Homeಮುಖಪುಟನಟ ಸೋನು ಸೂದ್ ಟ್ರಾಕ್ಟರ್ ಕೊಡಿಸಿದ್ದ ದಲಿತ ಕುಟುಂಬಕ್ಕೆ ರಾಜಕೀಯ ಕಿರುಕುಳ!

ನಟ ಸೋನು ಸೂದ್ ಟ್ರಾಕ್ಟರ್ ಕೊಡಿಸಿದ್ದ ದಲಿತ ಕುಟುಂಬಕ್ಕೆ ರಾಜಕೀಯ ಕಿರುಕುಳ!

"ಒಂದು ವೇಳೆ ನಾನು ದಲಿತನಾಗಿರದಿದ್ದರೆ, ಶ್ರೀಮಂತನಾಗಿದ್ದರೆ, ನನ್ನ ಆದಾಯದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ?" ಎಂದು ಅವರು ಪ್ರಶ್ನಿಸುತ್ತಾರೆ.

- Advertisement -
- Advertisement -

ನಟ ಸೋನು ಸೂದ್ ಅವರು ಟ್ರಾಕ್ಟರ್ ಕೊಡಿಸಿದ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನೆರವಿನ ಘೋಷಣೆ ಮಾಡಿದ  ಬೆನ್ನಲ್ಲೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಲಿತ ರೈತ ಕುಟುಂಬಕ್ಕೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳಿಂದ ಕಿರುಕುಳ ಆರಂಭವಾಗಿದ್ದು, ಅವರ “ಅರ್ಹತೆ” ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿದೆ.

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಕಳೆದ ವಾರ ಒಬ್ಬ ವ್ಯಕ್ತಿ ಹೊಲ ಉಳುವ ಮತ್ತು ಆತನ ಇಬ್ಬರು ಹೆಣ್ಣುಮಕ್ಕಳು ಕೈಗಳಿಂದ ನೇಗಿಲು ಎಳೆಯುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಕೋವಿಡ್ ಪಿಡುಗಿನ ಬಳಿಕ ಎಲ್ಲಾ ಕುಟುಂಬಗಳಂತೆ ಈ ಕುಟುಂಬವೂ ಹಣಕಾಸಿನ ಬಿಕ್ಕಟ್ಟು ಅನುಭವಿಸುತ್ತಿದ್ದು, ಅವರ ಬಳಿ ಗದ್ದೆ ಉಳಲು ಟ್ರ್ಯಾಕ್ಟರ್ ಅಥವಾ ಎತ್ತುಗಳ ಬಾಡಿಗೆ ಕೊಡಲು ಹಣವಿರಲಿಲ್ಲ. ಈ ವಿಡಿಯೋ ಹೇಗೋ ನಟ ಸೋನು ಸೂದ್ ಅವರ ಕಣ್ಣಿಗೆ ಬಿತ್ತು. ಇತ್ತೀಚಿನ ದಿನಗಳಲ್ಲಿ ಅವರು ಹಲವಾರು ಸಂದರ್ಭಗಳಲ್ಲಿ ಮಾಡಿರುವಂತೆ, ತಕ್ಷಣವೇ ಸ್ಪಂದಿಸಿದ ಸೋನು ಸೂದ್, ಈ ಕುಟುಂಬಕ್ಕೆ ನೆರವಾಗಲು ಮುಂದೆ ಬಂದರು.


ಓದಿ: ಸೋನು ಸೂದ್ ನಮ್ಮ ಪಾಲಿಗೆ ದೇವರಿದ್ದಂತೆ: ಟ್ರಾಕ್ಟರ್ ಉಡುಗೊರೆ ಪಡೆದ ರೈತನ ಕೃತಜ್ಞತೆ


ಸೋನು ಸೂದ್ ಖರೀದಿಸಿದ ಟ್ರ್ಯಾಕ್ಟರ್ ಕಳೆದ ಭಾನುವಾರ ಆ ಕುಟುಂಬದ ಮನೆಯೆದುರು ನಿಂತಿತು. ಆ ವೈರಲ್ ವಿಡಿಯೋದಲ್ಲಿದ್ದ ದಲಿತ ರೈತ ವಿ. ನಾಗೇಶ್ವರ ರಾವ್ ಆ ರಾತ್ರಿ ನೆಮ್ಮದಿಯ ನಿದ್ದೆ ಮಾಡಿದರು. ಆ ದಿನ ನೆರೆಹೊರೆಯವರು, ಸ್ಥಳೀಯ ಪತ್ರಕರ್ತರು ಅವರಿಗೆ ಶುಭಾಶಯ ಹೇಳಿದ್ದರು.

ಆದರೆ, ಮರುದಿನ ಬೆಳಿಗ್ಗೆಯೇ ಅವರ ಬಡತನದ ಬಗ್ಗೆ ಸಂಶಯ ಹುಟ್ಟಿಸುವ, ಅವರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಋಣಾತ್ಮಕ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಇವೆಲ್ಲವೂ ಆರಂಭವಾದುದು, ಭಾನುವಾರ ರಾತ್ರಿ ತೆಲುಗುದೇಶಂ ಪಕ್ಷದ ಮುಖ್ಯಸ್ಥ  ಚಂದ್ರಬಾಬು ನಾಯ್ಡು ಅವರು, ನಾಗೇಶ್ವರ ರಾವ್ ಅವರ ಮಕ್ಕಳಾದ ವನ್ನೆಲಾ ಮತ್ತು ಚಂದನಾ ಅವರ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿದ ನಂತರ.

ಸೋಮವಾರ ಬೆಳಿಗ್ಗೆ ಕಂದಾಯ ಅಧಿಕಾರಿಗಳು ನಾಗೇಶ್ವರ ರಾವ್ ಅವರ ಮನೆಯ ಮುಂದೆ ಪ್ರತ್ಯಕ್ಷರಾದರು. ಅವರ ಹಣಕಾಸು ಪರಿಸ್ಥಿತಿ, ಅವರ ಹೆಸರಿನಲ್ಲಿ ಯಾವುದಾದರೂ ಆಸ್ತಿ ಇದೆಯೇ ಎಂಬ ಕುರಿತು ‘ತನಿಖೆ’ ನಡೆಸಿದರು.

ನಾಗೇಶ್ವರ ರಾವ್ ಅವರು ಹಿಂದೆ ನಾಗರಿಕ ಹಕ್ಕು ಹೋರಾಟದ ಕಾರ್ಯಕರ್ತರಾಗಿದ್ದರು. ಅವರು 12 ವರ್ಷಗಳಿಗೂ ಹೆಚ್ಚು ಕಾಲದಿಂದ ಚಿತ್ತೂರು ಜಿಲ್ಲೆಯ ಮದನಪಳ್ಳಿ ಪಟ್ಟಣದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದರು. ಕೊರೋನ ಲಾಕ್‌ಡೌನ್ ಆವರ ಆದಾಯಕ್ಕೆ ಭಾರೀ ಹೊಡೆತ ನೀಡಿತು. ಅವರು ಅದೇ ಜಿಲ್ಲೆಯ ಕಂಬಂವಾರಿಪಳ್ಳಿ ಮಂಡಲದ ಮಹಲ್‌ರಾಜುಪಳ್ಳಿ ಎಂಬ ಹಳ್ಳಿಯಲ್ಲಿರುವ ತನ್ನ ಹೆತ್ತವರ ಮನೆಗೆ ಮರಳಬೇಕಾಯಿತು.

ನಾನು ಯಾವತ್ತೂ ನೆರವು ಕೇಳಿಲ್ಲ ಎಂದು ಹೇಳುವ ಅವರು ಈ ವೈರಲ್ ವಿಡಿಯೋ ಚಿತ್ರೀಕರಣವಾದ ಸಂದರ್ಭವನ್ನು ವಿವರಿಸುತ್ತಾರೆ. “ಹಿಂದಿನ ದಿನ ನಾನು ನಮ್ಮ ಹಣಕಾಸು ಸ್ಥಿತಿಯನ್ನು ಗಮನಿಸಿ, ಈ ಸಲ ಕೃಷಿ ಮಾಡುವುದು ಬೇಡ ಎಂದು ಕುಟುಂಬದವರಿಗೆ ಹೇಳಿದೆ. ಆಗ ನನ್ನ ಹೆಣ್ಣುಮಕ್ಕಳು, ಮಾರುವುದಕ್ಕಲ್ಲವಾದರೂ, ಉಣ್ಣುವುದಕ್ಕಾದರೂ ಸ್ವಲ್ಪ ಬಿತ್ತನೆ ಮಾಡಬೇಕು ಎಂದು ಒತ್ತಾಯಿಸಿದರು. ಟ್ರ್ಯಾಕ್ಟರ್ ಅಥವಾ ಎತ್ತುಗಳ ಬಾಡಿಗೆ ಹೆಚ್ಚಾಗಿರುವುದರಿಂದ ಬಾಡಿಗೆ ಕೊಡಲು ನನ್ನಲ್ಲಿ ಹಣವಿಲ್ಲವೆಂದು ನಾನು ಹೇಳಿದೆ. ಆಗ ಮಕ್ಕಳು ತಾವು ನೆರವಾಗುವುದಾಗಿ ಹೇಳಿದರು. ಆಗ ಮನೆಗೆ ಬಂದಿದ್ದ ನನ್ನ ಅಳಿಯಂದಿರು ಕೂಡಾ ತಾವೂ ನೆರವಾಗುವುದಾಗಿ ಹೇಳಿದರು” ಎಂದವರು ವಿವರಿಸುತ್ತಾರೆ.

ನಂತರ ನಡೆದ್ದೇನೆಂದರೆ, ಈ ಹುಡುಗಿಯರು ಮತ್ತವರ ಸೋದರ ಸಂಬಂಧಿಗಳು ಸರತಿಯಂತೆ ನೇಗಿಲು ಎಳೆಯಲು ಆರಂಭಿಸಿದರು. ವಯೋಸಹಜವಾಗಿ ಒಬ್ಬರು ಇನ್ನೊಬ್ಬರ ವಿಡಿಯೋ ಮಾಡಿದರು. ಹುಡುಗರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ಅದು ಮಾಧ್ಯಮಗಳ ಕಣ್ಣಿಗೆ ಬಿದ್ದು, ಅವರು ನಾಗೇಶ್ವರ ರಾವ್ ಅವರನ್ನು ಸಂಪರ್ಕಿಸದೆಯೇ ತಮಗೆ ತೋಚಿದಂತೆ ವಿವರಿಸಿದ ಪರಿಣಾಮವಾಗಿ ವಿಡಿಯೋ ವೈರಲ್ ಆಯಿತು.


ಇದನ್ನೂ ಓದಿ: ಸೋನು ಸೂದ್‌ ಬಳಿ ಸಹಾಯ ಕೇಳಿದ ಮಾಜಿ ಸಚಿವ, ಹಾಲಿ BJP ಶಾಸಕ : ಕಾಂಗ್ರೆಸ್‌ ಟೀಕೆ


“ಕೆಲವರು ನಾನು ಮದನಪಳ್ಳಿ ಗ್ರಾಮೀಣ ಗ್ರಾಮದಲ್ಲಿ ಟೊಮ್ಯಾಟೋ ಬೆಳೆಯುತ್ತಿದ್ದೇನೆಂದು ಬರೆದರು. ನಾನು ಟೊಮ್ಯಾಟೋ ಬೆಳೆಯುತ್ತಲೂ ಇಲ್ಲ; ಇದು ಮದನಪಳ್ಳಿ ಗ್ರಾಮೀಣವೂ ಅಲ್ಲ” ಎಂದು ಅವರು ಮಾಧ್ಯಮಗಳ ಧಾವಂತದ ಬಗ್ಗೆ ಹೇಳುತ್ತಾರೆ.

ಈ ವಿಡಿಯೋಗೆ ಋಣಾತ್ಮಕ ಟೀಕೆಗಳೂ ಬಂದಿದ್ದವು. “ಹುಡುಗಿಯರು ದಪ್ಪಗಿದ್ದಾರೆ, ಬಿಳಿ ಇದ್ದಾರೆ, ನಗುತ್ತಿದ್ದಾರೆ, ಇದೊಂದು ನಾಟಕ” ಇತ್ಯಾದಿ ಕಮೆಂಟುಗಳೂ ಬಂದವು. ಮಕ್ಕಳಿಗೆ ಆಯಾಸ ಗೊತ್ತಾಗಬಾರದು ಎಂದು ನಾನು ಏನಾದರೂ ತಮಾಷೆ ಮಾಡುತ್ತಿದ್ದೆ ಎಂದು ಹೇಳುವ ನಾಗೇಶ್ವರ ರಾವ್, “ಅವರು ನಮ್ಮ ದೇಹ ಮತ್ತು ಬಣ್ಣದಿಂದ ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೋ?” ಎಂದು ಬಿಬಿಸಿ ತೆಲುಗು ಸಂದರ್ಶನದಲ್ಲಿ ಕೇಳಿದ್ದರು.

ಬಡತನದ ತನಿಖೆ!

ಸೋಮವಾರ ಮಂಡಲ ಕಂದಾಯ ಅಧಿಕಾರಿ (ಎಂಆರ್‌ಓ), ಮಂಡಲ ಪರಿಷತ್ತ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಓ) ನಾಗೇಶ್ವರ ರಾವ್ ಅವರ ಮನೆಗೆ ಬಂದು, ಹಿಂದಿನ ದಿನ ಟ್ರ್ಯಾಕ್ಟರ್ ಪಡೆದಿರುವ ಹಿನ್ನೆಲೆಯಲ್ಲಿ ಅವರ ಹಣಕಾಸು ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಹೇಳಿದ್ದಾರೆ ಎಂದು ತಿಳಿಸಿದರು.

“ನಾನು ಯಾರಿಗೂ ಮೋಸ ಮಾಡಿಲ್ಲ. ಸರಕಾರದಿಂದಲೂ ಏನನ್ನೂ ಪಡೆದುಕೊಂಡಿಲ್ಲ. ಯಾರೋ ನನಗೆ ದಾನಮಾಡಿದ್ದಾರೆ. ಹೀಗಿರುವಾಗ ತನಿಖೆಯ ಅಗತ್ಯ ಏನಿದೆ?” ಎಂಬ ನಾಗೇಶ್ವರ ರಾವ್ ಅವರ ಪ್ರಶ್ನೆಯಲ್ಲಿ ನ್ಯಾಯವಿದೆ.

ಎಂಆರ್‌ಓ ತನ್ನ ಹೆಸರಲ್ಲಿ ಯಾವುದೇ ಜಾಗವಿಲ್ಲ ಎಂದು ಖಾತರಿ ಪಡಿಸುವುದರ ಜೊತೆಗೆ, ಕೆಲವು ಪೂರ್ವಗ್ರಹದ ಪ್ರಶ್ನೆಗಳನ್ನೂ ಕೇಳಿದರು ಎಂದು ಅವರು ಹೇಳುತ್ತಾರೆ.

“ಅವರು ನಾನು ಹಿಂದೊಮ್ಮೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಗ್ಗೆ, ನನ್ನ ಹಿರಿಯ ಮಗಳಿಗೆ ವೈದ್ಯಕೀಯ ಶಿಕ್ಷಣ ನೀಡುವ ಕನಸಿನ ಬಗ್ಗೆ ಮನನೋಯುವಂತಹ ಪ್ರಶ್ನೆಗಳನ್ನು ಕೇಳಿದರು. ನೀವು ನಿಜಕ್ಕೂ ಬಡವರಾಗಿದ್ದರೆ ಚುನಾವಣೆಗೆ ಹೇಗೆ ಸ್ಪರ್ಧಿಸಿದಿರಿ? ಮಗಳಿಗೆ ಅಷ್ಟು ದುಬಾರಿ ಶಿಕ್ಷಣ ಕೊಡಿಸುವ ಬಗ್ಗೆ ಹೇಗೆ ಯೋಚಿಸಿದಿರಿ? ಇತ್ಯಾದಿಯಾಗಿ ಅವರು ಕೇಳಿದರು” ಎಂದವರು ವಿವರಿಸುತ್ತಾರೆ.

2009ರಲ್ಲಿ ತಾನು ಜಯ ಪ್ರಕಾಶ್ ನಾರಾಯಣ್ ಅವರ ಲೋಕಸತ್ತಾ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು ಹೌದಾದರೂ, ಅಂತಹ ಪಕ್ಷಗಳಿಂದ ಸ್ಪರ್ಧಿಸಲು ಹಣವೇನೂ ಬೇಕಾಗಿಲ್ಲ ಎಂದು ಹೇಳುವ ಅವರು, ತಾನು ಬಡವನಾಗಿದ್ದು ಕನಸು ಕಾಣುವುದು ಕೂಡಾ ತಪ್ಪೇ ಎಂದವರು ಕೇಳುತ್ತಾರೆ.

ರಾಜಕೀಯದ ಅಡಕತ್ತರಿಯಲ್ಲಿ…

ಚಂದ್ರಬಾಬು ನಾಯ್ಡು ಅವರು ನೆರವು ಘೋಷಿಸಿದ ತಕ್ಷಣದಿಂದ ಅವರ ವಿರೋಧಿಯಾದ ಆಡಳಿತ ಪಕ್ಷವಾದ ವೈಆರ್‌ಎಸ್‌ಸಿಪಿಯ ಕಾರ್ಯಕರ್ತರು ಅವರ ಹಿಂದೆ ಬಿದ್ದಿದ್ದಾರೆ. ಅವರು ರೈತರೂ ಅಲ್ಲ, ಬಡವರೂ ಅಲ್ಲ, ಅವರ ಹೆತ್ತವರು ಸರಕಾರದ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ, ಕಿರಿಯ ಮಗಳು “ಅಮ್ಮ ವೋದಿ” ಯೋಜನೆಯಲ್ಲಿ ಶಾಲೆಯ ಶುಲ್ಕ ವಿನಾಯಿತಿ ಪಡೆದಿದ್ದಾಳೆ ಇತ್ಯಾದಿಯಾಗಿ ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಜಗನ್ ಕುಟುಂಬದ ಮಾಲಕತ್ವದ ಸಾಕ್ಷಿ ಮೀಡಿಯಾ ಪ್ರತ್ಯಕ್ಷವಾಗಿಯೇ ಆಡಳಿತ ಪಕ್ಷವಾದ ವೈಆರ್‌ಎಸ್‌ ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಅದೂ ಕೂಡ ನಾಗೇಶ್ವರ ರಾವ್ ಅವರ ವಿರುದ್ಧ ಇಂತಹಾ ಪ್ರಚಾರದಲ್ಲಿ ತೊಡಗಿದೆ.

ಎಲ್ಲರಿಗೂ ಸಿಗುವಂತದ್ದನ್ನು ತಾನು ಪಡೆದಿದ್ದೇನೆ; ಇದರಲ್ಲಿ ವಿಶೇಷವೇನಿದೆ ಎನ್ನುವ ನಾಗೇಶ್ವರ ರಾವ್ ಅವರು, ತಾನು ತೆಲುಗುದೇಶಂ ಪಕ್ಷದ ಸದಸ್ಯನೂ ಅಲ್ಲ ಎನ್ನುತ್ತಾರೆ. ವಾಸ್ತವವಾಗಿ ಅವರು ತೆಲುಗುದೇಶಂ ಆಡಳಿತದ ವೇಳೆ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚಂದ್ರಬಾಬು ನಾಯ್ಡು ಅವರ ಮೇಲೆ 2003 ರಲ್ಲಿ ಆಲಿಪಿರಿ ಎಂಬಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅವರನ್ನು ಬಂಧಿಸಿಯೂ ಇದ್ದರು.

“ಒಂದು ವೇಳೆ ನಾನು ದಲಿತನಾಗಿರದಿದ್ದರೆ, ಶ್ರೀಮಂತನಾಗಿದ್ದರೆ, ನನ್ನ ಆದಾಯದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ?” ಎಂದು ಅವರು ಬಿಬಿಸಿ ತೆಲುಗು ಸಂದರ್ಶನದಲ್ಲಿ ಕೇಳಿದ್ದ ಪ್ರಶ್ನೆ ಯೋಚನೆಗೆ ಅರ್ಹವಾಗಿವೆ.


ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...