Homeಅಂಕಣಗಳುಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

- Advertisement -
- Advertisement -

| ಯೋಗೇಂದ್ರ ಯಾದವ್ |

ಅನುವಾದ: ರಾಜಶೇಖರ್ ಅಕ್ಕಿ

ಒಂದು ರಾಷ್ಟ್ರ ಒಂದು ಚುನಾವಣೆ! ಇದನ್ನು ಕೇಳಲು ಎಷ್ಟು ಸುಂದರವಾಗಿದೆ. ಆದರೆ ಇದರ ಹಿಂದಿರುವ ಪ್ರಸ್ತಾಪವೂ ಅಷ್ಟೇ ಸುಂದರವಾಗಿದೆಯೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳನ್ನು 5 ವರ್ಷಗಳಲ್ಲಿ ಒಂದೇ ಬಾರಿ ಜೊತೆಗೇ ನಡೆಸುವ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಹೆಜ್ಜೆಯಾಗಬಲ್ಲದೇ?

ಮೊದಲ ನೋಟದಲ್ಲಿ ಇದೊಂದು ತುಂಬಾ ಸರಳ ಪ್ರಸ್ತಾಪ ಎನಿಸುತ್ತದೆ. ದೇಶಾದ್ಯಂತ ಪ್ರತಿ ಐದು ವರ್ಷಗಳಲ್ಲಿ ಚುನಾವಣೆ ಆಗುವುದು ನಿಶ್ಚಿತ. ಆದರೆ ವಿಧಾನಸಭೆಯ ಚುನಾವಣೆಗಳ ದಿನಾಂಕಗಳು ಲೋಕಸಭೆಯ ದಿನಾಂಕಗಳೊಂದಿಗೆ ಜೋಡಿಸಿಲ್ಲ. ಹಾಗಾಗಿ ಕೇಂದ್ರ ಸರಕಾರದ 5 ವರ್ಷಗಳ ಕಾರ್ಯಕಾಲದಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತವೆ. ಚುನಾವಣೆಯ ನೀತಿ ಸಂಹಿತೆ ಜಾರಿ ಬಂದ ಕೂಡಲೇ ಆ ರಾಜ್ಯಗಳ ಇದೇ ಕೇಂದ್ರ ಸರಕಾರಗಳ ಕಡತಗಳೂ ನಿಂತುಬಿಡುತ್ತವೆ. ಕೇಂದ್ರ ಸರಕಾರದ ಕಾರ್ಯವೈಖರಿಯಲ್ಲಿ ಅಡ್ಡಿ ಬರುತ್ತವೆ. ಸರಕಾರ ಚುನಾವಣೆಯ ಒತ್ತಡದಲ್ಲಿ ಕೆಲಸ ಮಾಡುತ್ತವೆ, ಹಾಗಾಗಿ ಯಾವುದೇ ದೀರ್ಘಕಾಲೀನ ನೀತಿಗಳನ್ನು ರೂಪಿಸಲು ಆಗುವುದಿಲ್ಲ. ಹಾಗೂ ರಾಜ್ಯ ಮತ್ತು ಕೇಂದ್ರದ ಚುನಾವಣೆಗಳನ್ನು ಬೇರೆ ಬೇರೆಯಾಗಿ ನಡೆಸುವುದರಿಂದ ವೆಚ್ಚವೂ ದುಪ್ಪಟಾಗುತ್ತದೆ.

ಹಾಗಾಗಿಯೇ 5 ವರ್ಷಗಳಲ್ಲಿ ಒಂದೇ ಸಲ ಒಟ್ಟಾಗಿ ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳನ್ನು ನಡೆಸಿ, ಮುಂದಿನ 5 ವರ್ಷಗಳ ತನಕ ಎಲ್ಲರೂ ಯಾವುದೇ ಅಡತಡೆಗಳಿಲ್ಲದೆ ತಮ್ಮ ಸರಕಾರಗಳನ್ನು ನಡೆಸುವುದಕ್ಕೆ ಈ ಪ್ರಸ್ತಾಪ.

5 ವರ್ಷಗಳ ನಂತರ ಒಂದೇ ಬಾರಿ ಎಲ್ಲರ ಕೆಲಸಗಳ ಮೌಲ್ಯಮಾಪನವಾಗಬೇಕು ಹಾಗೂ ಹೊಸ ಲೋಕಸಭೆ ಮತ್ತು ವಿಧಾನಸಭೆಗಳನ್ನು ಚುನಾಯಿಸಬೇಕು. ಮೊದಲ ಬಾರಿ ಇದನ್ನು ಕೇಳಿದಾಗ ಈ ಮಾತುಗಳು ಸರಳ ಮತ್ತು ನೇರ ಅನಿಸುತ್ತವೆ.
ಆದರೆ ವಾಸ್ತವದಲ್ಲಿ ಈ ಪ್ರಸ್ತಾಪ ಅಷ್ಟು ನೇರವೂ ಇಲ್ಲ, ಸರಳವೂ ಇಲ್ಲ. ಈ ಪ್ರಸ್ತಾಪ ಬರೀ ಚುನಾವಣೆಗಳ ದಿನಾಂಕ ಬದಲಿಸುವ ಪ್ರಸ್ತಾಪ ಅಲ್ಲ. ಇದನ್ನು ಕೇವಲ ಆಡಳಿತಾತ್ಮಕ ಬದಲಾವಣೆಯಿಂದ ಜಾರಿಗೊಳಿಸಲಾಗುವುದಿಲ್ಲ.

ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅರ್ಥವೆಂದರೆ, ನಮ್ಮ ಸಂವಿಧನ ಮತ್ತು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಅಡಿಪಾಯದಲ್ಲೇ ಬದಲಾವಣೆ ಮಾಡುವುದಕ್ಕೆ ಒಪ್ಪಿಕೊಂಡಂತೆ. ನಮ್ಮ ಸಂವಿಧಾನವನ್ನು ರಚಿಸಿದವರು ನಮ್ಮ ದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಮೇರಿಕದ ರಾಷ್ಟ್ರಪತಿಯ ಪದ್ಧತಿಯನ್ನು ಒಪ್ಪಿಕೊಳ್ಳದೇ ಬ್ರಿಟನ್ನಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಚೌಕಟ್ಟನ್ನು ನಮ್ಮದಾಗಿಸಿಕೊಂಡರು. ನಮ್ಮ ಸಂಸದೀಯ ಚೌಕಟ್ಟಿನಲ್ಲಿ ಪ್ರಧಾನಮಂತ್ರಿಗೆ ಸಂಸತ್ತಿನಲ್ಲಿ ಬಹುಮತ ಪಡೆಯುವುದು ಅನಿವಾರ್ಯವಾಗಿದೆ. ಯಾವುದೇ ಪ್ರಧಾನಮಂತ್ರಿ ಅಥವಾ ಲೋಕಸಭೆಯಲ್ಲಿ ವಿಶ್ವಾಸ ಮಂಡನೆಯಲ್ಲಿ ಸೋತಕೂಡಲೇ ಆ ಸರಕಾರವು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

ಯೋಚಿಸಿ, ಒಂದು ವೇಳೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಯ ಪ್ರಸ್ತಾಪವನ್ನು ಸ್ವೀಕಾರ ಮಾಡಲಾಗಿ ಹಾಗೂ ಒಂದು ವೇಳೆ ಯಾವುದೇ ಒಂದು ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದೇ ಸರಕಾರ 2 ವರ್ಷಗಳ ನಂತರ ಅಥವಾ 4 ವರ್ಷಗಳ ನಂತರ ಬಹುಮತ ಕಳೆದುಕೊಂಡರೆ ಆ ಪರಿಸ್ಥಿತಿಯಲ್ಲಿ ಏನಾಗಬಹುದು? ಆ ಸರಕಾರಕ್ಕೆ 5 ವರ್ಷಗಳ ತನಕ ಬಹುಮತ ಇರಲಿ ಬಿಡಲಿ ಮುಂದುವರೆಸಲು ಅವಕಾಶ ನೀಡಲಾಗುವುದೇ? ಒಂದು ವೇಳೆ ಇಂಥ ನಿಯಮ ಮಾಡಿದಲ್ಲಿ ಸದನದಲ್ಲಿ ತನ್ನ ಬಜೆಟ್ ಅನ್ನೆ ಪಾಸ್ ಮಾಡಲು ಆಗದ ಆ ಸರಕಾರ ತನ್ನ ಆಳ್ವಿಕೆಯನ್ನು ಹೇಗೆ ಮಾಡಬಲ್ಲದು? ಅಥವಾ ಕೇವಲ ಬಾಕಿ ಉಳಿದ ಅವಧಿಗಾಗಿಯೇ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದೇ? ಇದರರ್ಥ ಒಂದು ವೇಳೆ ಯಾವುದೊಂದು ಸರಕಾರ ನಾಲ್ಕು ವರ್ಷಗಳ ನಂತರ ಕುಸಿದುಬಿದ್ದರೆ ರಾಜ್ಯ ಅಥವಾ ದೇಶದಲ್ಲಿ ಕೇವಲ ಒಂದು ವರ್ಷ ಸರಕಾರವನ್ನು ಚುನಾಯಿಸುವುದಕ್ಕಾಗಿ ಹೊಸ ಚುನಾವಣೆಗಳು ಆಗಬೇಕಾಗುತ್ತದೆ. ಹಾಗಾಗಿ ನಮ್ಮ ಮುಂದಿನ ಪ್ರಶ್ನೆ, ಇಂತಹ ಪರಿಸ್ಥಿತಿಯಲ್ಲಿ ಈ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಕಡಿಮೆ ಮಾಡುವುದೇ ಅಥವಾ ಹೆಚ್ಚಿಸುವುದೇ ಎನ್ನುವುದಾಗಿದೆ.

ಇಲ್ಲಿ ಇನ್ನೊಂದು ಗಂಭಿರ ಮತ್ತು ಆಳವಾದ ಸಮಸ್ಯೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಪ್ರತಿ ಸ್ತರದಲ್ಲೂ ಚುನಾವಣೆಗಳು ಬೇರೆ ಬೇರೆಯಾಗಿ ನಡೆದಾಗ ಮತದಾರ ಪ್ರತಿ ಹಂತಕ್ಕೂ ತನ್ನ ವಿಭಿನ್ನ ಅಭಿಪ್ರಾಯದೊಂದಿಗೆ ಮತಚಲಾಯಿಸಬಹುದಾಗಿದೆ. ಆದರೆ ಬೇರೆ ಬೇರೆ ಸ್ತರದ ಚುನಾವಣೆಗಳು ಒಂದೇ ಬಾರಿ ಆದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎರಡೂ ಮತಗಳು ಒಂದಕ್ಕೊಂದು ಜೋಡಿಸಲಾಗುತ್ತವೆ. ನಿಸ್ಸಂಶಯವಾಗಿಯೂ ಇಂದು ನಮ್ಮ ಮತದಾರರು ಮುಂಚೆಗಿಂತಲೂ ಹೆಚ್ಚು ಜಾಗರೂಕಾಗುತ್ತಿದ್ದಾರೆ. ಓರಿಸ್ಸಾದ ಚುನಾವಣೆ ನಮಗೆ ಹೇಳುವುದೇನೆಂದರೆ, ಒಂದೇ ಸಮಯದಲ್ಲಿ ಮತ ಚಲಾಯಿಸಿದರೂ ಮತದಾರರು ಲೋಕಸಭೆಗಾಗಿ ಬಿಜೆಪಿಗೆ ಹೆಚ್ಚು ಮತ ನೀಡಿ ವಿಧಾನಸಭೆಗಾಗಿ ಬಿಜೆಡಿಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಎರಡು ಬೇರೆ ಬೇರೆ ಸ್ತರದ ಚುನಾವಣೆಗಳ ಪ್ರಚಾರ ಹಾಗೂ ಮತದಾನ ಒಂದೇ ಸಮಯದಲ್ಲಿ ನಡೆದಾಗ ಎರಡೂ ಚುನಾವಣೆಗಳಲ್ಲಿ ಸಂಯೋಜನೆಯ ಸ್ಥಿತಿ ಬರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದಿಂದ ನಮ್ಮ ರಾಜಕೀಯದ ಸ್ಥಾನೀಯ ಮತ್ತು ವಲಯಾವಾರು ಇತಿಹಾಸವನ್ನು ಘಾಸಿಗೊಳಿಸುತ್ತದೆ.

ಇನ್ನೊಂದು ಪ್ರಶ್ನೆ, ಚುನಾವಣೆಯ ಕ್ಯಾಲೆಂಡರ್‍ನ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದೇಶದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಇಂತಹ ದೊಡ್ಡ ಬದಲಾವಣೆ ಮಾಡುವ ಅವಶ್ಯಕತೆ ಇದೆಯೇ? ನನ್ನ ಪ್ರಕಾರ, ಚುನಾವಣೆಯ ಕ್ಯಾಲೆಂಡರ್‍ನಲ್ಲಿ ಮೂರು ಸುಧಾರಣೆಗಳನ್ನು ತಂದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯಂತಹ ಬೃಹತ್ ಸಂವಿಧಾನಾತ್ಮಕ ಬದಲಾವಣೆಯ ಯಾವುದೇ ಅವಶ್ಯಕತೆ ಇರುವುದಿಲ್ಲ.

ಮೊದಲನೆಯದು, ಚುನಾವಣೆಯ ಮಾದರಿ ನೀತೆ ಸಂಹಿತೆಯಲ್ಲಿ ಬದಲಾವಣೆ ಮಾಡಬೇಕಿದೆ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೇಂದ್ರ ಸರಕಾರದ ಸಾಮಾನ್ಯ ಕಾರ್ಯಕೆಲಸಗಳಲ್ಲಿ ಅಡೆತಡೆಗಳು ಬರದಂತೆ ನೀತಿ ಸಂಹಿತೆಯಲ್ಲಿ ಬದಲಾವಣೆ. ಎರಡನೇಯದ್ದು, ಚುನಾವಣಾ ಆಯೋಗ ಮತದಾನದ ಅವಧಿಯನ್ನು ಕಡಿತಗೊಳಿಸಬಹುದು. ಉತ್ತರಪ್ರದೇಶದಂತಹ ರಾಜ್ಯದ ವಿಧಾನಸಭೆ ಚುನಾವಣೆಯನ್ನು ತಿಂಗಳುಪೂರ್ತಿ 7 ಹಂತಗಳಲ್ಲಿ ನಡೆಸುವುದು ಸರಿಯಲ್ಲ. ಚುನಾವಣೆ ಮತದಾನದ ಪ್ರಕ್ರಿಯೆ ಒಂದು ವಾರದಲ್ಲಿ ಸಂಪೂರ್ಣವಾದರೆ ಸರಕಾರದ ಕೆಲಸಗಳಲ್ಲಿ ಅಡ್ಡಿ ಕಡಿಮೆ ಆಗುವವು. ಮೂರನೇಯದ್ದು, ಚುನಾವಣಾ ಆಯೋಗ ಬಯಸಿದಲ್ಲಿ ಹಲವು ರಾಜ್ಯಗಳ ಚುನಾವಣೆಗಳನ್ನು ಜೊತೆಗೂಡಿಸಿ ಒಂದೇ ಸಮಯದಲ್ಲಿ ಮಾಡಬಹುದು. ಯಾವುದೇ ಲೋಕಸಭೆ ಅಥವಾ ರಾಜ್ಯಸಭೆಯ ಅವಧಿ ಪೂರ್ಣವಾಗುವ 6 ತಿಂಗಳ ಮುಂಚೆಯ ತನಕ ಯಾವ ಸಮಯದಲ್ಲೂ ಚುನಾವಣೆ ನಡೆಸುವ ಅವಕಾಶ ಚುನಾವಣಾ ಆಯೋಗಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಬಳಸಿ ಚುನಾವಣಾ ಆಯೋಗವು ಕೆಲವು ರಾಜ್ಯಗಳ ಚುನಾವಣೆಗಳನ್ನು ಸ್ವಲ್ಪ ಸಮಯ ಮುಂಚೆ ಮಾಡಿ ಇತರ ರಾಜ್ಯಗಳ ಚುನಾವಣೆಗಳನ್ನು ಒಂದೆ ಸಮಯದಲ್ಲಿ ಮಾಡಬಹುದು ಹಾಗೂ ಇದರಿಂದ ಕೇಂದ್ರ ಸರಕರಾದ 5 ವರ್ಷದ ಕಾರ್ಯಾವಧಿಯಲ್ಲಿ 8ರಿಂದ 10 ದೊಡ್ಡ ರಾಜ್ಯ ಚುನಾವಣೆಗಳು ಆಗುವ ಬದಲಿಗೆ ಕೇವಲ ನಾಲ್ಕು ಅಥವಾ ಐದು ದೊಡ್ಡ ರಾಜ್ಯ ಚುನಾವಣೆಗಳು ಆಗಬಹುದಾಗಿದೆ.

ಚುನಾವಣೆಗಳಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಚುನಾವಣೆಯ ಕ್ಯಾಲೆಂಡರ್ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಚುನಾವಣೆಗಳಲ್ಲಿ ಹುಚ್ಚುಚ್ಚಾಗಿ ಅತ್ಯಂತ ದೊಡ್ಡ ಮೊತ್ತವನ್ನು ಖರ್ಚು ಮಾಡುವುದಕ್ಕೆ ನಿಜವಾದ ಕಾರಣ ಇರುವುದು ಚುನಾವಣೆಗಳಲ್ಲಿ ಕಾನೂನಿನ ಎಲ್ಲೆಯನ್ನು ಮೀರಿ ಮಾಡುವ ಖರ್ಚು. ಹಾಗಾಗಿ ಚುನಾವಣಾ ಆಯೋಗ ಚುನಾವಣೆಯ ವೆಚ್ಚದ ಎಲ್ಲೆಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕು.

ಇವೆಲ್ಲದರ ನಿಷ್ಕರ್ಷ ಸ್ಪಷ್ಟವಾಗಿದೆ: ಚುನಾವಣೆಯ ಕ್ಯಾಲೆಂಡರ್‍ನಿಂದ ಆಗುವ ಅಡೆತಡೆಗಳು ಹಾಗೂ ಆಳ್ವಿಕೆಯ ತೊಂದರೆಗಳನ್ನು ಬಗೆಹರಿಸಬೇಕಾದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯೇ ಪರಿಹಾರವಲ್ಲ, ಇದರ ಹೊರತಾಗಿಯೂ ನಿಸ್ಸಂಶಯವಾಗಿ ಆ ತೊಂದರೆಗಳನ್ನು ನಿವಾರಿಸಬಹುದು. ಪ್ರಶ್ನೆ ಇರುವುದು, ಇವೆಲ್ಲವುಗಳ ಹೊರತಾಗಿಯೂ ಸರಕಾರ ಈ ಪ್ರಸ್ತಾಪವನ್ನು ಏಕೆ ತರಲು ಪ್ರಯತ್ನಿಸುತ್ತಿದೆ ಹಾಗೂ ಅದರಲ್ಲೂ ತನ್ನ ಹೊಸ ಆಳ್ವಿಕೆಯ ಮೊಟ್ಟ ಮೊದಲ ಹೆಜ್ಜೆಯಾಗಿ? ಈ ಸರಕಾರದ ನಿಯತ್ತಾದರೂ ಏನಿದೆ ಇದರ ಹಿಂದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...