Homeಕರೋನಾ ತಲ್ಲಣಪ್ಲಾಸ್ಮಾ ಚಿಕಿತ್ಸೆಯು ಮರಣ ದರವನ್ನು ಕಡಿಮೆ ಮಾಡವುದಿಲ್ಲ!: ದ್ವಂದ್ವ ಮೂಡಿಸಿದ ICMR ಅಧ್ಯಯನ!

ಪ್ಲಾಸ್ಮಾ ಚಿಕಿತ್ಸೆಯು ಮರಣ ದರವನ್ನು ಕಡಿಮೆ ಮಾಡವುದಿಲ್ಲ!: ದ್ವಂದ್ವ ಮೂಡಿಸಿದ ICMR ಅಧ್ಯಯನ!

ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದ 34 ರೋಗಿಗಳು, ಅಂದರೆ 13.6% ಜನರು ಸಾವನ್ನಪ್ಪಿದ್ದರೆ, ಪ್ಲಾಸ್ಮಾ ಚಿಕಿತ್ಸೆ ಪಡೆಯದ 31 ರೋಗಿಗಳು, ಅಂದರೆ 14.6% ಜನರು ಸೋಂಕಿಗೆ ಬಲಿಯಾಗಿದ್ದಾರೆ.

- Advertisement -
- Advertisement -

ಪ್ಲಾಸ್ಮಾ ಚಿಕಿತ್ಸೆಯ ಬಗ್ಗೆ ICMR ನಡೆಸಿದ ವಿಶ್ವದ ಅತಿದೊಡ್ಡ ಟ್ರಯಲ್‌ನ ಫಲಿತಾಂಶದ ಪ್ರಕಾರ, ’ಪ್ಲಾಸ್ಮಾ ಚಿಕಿತ್ಸೆಯು ಮರಣ ದರವನ್ನು ಕಡಿಮೆ ಮಾಡುವುದಿಲ್ಲ” ಎಂದು ತಿಳಿದುಬಂದಿದೆ. ಇದು ಜಗತ್ತಿನಾದ್ಯಂತ ನೀತಿನಿರೂಪಕರು, ವೈದ್ಯರು, ರೋಗಿಗಳು ಮತ್ತು ಅವರ ಕುಟುಂಬದವರ ಭರವಸೆಯನ್ನು ಹುಸಿಗೊಳಿಸಿದೆ.

PLACID ಎಂದು ಕರೆಯಲ್ಪಡುವ ಈ ಪ್ರಯೋಗವನ್ನು 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 39 ಆಸ್ಪತ್ರೆಗಳಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಆಶ್ರಯದಲ್ಲಿ ನಡೆಸಲಾಯಿತು.

ಅಧ್ಯಯನವು, ಉಸಿರಾಟದ ತೊಂದರೆ ಇರುವ ಮತ್ತು ಆಮ್ಲಜನಕದ ಶುದ್ಧಿಯ ಮಟ್ಟವು 93% ಕ್ಕಿಂತ ಕಡಿಮೆ ಇರುವ 464 ಮಧ್ಯಮ ಮಟ್ಟದ ಅನಾರೋಗ್ಯದ ರೋಗಿಗಳನ್ನು ಒಳಗೊಂಡಿತ್ತು. ಅವುಗಳಲ್ಲಿ, 235 ಜನರಿಗೆ ರೋಗದ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವವರಿಗೆ, ಚೇತರಿಸಿಕೊಂಡವರಿಂದ ಸಂಗ್ರಹಿಸಿದ ’CP’ (convalescent plasma) ನೀಡಲಾಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ 200 ತಬ್ಲೀಘಿ ಜಮಾಅತ್ ಸದಸ್ಯರು

ಉಳಿದ 229 ಮಂದಿ ಕೇವಲ ಗುಣಮಟ್ಟದ ಆರೈಕೆಯನ್ನು ಪಡೆದರು. ಸ್ವತಂತ್ರ ಗುಂಪಿನಲ್ಲಿದ್ದವರಿಗೆ 24 ಗಂಟೆಗಳ ಅಂತರದಲ್ಲಿ 200 ಮಿಲಿ ಪ್ಲಾಸ್ಮಾವನ್ನು ಎರಡು ಪ್ರಮಾಣದಲ್ಲಿ ವರ್ಗಾಯಿಸಲಾಯಿತು. ಸ್ವತಂತ್ರ ಮತ್ತು ನಿಯಂತ್ರಣ ಗುಂಪುಗಳನ್ನು 28 ದಿನಗಳ ನಂತರ ಅಧ್ಯಯನ ಮಾಡಲಾಯಿತು.

ಪ್ರಿಪ್ರಿಂಟ್ ಸರ್ವರ್‌ನಲ್ಲಿ ಬಿಡುಗಡೆಯಾದ ಫಲಿತಾಂಶಗಳು, ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದ 34 ರೋಗಿಗಳು, ಅಂದರೆ 13.6% ಜನರು ಸಾವನ್ನಪ್ಪಿದ್ದರೆ, ಪ್ಲಾಸ್ಮಾ ಚಿಕಿತ್ಸೆ ಪಡೆಯದ 31 ರೋಗಿಗಳು, ಅಂದರೆ 14.6% ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ, ಪ್ರತಿ ಗುಂಪಿನಲ್ಲಿಯೂ 17 ರೋಗಿಗಳು ತೀವ್ರ ರೋಗದ ಮಟ್ಟವನ್ನು ಹೊಂದಿದ್ದಾರೆ.

“CP ಬಳಕೆಯು ಉಸಿರಾಟದ ತೊಂದರೆ ಮತ್ತು ಆಯಾಸದ ಪರಿಹಾರವನ್ನು ಸುಧಾರಿಸುತ್ತದೆ ಎಂದು ತೋರುತ್ತದೆಯಾದರೂ, ಇದು 28 ದಿನಗಳ ಮರಣವನ್ನು ಕಡಿಮೆ ಮಾಡಲು ಅಥವಾ ಮಧ್ಯಮ ಮಟ್ಟದ ಕೊರೊನಾ ರೋಗಿಗಳಲ್ಲಿ ತೀವ್ರ ಕಾಯಿಲೆಗೆ ಒಳಗಾಗುವುದನ್ನು ತಡೆಯಲಿಲ್ಲ” ಎಂಬುದನ್ನು ಅಧ್ಯಯನವು ತಿಳಿಸಿದೆ ಎಂದು ICMR ನ ವಿಜ್ಞಾನಿ ಡಾ.ಅಪರ್ಣ ಮುಖರ್ಜಿ ಹೇಳಿದರು.

ಇದನ್ನೂ ಓದಿ:  ರಾಜ್ಯದಲ್ಲಿ ಕೊರೊನಾ ವಿರುದ್ದ ಪ್ಲಾಸ್ಮಾ ಥೆರಪಿ ಮುಂದುವರೆಸಲಾಗುವುದು: ಆರೋಗ್ಯ ಸಚಿವ ಶ್ರೀರಾಮುಲು

ಹಲವಾರು ರಾಜ್ಯ ಸರ್ಕಾರಗಳು ಪ್ಲಾಸ್ಮಾ ಚಿಕಿತ್ಸೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿರುವುದರಿಂದ ಈ ಸಂಶೋಧನಾ ಫಲಿತಾಂಶಗಳು ಪ್ರಸ್ತುತ ಸಾಂಕ್ರಾಮಿಕದಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ.

ಏನಿದು ಪ್ಲಾಸ್ಮಾ ಚಿಕಿತ್ಸೆ?

ಈಗಾಗಲೇ ಕೊರೊನಾ ಸೋಂಕು ತಗುಲಿ ಗುಣಮುಖರಾದವರ (ಅವರ ದೇಹದಲ್ಲಿ ಕೊರೊನಾ ವೈರಸ್‌ ಇಲ್ಲ ಎಂಬುದು ಎರಡು ಸಾರಿ ಖಾತ್ರಿಯಾದ ನಂತರ) ರಕ್ತದಲ್ಲಿನ ರೋಗನಿರೋಧಕ ಪ್ಲಾಸ್ಮಾ ಕಣಗಳನ್ನು ತೆಗೆದುಕೊಂಡು ಹಾಲಿ ಸೋಂಕಿತರಿಗೆ ನೀಡುವುದೇ ಪ್ಲಾಸ್ಮಾ ಥೆರಪಿಯಾಗಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಬೆಳೆದಿರುವುದರಿಂದ ಸೋಂಕಿತರಿಗೆ ಅದನ್ನು ಬಳಸುವ ಪ್ರಯೋಗ ಆರಂಭಗೊಂಡು, ಹಲವು ಕಡೆ ಯಶಸ್ವಿಯೂ ಆಗಿದೆ.

ಅದಾಗ್ಯೂ,‌ ಈ ರೀತಿಯ ಪ್ಲಾಸ್ಮಾಥೆರಪಿಯನ್ನು ಹಲವು ಆಸ್ಪತ್ರೆಗಳು ಮಾಡಬಹುದು ಎಂದು ಸ್ವತಃ ICMR ಕರೆ ನೀಡಿತ್ತು. ದೇಶ-ವಿದೇಶಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯಿಂದ ನೂರಾರು ಜನ ರೋಗಿಗಳು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಭಾರತದಲ್ಲಿಯೂ ಸಹ ಸರ್ಕಾರವೇ ಪ್ಲಾಸ್ಮಾ ಚಿಕಿತ್ಸೆಗೆ ಪ್ರೋತ್ಸಾಹವನ್ನು ನೀಡಿತ್ತು. ಕರ್ನಾಟಕದಲ್ಲಿಯೂ ಪ್ಲಾಸ್ಮಾ ಚಿಕಿತ್ಸೆಯನ್ನು ತೃಪ್ತಿದಾಯಕವಾಗಿದೆ, ಹಾಗಾಗಿ ಅದನ್ನು ಮುಂದುವರೆಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದರು.

ರಾಷ್ಟ್ರೀಯ ಕೋವಿಡ್ -19 ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್ ಇದನ್ನು ತನಿಖಾ ಚಿಕಿತ್ಸೆಯಾಗಿ ಅನುಮತಿಸಿದ ನಂತರ ಕೆಲವರು ಪ್ಲಾಸ್ಮಾ ಬ್ಯಾಂಕುಗಳನ್ನು ಸ್ಥಾಪಿಸಿದ್ದರು.


ಇದನ್ನೂ ಓದಿ: ಕೊರೊನಾ ಸೋಂಕಿತರ ಮೇಲಿನ ಪ್ಲಾಸ್ಮಾ ಥೆರಪಿ : ಫಲಿತಾಂಶ ತೃಪ್ತಿದಾಯಕವೆಂದ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...