Homeಕರ್ನಾಟಕಪವರ್ ಟಿವಿ ಪ್ರಕರಣ ಎತ್ತುವ ಪ್ರಶ್ನೆಗಳು ಯಾರ ಮನೆ ಬಾಗಿಲೆದುರು ನಿಲ್ಲುತ್ತವೆ?

ಪವರ್ ಟಿವಿ ಪ್ರಕರಣ ಎತ್ತುವ ಪ್ರಶ್ನೆಗಳು ಯಾರ ಮನೆ ಬಾಗಿಲೆದುರು ನಿಲ್ಲುತ್ತವೆ?

ಪವರ್ ಟಿವಿಯ ಮಾಲೀಕರೂ ಬ್ಲ್ಯಾಕ್‍ಮೇಲ್‍ಗಿಳಿದಿದ್ದರು ಎಂಬುದು ಊಹೆ ಅಥವಾ ವಿಶ್ಲೇಷಣೆಯಷ್ಟೇ. ಅದಕ್ಕೆ ಯಾವ ಪುರಾವೆಯೂ ಇಲ್ಲ. ಆದರೆ, ಸಿಎಂ ಪುತ್ರ ವಿಜಯೇಂದ್ರರ ಆರೋಪಿತ ಅಕ್ರಮಕ್ಕೆ ಸಾಕ್ಷ್ಯಗಳಿವೆ ಮತ್ತು ಅದನ್ನು ಪವರ್ ಟಿವಿಯು ಪ್ರಸಾರ ಮಾಡಿದೆ.

- Advertisement -
- Advertisement -

ಕೆಲ ಸಮಯದ ಹಿಂದೆ ನಮ್ಮ (ಕಟು ಪ್ರಾಮಾಣಿಕ) ಪತ್ರಕರ್ತ ಸ್ನೇಹಿತರೊಬ್ಬರು ಸಾರ್ವಜನಿಕ ಕೆಲಸವೊಂದರ ನಿಮಿತ್ತ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಆ ಮಾಜಿ ಮುಖ್ಯಮಂತ್ರಿಗಳು ಆಗ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯ ಭ್ರಷ್ಟತೆ ಕುರಿತು ವಿವರಿಸಿದ್ದರು. ‘ನೋಡಿ, ಇಂತಹದೊಂದು ಕಂಪೆನಿಯು ನಾನು ಸಿಎಂ ಆಗಿದ್ದಾಗ ಬಂದು ಈ ಕೆಲಸವನ್ನು ಮಾಡಿಕೊಟ್ಟರೆ 50 ಕೋಟಿ ಕೊಡುತ್ತೇವೆಂಬ ಆಫರ್ ಕೊಟ್ಟಿದ್ದರು. ಅವರು ಈ ಸಿಎಂ ಹತ್ತಿರವೂ ಹೋಗಿ ಕೇಳಿದ್ದಾರೆ. ಸಿಎಂ ಮೊದಲು 50 ಕೋಟಿಗೆ ಒಪ್ಪಿದ್ದವರು, ಒಂದು ತಿಂಗಳು ಬಿಟ್ಟು ಇನ್ನೊಬ್ಬರು 60 ಕೋಟಿ ಕೊಡಲು ಬಂದರೆ ಮೊದಲನೆಯವರಿಗೆ ಕ್ಯಾನ್ಸೆಲ್ ಮಾಡಿ ಇವರಿಗೆ ಕೊಟ್ಟಿದ್ದಾರೆ. ಈ ಥರಾ ಕೆಟ್ಟೋಗಿದೆ ನೋಡಿ ಪರಿಸ್ಥಿತಿ’ ಎಂದಿದ್ದರು.

‘ಈ ಥರಾ ಕೆಟ್ಟೋಗಿದೆ ನೋಡಿ ಪರಿಸ್ಥಿತಿ’ ಎಂದು ಹೇಳುವ ಸರದಿ ಈಗ ನಮ್ಮದು. ಅಂದರೆ ಈ ಮಾಜಿ ಸಿಎಂ ಹತ್ತಿರ 50 ಕೋಟಿ ರೂ.ಗಳ ಡೀಲ್ ಇಟ್ಟುಕೊಂಡು ಯಾರೋ ಬರುವುದರ ಕುರಿತು ಯಾವ ಮುಜುಗರವನ್ನೂ ಹೊಂದಿಲ್ಲದೇ ಅವರೇ ಪ್ರಾಮಾಣಿಕ ಪತ್ರಕರ್ತರೊಬ್ಬರ ಬಳಿ ಹೇಳಿಕೊಳ್ಳುವಷ್ಟು ಪರಿಸ್ಥಿತಿ ಕೆಟ್ಟೋಗಿತ್ತು. ನಮ್ಮ ಗೆಳೆಯರೇನೋ ಕಟು ಪ್ರಾಮಾಣಿಕರಾಗಿದ್ದರು. ಆದರೆ ಎಲ್ಲಾ ಪತ್ರಕರ್ತರ ಕುರಿತೂ ಅದನ್ನು ಹೇಳಲು ಸಾಧ್ಯವಿಲ್ಲವಾಗಿದೆ. ಕೆಲವು ಪತ್ರಕರ್ತರು ದೊಡ್ಡ ದೊಡ್ಡ ಡೀಲರ್‌ಗಳಾಗಿದ್ದಾರೆ. ಕೆಲವು ಡೀಲರ್‌ಗಳು ಪತ್ರಕರ್ತರೂ ಆಗುತ್ತಿದ್ದಾರೆ. ಬೇರೆ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಪತ್ರಕರ್ತರು ತಾವೇ ಸ್ವಂತ ಪತ್ರಿಕೆ/ಚಾನೆಲ್‍ಗಳ ಮಾಲೀಕರಾಗಲು ಸಾಧ್ಯವಾದಾಗ ಅದನ್ನು ಹೆಮ್ಮೆಯ ಸಂಗತಿಯೆಂದು ಅವರೇ ಹೇಳಿಕೊಳ್ಳಲಿಲ್ಲ. ಏಕೆಂದರೆ ಅವರು ಭಾರೀ ಗಾತ್ರದ ಡೀಲರ್‌ಗಳಾಗಿ ಸಂಪಾದಿಸಿದ್ದಾರೆಂದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿತ್ತು.

ಬಿ.ವೈ ವಿಜಯೇಂದ್ರ. photo courtesy: The News Minute

ಈಗ ಪವರ್ ಟಿವಿ ವಿಚಾರದಲ್ಲೂ ಅಂತಹ ಮಾತುಗಳು ಕೇಳಿಬರುತ್ತಿವೆ. ಪವರ್ ಟಿವಿ ಮಾಲೀಕರು ಸಿಎಂ ಪುತ್ರ ವಿಜಯೇಂದ್ರರ ಜೊತೆ ಆಡಿದ ಮಾತು ಸ್ಟಿಂಗ್ ಭಾಗವಾಗಿ ಆಡಿದ್ದೋ ಅಥವಾ ‘ಮೀಡಿಯೇಟ್’ ಮಾಡಲು ಹೊರಟಿದ್ದರೋ ಎಂದು ಹಲವರು ಕೇಳುತ್ತಿದ್ದಾರೆ. 1ನೇ ತಾರೀಕಿನಂದು ಈ ಹಗರಣದ ಕುರಿತು ಸ್ಟೋರಿ ಮಾಡಿದವರು ನಂತರ 15 ದಿನಗಳ ಕಾಲ ಕೈಗೆತ್ತಿಕೊಳ್ಳದಿದ್ದುದು ಏಕೆಂಬ ಪ್ರಶ್ನೆಗಳೂ ಉಳಿದುಬಿಟ್ಟಿವೆ. ಪತ್ರಕರ್ತರ ಕುರಿತು ಇಂತಹ ಪ್ರಶ್ನೆಗಳು ಏಕೆ ಏಳುತ್ತಿವೆ ಎಂಬ ಬಗ್ಗೆ ಪತ್ರಕರ್ತರೆಂದು ಕರೆಯಲ್ಪಡುವವರು ಆತ್ಮನಿರೀಕ್ಷಣೆಗೆ ತೊಡಗಬಹುದೆಂಬ ಯಾವ ವಿಶ್ವಾಸವೂ ಇಲ್ಲ; ಬದಲಿಗೆ ಸಾರ್ವಜನಿಕರ ಕಣ್ಣಲ್ಲಿ ಈಗಿನ ರೀತಿಯ ಜರ್ನಲಿಸಮ್ಮೇ ಅಪ್ರಸ್ತುತವಾಗಿಬಿಡುತ್ತದೆ ಅಷ್ಟೇ.


ಇದನ್ನೂ ಓದಿ: ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!


ಆದರೆ ಈ ಯಾವ ಸಂಗತಿಗಳೂ ಪವರ್ ಟಿವಿ ವಿಚಾರದಲ್ಲಿ ಯಡಿಯೂರಪ್ಪನವರ ಸರ್ಕಾರ ನಡೆದುಕೊಂಡ ರೀತಿಯನ್ನು ಸಮರ್ಥಿಸುವುದಿಲ್ಲ. ಬದಲಿಗೆ ಯಡಿಯೂರಪ್ಪನವರು ಅಮಿತ್‍ಶಾ ಮತ್ತು ನರೇಂದ್ರ ಮೋದಿಯವರಿಗಿಂತ ಯಾವ ರೀತಿಯಲ್ಲೂ ಕಡಿಮೆಯಲ್ಲ; ಅವರ ಪುತ್ರನ ಅವ್ಯವಹಾರದ ವಿಚಾರದಲ್ಲಿ ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು ಎಂಬುದನ್ನು ಹೇಳುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪನವರು ಕೇವಲ ಉತ್ಸವ ಮೂರ್ತಿ ಅಷ್ಟೇ; ವಿಜಯೇಂದ್ರ ಸರ್ಕಾರದ ಯಂತ್ರಾಂಗದ ಮೇಲೆ ನೇರ ಹತೋಟಿಯನ್ನು ಹೊಂದಿದ್ದು, ಟಿವಿ ಚಾನೆಲ್ ಒಂದಕ್ಕೆ ನುಗ್ಗಿ ಅಕ್ರಮಗಳನ್ನೆಸಗಲು ಪೊಲೀಸರಿಗೆ ಆದೇಶ ನೀಡುವಷ್ಟು ‘ಸಂವಿಧಾನ ಬಾಹಿರ’ ಶಕ್ತಿಯನ್ನು ಹೊಂದಿದ್ದಾಎಂದು ಸಾಬೀತಾಗುತ್ತದೆ.

ಇಲ್ಲದಿದ್ದರೆ ಯಾವ ಹಗರಣವನ್ನು ಟಿವಿ ಚಾನೆಲ್‍ಒಂದು ಬಿತ್ತರಿಸಿ, ಅದು ವಿಧಾನಸಭಾ ಅಧಿವೇಶನದಲ್ಲೂ ಚರ್ಚೆಯಾಗುತ್ತದೆಯೋ, ಆ ಚಾನೆಲ್‍ನ ಕಚೇರಿಗೆ ಅಧಿವೇಶನ ಮುಗಿದ ಮರುದಿನವೇ ಪೊಲೀಸರು ಹೋಗಿ ವಿಚಾರಣೆಯ ನೆಪದಲ್ಲಿ ಲೈವ್ ಟೆಲಿಕಾಸ್ಟ್ ಕೊಡಬಲ್ಲ ಉಪಕರಣಗಳನ್ನೆಲ್ಲಾ ಹೊತ್ತೊಯ್ಯುವುದು ಸಾಧ್ಯವೇ ಇಲ್ಲ. ದೇಶದ ಇತಿಹಾಸದಲ್ಲಿ ಅತ್ಯಂತ ಕಡುಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ ಇಂದಿರಾಗಾಂಧಿ-ಸಂಜಯ್‍ಗಾಂಧಿ ಅಥವಾ ಮೋದಿ-ಅಮಿತ್‍ಶಾ ಅವರುಗಳೂ ಸಹಾ ಪರೋಕ್ಷ ದಾರಿಗಳನ್ನು ಹುಡುಕಿಕೊಂಡಿದ್ದರಷ್ಟೇ. ಇದು ಪತ್ರಿಕೆಯೊಂದರ ಕಚೇರಿಗೆ ನುಗ್ಗಿ ಪ್ರಿಂಟಿಂಗ್ ಪ್ರೆಸ್‍ಅನ್ನು ಹೊತ್ತೊಯ್ದರೆ ಹೇಗೋ ಹಾಗಿದೆ.


ಇದನ್ನೂ ಓದಿ: Power TV ಬೆಂಬಲಕ್ಕೆ ನಿಂತ ಜನತೆ: ಮುಖ್ಯಮಂತ್ರಿಗೆ ಪತ್ರ ಬರೆದ ಕಾರ್ಯನಿರತ ಪತ್ರಕರ್ತರ ಸಂಘ


ಪವರ್ ಟಿವಿಯ ಮಾಲೀಕರೂ ಬ್ಲ್ಯಾಕ್‍ಮೇಲ್‍ಗಿಳಿದಿದ್ದರು ಎಂಬುದು ಊಹೆ ಅಥವಾ ವಿಶ್ಲೇಷಣೆಯಷ್ಟೇ. ಅದಕ್ಕೆ ಯಾವ ಪುರಾವೆಯೂ ಇಲ್ಲ. ಆದರೆ, ಸಿಎಂ ಪುತ್ರ ವಿಜಯೇಂದ್ರರ ಆರೋಪಿತ ಅಕ್ರಮಕ್ಕೆ ಸಾಕ್ಷ್ಯಗಳಿವೆ ಮತ್ತು ಅದನ್ನು ಪವರ್ ಟಿವಿಯು ಪ್ರಸಾರ ಮಾಡಿದೆ. ಇಂದಿನ ಪರಿಸ್ಥಿತಿಯಲ್ಲಿ ಆ ಆರೋಪಗಳು ನೂರಕ್ಕೆ ನೂರರಷ್ಟು ಸತ್ಯ ಎಂದು ನಂಬಬಹುದಾಗಿದೆ; ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದೆ. ಒಂದು ವೇಳೆ ವಿಜಯೇಂದ್ರ ಅಥವಾ ಇನ್ನಾರಿಗಾದರೂ ತಕರಾರಿದ್ದರೆ ಅವರು ಅದನ್ನು ನಿರಾಕರಿಸುವುದಷ್ಟೇ ಅಲ್ಲದೇ, ಟಿವಿಯ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಸ್ವರೂಪದ ಮೊಕದ್ದಮೆ ಹೂಡಬಹುದಿತ್ತು. ಅದನ್ನು ಹೂಡುವ ಧೈರ್ಯ ಅಥವಾ ನೈತಿಕತೆ ಅವರಿಗಿಲ್ಲವೆಂಬುದನ್ನು ಇಲ್ಲಿನ ವಿದ್ಯಮಾನ ಎತ್ತಿ ತೋರಿಸುತ್ತಿದೆ.

ಸಿಎಂ ಯಡಿಯೂರಪ್ಪ: photo courtesy: The Hindu

ಸದರಿ ಟಿವಿಯ ಮಾಲೀಕರನ್ನೂ ಈಗ ನೀಡಲಾಗಿರುವ ದೂರಿನ ಮೇಲೆ ವಿಚಾರಣೆ ನಡೆಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಘಟನೆ ನಡೆದಿರುವ ದಿನ ಬೇರೆ ಅನುಮಾನಗಳನ್ನು ಮೂಡಿಸುತ್ತಿದೆ. ಪೊಲೀಸರು ಸಿಎಂ ಅಥವಾ ಅವರ ಪುತ್ರನ ಅಣತಿಯಂತೆ ನಡೆದಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಎರಡನೆಯದಾಗಿ, ದೂರಿನ ವಿಚಾರಣೆ ನಡೆಸುವುದು ಬೇರೆ. ಸಂಬಂಧಿತ ಚಾನೆಲ್ ತನ್ನ ಲೈವ್ ಟೆಲಿಕಾಸ್ಟ್ ಮಾಡಲಾಗದಂತೆ ಮಾಡುವುದು ಬೇರೆ. ಇದಕ್ಕೆ ಸ್ವತಃ ಯಡಿಯೂರಪ್ಪನವರೇ ಹೊಣೆಗಾರರು. ಯಡಿಯೂರಪ್ಪನವರು ಮೃದು ವ್ಯಕ್ತಿತ್ವ, ಮೋದಿ-ಅಮಿತ್‍ಶಾ ಇತ್ಯಾದಿಗಳಿಗಿಂತ ಬೇರೆ ಎಂಬ ಮಾತುಗಳಿಗೆ ಅರ್ಥವೇ ಇಲ್ಲ. ಸ್ವತಃ ಮೋದಿ-ಅಮಿತ್‍ಶಾ ಇಂದಿರಾಗಾಂಧಿ ಮತ್ತು ಸಂಜಯ್‍ಗಾಂಧಿಗಳಿಗಿಂತ ಕೆಟ್ಟ ಸರ್ವಾಧಿಕಾರಿಗಳು ಎಂದು ಸಾಬೀತುಪಡಿಸಿ ಬಹಳ ಕಾಲವಾಗಿಬಿಟ್ಟಿದೆ.

ಈ ಪ್ರಕರಣವು ಕೇವಲ ಯಡಿಯೂರಪ್ಪನವರ ಕುರಿತು ಬೆರಳು ಮಾಡಿ ತೋರಿಸುವುದಿಲ್ಲ. ಇತರೆಲ್ಲಾ ಮಾಧ್ಯಮ ಸಂಸ್ಥೆಗಳ ಕುರಿತೂ ಪ್ರಶ್ನೆ ಎತ್ತುತ್ತದೆ. ಪವರ್‍ಟಿವಿಯ ಬೆನ್ನಿಗೆ ಈ ಸಂದರ್ಭದಲ್ಲಿ (ವಿಚಾರಣೆಯ ನೆಪದಲ್ಲಿ ಆ ಟಿವಿಯ ಲೈವ್ ಬ್ರಾಡ್‍ಕಾಸ್ಟ್‌ಗೆ ತೊಂದರೆ ಕೊಟ್ಟಿರುವ ವಿಚಾರದಲ್ಲಿ) ಗಟ್ಟಿಯಾಗಿ ನಿಲ್ಲುವುದು ಹೋಗಲಿ, ಸಾಕ್ಷ್ಯಾಧಾರಗಳ ಮುಖಾಂತರ ವಿಜಯೇಂದ್ರ ವಿರುದ್ಧ ಕೇಳಿಬಂದ ಆರೋಪಗಳನ್ನು ಇವರ್ಯಾರೂ ಏಕೆ ಪ್ರಸಾರ ಮಾಡಲಿಲ್ಲ ಎಂಬುದು ಪ್ರಮುಖ ಪ್ರಶ್ನೆ. ಉತ್ತರ ಕರ್ನಾಟಕದ ರಾಜಕಾರಣಿಯೊಬ್ಬರು ಸಚಿವರಾಗಿದ್ದಾಗ ಖಾಸಗಿಯಾಗಿ (ಸರಿಯೋ ತಪ್ಪೋ ಆ ವಿಚಾರ ಬೇರೆ) ನಡೆಸಿದ ರಾಸಲೀಲೆಯ ವಿಡಿಯೋವನ್ನು ಈ ಟಿವಿ ಚಾನೆಲ್‍ಗಳು ‘ಬೇರೆ ಚಾನೆಲ್‍ನಲ್ಲಿ ಬಂದದ್ದು’ ಎಂದು ಬಿಟ್ಟುಬಿಟ್ಟರೇ? ಅದೂ ಹೋಗಲಿ, ಒಂದು ನಿರ್ದಿಷ್ಟ ಮಾಧ್ಯಮಸಂಸ್ಥೆಗೆ ಮಾತ್ರ ಲಭ್ಯವಾಗಿದ್ದ ಸಚಿವರೊಬ್ಬರು ಗೆಳೆಯನ ಹೆಂಡತಿಯ ಜೊತೆಗೆ ರಾಸಲೀಲೆ ನಡೆಸಿದರು ಎನ್ನಲಾದ ಸುದ್ದಿಯನ್ನು ಮಿಕ್ಕವರು ಪ್ರಸಾರ ಮಾಡಲಿಲ್ಲವೇ?

ಆಗೆಲ್ಲಾ ಜೊಲ್ಲು ಸುರಿಸಿಕೊಂಡು ಅಸಹ್ಯವಾಗಿ ಅದನ್ನು ಬಿತ್ತರಿಸಿದವರಿಗೆ ಈಗೇನಾಗಿದೆ? ಖಚಿತವಾದ ಸಾಕ್ಷ್ಯಗಳೊಂದಿಗೆ ಟಿವಿ ವಾಹಿನಿಯೊಂದು ಆಳುವ ಪಕ್ಷಕ್ಕೆ ಸೇರಿದವರು (ಅದರಲ್ಲೂ ಯಾವುದೋ ಆಳುವ ಪಕ್ಷವಲ್ಲ; ಬಿಜೆಪಿಗೆ ಸೇರಿದವರು) ನಡೆಸಿದರೆನ್ನಲಾದ ಹಗರಣ ಬೆಳಕಿಗೆ ಬಂದರೆ ಉಳಿದ ಮಾಧ್ಯಮ ಸಂಸ್ಥೆಗಳಿಗೆ ಅದೇಕೆ ದೊಡ್ಡ ಸುದ್ದಿಯಲ್ಲ? ಈ ಪ್ರಶ್ನೆಗೆ ಮಾಧ್ಯಮ ಸಂಸ್ಥೆಗಳು ಉತ್ತರಿಸಲೇಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬೆಳವಣಿಗೆಯು ಈಗಾಗಲೇ ಕುಂಠಿತವಾಗಿರುವ ಮಾಧ್ಯಮ ಸ್ವಾತಂತ್ರ್ಯದ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಯನ್ನು ಉಳಿಸುತ್ತದೆ.


ಇದನ್ನೂ ಓದಿ: ಮುಖ್ಯಮಂತ್ರಿಗಳ ದಾಳಿಗೆ ಬಗ್ಗುವುದಿಲ್ಲ, ಪವರ್ ಟಿವಿ ಪುಟಿದೇಳಲಿದೆ: ರಹಮಾನ್ ಹಾಸನ್


ಪರಿಸ್ಥಿತಿ ಹೀಗಿರುವಾಗ ಪವರ್‌ಟಿವಿಯ ಆಂಕರ್ ಮತ್ತು ಪ್ರಿನ್ಸಿಪಲ್ ಎಡಿಟರ್ ರಹಮಾನ್ ಹಾಸನ್ ಫೇಸ್‍ಬುಕ್ ಲೈವ್‍ನಲ್ಲಿ ಮಾತಾಡಿದ ಕೆಲವು ಅಂಶಗಳು ಇನ್ನೂ ಕೆಲವು ಪ್ರಶ್ನೆಗಳನ್ನು ಎತ್ತುತ್ತದೆ. ಸಕಾರಣವಾಗಿಯೇ ಅವರು ಯಡಿಯೂರಪ್ಪನವರನ್ನು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ನೂರಾರು ಸಿಬ್ಬಂದಿಯನ್ನು ಬೀದಿಗೆ ತಳ್ಳುವುದರ ಕುರಿತು ಭಾವನಾತ್ಮಕವಾಗಿಯೂ ಮಾತಾಡಿದರು. ಆದರೆ, ‘ನೀವು ಹಿಂದೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಾಗ ನಮಗೆ ನೋವಾಯಿತು’ ಎಂಬರ್ಥದಲ್ಲಿ ರಹಮಾನ್ ಮಾತಾಡಿದ್ದು ಅಚ್ಚರಿ ಮೂಡಿಸಿತು. ಆ ರೀತಿ ಪದವಿಯಿಂದ ಕೆಳಗಿಳಿದಿದ್ದು ಏಕೆ ಎಂಬುದು ಅವರಿಗೆ ಮರೆತು ಹೋದಂತಿದೆ, ಅದರ ನಂತರ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು ಎಂಬುದನ್ನು ಸಾಮಾನ್ಯ ಜನರ ನೆನಪಿನ ಶಕ್ತಿಯು ಮರೆಯಬಹುದು; ಆದರೆ ಸಮಕಾಲೀನ ಸಂದರ್ಭದ ಪ್ರಮುಖ ಪತ್ರಕರ್ತರೊಬ್ಬರು ಮರೆಯಬಹುದೇ? ಒಂದು ವೇಳೆ ಆಗಿನ ಅವರ ಭ್ರಷ್ಟಾಚಾರದ ಕುರಿತು ಪತ್ರಕರ್ತರಿಗೆ ತಕರಾರಿಲ್ಲದೇ ಅವರು ಕೆಳಗಿಳಿದಿದ್ದಕ್ಕೆ ನೋವಾಗುವುದಾದರೆ, ಈಗಿನ ಅವರ ಮತ್ತು ಪುತ್ರನ ಭ್ರಷ್ಟಾಚಾರವನ್ನು ಹೊರಗೆಳೆಯುವ ಕೆಲಸವನ್ನೇಕೆ ಈ ಚಾನೆಲ್ ಮಾಡಿತು? ಯಡಿಯೂರಪ್ಪನವರು ಒಳ್ಳೆಯವರು, ಕುಟುಂಬವೇ ಹಾಳು ಮಾಡಿತು ಎಂಬ ಉದಾರ ಅವಕಾಶವನ್ನು ಮುಖ್ಯಮಂತ್ರಿಯೊಬ್ಬರಿಗೆ ಯಾರಾದರೂ ನೀಡಬಹುದೇ? ಅದರಲ್ಲೂ ಒಬ್ಬ ಪತ್ರಕರ್ತರು?

photo courtesy: Youtube

ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ವಿಜಯೇಂದ್ರ ಭ್ರಷ್ಟಾಚಾರ ಹಾಗೂ ಪವರ್‌ಟಿವಿಯ ಮೇಲಿನ ದಬ್ಬಾಳಿಕೆಗಳು ಈಗಿಂದೀಗಲೇ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಾದ ಸಂಗತಿಗಳಲ್ಲ. ಹೀಗೆಯೇ ಮುಂದುವರೆದು ಬಿಜೆಪಿಯ ಪಾಪದ ಕೊಡ ತುಂಬಿದರೆ ಮುಂದಿನ ಚುನಾವಣೆಯಲ್ಲಿ ಒಳ್ಳೆಯದಾಗಬಹುದು ಎಂಬ ಆಶಾಭಾವನೆ ಮೂಡಿಸಿರಬಹುದು ಎಂಬ ಅನುಮಾನವೂ ಹುಟ್ಟುತ್ತದೆ. ಕುಮಾರಸ್ವಾಮಿಯವರ ಸಿಎಂ ಭೇಟಿ ಮತ್ತು ಸಿದ್ದರಾಮಯ್ಯನವರು ಮಂಡಿಸಿದ ಪರಿಣಾಮಕಾರಿಯಲ್ಲದ ಅವಿಶ್ವಾಸ ನಿರ್ಣಯಗಳ ಬಗ್ಗೆ ಅನುಮಾನ ಹುಟ್ಟಿರುವ ಹಿನ್ನೆಲೆಯಲ್ಲೂ ಇದನ್ನು ನೋಡಬಹುದು.

ಈ ಇಡೀ ಪ್ರಕರಣವು ಬಿಜೆಪಿಯೊಳಗಿನ ಆಂತರಿಕ ಕಲಹದ ಭಾಗ ಎಂದು ಹೇಳುವವರಿದ್ದಾರೆ. ದೇಶದ ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿ ಮುಖಂಡರ ಹಗರಣದ ಕುರಿತು ನೇರವಾಗಿ ಚಾಲೆಂಜ್ ಮಾಡಿ ಟಿವಿಯ ಮುಖ್ಯಸ್ಥರೇ ಮಾತಾಡುವ ಧೈರ್ಯ ಬರಬೇಕಾದರೆ, ಅದರ ಹಿಂದೆ ಬಿಜೆಪಿಯೇ ಇರಬೇಕು ಎನ್ನುವುದು ಅಂಥವರ ವಿಶ್ಲೇಷಣೆ. ಅದು ನಿಜವೋ ಅಲ್ಲವೋ ಕಾಲ ಉತ್ತರ ಹೇಳಬೇಕು. ಆದರೆ, ಈ ವಿದ್ಯಮಾನದ – ಅಂದರೆ ವಿಜಯೇಂದ್ರ ಭ್ರಷ್ಟಾಚಾರ ಮತ್ತು ಮಾಧ್ಯಮದ ಮೇಲಿನ ದಬ್ಬಾಳಿಕೆ ನಡೆಸುವ ಸರ್ವಾಧಿಕಾರದ – ಕುರಿತು ಉತ್ತರ ಹೇಳಬೇಕಾದ್ದರಲ್ಲಿ ಬಿಜೆಪಿ ಪಕ್ಷವೂ ಇದೆಯೆಂಬುದನ್ನು ಮರೆಯಲಾಗದು. ಬಿಜೆಪಿ ಪಕ್ಷವೆಂದರೆ ಅವರು ಏನು ಬೇಕಾದರೂ ಮಾಡಿಕೊಂಡು ಹೋಗಬಹುದು ಎಂಬ ಪರಿಸ್ಥಿತಿ ಈ ದೇಶದಲ್ಲಿ ಬಂದಿದೆ ಎಂದು ಭಾವಿಸಿದ್ದರೆ ಅದು ಸುಳ್ಳೆಂಬುದನ್ನು ನಿನ್ನೆಯಷ್ಟೇ ಪರಿಣಾಮಕಾರಿ ಕರ್ನಾಟಕ ಬಂದ್ ಎತ್ತಿ ತೋರಿಸಿದೆ.

ಈ ಎಲ್ಲಾ ಪ್ರಶ್ನೆಗಳನ್ನೂ ಪವರ್‌ಟಿವಿಯ ಪ್ರಕರಣವು ಸಂಬಂಧಪಟ್ಟವರ ಮುಂದೆ ಇಡುತ್ತಿದೆ ಹಾಗೂ ಅವು ಹಾಗೆಯೇ ಮರೆಯಾಗದೇ ಮತ್ತೆ ಮುನ್ನೆಲೆಗೆ ಬಂದೇ ಬರುತ್ತವೆ.


ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್‌ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...