ್‌ಗಳನ್ನು ಹಾಕಿದ ಆರೋಪದಲ್ಲಿ ಹಿಂದೂ ಯುವ ವಾಹಿನಿ ಎಂಬ ಬಲಪಂಥೀಯ ಸಂಘಟನೆಯ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ದಾಸ್ನಾ ಊರಿನ ದೇವಸ್ಥಾನವೊಂದರಲ್ಲಿ ನಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರದಲ್ಲಿ ಆ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದ ಈ ಸಂಘಟನೆ ಇತ್ತೀಚೆಗೆ ಈ ಪೋಸ್ಟರ್ ‘ಅಭಿಯಾನ’ ನಡೆಸಲು ನಿರ್ಧರಿಸಿದೆ.

ಕೊಟ್ವಾಲಿಯ ಠಾಣಾಣಾಧಿಕಾರಿ (ಎಸ್‌ಎಚ್‌ಒ) ಶಿಶುಪಾಲ್ ಸಿಂಗ್ ನೇಗಿ ಅವರು ಮಾರ್ಚ್ 21 ರ ಸಂಜೆ ಈ ವಿವಾದಾತ್ಮಕ ಪೋಸ್ಟರ್‌ಗಳನ್ನು ತೆಗೆದುಹಾಕಲು ಸಂಘಟನೆಯ ಸದಸ್ಯರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಅವರ ಸಭೆ ಮುಗಿದ ಕೂಡಲೇ ಹಿಂದೂ ಯುವ ವಾಹಿನಿಯ ಪ್ರಧಾನ ಕಾರ್ಯದರ್ಶಿ ಜೀತು ರಾಂಧವ ದಿ ಕ್ವಿಂಟ್ ವರದಿಗಾರರ ಜೊತೆ ಮಾತನಾಡಿದ್ದು, ‘ನಗರದಲ್ಲಿ ಇಂತಹ ಪೋಸ್ಟರ್‌ಗಳನ್ನು ಹಾಕದಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆ. ಅವರು ಈ ರೀತಿ ಮುಸ್ಲಿಮರ ಪರವಾಗಿರಲು ಏಕೆ ಪ್ರಯತ್ನಿಸುತ್ತಿದ್ದಾರೆ? ಉತ್ತರಾಖಂಡದಂತಹ ಸ್ಥಳದಲ್ಲಿ ಇದು ನಡೆಯುತ್ತಿದೆ ಎಂದು ನಾನು ನಂಬಲು ಸಾಧ್ಯವಿಲ್ಲ. ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡರೆ ನಾನೇನು ಹೆದರುವುದಿಲ್ಲ, ಆದರೆ ಉತ್ತರಾಖಂಡದ ಪ್ರತಿಯೊಂದು ದೇವಾಲಯದ ಹೊರಗೆ ಈ ಪೋಸ್ಟರ್‌ಗಳು ಇರುವುದನ್ನು ನಾನು ಖಚಿತಪಡಿಸಿಕೊಳ್ಳಲಿದ್ದೇನೆ ” ಎಂದು ಅವರು ಕೋಪದಿಂದ ಹೇಳಿದ್ದರು.

ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ (ಧರ್ಮ, ಜನಾಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಿಂದೂ ಯುವ ವಾಹಿನಿ ಸದಸ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕ್ವಿಂಟ್ ಎಸ್‌ಎಚ್‌ಒ ನೇಗಿ ಮೂಲಕ ದೃಢಪಡಿಸಿಕೊಂಡಿದೆ.

ದಿ ಕ್ವಿಂಟ್ ಡೆಹ್ರಾಡೂನ್ ಎಸ್‌ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಪ್ರದೀಪ್ ಸಿಂಗ್ ರಾವತ್ ಅವರೊಂದಿಗೆ ಮಾತನಾಡಿತ್ತು. ಆಗ ‘ಈ ಪೋಸ್ಟರ್‌ಗಳ ಸುದ್ದಿ ಬೆಳಕಿಗೆ ಬಂದಿದೆ, ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ ಮತ್ತು ಮಾರ್ಚ್ 21 ರ ಮಧ್ಯಾಹ್ನದ ವೇಳೆಗೆ ಹಲವಾರು ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ರಾವತ್ ಹೇಳಿದ್ದರು.

ಎಲ್ಲಾ ಪೋಸ್ಟರ್‌ಗಳನ್ನು ತೆಗೆಯಲಾಗಿದೆಯೆ ಎಂದು ಪುನರ್ ದೃಢಪಡಿಸಿಕೊಳ್ಳಲು ನಾವು ಹಿಂದೂ ಯುವ ವಾಹಿನಿಯ ರಾಂಧವಾ ಅವರಿಗೆ ಕರೆ ಮಾಡಿದೆವು. ಕೆಲವು ಪೋಸ್ಟರ್‌ಗಳನ್ನು ತೆಗೆದಿರುವುದು ನಿಜ, ಆದರೆ ಅನೇಕರು ಪೋಸ್ಟರ್ ಹಾಕುವ ಕೆಲಸ ಮುಂದುವರೆಸಿದ್ದಾರೆ ಎಂದು ಹೇಳಿದರು. “ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ನಾನು ಹೆದರುವುದಿಲ್ಲ, ಪೋಸ್ಟರ್‌ಗಳನ್ನು ತೆಗೆಯದಂತೆ ನಾವು ನೋಡಿಕೊಳ್ಳುತ್ತೇವೆ. ನನ್ನ ಸಮುದಾಯದ ಜನರು ನನ್ನೊಂದಿಗೆ ನಿಲ್ಲುತ್ತಾರೆ, ಇಡೀ ಹಿಂದೂ ಸಮುದಾಯವು ನನ್ನೊಂದಿಗೆ ನಿಲ್ಲುತ್ತದೆ. ನೀವು ನೋಡುತ್ತೀರಿ!’ ಎಂದು ತಿಳಿಸಿದರು.

ಬ್ಯಾನರ್‌ಗಳನ್ನು ಏಕೆ ಹಾಕಲಾಯಿತು? ಇದಕ್ಕೆ ಪ್ರೇರಣೆ ಏನು?

“ಈ ತಾಣವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ, ಹಿಂದೂಗಳಲ್ಲದವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸ್ನಾದ ದೇವಸ್ಥಾನದ ಎದುರು ಅಲ್ಲಿನ ಅರ್ಚಕ ನರಸಿಂಗಾನಂದ ಇಂಥದ್ದೇ ಪೋಸ್ಟರ್ ಹಾಕಿದ್ದಾರೆ. ಇದು 14 ವರ್ಷದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆಗೆ ಕಾರಣವಾಯಿತು. ಈ ಘಟನೆಯ ನಂತರ ಹಿಂದೂ ಯುವ ವಾಹಿನಿ ಸದಸ್ಯರು ಮುಖ್ಯ ಅರ್ಚಕ ನರಸಿಂಗಾನಂದರನ್ನು ಭೇಟಿಯಾಗಿ ಬೆಂಬಲಿಸಿದ್ದರು.

ದೆಹಲಿ ಗಲಭೆ ಮತ್ತು ನರಸಿಂಗಾನಂದ ಸ್ವಾಮಿ

ದೆಹಲಿ ಗಲಭೆಯ ಅಸಲಿ ಪಿತೂರಿಕೋರರು ಭಾಗ 2ರಲ್ಲಿ ನಾನುಗೌರಿ.ಕಾಂ ದಿ ವೈರ್ ಉಲ್ಲೇಖಿಸಿ ಈ ಸ್ವಾಮಿಯ ಪ್ರಚೋದನೆ, ಪಾತ್ರಗಳ ಕುರಿತು ಬರೆದಿತ್ತು. ಈ ವರದಿಯಲ್ಲಿ, ತಾವು ಪೋಸ್ಟರ್ ಹಾಕಲು ನರಸಿಂಗಾನಂದ ಸ್ವಾಮಿಯೇ ಪ್ರೇರಣೆ ಎಂದು ಹಿಂದೂ ಯುವ ವಾಹಿನಿ ಹೇಳಿದೆ. ಯಾರೀತ? ಉತ್ತರಪ್ರದೇಶದ ದಾಸ್ನಾದ ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕೆ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ಮಾಡಲಾಗಿತು. ಆ ದೇವಸ್ಥಾನದ ಪ್ರಧಾನ ಅರ್ಚಕ ಈ ನರಸಿಂಗಾನಂದ ಸ್ವಾಮಿಯೇ. ಈತನಿಗೆ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಇರುವುದುನ್ನು, ದೆಹಲಿ ಗಲಭೆಗೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳ ವಿಡಿಯೋಗಳನ್ನು ಈತ ವೈರಲ್ ಮಾಡಿದ್ದನ್ನು ದಿ ವೈರ್ ಸಾಬೀತು ಮಾಡಿತ್ತು. ನಾನುಗೌರಿ ಕೂಡ ಅದನ್ನು ಪ್ರಕಟಿಸಿತ್ತು.

ಮಾರ್ಚ್ 20 ರಂದು ಅಭಿಯಾನ ಪ್ರಾರಂಭವಾಯಿತು ಎಂದು ಹಿಂದೂ ಯುವ ವಾಹಿನಿ ಅಧ್ಯಕ್ಷ 47 ವರ್ಷದ ಗೋವಿಂದ್ ವಾಧ್ವಾ ಹೇಳಿದ್ದಾರೆ. 150-200 ದೇವಾಲಯಗಳಲ್ಲಿ ಸ್ವಯಂಸೇವಕರು ಈಗಾಗಲೇ ಸ್ಥಳೀಯರ ಸಹಾಯದಿಂದ ಪೋಸ್ಟರ್‌ಗಳನ್ನು ಹಾಕಿದ್ದರು ಮತ್ತು ಮುಂದಿನ ವಾರದಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. “ಕೆಲವೊಮ್ಮೆ ನಮ್ಮ ವಿಗ್ರಹಗಳು ಒಡೆಯಲ್ಪಡುತ್ತವೆ, ಅಥವಾ ಜನರು ಶಿವ ವಿಗ್ರಹಗಳ ಮೇಲೆ ಇಣುಕಿ ನೋಡುತ್ತಾರೆ, ನೀವು ಇದನ್ನೆಲ್ಲಾ ನೋಡಿರಬೇಕು. ಅದು ಪದೇ ಪದೇ ಸಂಭವಿಸುತ್ತದೆ. ಇದನ್ನು ಹಿಂದೂ ಸಮುದಾಯದ ಸದಸ್ಯರು ಎಂದಿಗೂ ಮಾಡುವುದಿಲ್ಲ, ಆದರೆ ಹಿಂದೂಯೇತರರು ಮಾಡುತ್ತಾರೆ. ಅಂತಹ ಹಿಂದೂಯೇತರರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳಲ್ಲದವರು ಬರದಂತೆ ಮತ್ತು ದೇವಾಲಯಗಳ ಪಾವಿತ್ರ‍್ಯವು ಅಳಿಯದಂತೆ ನೋಡಿಕೊಳ್ಳಲು ಈ ಬ್ಯಾನರ್‌ಗಳನ್ನು ಹಾಕಿದ್ದೇವೆ’ ಎಂದರು.

ಹಿಂದೂಯೇತರರು ಆಕ್ಷೇಪಾರ್ಹವಾದುದನ್ನು ಮಾಡಿದ್ದಾರೆಯೇ ಮತ್ತು ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿವೆಯೇ ಎಂಬ ಪ್ರಶ್ನೆಗೆ ವಾಧ್ವಾ, “ಇತ್ತೀಚೆಗೆ ಡೆಹ್ರಾಡೂನ್ ಅಥವಾ ಉತ್ತರಾಖಂಡದಲ್ಲಿ ಎಲ್ಲಿಯೂ ಈ ರೀತಿಯ ಪ್ರಕರಣಗಳು ಸಂಭವಿಸಿಲ್ಲ. ಆದರೆ ರಕ್ಷಣೆಯ ಉದ್ದೇಶದಿಂದ ನಾವು ಇದನ್ನು ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ” ಎಂದಿದ್ದಾರೆ.

ಡೆಹ್ರಾಡೂನ್‌ನ ದೇವಾಲಯಗಳಿಗಷ್ಟೇ ಇದು ಸಿಮೀತವಲ್ಲ ಎಂದು ವಾಧ್ವಾ ಹೇಳಿದ್ದಾರೆ. “ಉತ್ತರಾಖಂಡದಾದ್ಯಂತದ ನಾಲ್ಕು ಮಹತ್ವದ ದೇವಾಲಯಗಳಲ್ಲಿ ಒಂದೇ ರೀತಿಯ ಪೋಸ್ಟರ್‌ಗಳನ್ನು ಹಾಕುವ ಯೋಜನೆ ನಮ್ಮಲ್ಲಿದೆ. ಇದಕ್ಕಾಗಿ ನಾವು ಒಂದು ಯೋಜನೆಯನ್ನು ರೂಪಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಉತ್ತರಾಖಂಡದ ಸಿಎಂ ಅವರನ್ನು ಭೇಟಿ ಮಾಡಲಿದ್ದೇವೆ ಎನ್ನುವ ಅವರು, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರಿನಾಥ್ ನಾಲ್ಕು ಪವಿತ್ರ ಹಿಂದೂ ಕ್ಷೇತ್ರಗಳು ಎಂದು ಉಲ್ಲೇಖಿಸಿದರು.

ಈ ಪೋಸ್ಟರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ಕೇಳಿದಾಗ, “ನನ್ನ ಮನೆಯನ್ನು ರಕ್ಷಿಸಲು ನನಗೆ ಪೊಲೀಸರಿಂದ ಅನುಮತಿ ಬೇಕೇ?” ಎಂದಿದ್ದಾರೆ. ‘ಈ ದೇವಾಲಯಗಳು ಯಾರ ವ್ಯಾಪ್ತಿಗೆ ಬರುತ್ತವೆ, ಅವು ಸರ್ಕಾರಿ ಸ್ವಾಮ್ಯದಲ್ಲಿವೆಯೇ ಅಥವಾ ಖಾಸಗಿ ಟ್ರಸ್ಟ್‌ನವರ ಕೈಯಲ್ಲಿವೆಯೇ?’ ಎಂದು ಕೇಳಿದಾಗ, “ಇದು ಹಿಂದೂ ಸಮುದಾಯದ ಆಸ್ತಿ ಮತ್ತು ಯಾವುದೇ ಒಬ್ಬ ವ್ಯಕ್ತಿಗೆ ಸೇರಿಲ್ಲ. ಇಲ್ಲಿ ಪೋಸ್ಟರ್ ಹಾಕಲು ಯಾವ ಅನುಮತಿಯೂ ಬೇಕಿಲ್ಲ’ ಎಂದಿದ್ದಾರೆ. ಅಲ್ಲದೇ ನಮ್ಮದು 2002 ರಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸ್ಥಾಪಿಸಿದ ಹಿಂದೂ ಯುವ ವಾಹಿನಿ ಅಲ್ಲ, ಇದೇ ಬೇರೆ ಎಂದು ವಾಧ್ವಾ ಸ್ಪಷ್ಟಪಡಿಸಿದರು.

ಪಶ್ಚಿಮ ಯುಪಿಯ ದಾಸ್ನಾದಲ್ಲಿ ದೇವಾಲಯದಲ್ಲಿ ಮುಸ್ಲಿಂ ಬಾಲಕನಿಗೆ ಥಳಿಸಿದ ನಂತರ, ಬಿಎಸ್ಪಿಯ ಧೌಲಾನಾ ಅಸ್ಲಂ ಚೌಧರಿ ದಾಸ್ನಾದಲ್ಲಿನ ದೇವಾಲಯವು ತನ್ನ ಪೂರ್ವಜರಿಗೆ ಸೇರಿದ್ದು ಮತ್ತು ಆಡಳಿತ ಮಂಡಳಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ. ಚೌಧರಿ ಹೀಗೆ ಹೇಳಿದ ನಂತರ, ವಾಧ್ವಾ ದಾಸ್ನಾದ ದೇವಾಲಯದ ಪ್ರಧಾನ ಅರ್ಚಕನನ್ನು ಭೇಟಿಯಾದರು ಮತ್ತು ಉತ್ತರಾಖಂಡದ ಇನ್ನೂ ಹಲವಾರು ದೇವಾಲಯಗಳ ಹೊರಗೆ ಇಂತಹ ಪೋಸ್ಟರ್‌ಗಳನ್ನು ಹಾಕುವುದಾಗಿ ಹೇಳಿದರು.

(ಕೃಪೆ: ದಿ ಕ್ವಿಂಟ್)


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...