ಬಿಜೆಪಿಯಲ್ಲಿ ಶಾಸಕರೊಬ್ಬರು ಬಂಡಾಯದ ಮುನ್ಸೂಚೆನೆ ನೀಡಿದ್ದು, ರಾಜೀನಾಮೆಯ ಬೆದರಿಕೆಯನ್ನು ಒಡ್ಡಿದ್ದಾರೆ. “ಪಕ್ಷ ನನಗೆ ದ್ರೋಹ ಮಾಡುತ್ತಿದೆ ಎಂದು ಅನಿಸುತ್ತಿದೆ. ಪಕ್ಷವು ನನ್ನನ್ನು ಗುರುತಿಸಿ ಒಳ್ಳೆಯ ಹುದ್ದೆಯನ್ನು ಕೊಟ್ಟರೆ ಸರಿ, ಇಲ್ಲವೆಂದರೆ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ನಮಗೂ ಗೊತ್ತಿದೆ” ಎಂದು ತುರುವೆಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ ಗುರುವಾರ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಪಕ್ಷ ನನಗೆ ದ್ರೋಹ ಮಾಡುತ್ತಿದೆ ಎಂದು ಅನಿಸುವ ಮಟ್ಟಿಗೆ ಬಂದಿದೆ. ಪಕ್ಷವು ನನ್ನನ್ನು ಗುರುತಿಸಿ ಸ್ಥಾನ ಕೊಟ್ಟರೆ ಸರಿ. ಇಲ್ಲವೆಂದರೆ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ನಮಗೂ ಗೊತ್ತಿದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 2024ಕ್ಕೆ ರಾವಣನನ್ನು ಸಂಪೂರ್ಣವಾಗಿ ಸುಡುತ್ತೇವೆ: ಶಿವಸೇನೆ ಸಂಸದ ಸಂಜಯ್ ರಾವತ್
ನಾವು ಕೇಳುವವರೆಗೂ ಕೇಳಿದ್ದೇವೆ. ರಾಜ್ಯಾಧ್ಯಕ್ಷರಿಗೆ, ಮುಖ್ಯಮಂತ್ರಿಗೆ ಕೇಳಿದ್ದೇವೆ. ಅವರು ಕಡೆಗಣಿಸಿದರೆ ಯಾವುದೆ ಕಾರಣಕ್ಕೂ ನಾವು ಪಕ್ಷದಲ್ಲಿ ಇರಲ್ಲ ಎಂದು ಜಯರಾಮ ಆಕ್ರೊಶ ವ್ಯಕ್ತಪಡಿಸಿದ್ದಾರೆ.
“ಸ್ಥಾನವನ್ನು ಕೊಡಲಿಲ್ಲ ಎಂದರೆ, ಈ ರಾಜಕೀಯವನ್ನೇ ಮುಗಿಸುತ್ತೇವೆ. ನಮ್ಮ ತಾಳ್ಮೆಗೂ ಮಿತಿ ಇರುತ್ತದೆ. ಈ ತಿಂಗಳ ಕೊನೆಗೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ತಿಂಗಳ ಕೊನೆಯವರೆಗೂ ನೋಡುತ್ತೇವೆ. ಸಚಿವ ಸ್ಥಾನ ಎಲ್ಲಾ ನಾವು ಕೇಳಿಲ್ಲ. ಕಡಿಮೆಯೆಂದರೂ, ಒಳ್ಳೆಯ ಹುದ್ದೆ, ನಿಗಮ ಕೊಡಿ ಎಂದು ಕೇಳಿದ್ದೇವೆ. ಅವರು ಕೊಟ್ಟರೆ ಕೊಡಲಿ, ಇಲ್ಲವೆಂದರೆ ಬೇರೆ ರೀತಿಯ ನಿರ್ಣಯ ತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.
‘ಪಕ್ಷ ನನಗೆ ದ್ರೋಹ ಮಾಡುತ್ತಿದೆ. ಮಂತ್ರಿ ಬೇಡ ಒಳ್ಳೆಯ ನಿಗಮ ಮಂಡಳಿ ಕೊಡದಿದ್ದರೆ ಪಕ್ಷದಲ್ಲಿ ಇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ಈ ತಿಂಗಳ ಅಂತ್ಯದವರೆಗೆ ಗಡುವು ಕೊಟ್ಟಿದ್ದೇನೆ. ಕೊಟ್ಟರೆ ಕೊಡಲಿ, ಇಲ್ಲದಿದ್ರೆ ಏನು ಮಾಡಬೇಕೋ ಮಾಡ್ತೀವಿ ’
ರಾಜೀನಾಮೆಗೆ ಸಜ್ಜಾದ ಬಿಜೆಪಿ ಶಾಸಕ ಮಸಾಲ ಜಯರಾಮ#NaanuGauri #BJP #MLA #Karnataka pic.twitter.com/E7cqyr8ByB
— Naanu Gauri (@naanugauri) October 14, 2021
“ಮತದಾರರು ನೀಡಿರುವ ಓಟಿಗೆ ತೃಪ್ತಿಯಾಗುವಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಕೊಟ್ಟರೆ ಕೊಡಲಿ, ಕೊಡಲಿಲ್ಲ ಎಂದರೆ ಬೇಡ. ನಾನು ಹಾಗೆಯೆ ಕೆಲಸ ಮಾಡುತ್ತೆನೆ” ಎಂದು ಅವರು ಶಾಸಕ ಮಸಾಲೆ ಜಯರಾಮ ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ದಲಿತ ವ್ಯಕ್ತಿಯ ಬರ್ಬರ ಹತ್ಯೆ: ತ್ವರಿತ ಕ್ರಮಕ್ಕೆ ಜಿಗ್ನೇಶ್ ಮೇವಾನಿ ಆಗ್ರಹ