Homeಮುಖಪುಟರಕ್ಷಾ ಬಂಧನ: ದುಶ್ಯಾಸನರ ಹೇಗೆ ನಂಬಲಿ?

ರಕ್ಷಾ ಬಂಧನ: ದುಶ್ಯಾಸನರ ಹೇಗೆ ನಂಬಲಿ?

- Advertisement -
- Advertisement -

ರಕ್ಷಾ ಬಂಧನ

ಸೀರೆಯಂಚಲಿ ಬಿಗಿದ ಬಂಧ
ನಿನ್ನ ಕೈಯ ಗಾಯ ಒಣಗಿಸಿತು
ದ್ರೌಪದಿಯ ಮಾನ ಪೊರೆಯಿತು
ಮುಕುಂದಾ.. ನೀ
ಕೊಟ್ಟ ಮಾತು ಉಳಿಸಿದೆ ಬಿಡು

ವಸ್ತ್ರಾಪಹರಣದ ವೇಳೆ
ಮೌನವಾಗುವ ದುರ್ಯೋಧನ
ಈಗ ಮೌನ ಮುರಿದಿದ್ದಾನೆ
ರಾಖಿ ಕಟ್ಟಬೇಕಂತೆ!!

ಹಸಿ ಗಾಯವೊಂದು ಕಣ್ಣ ಮುಂದಿರುವಾಗ
ಹುಸಿ ಪ್ರೀತಿಗೆ ಓಗೊಟ್ಟು
ಹೇಗೆ ಕೈಯ ಮುಂದೊಡ್ಡಲಿ?
ದುಶ್ಯಾಸನರ ಹೇಗೆ ನಂಬಲಿ?

ಸತ್ತು ಬದುಕಿದ, ಬದುಕಿ ಸಾಯುತ್ತಲೇ ಇರುವ
ಅವಳೆದುರು ನಿನ್ನದು
ಗಾಯವೇ ಅಲ್ಲ ಬಿಡು
ಹೂ ಹಾರದ ಸ್ವಾಗತ ದುಶ್ಯಾಸನರಿಗೆ ದಕ್ಕುವಾಗ
ಗಾಯ ಒಣಗುವುದಾದರೂ ಹೇಗೆ ಹೇಳು?

ದುತ್ತನೆ ಉಕ್ಕಿ ಹರಿವ ಪ್ರೀತಿ
ರಕ್ಷಣೆಯ ನೆವನ
ಕಪಟವಲ್ಲವೇ ಶ್ಯಾಮ?
ಬಿಲ್ಕೀಸ್ ಇನ್ನೂ ಬದುಕಿದ್ದಾಳೆ ಕೃಷ್ಣಾ
————————–
(ಇತ್ತೀಚೆಗೆ ಪ್ರಧಾನಿ ಮೋದಿ ಮುಸ್ಲಿಂ ಮಹಿಳೆಯರಿಗೆ ರಾಖಿ ಕಟ್ಟಲು ಸೂಚಿಸಿದಾಗ ಹೊಳೆದ ಸಾಲುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...