Homeಚಳವಳಿರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

ರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

- Advertisement -
- Advertisement -

ರಾಜಸ್ಥಾನದ ಜಲಿಯನ್‌ಲಾಲಾ ಭಾಗ್‌‌ ಎಂದೇ ಪ್ರಸಿದ್ದಿ ಹೊಂದಿರುವ ಮತ್ತು ಆದಿವಾಸಿಗಳು ತಮ್ಮ ಸ್ವಾಭಿಮಾನದ ಸಂಕೇತವಾಗಿ ಕಾಣುವ ‘ಮಂಗರ್‌ ಧಾಮ್‌’ ಸ್ಮಾರಕವನ್ನು ಕೇಸರಿಕರಣಗೊಳಿಸುವುದನ್ನು ವಿರೋಧಿಸಿ ನಾಲ್ಕು ರಾಜ್ಯಗಳ ಹತ್ತಾರು ಸಾವಿರ ಆದಿವಾಸಿಗಳು ಭಾನುವಾರ ವಾಹನ ಜಾಥಾವನ್ನು ಆಯೋಜಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಸುಮಾರು 15 ಸಾವಿರ ಆದಿವಾಸಿಗಳು ಬುಡಕಟ್ಟು ‘ಬಿಲ್‌ಪ್ರದೇಶ ಸಂದೇಶ್ ವಾಹನ ಯಾತ್ರೆ’ಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಮಂಗರ್ ಧಾಮವನ್ನು ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ, ಎಲ್ಲಾ ಪಕ್ಷಗಳ ರಾಜಕೀಯವನ್ನು ಕೊನೆಗೊಳಿಸುತ್ತೇವೆ ಎಂದು ಆದಿವಾಸಿ ಪರಿವಾರ ಮತ್ತು ಭಿಲ್ ಪ್ರದೇಶ್ ಮುಕ್ತಿ ಮೋರ್ಚಾ ಸಂಘಟನೆ ಪ್ರತಿಜ್ಞೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಮಂಗರ್ ಧಾಮದಲ್ಲಿ ಸುಮಾರು 12 ಸಾವಿರ ಕಾರ್ಯಕರ್ತರನ್ನು ಸೇರಿಸಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ವಾಹನ ರ್‍ಯಾಲಿ ನಡೆಸಿತ್ತು. ಅಲ್ಲದೆ ಅಲ್ಲಿ ಆರೆಸ್ಸೆಸ್ಸಿನ ಧ್ವಜವನ್ನು ನಟ್ಟು ಆದಿವಾಸಿಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕೂಡಾ ಆರೋಪಿಸಲಾಗಿದೆ.

ಇದನ್ನೂ ಓದಿ: 9 ಮಕ್ಕಳು ಸೇರಿದಂತೆ 20 ಆದಿವಾಸಿಗಳನ್ನು ಬಂಧಿತ ಕಾರ್ಮಿಕರಾಗಿ ರಾಜ್ಯಕ್ಕೆ ಕರೆತರಲಾಗಿದೆ: ವರದಿ

ಇದನ್ನು ವಿರೋಧಿಸಿ ಅದೇ ಸ್ಥಳದಲ್ಲಿ ಭಾನುವಾರದಂದು ನೂತನ ರಾಜಕೀಯ ಸಂಘಟನೆಯಾದ ರಾಷ್ಟ್ರೀಯ ಬುಡಕಟ್ಟು ಪಕ್ಷ(ಎನ್‌ಟಿಪಿ)ದ ವತಿಯಿಂದ ಸುಮಾರು 15 ಸಾವಿರ ಕಾರ್ಯಕರ್ತರೊಂದಿಗೆ ವಾಹನ ಜಾಥಾ ನಡೆಸಿದೆ.

ಸೇರಿದ್ದ ಜನಸಮೂಹವು ಬುಡಕಟ್ಟು ಪರಂಪರೆಯ ಮಂಗರ್ ಧಾಮವನ್ನು ಯಾವುದೇ ಸಂದರ್ಭದಲ್ಲೂ ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗರ್ ಧಾಮದಲ್ಲಿ ರಾಜಕೀಯ ಮಾಡುವ ಹಕ್ಕು  ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ (ಭಾರತೀಯ ಬುಡಕಟ್ಟು ಪಕ್ಷ) ಸೇರಿದಂತೆ ಯಾರಿಗೂ ಇಲ್ಲ ಎಂದು ಆದಿವಾಸಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಒಟ್ಟು 15 ಆರೋಪಿಗಳ ಬಂಧನ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡುಂಗರ್‌ಪುರ ಬುಡಕಟ್ಟು ಪರಿವಾರದ ಭನ್ವರ್‌ಲಾಲ್ ಪರ್ಮಾರ್, “ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ ಪಕ್ಷಗಳ ರಾಜಕೀಯ ಈ ಕ್ಷೇತ್ರದಲ್ಲಿ ಕೊನೆಗೊಳ್ಳಬೇಕಿದೆ. ಬಿಟಿಪಿಯನ್ನು ಸಹ ಬೆಂಬಲಿಸಬೇಕಾಗಿಲ್ಲ. ಬುಡಕಟ್ಟು ಪರಿವಾರ ಯಾವ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತಾರೋ ಅವರನ್ನು ಗೆಲ್ಲಿಸಬೇಕು” ಎಂದು ಹೇಳಿದ್ದಾರೆ.

“ಧರಿಯಾವಾಡದ ಉಪಚುನಾವಣೆಯಲ್ಲಿ ಆದಿವಾಸಿ ಪರಿವಾರ ಮಾಡಿದ್ದು ಇದನ್ನೇ” ಎಂದು ಭನ್ವರಲಾಲ್ ಸ್ಪಷ್ಟಪಡಿಸಿದ್ದಾರೆ. ಹೊಸ ಪಕ್ಷವಾದ ಎನ್‌ಟಿಪಿಯನ್ನು ಬುಡಕಟ್ಟು ಪರವಾರದಿಂದ ಡುಂಗರ್‌ಪುರದಲ್ಲಿ ರಾಜಕೀಯ ಸಂಘಟನೆಯಾಗಿ ನೋಂದಾಯಿಸಲಾಗಿದೆ.

ಮಂಗರ್ ಧಾಮ ಭಿಲ್ ರಾಜ್ಯದ ರಾಜಧಾನಿಯಾಗಲಿದೆ!

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಿಲ್ ಪ್ರದೇಶ ಮುಕ್ತಿ ಮೋರ್ಚಾದ ಕೆಲವು ಮುಖಂಡರು ಬುಡಕಟ್ಟು ಪರಿವಾರಕ್ಕಾಗಿ ಪ್ರತ್ಯೇಕ ‘ಭಿಲ್’ ರಾಜ್ಯಕ್ಕಾಗಿ ಒತ್ತಾಯಿಸಿದ್ದು, ಭಿಲ್ ರಾಜ್ಯದ ರಾಜಧಾನಿ ಮಂಗರ್‌ ಧಾಮ ಆಗಲಿದೆ ಎಂದು ಹೇಳಿದ್ದಾರೆ.

ಬುಡಕಟ್ಟು ಪರಿವಾರದ ಮಣಿಲಾಲ್ ಗರಾಸಿಯಾ ಮಾತನಾಡಿ, “ಆದಿವಾಸಿಗಳು ಪ್ರಕೃತಿ ಆರಾಧಕರಾಗಿದ್ದು, ಅವರಿಗೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ. ಆದ್ದರಿಂದ ಮನೆಯಲ್ಲಿ ನಡೆಯುವ ಯಾವುದೇ ಪೂಜೆಗೆ ಬ್ರಾಹ್ಮಣರನ್ನು ಕರೆಯುವ ಅನಿವಾರ್ಯತೆ ಇಲ್ಲವಾಗಬೇಕು” ಎಂದು ಹೇಳಿದ್ದಾರೆ.

“ಆದಿವಾಸಿ ರಾಣಾ ಪೂಂಜಾ ಇಲ್ಲದೆ ಮಹಾರಾಣಾ ಪ್ರತಾಪನ ಇತಿಹಾಸ ಏನೂ ಅಲ್ಲ” ಎಂದು ಗರಾಸಿಯಾ ಪ್ರತಿಪಾಸಿದ್ದಾರೆ.

ಬುಡಕಟ್ಟು ಪರಿವಾರ ಮತ್ತು ಮುಕ್ತಿ ಮೋರ್ಚಾ, ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿಗೆ ಮಂಗರ್ ಧಾಮ್‌ನಲ್ಲಿ ಪಕ್ಷದ ಧ್ವಜಗಳನ್ನು ಹಾಕದಂತೆ ಎಚ್ಚರಿಕೆ ನೀಡಿದೆ. “ಮಂಗರ್ ಧಾಮ ಆದಿವಾಸಿಗಳ ಹುತಾತ್ಮರಾದ ಪುಣ್ಯಭೂಮಿ. ಆದ್ದರಿಂದಲೇ ಇಲ್ಲಿ ರಾಜಕೀಯ ಬೇಡ. ಆದಿವಾಸಿಗಳ ಈ ಜಾಗವನ್ನು ಆದಿವಾಸಿಗಳಲ್ಲದವರ ವಶಕ್ಕೆ ಕೊಡುವಲ್ಲಿ ಬಿಜೆಪಿ ನಿರತವಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ: ಬೆಳ್ತಂಗಡಿ: ಆದಿವಾಸಿ ಮಹಿಳೆಯ ಮೇಲೆ ಹಲ್ಲೆ, ಅರೆಬೆತ್ತಲೆ ಮಾಡಿ ಚಿತ್ರೀಕರಣ; ದುಷ್ಕರ್ಮಿಗಳ ಕೃತ್ಯಕ್ಕೆ ಬಿಜೆಪಿ ಮುಖಂಡನೇ ನೇತೃತ್ವ?

ಆಗಸ್ಟ್ 9 ರಂದು ಕಾಂಗ್ರೆಸ್‌ನ ಪಾದಯಾತ್ರೆ

ಬಿಜೆಪಿ ಜಾಥಾದ ನಂತರ, ಆಗಸ್ಟ್ 9 ರಂದು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷವು 75 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಈ ಜಾಥಾ ಮಂಗರ್ ಧಾಮದಿಂದಲೇ ಆರಂಭಿಸಲಾಗುವುದು ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

ಏನಿದು ಮಂಗರ್‌ ಧಾಮ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಆರು ವರ್ಷಗಳ ಮೊದಲು ನವೆಂಬರ್ 17, 1913 ರಂದು ರಾಜಸ್ಥಾನ-ಗುಜರಾತ್ ಗಡಿಯ ಮಂಗರ್ ಬೆಟ್ಟದಲ್ಲಿ ಬ್ರಿಟೀಷ್‌ ಮತ್ತು ಭಾರತದ ರಾಜರಿಂದ ನಡೆದ ಹತ್ಯಾಕಾಂಡದ ಸ್ಮಾರಕ ಸ್ಥಳವಾಗಿದೆ ಮಂಗರ್‌ ಧಾಮ.

ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರ ಆಡಳಿತದ ಗುಂಡಿಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಮಂಗರ್ ಹತ್ಯಾಕಾಂಡದಲ್ಲಿ ಒಂದೂವರೆ ಸಾವಿರ ಜನರು ಸತ್ತರು ಎಂದು ಇತಿಹಾಸಹಾರರು ದಾಖಲಿಸಿದ್ದಾರೆ. ಮಂಗರ್ ಬೆಟ್ಟದಲ್ಲಿ ನೆರೆದಿದ್ದ ಸಾವಿರಾರು ಆದಿವಾಸಿಗಳನ್ನು ಭಾರತ ಮತ್ತು ಇಂಗ್ಲಿಷ್ ರಾಜಪ್ರಭುತ್ವದ ಸೈನ್ಯಗಳು ಸೇರಿಕೊಂಡು ಹತ್ಯಾಕಾಂಡ ನಡೆಸಿತ್ತು.

ಈ ಘಟನೆಯು ಜಲಿಯನ್ ವಾಲಾಬಾಗ್‌ಗಿಂತಲೂ ದೊಡ್ಡ ಹತ್ಯಾಕಾಂಡ ಎಂದು ಲೇಖಕರು, ಇತಿಹಾಸಕಾರರು ಮತ್ತು ಸ್ಥಳೀಯ ಜನರು ಹೇಳುತ್ತಾರೆ ಎಂದು ಬಿಬಿಸಿ ಹಿಂದಿ ವರದಿ ಹೇಳುತ್ತದೆ. ಆದರೆ, ಇಷ್ಟು ದೊಡ್ಡ ಹತ್ಯಾಕಾಂಡ ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲಾಗಿಲ್ಲ.

ಇದನ್ನೂ ಓದಿ: ಕೊಡಗು: 4 ವರ್ಷ ಕಳೆದರೂ ಸಿಗದ ಸೌಲಭ್ಯ; ಪುನರ್‌ ವಸತಿ ಬಿಟ್ಟು ಕಾಡಿಗೆ ಬಂದ ಆದಿವಾಸಿಗಳು

ಮಂಗರ್‌ ಧಾಮವೂ ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 550 ಕಿಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಮೀ ದೂರದಲ್ಲಿದೆ. 108 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಪರ್ವತ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದೇ ಬೆಟ್ಟವನ್ನು ಈಗ ‘ಮಂಗರ್ ಧಾಮ’ ಎಂದು ಕರೆಯುತ್ತಾರೆ.

ಮಂಗರ್ ಬೆಟ್ಟವು ಸುತ್ತಲೂ ಕಾಡಿನಿಂದ ಆವೃತವಾಗಿದ್ದು, ಬೆಟ್ಟದ ಎತ್ತರವು ಸುಮಾರು 800 ಮೀಟರ್ ಹೊಂದಿದೆ. ಹತ್ಯಾಕಾಂಡದ ನಂತರ ಬ್ರಿಟೀಷರು ಆ ಬೆಟ್ಟದ ಬಳಿಗೆ ಜನರು ತೆರಳುವುದನ್ನು ನಿಷೇಧಿಸಿದ್ದರು. ಅಳಿದುಳಿದ ಜನರು ಅಲ್ಲಿಂದ ಪಲಾಯನ ಮಾಡಿದ್ದರು. ಈ ದುರ್ಘಟನೆ ನಡೆದು ಸುಮಾರು 80 ವರ್ಷಗಳ ಕಾಲ ಇಲ್ಲಿ ಏನೂ ಇರಲಿಲ್ಲ. ಆದರೆ ಕಳೆದ ಎರಡು ದಶಕಗಳ ಹಿಂದೆ ಇಲ್ಲಿ ಹುತಾತ್ಮರ ಸ್ಮಾರಕ, ವಸ್ತುಸಂಗ್ರಹಾಲಯ ಮತ್ತು ರಸ್ತೆ ನಿರ್ಮಿಸಲಾಗಿದೆ.

ಮಂಗರ್‌ ಧಾಮದ ಬಗ್ಗೆ ಬಿಬಿಸಿ ಹಿಂದಿಯ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...