- Advertisement -
- Advertisement -
ಕೋಥಗುಡಮ್ ಜಿಲ್ಲೆಗೆ ಸೇರಿದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಹೈದರಾಬಾದ್ನ ಲೋಕೋಪಕಾರಿ ಸೊಸೈಟಿ ಆಫ್ ಇಂಡಿಯಾದಿಂದ ಕೊರೊನಾ ವಾರಿಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಇವರು ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾನುವಾರ ಹೈದರಾಬಾದ್ನಲ್ಲಿ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಅವರಿಂದ ಶಿಕ್ಷಕ ತೇಜವತ್ ಮೋಹನ್ ಬಾಬು ಪ್ರಶಸ್ತಿಯನ್ನು ಸ್ವೀಕರಿಸಿದರು.
ಲಾಕ್ ಡೌನ್ ಅವಧಿಯಲ್ಲಿ ನಾಗರಿಕರಿಗೆ, ವಿಶೇಷವಾಗಿ ಸೀತಾ ರಾಮಾ ಲಿಫ್ಟ್ ನೀರಾವರಿ ಯೋಜನೆ (ಎಸ್ಆರ್ಎಲ್ಐಪಿ) ಸೈಟ್ನಲ್ಲಿ ಕೆಲಸ ಮಾಡಿದ ವಲಸೆ ಕಾರ್ಮಿಕರಿಗೆ ಮೋಹನ್ ಬಾಬು ಅವರು ನೀಡಿದ ಸೇವೆಗಾಗಿ ಕೊರೊನಾ ವಾರಿಯರ್ ಪ್ರಶಸ್ತಿಯನ್ನು ಪಡೆದರು.
ಇದನ್ನೂ ಓದಿ: ಶಿರಾ: ‘ಆ ಎರಡು’ ಗ್ರಾಮಗಳ ರೀತಿ ಆದ್ರೆ ಬಿಜೆಪಿಗೆ ಸೋಲು!