ಪುದುಚೇರಿಯ ಮುಖ್ಯ ಚುನಾವಣಾಧಿಕಾರಿಯು ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯ ಟ್ವೀಟ್ ಅನ್ನು ‘ಲೈಕ್’ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಇದು ಮುಂದಿನ ತಿಂಗಳು ಅಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗದ ನಿಷ್ಪಕ್ಷಪಾತ ನಡವಳಿಕೆ ಕುರಿತು ಪ್ರಶ್ನೆಗಳನ್ನು ಎತ್ತಿದೆ.
ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿಯ ಬಂಗಾಳ ಭಾಷೆಯಲ್ಲಿ ಹೊಸ ಚಾನೆಲ್ ಆರಂಭಿಸುತ್ತಿರುವುದಾಗಿ ಟ್ವೀಟ್ ಮಾಡಿದೆ. ಅದನ್ನು ಪುದುಚೇರಿಯ ಮುಖ್ಯ ಚುನಾವಣಾಧಿಕಾರಿಯು ‘ಲೈಕ್’ ಮಾಡಿರುವ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ, “ಇದು ನ್ಯಾಯಸಮ್ಮತ, ಪಾರದರ್ಶಕ, ವಸ್ತುನಿಷ್ಟ ಚುನಾವಣಾ ಯಂತ್ರಾಂಗವೇ” ಎಂದು ಪ್ರಶ್ನಿಸಿದ್ದಾರೆ.
Is this the reason why you aren’t acting on my complaint against Amit Shah, @ceopuducherry?
It speaks volumes when you use your official account to LIKE a tweet about Republic TV’s launch in Bengal.
Is this an objective, free, & fair election machinery, @SpokespersonECI? pic.twitter.com/1ayfOEbM24
— Saket Gokhale (@SaketGokhale) March 11, 2021
ಪುದುಚೇರಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಸಾಕೇತ್ ಗೋಖಲೆ ದೂರು ಸಲ್ಲಿಸಿದ್ದರು. ಆದರೆ ಅದನ್ನು ದಾಖಲಿಸಿಲು ಪುದುಚೇರಿ ಚುನಾವಣಾ ಆಯೋಗ ನಿರಾಕರಿಸಿತ್ತು. ಈ ಕುರಿತು ಆಕ್ರೋಶಿತಗೊಂಡಿದ್ದ ಗೋಖಲೆ ಇಲ್ಲಿನ ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ನನ್ನ ದೂರು ದಾಖಲಿಸಿಲ್ಲ ಮತ್ತು ಅರ್ನಾಬ್ ಗೋಸ್ವಾಮಿ ಟ್ವೀಟ್ ಅನ್ನು ಸಮರ್ಥಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘಿಸಿದ ಅಮಿತ್ ಶಾ ವಿರುದ್ಧ ಕ್ರಮವೇಕಿಲ್ಲ: ನೆಟ್ಟಿಗರ ಪ್ರಶ್ನೆ
ಅದು ಅವರ ವಯಕ್ತಿಕ ಖಾತೆಯಲ್ಲ. ಬದಲಿಗೆ ಚುನಾವಣಾ ಆಯೋಗದ ಅಧಿಕೃತ ಅಕೌಂಟ್ನಲ್ಲಿ ಬಿಜೆಪಿ ಪರವಿರುವ ಖಾಸಗಿ ಚಾನೆಲ್ ಒಂದನ್ನು ಉತ್ತೇಜಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಅಲ್ಲಿ ಚುನಾವಣೆ ನಡೆಯುತ್ತಿದೆ. ಇದು ಹಲವು ಪ್ರಶ್ನೆಗಳನ್ನು ಎತ್ತಲಿದ್ದು ಇದರ ಕುರಿತು ಭಾರತೀಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕೆಂದು ಗೋಖಲೆ ಒತ್ತಾಯಿಸಿದ್ದಾರೆ.
Ok it gets worse. This is full sanghi mode on now.
What sort of fairness can we even expect in the upcoming Pudducherry elections when a person like this is in-charge of supervising them?
Pls explain this @SpokespersonECI. pic.twitter.com/cXJqwulKxv
— Saket Gokhale (@SaketGokhale) March 11, 2021
ಅಲ್ಲದೆ ಜನವರಿ 26ರಂದು ರೈತರು ಭಾರತೀಯ ಧ್ವಜಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಆರೋಪಿಸಿ ರಿಪಬ್ಲಿಕ್ ಟಿವಿ ಮಾಡಿದ್ದ ಟ್ವೀಟ್ ಅನ್ನು ಸಹ ಪುದುಚೇರಿ ಚುನಾವಣಾ ಆಯೋಗ ಲೈಕ್ ಮಾಡಿದೆ. “ಇದು ಅತ್ಯಂತ ಕೊಳಕುತನ. ಈಗ ಸಂಘಪರಿವಾರದ ಮನಸ್ಥಿತಿಯಲ್ಲಿದೆ. ಇಂತಹ ಆಯೋಗದಿಂದ ಪಾರದರ್ಶನ, ನ್ಯಾಯಸಮ್ಮತ, ನಿಷ್ಪಷಪಾತ ಚುನಾವಣೆಯನ್ನು ಬಯಸುವುದು ಹೇಗೆ? ಇದರ ಬಗ್ಗೆ ಭಾರತೀಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈಗಲೂ ಪಾಂಡಿಸಿಚೇರಿಯ ಮುಖ್ಯ ಚುನಾವಣಾ ಅದಿಕಾರಿಗ ಟ್ವಿಟರ್ ಟೈಮ್ಲೈನ್ನಲ್ಲಿ ಮೊದಲ ಟ್ವೀಟ್ಗೆ ಲೈಕ್ ಒತ್ತಿರುವುದು ಹಾಗೇ ಇದೆ. ಆದರೆ ಎರಡನೇ ಟ್ವೀಟ್ಗೆ ಮಾಡಿದ್ದ ಲೈಕ್ ಅನ್ನು ಅನ್ಲೈಕ್ ಮಾಡಲಾಗಿದೆ ಎಂದು ಜನತಾಕರಿಪೋರ್ಟರ್ ವರದಿ ಮಾಡಿದೆ. ಗೋಖಲೆಯವರ ಪ್ರಶ್ನೆಗಳಗೆ ಭಾರತೀಯ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಅಧಿಕಾರ ಹಿಡಿಯಲು ಸ್ವಾಯುತ್ತ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಖಾಲಿ ಗೋಡೌನ್ಗೆ ಸರ್ಕಾರದಿಂದ ಆರೂವರೆ ಕೋಟಿ ಬಾಡಿಗೆ ಪಡೆದ ಅದಾನಿ!: ಅದಾನಿಗಾಗಿ ಸಿಎಜಿ ವರದಿ ಬದಲಿಸಲು ಹೊರಟ ಕೇಂದ್ರ
ಇದನ್ನೂ ಓದಿ: ಬಂಗಾಳದ ಎಲ್ಲೆಡೆ ಬಾಂಬ್ ಫ್ಯಾಕ್ಟರಿ: ಅಮಿತ್ ಶಾ ಸುಳ್ಳು ಬಯಲು ಮಾಡಿದ ಆರ್ಟಿಐ ಕಾರ್ಯಕರ್ತ