ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರಪ್ರದೇಶದಲ್ಲಿ ಮುಂದುವರಿದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರು ಇಂದು ಉತ್ತರಪ್ರದೇಶದ ಅಲಿಗಢದಿಂದ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ಧಾಳಿಯನ್ನು ನಡೆಸಿದ್ದು, ಪ್ರಧಾನಿ ಮೋದಿ ಕೋಟ್ಯಾಧಿಪತಿಗಳ ತೆರಿಯನ್ನು ಮನ್ನಾ ಮಾಡಿದ್ದು, ರೈತರ ಒಂದೇ ಒಂದು ರೂ.ಸಾಲವನ್ನು ಮನ್ನಾ ಮಾಡಿಲ್ಲ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸುವ ಭಾಗವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಾದಲ್ಲಿ ಯಾತ್ರೆಯೊಂದಿಗೆ ಸೇರಲಿದ್ದಾರೆ. ಸಾವಿರಾರು ಮಂದಿ ಕಾಂಗ್ರೆಸ್- ಎಸ್ಪಿ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಯಾತ್ರೆಯ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರಕಾರ ಅದಾನಿಗೆ ಎಲ್ಲವನ್ನೂ ನೀಡಿದ್ದು, ಸಣ್ಣ ಕುಶಲಕರ್ಮಿಗಳಿಗೆ ಏನೂ ಉಳಿದಿಲ್ಲ. ಖಾಸಗಿ ಕಂಪನಿಗಳು, ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಬಿಸಿ, ದಲಿತರು, ಎಸ್ಟಿಗಳ ಪ್ರಾತಿನಿಧ್ಯ ಶೂನ್ಯ. ನಿರುದ್ಯೋಗ ಇಲ್ಲದಿದ್ದರೆ ಯುವಕರು ದಿನದ 12 ಗಂಟೆ ಮೊಬೈಲ್ ಬಳಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾನು 10 ವರ್ಷಗಳ ನಂತರ ಮತ್ತೆ ಇಲ್ಲಿಗೆ ಬರಲು ಬಯಸುತ್ತೇನೆ. ಅಲಿಗಢ್ ಮೊಬೈಲ್ ಉತ್ಪಾದನಾ ಕೇಂದ್ರವಾಗಿದೆ. ನಾನು ಮೊಬೈಲ್ ಫೋನ್ಗಳಲ್ಲಿ ‘ಮೇಡ್ ಇನ್ ಅಲಿಗಢ’ ಎಂದು ಬರೆದಿರುವುದನ್ನು ನೋಡಲು ಬಯಸುತ್ತೇನೆ ಹೊರತಾಗಿ ‘ಮೇಡ್ ಇನ್ ಚೀನಾ’ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಟಾರ್ಚ್ ಲೈಟ್ ಹಾಕುವಂತೆ, ಪಾತ್ರೆಗಳನ್ನು ಬಡಿಯುವಂತೆ ಹೇಳಿ ಮೋದಿ ಜನಸಾಮಾನ್ಯರನ್ನು ತಬ್ಬಿಬ್ಬುಗೊಳಿಸುತ್ತಿದ್ದಾರೆ. ಪ್ರಧಾನಿ ಮೋದಿ ಕೋಟ್ಯಾಧಿಪತಿಗಳ ತೆರಿಗೆಯನ್ನು ಮನ್ನಾ ಮಾಡಿದ್ದಾರೆ, ಆದರೆ ರೈತರ ಸಾಲವನ್ನು ಒಂದು ರೂಪಾಯಿ ಕೂಡ ಮನ್ನಾ ಮಾಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಜೆಟ್ ರಚಿಸುವವರಲ್ಲಿ ಶೇಕಡಾ 90ರಷ್ಟು ಜನರು ಮೇಲ್ಜಾತಿಯವರು, ಒಬಿಸಿಗಳು ಯುಪಿಯ ಬಜೆಟ್ನಲ್ಲಿ ಶೇಕಡಾ 4ರಷ್ಟು ಪಡೆಯುತ್ತಾರೆ. ಎಲ್ಲಾ ಹಿಂದುಳಿದ ಜಾತಿಗಳ ಜನರು ಏನು ಮಾಡುತ್ತಿದ್ದಾರೆ? ನೀವು MNGREGA, ಗುತ್ತಿಗೆ ಕಾರ್ಮಿಕರ ಪಟ್ಟಿ ಬಗ್ಗೆ ಕೇಳಬೇಕು ಎಂದು ಹೇಳಿದ್ದಾರೆ.
ನಾವು ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ, ಹಿಂಸೆ ಮತ್ತು ದ್ವೇಷ ‘ಅನ್ಯಾಯ’ದ ಕಾರಣದಿಂದ ನಡೆಯುತ್ತಿದೆ ಎಂದು ರೈತರು ಹೇಳಿದ್ದಾರೆ. ಇಲ್ಲಿ ಪ್ರತಿನಿತ್ಯ ಮಹಿಳೆಯರು, ಕಾರ್ಮಿಕರು, ರೈತರು ಅನ್ಯಾಯ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ಅನ್ಯಾಯದ ವಿರುದ್ಧ ಒಗ್ಗೂಡಿ ಹೋರಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೀವು ಓದುತ್ತೀರಿ, ಖಾಸಗಿ ಟ್ಯೂಷನ್ ತೆಗೆದುಕೊಳ್ಳುತ್ತೀರಿ. ನಂತರ ಪರೀಕ್ಷೆ ಬರೆಯಲು ಹೋದಾಗ ಪೇಪರ್ ಲೀಕ್ ಆಗಿರುವುದು ಗೊತ್ತಾಗಿದೆ. ಮೋದಿ ಸರ್ಕಾರದ ಗುರಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರ ಸಮಯವನ್ನು ವ್ಯರ್ಥ ಮಾಡುವುದಾಗಿದೆ. ಏಕೆಂದರೆ ಅವರು ನಿಮಗೆ ಉದ್ಯೋಗವನ್ನು ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಕುಟುಂಬದಲ್ಲಿ ಜಗಳವಾದಾಗ ಕುಟುಂಬ ದುರ್ಬಲವಾಗುತ್ತದೆ. ಹಾಗೆಯೇ, ಯಾರಾದರೂ ದೇಶವನ್ನು ದುರ್ಬಲಗೊಳಿಸಿದಾಗ, ದೇಶಭಕ್ತ ದೇಶವನ್ನು ಉಳಿಸುತ್ತಾನೆ. ದ್ವೇಷ ಮತ್ತು ಹಿಂಸೆಯನ್ನು ಹೋಗಲಾಡಿಸಲಾಗುತ್ತದೆ. ಇದು ಭಾರತ್ ಜೋಡೋ ಯಾತ್ರೆಯ ಉದ್ದೇಶವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಅಗ್ನಿವೀರ್ ಯೋಜನೆಯು ಬಿಹಾರ, ಯುಪಿಯ ಶ್ರಮಜೀವಿ ಯುವಕರ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ಹಣದುಬ್ಬರ, ಕನಿಷ್ಠ ವೇತನ ಹೆಚ್ಚಳ, 10 ವರ್ಷಗಳ ಮೋದಿ ಸರ್ಕಾರ ಏನು ಮಾಡಿದೆ ಎಂಬುವುದನ್ನು ಪ್ರತಿಬಿಂಬಿಸುತ್ತದೆ. ನೀವು ಯೋಚಿಸುತ್ತೀರಿ ಮತ್ತು ಇದನ್ನು ಅರಿತುಕೊಳ್ಳುತ್ತೀರಿ ಇದರಿಂದ ಬದಲಾವಣೆಗೆ ನಾಂದಿ ಹಾಡಬಹುದು ಎಂದು ಹೇಳಿದ್ದಾರೆ.
#WATCH | Agra, UP: Congress leader Rahul Gandhi says, " ..90% (minorities, OBC, Adivasis, Dalits) have only 7% participation in the central budget… 62 officers control the Uttar Pradesh budget, in these 62 officers, OBC has 4% participation who are 55% here in the state, Dalit… pic.twitter.com/F1bBRV4oZs
— ANI (@ANI) February 25, 2024
VIDEO | Bharat Jodo Nyay Yatra: Here's what Congress MP Rahul Gandhi (@RahulGandhi) said while addressing a gathering in Aligarh, Uttar Pradesh.
"During my first (Bharat Jodo) yatra, I asked people why hatred is being spread in India. Vote bank politics is not the reason…… pic.twitter.com/JtC28U3aeR
— Press Trust of India (@PTI_News) February 25, 2024
ಇದನ್ನು ಓದಿ: ಗಾಝಾದಲ್ಲಿ ಮಾನವೀಯ ನೆರವು ಕಾರ್ಯಚರಣೆ: ಸಂಕಷ್ಟದಲ್ಲಿರುವ UN ಏಜೆನ್ಸಿ