Homeಚಳವಳಿರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

ರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

- Advertisement -
- Advertisement -

ರಾಜಸ್ಥಾನದ ಜಲಿಯನ್‌ಲಾಲಾ ಭಾಗ್‌‌ ಎಂದೇ ಪ್ರಸಿದ್ದಿ ಹೊಂದಿರುವ ಮತ್ತು ಆದಿವಾಸಿಗಳು ತಮ್ಮ ಸ್ವಾಭಿಮಾನದ ಸಂಕೇತವಾಗಿ ಕಾಣುವ ‘ಮಂಗರ್‌ ಧಾಮ್‌’ ಸ್ಮಾರಕವನ್ನು ಕೇಸರಿಕರಣಗೊಳಿಸುವುದನ್ನು ವಿರೋಧಿಸಿ ನಾಲ್ಕು ರಾಜ್ಯಗಳ ಹತ್ತಾರು ಸಾವಿರ ಆದಿವಾಸಿಗಳು ಭಾನುವಾರ ವಾಹನ ಜಾಥಾವನ್ನು ಆಯೋಜಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಸುಮಾರು 15 ಸಾವಿರ ಆದಿವಾಸಿಗಳು ಬುಡಕಟ್ಟು ‘ಬಿಲ್‌ಪ್ರದೇಶ ಸಂದೇಶ್ ವಾಹನ ಯಾತ್ರೆ’ಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಮಂಗರ್ ಧಾಮವನ್ನು ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ, ಎಲ್ಲಾ ಪಕ್ಷಗಳ ರಾಜಕೀಯವನ್ನು ಕೊನೆಗೊಳಿಸುತ್ತೇವೆ ಎಂದು ಆದಿವಾಸಿ ಪರಿವಾರ ಮತ್ತು ಭಿಲ್ ಪ್ರದೇಶ್ ಮುಕ್ತಿ ಮೋರ್ಚಾ ಸಂಘಟನೆ ಪ್ರತಿಜ್ಞೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಮಂಗರ್ ಧಾಮದಲ್ಲಿ ಸುಮಾರು 12 ಸಾವಿರ ಕಾರ್ಯಕರ್ತರನ್ನು ಸೇರಿಸಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ವಾಹನ ರ್‍ಯಾಲಿ ನಡೆಸಿತ್ತು. ಅಲ್ಲದೆ ಅಲ್ಲಿ ಆರೆಸ್ಸೆಸ್ಸಿನ ಧ್ವಜವನ್ನು ನಟ್ಟು ಆದಿವಾಸಿಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕೂಡಾ ಆರೋಪಿಸಲಾಗಿದೆ.

ಇದನ್ನೂ ಓದಿ: 9 ಮಕ್ಕಳು ಸೇರಿದಂತೆ 20 ಆದಿವಾಸಿಗಳನ್ನು ಬಂಧಿತ ಕಾರ್ಮಿಕರಾಗಿ ರಾಜ್ಯಕ್ಕೆ ಕರೆತರಲಾಗಿದೆ: ವರದಿ

ಇದನ್ನು ವಿರೋಧಿಸಿ ಅದೇ ಸ್ಥಳದಲ್ಲಿ ಭಾನುವಾರದಂದು ನೂತನ ರಾಜಕೀಯ ಸಂಘಟನೆಯಾದ ರಾಷ್ಟ್ರೀಯ ಬುಡಕಟ್ಟು ಪಕ್ಷ(ಎನ್‌ಟಿಪಿ)ದ ವತಿಯಿಂದ ಸುಮಾರು 15 ಸಾವಿರ ಕಾರ್ಯಕರ್ತರೊಂದಿಗೆ ವಾಹನ ಜಾಥಾ ನಡೆಸಿದೆ.

ಸೇರಿದ್ದ ಜನಸಮೂಹವು ಬುಡಕಟ್ಟು ಪರಂಪರೆಯ ಮಂಗರ್ ಧಾಮವನ್ನು ಯಾವುದೇ ಸಂದರ್ಭದಲ್ಲೂ ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗರ್ ಧಾಮದಲ್ಲಿ ರಾಜಕೀಯ ಮಾಡುವ ಹಕ್ಕು  ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ (ಭಾರತೀಯ ಬುಡಕಟ್ಟು ಪಕ್ಷ) ಸೇರಿದಂತೆ ಯಾರಿಗೂ ಇಲ್ಲ ಎಂದು ಆದಿವಾಸಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಒಟ್ಟು 15 ಆರೋಪಿಗಳ ಬಂಧನ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡುಂಗರ್‌ಪುರ ಬುಡಕಟ್ಟು ಪರಿವಾರದ ಭನ್ವರ್‌ಲಾಲ್ ಪರ್ಮಾರ್, “ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ ಪಕ್ಷಗಳ ರಾಜಕೀಯ ಈ ಕ್ಷೇತ್ರದಲ್ಲಿ ಕೊನೆಗೊಳ್ಳಬೇಕಿದೆ. ಬಿಟಿಪಿಯನ್ನು ಸಹ ಬೆಂಬಲಿಸಬೇಕಾಗಿಲ್ಲ. ಬುಡಕಟ್ಟು ಪರಿವಾರ ಯಾವ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತಾರೋ ಅವರನ್ನು ಗೆಲ್ಲಿಸಬೇಕು” ಎಂದು ಹೇಳಿದ್ದಾರೆ.

“ಧರಿಯಾವಾಡದ ಉಪಚುನಾವಣೆಯಲ್ಲಿ ಆದಿವಾಸಿ ಪರಿವಾರ ಮಾಡಿದ್ದು ಇದನ್ನೇ” ಎಂದು ಭನ್ವರಲಾಲ್ ಸ್ಪಷ್ಟಪಡಿಸಿದ್ದಾರೆ. ಹೊಸ ಪಕ್ಷವಾದ ಎನ್‌ಟಿಪಿಯನ್ನು ಬುಡಕಟ್ಟು ಪರವಾರದಿಂದ ಡುಂಗರ್‌ಪುರದಲ್ಲಿ ರಾಜಕೀಯ ಸಂಘಟನೆಯಾಗಿ ನೋಂದಾಯಿಸಲಾಗಿದೆ.

ಮಂಗರ್ ಧಾಮ ಭಿಲ್ ರಾಜ್ಯದ ರಾಜಧಾನಿಯಾಗಲಿದೆ!

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಿಲ್ ಪ್ರದೇಶ ಮುಕ್ತಿ ಮೋರ್ಚಾದ ಕೆಲವು ಮುಖಂಡರು ಬುಡಕಟ್ಟು ಪರಿವಾರಕ್ಕಾಗಿ ಪ್ರತ್ಯೇಕ ‘ಭಿಲ್’ ರಾಜ್ಯಕ್ಕಾಗಿ ಒತ್ತಾಯಿಸಿದ್ದು, ಭಿಲ್ ರಾಜ್ಯದ ರಾಜಧಾನಿ ಮಂಗರ್‌ ಧಾಮ ಆಗಲಿದೆ ಎಂದು ಹೇಳಿದ್ದಾರೆ.

ಬುಡಕಟ್ಟು ಪರಿವಾರದ ಮಣಿಲಾಲ್ ಗರಾಸಿಯಾ ಮಾತನಾಡಿ, “ಆದಿವಾಸಿಗಳು ಪ್ರಕೃತಿ ಆರಾಧಕರಾಗಿದ್ದು, ಅವರಿಗೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ. ಆದ್ದರಿಂದ ಮನೆಯಲ್ಲಿ ನಡೆಯುವ ಯಾವುದೇ ಪೂಜೆಗೆ ಬ್ರಾಹ್ಮಣರನ್ನು ಕರೆಯುವ ಅನಿವಾರ್ಯತೆ ಇಲ್ಲವಾಗಬೇಕು” ಎಂದು ಹೇಳಿದ್ದಾರೆ.

“ಆದಿವಾಸಿ ರಾಣಾ ಪೂಂಜಾ ಇಲ್ಲದೆ ಮಹಾರಾಣಾ ಪ್ರತಾಪನ ಇತಿಹಾಸ ಏನೂ ಅಲ್ಲ” ಎಂದು ಗರಾಸಿಯಾ ಪ್ರತಿಪಾಸಿದ್ದಾರೆ.

ಬುಡಕಟ್ಟು ಪರಿವಾರ ಮತ್ತು ಮುಕ್ತಿ ಮೋರ್ಚಾ, ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿಗೆ ಮಂಗರ್ ಧಾಮ್‌ನಲ್ಲಿ ಪಕ್ಷದ ಧ್ವಜಗಳನ್ನು ಹಾಕದಂತೆ ಎಚ್ಚರಿಕೆ ನೀಡಿದೆ. “ಮಂಗರ್ ಧಾಮ ಆದಿವಾಸಿಗಳ ಹುತಾತ್ಮರಾದ ಪುಣ್ಯಭೂಮಿ. ಆದ್ದರಿಂದಲೇ ಇಲ್ಲಿ ರಾಜಕೀಯ ಬೇಡ. ಆದಿವಾಸಿಗಳ ಈ ಜಾಗವನ್ನು ಆದಿವಾಸಿಗಳಲ್ಲದವರ ವಶಕ್ಕೆ ಕೊಡುವಲ್ಲಿ ಬಿಜೆಪಿ ನಿರತವಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ: ಬೆಳ್ತಂಗಡಿ: ಆದಿವಾಸಿ ಮಹಿಳೆಯ ಮೇಲೆ ಹಲ್ಲೆ, ಅರೆಬೆತ್ತಲೆ ಮಾಡಿ ಚಿತ್ರೀಕರಣ; ದುಷ್ಕರ್ಮಿಗಳ ಕೃತ್ಯಕ್ಕೆ ಬಿಜೆಪಿ ಮುಖಂಡನೇ ನೇತೃತ್ವ?

ಆಗಸ್ಟ್ 9 ರಂದು ಕಾಂಗ್ರೆಸ್‌ನ ಪಾದಯಾತ್ರೆ

ಬಿಜೆಪಿ ಜಾಥಾದ ನಂತರ, ಆಗಸ್ಟ್ 9 ರಂದು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷವು 75 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಈ ಜಾಥಾ ಮಂಗರ್ ಧಾಮದಿಂದಲೇ ಆರಂಭಿಸಲಾಗುವುದು ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

ಏನಿದು ಮಂಗರ್‌ ಧಾಮ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಆರು ವರ್ಷಗಳ ಮೊದಲು ನವೆಂಬರ್ 17, 1913 ರಂದು ರಾಜಸ್ಥಾನ-ಗುಜರಾತ್ ಗಡಿಯ ಮಂಗರ್ ಬೆಟ್ಟದಲ್ಲಿ ಬ್ರಿಟೀಷ್‌ ಮತ್ತು ಭಾರತದ ರಾಜರಿಂದ ನಡೆದ ಹತ್ಯಾಕಾಂಡದ ಸ್ಮಾರಕ ಸ್ಥಳವಾಗಿದೆ ಮಂಗರ್‌ ಧಾಮ.

ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರ ಆಡಳಿತದ ಗುಂಡಿಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಮಂಗರ್ ಹತ್ಯಾಕಾಂಡದಲ್ಲಿ ಒಂದೂವರೆ ಸಾವಿರ ಜನರು ಸತ್ತರು ಎಂದು ಇತಿಹಾಸಹಾರರು ದಾಖಲಿಸಿದ್ದಾರೆ. ಮಂಗರ್ ಬೆಟ್ಟದಲ್ಲಿ ನೆರೆದಿದ್ದ ಸಾವಿರಾರು ಆದಿವಾಸಿಗಳನ್ನು ಭಾರತ ಮತ್ತು ಇಂಗ್ಲಿಷ್ ರಾಜಪ್ರಭುತ್ವದ ಸೈನ್ಯಗಳು ಸೇರಿಕೊಂಡು ಹತ್ಯಾಕಾಂಡ ನಡೆಸಿತ್ತು.

ಈ ಘಟನೆಯು ಜಲಿಯನ್ ವಾಲಾಬಾಗ್‌ಗಿಂತಲೂ ದೊಡ್ಡ ಹತ್ಯಾಕಾಂಡ ಎಂದು ಲೇಖಕರು, ಇತಿಹಾಸಕಾರರು ಮತ್ತು ಸ್ಥಳೀಯ ಜನರು ಹೇಳುತ್ತಾರೆ ಎಂದು ಬಿಬಿಸಿ ಹಿಂದಿ ವರದಿ ಹೇಳುತ್ತದೆ. ಆದರೆ, ಇಷ್ಟು ದೊಡ್ಡ ಹತ್ಯಾಕಾಂಡ ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲಾಗಿಲ್ಲ.

ಇದನ್ನೂ ಓದಿ: ಕೊಡಗು: 4 ವರ್ಷ ಕಳೆದರೂ ಸಿಗದ ಸೌಲಭ್ಯ; ಪುನರ್‌ ವಸತಿ ಬಿಟ್ಟು ಕಾಡಿಗೆ ಬಂದ ಆದಿವಾಸಿಗಳು

ಮಂಗರ್‌ ಧಾಮವೂ ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 550 ಕಿಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಮೀ ದೂರದಲ್ಲಿದೆ. 108 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಪರ್ವತ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದೇ ಬೆಟ್ಟವನ್ನು ಈಗ ‘ಮಂಗರ್ ಧಾಮ’ ಎಂದು ಕರೆಯುತ್ತಾರೆ.

ಮಂಗರ್ ಬೆಟ್ಟವು ಸುತ್ತಲೂ ಕಾಡಿನಿಂದ ಆವೃತವಾಗಿದ್ದು, ಬೆಟ್ಟದ ಎತ್ತರವು ಸುಮಾರು 800 ಮೀಟರ್ ಹೊಂದಿದೆ. ಹತ್ಯಾಕಾಂಡದ ನಂತರ ಬ್ರಿಟೀಷರು ಆ ಬೆಟ್ಟದ ಬಳಿಗೆ ಜನರು ತೆರಳುವುದನ್ನು ನಿಷೇಧಿಸಿದ್ದರು. ಅಳಿದುಳಿದ ಜನರು ಅಲ್ಲಿಂದ ಪಲಾಯನ ಮಾಡಿದ್ದರು. ಈ ದುರ್ಘಟನೆ ನಡೆದು ಸುಮಾರು 80 ವರ್ಷಗಳ ಕಾಲ ಇಲ್ಲಿ ಏನೂ ಇರಲಿಲ್ಲ. ಆದರೆ ಕಳೆದ ಎರಡು ದಶಕಗಳ ಹಿಂದೆ ಇಲ್ಲಿ ಹುತಾತ್ಮರ ಸ್ಮಾರಕ, ವಸ್ತುಸಂಗ್ರಹಾಲಯ ಮತ್ತು ರಸ್ತೆ ನಿರ್ಮಿಸಲಾಗಿದೆ.

ಮಂಗರ್‌ ಧಾಮದ ಬಗ್ಗೆ ಬಿಬಿಸಿ ಹಿಂದಿಯ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...