Homeಮುಖಪುಟಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ ಈಸ್ ಬ್ಯಾಕ್

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ ಈಸ್ ಬ್ಯಾಕ್

- Advertisement -

ಪದ್ಮಾವತಿ ಈಸ್ ಬ್ಯಾಕ್

- Advertisement -

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ನಟಿ ರಮ್ಯಾ. ಸ್ಯಾಂಡಲ್‍ವುಡ್ ಅಂಗಳಲ್ಲಿ ಒಳ್ಳೆ ನೇಮು ಫೇಮು ಗಿಟ್ಟಿಸಿಕೊಂಡಿದ್ದ ರಮ್ಯಾ, ರಾಜ್ಯಭಾರ ಮಾಡೋ ಮನಸ್ಸಾಗಿ ಚಿತ್ರರಂಗಕ್ಕೆ ಗುಡ್‍ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಎಂಟ್ರಿಯಲ್ಲೇ ಜಯಭೇರಿ ಬಾರಿಸಿದ ರಮ್ಯಾಗೆ ಆರು ತಿಂಗಳಷ್ಟೇ ರಾಜಕೀಯ ಅಧಿಕಾರ ಅನುಭವಿಸೋ ಚಾನ್ಸ್ ಸಿಕ್ಕಿದ್ದು. ಎರಡನೇ ಇನ್ನಿಂಗ್ಸ್‍ನಲ್ಲಿ ಸೋಲುಂಡ ಮೋಹಕ ತಾರೆ ರಾತ್ರೋರಾತ್ರಿ ಲಂಡನ್‍ಗೆ ಹಾರಿದರು. ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷೆ ಪಟ್ಟ ಗಿಟ್ಟಿಸಿಕೊಂಡು ಕಾಂಟ್ರೋವರ್ಸಿ ಪೋಸ್ಟ್ ಮೂಲಕ ಆಗಾಗ್ಗೆ ಟ್ರೋಲ್ ಆಗುತ್ತಿದ್ದ ರಮ್ಯಾ ‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರು’ ಎಂಬಂತೆ ಐಟಿ ಸೆಲ್‍ಗೂ ಗುಡ್‍ಬೈ ಹೇಳಿ ನಾಪತ್ತೆಯಾಗಿದ್ದರು. ರಾಜಕೀಯ ಜಂಜಾಟಕ್ಕಿಂತ ಸಿನಿಮಾ ಮಾಡ್ಕೊಂಡ್, ಅಭಿಮಾನಿಗಳಿಗೆ ಆಟೋಗ್ರಾಫ್ ಹಾಕೊಂಡ್ ಇರೋದೆ ವಾಸಿ ಅನ್ನೋದನ್ನ ಅರಿತುಕೊಂಡು ಈಗಲೂ ಸಿನಿಮಾ ಆಫರ್ ಬರ್ತಾಯಿವೆ, ಸಿನಿಮಾ ಮಾಡ್ತಿನಿ ಅಂತ ಹೇಳ್ತಿದ್ದಾರೆ. ಸದ್ಯಕ್ಕೆ ಈಗಾಗಲೇ ಸುಮಾರು ವರ್ಷಗಳ ಹಿಂದೆ ಚಿತ್ರೀಕರಣಗೊಂಡಿದ್ದ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರೋ ‘ದಿಲ್ ಕಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಂತೂ ಆಫ್ಟರ್ ಲಾಂಗ್ ಟೈಮ್ ಸಿನಿಮಾ ರಂಗಕ್ಕೆ ರಮ್ಯಾ ಅಭಿನಯದ ಸಿನಿಮಾ ರಿಲೀಸ್ ಆಗ್ತಿದೆ. ಆದರೆ ಮೋದಿ, ಬಿಜೆಪಿಗಳ ವಿರುದ್ಧ ಟೀಕಿಸಿ ಭಾಜಪಾ ಭಜನಾ ಮಂಡಳಿಯ ವಿರೋಧ ಕಟ್ಟಿಕೊಂಡಿರೋ ಕೆಂಪೇಗೌಡ ಕಟ್ಟಿದ್ ಊರಿನ ಪದ್ಮಾವತಿಯನ್ನ ಅಭಿಮಾನಿಗಳು ಅದ್ಯಾವ ರೀತಿ ವೆಲ್‍ಕಮ್ ಮಾಡ್ತಾರೋ ನೋಡಬೇಕು.

ಹಿರಿಯರನ್ನು ಮರೀತಿದ್ಯಾ ಸ್ಯಾಂಡಲ್‍ವುಡ್

ಕನ್ನಡ ಚಿತ್ರರಂಗದಲ್ಲಿ ಒಂದೆಡೆ ನಾಯಕ ನಟರು ಸ್ಟಾರ್‍ಗಳಾದ್ರೆ, ಮತ್ತೊಂದೆಡೆ ಕಾಮಿಡಿ ನಟರೇ ಹೀರೋಗಳಿಗಿಂತ ಸ್ಟಾರ್‍ಗಳಾಗಿ ಮಿಂಚುತ್ತಿದ್ದರು. ಅಭಿಮಾನಿಗಳು ಎಷ್ಟೋ ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ಕಾಮಿಡಿ ನಟರಿದ್ದಾರೆಂಬ ಕಾರಣಕ್ಕೆ ಸಿನಿಮಾ ನೋಡಲು ಹೋಗುತ್ತಿದ್ದರು. ಈಗಲೂ ಆ ಟ್ರೆಂಡ್ ಹಾಗೇ ಉಳಿದಿದೆ. ಇಂತಹ ಟ್ರೆಂಡ್ ಕ್ರಿಯೇಟ್ ಮಾಡಿದವರಲ್ಲಿ ಹಾಸ್ಯ ನಟ ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ ಮೊದಲಿಗರು. ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಹಾಸ್ಯದ ಔತಣ ನೀಡಿದ್ದ ಇಂತಹ ಪ್ರತಿಭೆಗಳು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದು ಹೋಗಿವೆ. ಹಾಗೊಮ್ಮೆ ಹೀಗೊಮ್ಮೆ ಕಾಣಸಿಗುವ ನಟನೆಂದರೆ ಅದು ದೊಡ್ಡಣ್ಣ ಮಾತ್ರ. ಉಳಿದವರು ಇದ್ದಾರೆ ಎಂಬುದಕ್ಕೆ ಕುರುಹೂ ಇಲ್ಲದಷ್ಟು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅಂದಹಾಗೆ ‘ರಾಜಲಕ್ಷ್ಮೀ’ ಟೈಟಲ್‍ನ ಸಿನಿಮಾದಲ್ಲಿ ನಟಿಸುತ್ತಿರುವ ಟೆನ್ನಿಸ್ ಕೃಷ್ಣರದ್ದೂ ಇದೇ ಮಾತು. ಕನ್ನಡ ಇಂಡಸ್ಟ್ರಿಯಲ್ಲಿ ಹಳಬರಿಗೆ ಅವಕಾಶವಿಲ್ಲ. ವಯಸ್ಸಾಗ್ತಿದ್ದಂತೆ ಮೂಲೆಗೆ ತಳ್ಳಿಬಿಡುತ್ತಾರೆ. ಅಭಿಮಾನಿಗಳೇ ನೀವು ಸಿನಿಮಾದಲ್ಲಿ ಕಾಣಸಿಗುತ್ತಿಲ್ಲವಲ್ಲಾ, ಯಾಕೆ ಎಂದು ಕೇಳುತ್ತಾರೆ. ಆದರೆ ಸಿನಿಮಾ ಮಾಡೋರಿಗೆ ಹಿರಿಯರ ಅವಶ್ಯಕತೆ ಇಲ್ಲದಂತಾಗಿದೆ ಅಂತಾರೆ ಟೆನ್ನಿಸ್.

ಲತಾ ಮಂಗೇಶ್ಕರ್ ಆರೋಗ್ಯಸ್ಥಿತಿ ಗಂಭೀರ

ಗಾಯನ ಕ್ಷೇತ್ರದಲ್ಲಿ ಖ್ಯಾತಿ ಪಡೆದು ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಗಾಯಕಿ ಲತಾ ಮಂಗೇಶ್ಕರ್.
90 ವಸಂತಗಳನ್ನು ದಾಟಿರುವ ಲತಾ ಮಂಗೇಶ್ಕರ್ ಉಸಿರಾಟದ ಸಮಸ್ಯೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ರೂಲರ್ ಈಸ್ ದ ಮಾಡೆಲ್

ಈಗಿನ ಜನರೇಷನ್ ಹೈಕ್ಳಿಗೆ ಸಿನಿಮಾ ಸ್ಟಾರ್‍ಗಳೇ ಯೂತ್ ಐಕಾನ್‍ಗಳು. ಯಾವುದೇ ಹುಡಗನ್ನ ಕೇಳಿದ್ರು ಅವರು ಯಾವುದಾದ್ರು ಒಬ್ಬ ನಟನ ಹೆಸರೇಳಿ ಅವನೇ ನಮ್ಮ ರೋಲ್ ಮಾಡಲ್ ಅಂತ ಹೇಳ್ತಾರೆ. ಹಂಗೇನೇ ಸಿನಿಮಾ ಸ್ಟಾರ್‍ಗಳಿಗೂ ಯಾರಾದ್ರು ಒಬ್ರು ರೋಲ್ ಮಾಡಲ್‍ಗಳು ಇದ್ದೇಯಿರ್ತಾರೆ. ಸದ್ಯಕ್ಕೆ ಮ್ಯಾಟ್ರು ಏನಪ್ಪಾ ಅಂದ್ರೆ. ತನ್ನ ಪ್ರತಿ ಸಿನಿಮಾದಲ್ಲೂ ಒಬ್ಬೊಬ್ಬರ ಹೆಸರೇಳ್ಕಂಡು ಬೆಳೆದು ಬಂದ ರಾಕಿಂಗ್ ಸ್ಟಾರ್ ಯಶ್‍ನ ರೋಲ್ ಮಾಡೆಲ್ ಯಾರು ಅನ್ನೋದು. ರಾಮಾಚಾರಿ ಸಿನಿಮಾದಲ್ಲಿ ವಿಷ್ಣು ಟ್ಯಾಟೂ ಹಾಕಂಡ್ ವಿಷ್ಣು ಅಭಿಮಾನಿಗಳನ್ನೂ, ಗಜಕೇಸರಿಯಲ್ಲಿ ರಾಜ್‍ಕುಮಾರ್ ಅಭಿಮಾನಿಗಳನ್ನೂ, ಡ್ರಾಮಾ ಸಿನಿಮಾದಲ್ಲಿ ಅಂಬಿ ಜೊತೆ ಆ್ಯಕ್ಟ್ ಮಾಡಿದ ನಂತರ ಅಂಬಿ ಅಣ್ಣ ಅಂತ ಅಂಬಿಯ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ಯಶ್ ಅಂಬಿ ಇರುವವರೆಗೂ ಅಂಬಿಯೇ ತನ್ನ ರೋಲ್ ಮಾಡೆಲ್ ಎಂಬಂತೆ ಹೇಳಿಕೊಳ್ಳುತ್ತಿದ್ದರು. ಇವಾಗ ಇದ್ದಕ್ಕಿದ್ದಂಗೆ ರೋಲ್ ಮಾಡಲ್ ಚೇಂಜ್ ಮಾಡ್ಕಂಡಿರೋ ಯಶ್, ನಿಮ್ಮ ಸ್ಫೂರ್ತಿ ಯಾರು ಅಂದ್ರೆ ಮೋದಿ ಅಂದ್ಬುಟ್ಟಿದ್ದಾರೆ. ಅಂದಹಾಗೆ 2014ರಲ್ಲಿ ಮೋದಿ ಅಧಿಕಾರಕ್ಕೆ ಬರೋಕಿಂತ ಮುಂಚೆ ಮೋದಿ ಗೊತ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಸದ್ಯಕ್ಕೆ ಎಲ್ಲರನ್ನೂ ಸೆಳೀತಿರೋ ಮೋದಿನೇ ನನ್ನ ರೋಲ್ ಮಾಡ್ಲು ಅಂತ ಯಶ್ ಹೊಗುಳ್ತಾಯಿರೋದು ನೋಡಿದ್ರೆ ಅಂಬಿ ಮೇಲಿನ ಅಭಿಮಾನ ಕಡ್ಮೆ ಆಗೋಯ್ತಾ ಅನ್ನುಸ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...