Homeಚಳವಳಿರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

ರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

- Advertisement -
- Advertisement -

ರಾಜಸ್ಥಾನದ ಜಲಿಯನ್‌ಲಾಲಾ ಭಾಗ್‌‌ ಎಂದೇ ಪ್ರಸಿದ್ದಿ ಹೊಂದಿರುವ ಮತ್ತು ಆದಿವಾಸಿಗಳು ತಮ್ಮ ಸ್ವಾಭಿಮಾನದ ಸಂಕೇತವಾಗಿ ಕಾಣುವ ‘ಮಂಗರ್‌ ಧಾಮ್‌’ ಸ್ಮಾರಕವನ್ನು ಕೇಸರಿಕರಣಗೊಳಿಸುವುದನ್ನು ವಿರೋಧಿಸಿ ನಾಲ್ಕು ರಾಜ್ಯಗಳ ಹತ್ತಾರು ಸಾವಿರ ಆದಿವಾಸಿಗಳು ಭಾನುವಾರ ವಾಹನ ಜಾಥಾವನ್ನು ಆಯೋಜಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಸುಮಾರು 15 ಸಾವಿರ ಆದಿವಾಸಿಗಳು ಬುಡಕಟ್ಟು ‘ಬಿಲ್‌ಪ್ರದೇಶ ಸಂದೇಶ್ ವಾಹನ ಯಾತ್ರೆ’ಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಮಂಗರ್ ಧಾಮವನ್ನು ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ, ಎಲ್ಲಾ ಪಕ್ಷಗಳ ರಾಜಕೀಯವನ್ನು ಕೊನೆಗೊಳಿಸುತ್ತೇವೆ ಎಂದು ಆದಿವಾಸಿ ಪರಿವಾರ ಮತ್ತು ಭಿಲ್ ಪ್ರದೇಶ್ ಮುಕ್ತಿ ಮೋರ್ಚಾ ಸಂಘಟನೆ ಪ್ರತಿಜ್ಞೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಮಂಗರ್ ಧಾಮದಲ್ಲಿ ಸುಮಾರು 12 ಸಾವಿರ ಕಾರ್ಯಕರ್ತರನ್ನು ಸೇರಿಸಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ವಾಹನ ರ್‍ಯಾಲಿ ನಡೆಸಿತ್ತು. ಅಲ್ಲದೆ ಅಲ್ಲಿ ಆರೆಸ್ಸೆಸ್ಸಿನ ಧ್ವಜವನ್ನು ನಟ್ಟು ಆದಿವಾಸಿಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕೂಡಾ ಆರೋಪಿಸಲಾಗಿದೆ.

ಇದನ್ನೂ ಓದಿ: 9 ಮಕ್ಕಳು ಸೇರಿದಂತೆ 20 ಆದಿವಾಸಿಗಳನ್ನು ಬಂಧಿತ ಕಾರ್ಮಿಕರಾಗಿ ರಾಜ್ಯಕ್ಕೆ ಕರೆತರಲಾಗಿದೆ: ವರದಿ

ಇದನ್ನು ವಿರೋಧಿಸಿ ಅದೇ ಸ್ಥಳದಲ್ಲಿ ಭಾನುವಾರದಂದು ನೂತನ ರಾಜಕೀಯ ಸಂಘಟನೆಯಾದ ರಾಷ್ಟ್ರೀಯ ಬುಡಕಟ್ಟು ಪಕ್ಷ(ಎನ್‌ಟಿಪಿ)ದ ವತಿಯಿಂದ ಸುಮಾರು 15 ಸಾವಿರ ಕಾರ್ಯಕರ್ತರೊಂದಿಗೆ ವಾಹನ ಜಾಥಾ ನಡೆಸಿದೆ.

ಸೇರಿದ್ದ ಜನಸಮೂಹವು ಬುಡಕಟ್ಟು ಪರಂಪರೆಯ ಮಂಗರ್ ಧಾಮವನ್ನು ಯಾವುದೇ ಸಂದರ್ಭದಲ್ಲೂ ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗರ್ ಧಾಮದಲ್ಲಿ ರಾಜಕೀಯ ಮಾಡುವ ಹಕ್ಕು  ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ (ಭಾರತೀಯ ಬುಡಕಟ್ಟು ಪಕ್ಷ) ಸೇರಿದಂತೆ ಯಾರಿಗೂ ಇಲ್ಲ ಎಂದು ಆದಿವಾಸಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಒಟ್ಟು 15 ಆರೋಪಿಗಳ ಬಂಧನ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡುಂಗರ್‌ಪುರ ಬುಡಕಟ್ಟು ಪರಿವಾರದ ಭನ್ವರ್‌ಲಾಲ್ ಪರ್ಮಾರ್, “ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ ಪಕ್ಷಗಳ ರಾಜಕೀಯ ಈ ಕ್ಷೇತ್ರದಲ್ಲಿ ಕೊನೆಗೊಳ್ಳಬೇಕಿದೆ. ಬಿಟಿಪಿಯನ್ನು ಸಹ ಬೆಂಬಲಿಸಬೇಕಾಗಿಲ್ಲ. ಬುಡಕಟ್ಟು ಪರಿವಾರ ಯಾವ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತಾರೋ ಅವರನ್ನು ಗೆಲ್ಲಿಸಬೇಕು” ಎಂದು ಹೇಳಿದ್ದಾರೆ.

“ಧರಿಯಾವಾಡದ ಉಪಚುನಾವಣೆಯಲ್ಲಿ ಆದಿವಾಸಿ ಪರಿವಾರ ಮಾಡಿದ್ದು ಇದನ್ನೇ” ಎಂದು ಭನ್ವರಲಾಲ್ ಸ್ಪಷ್ಟಪಡಿಸಿದ್ದಾರೆ. ಹೊಸ ಪಕ್ಷವಾದ ಎನ್‌ಟಿಪಿಯನ್ನು ಬುಡಕಟ್ಟು ಪರವಾರದಿಂದ ಡುಂಗರ್‌ಪುರದಲ್ಲಿ ರಾಜಕೀಯ ಸಂಘಟನೆಯಾಗಿ ನೋಂದಾಯಿಸಲಾಗಿದೆ.

ಮಂಗರ್ ಧಾಮ ಭಿಲ್ ರಾಜ್ಯದ ರಾಜಧಾನಿಯಾಗಲಿದೆ!

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಿಲ್ ಪ್ರದೇಶ ಮುಕ್ತಿ ಮೋರ್ಚಾದ ಕೆಲವು ಮುಖಂಡರು ಬುಡಕಟ್ಟು ಪರಿವಾರಕ್ಕಾಗಿ ಪ್ರತ್ಯೇಕ ‘ಭಿಲ್’ ರಾಜ್ಯಕ್ಕಾಗಿ ಒತ್ತಾಯಿಸಿದ್ದು, ಭಿಲ್ ರಾಜ್ಯದ ರಾಜಧಾನಿ ಮಂಗರ್‌ ಧಾಮ ಆಗಲಿದೆ ಎಂದು ಹೇಳಿದ್ದಾರೆ.

ಬುಡಕಟ್ಟು ಪರಿವಾರದ ಮಣಿಲಾಲ್ ಗರಾಸಿಯಾ ಮಾತನಾಡಿ, “ಆದಿವಾಸಿಗಳು ಪ್ರಕೃತಿ ಆರಾಧಕರಾಗಿದ್ದು, ಅವರಿಗೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ. ಆದ್ದರಿಂದ ಮನೆಯಲ್ಲಿ ನಡೆಯುವ ಯಾವುದೇ ಪೂಜೆಗೆ ಬ್ರಾಹ್ಮಣರನ್ನು ಕರೆಯುವ ಅನಿವಾರ್ಯತೆ ಇಲ್ಲವಾಗಬೇಕು” ಎಂದು ಹೇಳಿದ್ದಾರೆ.

“ಆದಿವಾಸಿ ರಾಣಾ ಪೂಂಜಾ ಇಲ್ಲದೆ ಮಹಾರಾಣಾ ಪ್ರತಾಪನ ಇತಿಹಾಸ ಏನೂ ಅಲ್ಲ” ಎಂದು ಗರಾಸಿಯಾ ಪ್ರತಿಪಾಸಿದ್ದಾರೆ.

ಬುಡಕಟ್ಟು ಪರಿವಾರ ಮತ್ತು ಮುಕ್ತಿ ಮೋರ್ಚಾ, ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿಗೆ ಮಂಗರ್ ಧಾಮ್‌ನಲ್ಲಿ ಪಕ್ಷದ ಧ್ವಜಗಳನ್ನು ಹಾಕದಂತೆ ಎಚ್ಚರಿಕೆ ನೀಡಿದೆ. “ಮಂಗರ್ ಧಾಮ ಆದಿವಾಸಿಗಳ ಹುತಾತ್ಮರಾದ ಪುಣ್ಯಭೂಮಿ. ಆದ್ದರಿಂದಲೇ ಇಲ್ಲಿ ರಾಜಕೀಯ ಬೇಡ. ಆದಿವಾಸಿಗಳ ಈ ಜಾಗವನ್ನು ಆದಿವಾಸಿಗಳಲ್ಲದವರ ವಶಕ್ಕೆ ಕೊಡುವಲ್ಲಿ ಬಿಜೆಪಿ ನಿರತವಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ: ಬೆಳ್ತಂಗಡಿ: ಆದಿವಾಸಿ ಮಹಿಳೆಯ ಮೇಲೆ ಹಲ್ಲೆ, ಅರೆಬೆತ್ತಲೆ ಮಾಡಿ ಚಿತ್ರೀಕರಣ; ದುಷ್ಕರ್ಮಿಗಳ ಕೃತ್ಯಕ್ಕೆ ಬಿಜೆಪಿ ಮುಖಂಡನೇ ನೇತೃತ್ವ?

ಆಗಸ್ಟ್ 9 ರಂದು ಕಾಂಗ್ರೆಸ್‌ನ ಪಾದಯಾತ್ರೆ

ಬಿಜೆಪಿ ಜಾಥಾದ ನಂತರ, ಆಗಸ್ಟ್ 9 ರಂದು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷವು 75 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಈ ಜಾಥಾ ಮಂಗರ್ ಧಾಮದಿಂದಲೇ ಆರಂಭಿಸಲಾಗುವುದು ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

ಏನಿದು ಮಂಗರ್‌ ಧಾಮ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಆರು ವರ್ಷಗಳ ಮೊದಲು ನವೆಂಬರ್ 17, 1913 ರಂದು ರಾಜಸ್ಥಾನ-ಗುಜರಾತ್ ಗಡಿಯ ಮಂಗರ್ ಬೆಟ್ಟದಲ್ಲಿ ಬ್ರಿಟೀಷ್‌ ಮತ್ತು ಭಾರತದ ರಾಜರಿಂದ ನಡೆದ ಹತ್ಯಾಕಾಂಡದ ಸ್ಮಾರಕ ಸ್ಥಳವಾಗಿದೆ ಮಂಗರ್‌ ಧಾಮ.

ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರ ಆಡಳಿತದ ಗುಂಡಿಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಮಂಗರ್ ಹತ್ಯಾಕಾಂಡದಲ್ಲಿ ಒಂದೂವರೆ ಸಾವಿರ ಜನರು ಸತ್ತರು ಎಂದು ಇತಿಹಾಸಹಾರರು ದಾಖಲಿಸಿದ್ದಾರೆ. ಮಂಗರ್ ಬೆಟ್ಟದಲ್ಲಿ ನೆರೆದಿದ್ದ ಸಾವಿರಾರು ಆದಿವಾಸಿಗಳನ್ನು ಭಾರತ ಮತ್ತು ಇಂಗ್ಲಿಷ್ ರಾಜಪ್ರಭುತ್ವದ ಸೈನ್ಯಗಳು ಸೇರಿಕೊಂಡು ಹತ್ಯಾಕಾಂಡ ನಡೆಸಿತ್ತು.

ಈ ಘಟನೆಯು ಜಲಿಯನ್ ವಾಲಾಬಾಗ್‌ಗಿಂತಲೂ ದೊಡ್ಡ ಹತ್ಯಾಕಾಂಡ ಎಂದು ಲೇಖಕರು, ಇತಿಹಾಸಕಾರರು ಮತ್ತು ಸ್ಥಳೀಯ ಜನರು ಹೇಳುತ್ತಾರೆ ಎಂದು ಬಿಬಿಸಿ ಹಿಂದಿ ವರದಿ ಹೇಳುತ್ತದೆ. ಆದರೆ, ಇಷ್ಟು ದೊಡ್ಡ ಹತ್ಯಾಕಾಂಡ ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲಾಗಿಲ್ಲ.

ಇದನ್ನೂ ಓದಿ: ಕೊಡಗು: 4 ವರ್ಷ ಕಳೆದರೂ ಸಿಗದ ಸೌಲಭ್ಯ; ಪುನರ್‌ ವಸತಿ ಬಿಟ್ಟು ಕಾಡಿಗೆ ಬಂದ ಆದಿವಾಸಿಗಳು

ಮಂಗರ್‌ ಧಾಮವೂ ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 550 ಕಿಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಮೀ ದೂರದಲ್ಲಿದೆ. 108 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಪರ್ವತ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದೇ ಬೆಟ್ಟವನ್ನು ಈಗ ‘ಮಂಗರ್ ಧಾಮ’ ಎಂದು ಕರೆಯುತ್ತಾರೆ.

ಮಂಗರ್ ಬೆಟ್ಟವು ಸುತ್ತಲೂ ಕಾಡಿನಿಂದ ಆವೃತವಾಗಿದ್ದು, ಬೆಟ್ಟದ ಎತ್ತರವು ಸುಮಾರು 800 ಮೀಟರ್ ಹೊಂದಿದೆ. ಹತ್ಯಾಕಾಂಡದ ನಂತರ ಬ್ರಿಟೀಷರು ಆ ಬೆಟ್ಟದ ಬಳಿಗೆ ಜನರು ತೆರಳುವುದನ್ನು ನಿಷೇಧಿಸಿದ್ದರು. ಅಳಿದುಳಿದ ಜನರು ಅಲ್ಲಿಂದ ಪಲಾಯನ ಮಾಡಿದ್ದರು. ಈ ದುರ್ಘಟನೆ ನಡೆದು ಸುಮಾರು 80 ವರ್ಷಗಳ ಕಾಲ ಇಲ್ಲಿ ಏನೂ ಇರಲಿಲ್ಲ. ಆದರೆ ಕಳೆದ ಎರಡು ದಶಕಗಳ ಹಿಂದೆ ಇಲ್ಲಿ ಹುತಾತ್ಮರ ಸ್ಮಾರಕ, ವಸ್ತುಸಂಗ್ರಹಾಲಯ ಮತ್ತು ರಸ್ತೆ ನಿರ್ಮಿಸಲಾಗಿದೆ.

ಮಂಗರ್‌ ಧಾಮದ ಬಗ್ಗೆ ಬಿಬಿಸಿ ಹಿಂದಿಯ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...