Homeಕರ್ನಾಟಕರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

ರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

- Advertisement -
- Advertisement -

ಸರ್ಕಾರಕ್ಕೆ ಬಹುಮತ ಇಲ್ಲ, ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂದು ಬಿಜೆಪಿ ಅಬ್ಬರಿಸುತ್ತಿದೆ. ವಿಶ್ವಾಸಮತ ಯಾಚನೆ ಮಾಡಲಿದ್ದೇನೆ, ಸಮಯ ನಿಗದಿ ಮಾಡಿ ಎಂದು ಸ್ವತಃ ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ಹೋಟೆಲ್ಲಿನಲ್ಲಿ ಸೇರಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯು ತಮ್ಮನ್ನು ತೃಪ್ತರಾಗಿಸೀತೇ ಎಂದು ಕಾದುಕೊಂಡು ಕೂತಿದ್ದಾರೆ. ಯಾರ್ಯಾರಿಗೆ ಏನೇನು, ಎಷ್ಟೆಷ್ಟು ಸಿಕ್ಕಿದೆ ಅಥವಾ ಸಿಗುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಇಬ್ಬರಂತೂ ತಾವೇನು ಪಡೆದುಕೊಳ್ಳಲು ಇಚ್ಛಿಸಿದ್ದರೋ ಅಥವಾ ವಾಸ್ತವದಲ್ಲಿ ಯಾವುದಕ್ಕೆ ಅರ್ಹರೋ ಅದನ್ನು ಪಡೆದುಕೊಂಡಾಗಿದೆ.

ಅವರೇ ರಾಜ್ಯ ರಾಜಕಾರಣದ ಇಬ್ಬರು ಮಹತ್ವಾಕಾಂಕ್ಷಿಗಳಾದ ಸ್ಪೀಕರ್ ರಮೇಶ್ ಕುಮಾರ್ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್. ಶ್ರೀನಿವಾಸಪುರದ ಕೆ.ಆರ್.ರಮೇಶ್‍ಕುಮಾರ್ ಮುಖ್ಯಮಂತ್ರಿಯಾಗಬಹುದೆಂಬ ಆಸೆಯನ್ನೇನೂ ಇಟ್ಟುಕೊಂಡಿಲ್ಲ. ರಾಜಕೀಯ ಸಂದರ್ಭ ಮತ್ತು ಅವರದ್ದೇ ಮಿತಿಗಳ ಕಾರಣಕ್ಕೆ ಅವರನ್ನು ಸಚಿವರನ್ನಾಗಿಸಲೂ ಅವರ ಪಕ್ಷಗಳು ಸಿದ್ಧರಿಲ್ಲ. ಆದರೆ, ಸುದೀರ್ಘಕಾಲದ ರಾಜಕಾರಣದಲ್ಲಿ ತಾನು ಪಡೆದುಕೊಂಡಿರುವ ಜ್ಞಾನ ಹಾಗೂ ದೇಶದಲ್ಲಿ ಈ ಮಟ್ಟಿಗಿನ ತಿಳುವಳಿಕೆ ಇರುವ ಕೆಲವರಲ್ಲೇ ಒಬ್ಬನಾಗಿರುವ ತನಗೆ ಅದರ ‘ಸದ್ಬಳಕೆ’ಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ಕೊರಗಂತೂ ಇದೆ. ಈ ಸಾರಿಯ ಬಿಕ್ಕಟ್ಟು ಆ ಅವಕಾಶವನ್ನು ಅವರಿಗೆ ಒದಗಿಸಿದೆ ಮತ್ತು ಇನ್ನೂ ಕೆಲಕಾಲ ಒದಗಿಸಲಿದೆ.

ಸುಪ್ರೀಂಕೋರ್ಟು ಮತ್ತು ರಾಜ್ಯಪಾಲರಿಗೆ ‘ನನ್ನದು ಸ್ಪೀಕರ್ ಸ್ಥಾನ. ಶಾಸಕಾಂಗದ ಮಟ್ಟಿಗೆ ಇದೂ ಸಾಂವಿಧಾನಿಕ ಹುದ್ದೆಯೇ. ನನ್ನ ಕೆಲಸ ನಾನಷ್ಟೇ ಮಾಡುವುದು ಸಾಧ್ಯ. ನೀವು ನನಗೆ ಡಿಕ್ಟೇಟ್ ಮಾಡಲು ಸಾಧ್ಯವಿಲ್ಲ’ ಎಂದು ಅವರು ಸೂಚ್ಯವಾಗಿ ಹೇಳಿಯಾಗಿದೆ. ಇದು ತಲುಪಬೇಕಾದವರಿಗೆ ತಲುಪಲಿ ಎಂದು ಸಂದರ್ಭ ಇದ್ದಾಗಲೆಲ್ಲಾ ಇಂಗ್ಲಿಷಿನಲ್ಲೂ ಮಾತಾಡುತ್ತಾ, ರಾಜ್ಯಪಾಲರು ಮತ್ತು ಸುಪ್ರೀಂಕೋರ್ಟಿಗೂ ಅವರು ಸಂದೇಶ ರವಾನೆ ಮಾಡಿಯಾಗಿದೆ. ಸ್ಪೀಕರ್ ಸ್ಥಾನದಿಂದ ತಾನೇನು ಮಾಡಬಹುದೆಂಬ ಸಣ್ಣ ಸೂಚನೆಯನ್ನು ಉಮೇಶ್ ಜಾಧವ್ ರಾಜೀನಾಮೆ ಸಂದರ್ಭದಲ್ಲೇ ಅವರು ತೋರಿಸಿದ್ದರು.

ಸಂಜೆ 6 ಗಂಟೆ ಒಳಗೆ ರಾಜೀನಾಮೆ ಕೊಡಬಯಸುವ ಶಾಸಕರು ಸ್ಪೀಕರ್ ಅವರನ್ನು ಕಾಣಿ ಮತ್ತು ಇಂದೇ ರಾಜೀನಾಮೆಗಳನ್ನು ಸ್ಪೀಕರ್ ಇತ್ಯರ್ಥ ಮಾಡಲಿ ಎಂಬ ಸೂಚನೆಯನ್ನು ಸುಪ್ರೀಂಕೋರ್ಟು ನಿನ್ನೆ ಕೊಟ್ಟಿತ್ತು. ತಪ್ಪು ಲೆಕ್ಕಾಚಾರದಿಂದ ಎಚ್‍ಎಎಲ್ ಏರ್ ಪೋರ್ಟಿಗೆ ತಡವಾಗಿ ಬಂದ ತೃಪ್ತರಾಗದ ಶಾಸಕರು, ಸಿಗ್ನಲ್ ಫ್ರೀ ವ್ಯವಸ್ಥೆ ಇದ್ದರೂ 6 ಗಂಟೆ ಒಳಗೆ ವಿಧಾನಸೌಧ ತಲುಪಲಿಲ್ಲ. ಅದರ ರನ್ನಿಂಗ್ ಕಾಮೆಂಟ್ರಿ ನೀಡುತ್ತಿದ್ದ ಟಿವಿ ಆಂಕರ್ ಗಳಲ್ಲಿ ಯಾರಾದರೂ ಒಬ್ಬರು ಉಸಿರುಕಟ್ಟಿ ಸತ್ತು ಹೋಗಬಹುದು ಎನಿಸುವ ರೀತಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು.

ಬೇರೆ ಸ್ಪೀಕರ್ ಆಗಿದ್ದರೆ, 6 ಗಂಟೆ 1 ನಿಮಿಷಕ್ಕೆ ತಮ್ಮ ಕಚೇರಿಯಿಂದ ಹೊರಟು, ಎ.ಜಿ.ಕಚೇರಿ ಗೇಟಿನಿಂದ ವಿಧಾನಸೌಧ ಆವರಣ ಬಿಡಲು ವ್ಯವಸ್ಥೆ ಮಾಡಿಕೊಂಡಿರುತ್ತಿದ್ದರು. ಆಗ ಸುಪ್ರೀಂಕೋರ್ಟಿನ ತೀರ್ಪನ್ನು ಪಾಲನೆ ಮಾಡಿದ ಹಾಗೂ ಆಗಿರುತ್ತಿತ್ತು; ತಮ್ಮ ಪಕ್ಷವನ್ನು ಬಚಾವು ಮಾಡಿದ ಹಾಗೂ ಆಗಿರುತ್ತಿತ್ತು. ಆದರೆ ಸ್ಪೀಕರ್ ನೈತಿಕವಾಗಿ ತಪ್ಪು ಮಾಡಿದ ಕಳಂಕ ಹೊರಬೇಕಾಗುತ್ತಿತ್ತು. ರಮೇಶ್‍ಕುಮಾರ್ ರಿಗೆ ಇರುವ ಆತ್ಮವಿಶ್ವಾಸ ಎಷ್ಟೆಂದರೆ, ತಾನು ಈ ಪ್ರಕರಣವನ್ನು ತಾಂತ್ರಿಕವಾಗಿ ಗೆಲ್ಲಬೇಕಿಲ್ಲ; ಕೊಡಬೇಕಾದ ಪೆಟ್ಟು ಕೊಟ್ಟೇ ಗೆಲ್ಲುತ್ತೇನೆ ಎಂದು. ಹಾಗಾಗಿ ರಾಜೀನಾಮೆ ಪತ್ರವನ್ನು ತೆಗೆದುಕೊಂಡು (ಖಾಲಿ ಹಾಳೆ ಹಿಡಿದು ಬಂದ ಶಾಸಕರಿಗೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಪತ್ರ ಹೇಗಿರಬೇಕು ಎಂದು ಅವರೇ ಹೇಳಿರಲಿಕ್ಕೂ ಸಾಕು), ಹೊರಬಂದು ಪತ್ರಿಕಾಗೋಷ್ಠಿ ನಡೆಸಿದರು. ಸುಪ್ರೀಂಕೋರ್ಟು ತನಗೆ ಇಷ್ಟೇ ಸಮಯದಲ್ಲಿ ನಿರ್ಧಾರ ಹೇಳಿ ಎಂದು ತಾಕೀತು ಮಾಡುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಹೇಳಿದರು.

ಮರುದಿನ ಸುಪ್ರೀಂಕೋರ್ಟು ತಾನೇ ಸಮಯ ಕೇಳಿಕೊಂಡು ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು! ಇಂತಹ ಸಂದರ್ಭ ಬರಬಹುದೆಂದೇ ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರೂ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಮೇಶ್‍ಕುಮಾರ್‍ರನ್ನು ಸ್ಪೀಕರ್ ಮಾಡಿದ್ದರು. ಮೊನ್ನೆ ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಿಯೋಗವೊಂದು ಹೋಗಿತ್ತು. ಆಗ ಹಳೆಯ ಸ್ನೇಹಿತರಾದ ಸಿದ್ದರಾಮಯ್ಯ ಮತ್ತು ರಮೇಶ್‍ ಕುಮಾರ್ ನಡುವೆ ನಡೆದ ಮಾತುಕತೆ ಹೀಗಿತ್ತು.

ರಮೇಶ್ ಕುಮಾರ್: ‘ಒಟ್ಟಿನಲ್ಲಿ ನಿನಗೆ ಈಗ ಬಹಳ ಖುಷಿಯಲ್ಲವೇನಪ್ಪಾ? You are the happiest person now’,

ಸಿದ್ದರಾಮಯ್ಯ: ‘ನಾನೇಕೆ ಖುಷಿ ಪಡಬೇಕಪ್ಪಾ, ನಮ್ಮ ಕಷ್ಟ ನಮಗೆ ಆಗಿದೆ’.

ರ.ಕು: ‘ನನ್ನನ್ನ ಈ ಕಷ್ಟಕ್ಕೆ ಸಿಕ್ಕಿ ಹಾಕಿಸಿದ್ದಕ್ಕೆ’.

ಸಿ.ರಾ: ‘ಇಂಥದ್ದನ್ನೆಲ್ಲಾ ನಿಭಾಯಿಸಲು ನೀನೇ ಸರಿ. ಆ ಸಾಮಥ್ರ್ಯ, ತಿಳುವಳಿಕೆ ನಿನಗೇ ಇದೆ ಎಂಬ ಕಾರಣಕ್ಕೇ ನಿನ್ನನ್ನು ಸ್ಪೀಕರ್ ಆಗಿ ಮಾಡಿರುವುದು’.

ಇದು ವಾಸ್ತವವೇ. ಹಾಗೆಯೇ ಅದಕ್ಕಿಂತ ಜಾಸ್ತಿ ರಮೇಶ್‍ ಕುಮಾರ್ ರವರಿಗೆ ಅವಕಾಶ ಕೊಡಬಾರದು ಎಂಬುದು ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರಿಗೂ ಗೊತ್ತು. ಸಂಸದೀಯ ನಿಯಮಾವಳಿಗಳ ಬಗ್ಗೆ ಅಪಾರ ಜ್ಞಾನವಿರುವ ರಮೇಶ್‍ಕುಮಾರ್, ಈ ಅವಧಿಯಲ್ಲಿ ಎರಡೆರಡು ಸಾರಿ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ರಿಂದಲೂ ಸಲಹೆ ಪಡೆದುಕೊಂಡಿದ್ದಾರೆ. ಅವೆಲ್ಲದರ ಪರಿಣಾಮವಾಗಿ ಈ ಪ್ರಕರಣವನ್ನು ವಿಶೇಷ ರೀತಿಯಲ್ಲಿ ನಿಭಾಯಿಸಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿದೆ.

ಸಂವಿಧಾನದ 10ನೇ ಶೆಡ್ಯೂಲ್‍ನ ಪ್ರಕಾರ ಶಾಸಕರನ್ನು ಅನರ್ಹಗೊಳಿಸುವ ಪರಮಾಧಿಕಾರ ಸ್ಪೀಕರ್ ಗೆ ಇದೆ. ಅದನ್ನು ನಂತರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದಾದರೂ, ಕೋರ್ಟಿಗೆ ಕೆಲವು ಮಿತಿಗಳಿವೆ. ಈಗಾಗಲೇ ಕಿಹೊಟೊ ಹೊಲ್ಲೊಹಾನ್ ವರ್ಸಸ್ ಜಾಚಿಲ್ಹು (Kihoto Hollohan v/s Zachillhu) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟೇ ಅದನ್ನು ಹೇಳಿದೆ. ಹಾಗಾಗಿ ಇದು ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರವ್ಯಾಪ್ತಿಯ ಕುರಿತ ತಿಕ್ಕಾಟವಾಗುವ ಸಂಭವವಿದೆ. ಹಾಗಾದಾಗ, ಸಾಂವಿಧಾನಿಕ ಮೌಲ್ಯಗಳು ಏನಿರಬೇಕು ಎಂಬುದನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲ ಸ್ಪೀಕರ್ ಇಲ್ಲಿರುವುದರಿಂದ ಸುಪ್ರೀಂಕೋರ್ಟು ಸಹಾ ಇಕ್ಕಟ್ಟಿಗೆ ಸಿಲುಕುತ್ತದೆ.

ಇವೆಲ್ಲದರ ಕೇಂದ್ರದಲ್ಲಿರುವ ರಮೇಶ್‍ ಕುಮಾರ್ ರವರಿಗೆ ಇವೆಲ್ಲವೂ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸುತ್ತಾ ಹೋಗುತ್ತದೆ ಮತ್ತು ಅವರೂ ಅದನ್ನು ಬಯಸುತ್ತಾರೆ. ಇವೆಲ್ಲದರ ಪರಿಣಾಮವಾಗಿ ಪ್ರಜಾತಂತ್ರಕ್ಕೆ ಒಳಿತಾಗುವುದಾದರೆ ಮತ್ತು ಅನೈತಿಕ ಪಕ್ಷಾಂತರವನ್ನು ತಡೆಯುವಲ್ಲಿ ಮೈಲುಗಲ್ಲನ್ನು ನಿರ್ಮಿಸುವುದಾದರೆ ಅದಕ್ಕಿಂದ ಒಳ್ಳೆಯದು ಇನ್ನೊಂದಿಲ್ಲ.

ಇದನ್ನೂ ಓದಿ: ಮುಂಬೈಗೆ ಹೋಗಿ ತನ್ನ ಪರವಾದ ವಿಶ್ವಾಸಮತ ಗೆದ್ದುಕೊಂಡ ಡಿ.ಕೆ.ಶಿವಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...