Homeಮುಖಪುಟಯಾವ ಕಥೆ ಹೇಳಬೇಕು? ಇನ್ನಷ್ಟು ಪ್ರಶ್ನೆಗಳು

ಯಾವ ಕಥೆ ಹೇಳಬೇಕು? ಇನ್ನಷ್ಟು ಪ್ರಶ್ನೆಗಳು

- Advertisement -
- Advertisement -

“ಕುದುರೆಯನ್ನೇರಿ ರಾಜಕುಮಾರಿಗಾಗಿ ಓಡೋಡಿ ಬರುತ್ತಿರುವ ರಾಜಕುಮಾರ, ರಾಜ್ಯ, ರಾಜ ಮತ್ತು ರಾಣಿಯವರ ಕಥೆಯನ್ನೇಕೆ ನನಗೆ ಹೇಳಲಾಗುವುದಿಲ್ಲ” ಒರ್ಹಾನ್ ಪಾಮುಕ್ ಹೀಗೆ ತಮ್ಮ ಒಂದು ಪುಸ್ತಕದಲ್ಲಿ ವಿಷಾದಿಸುತ್ತಾರೆ.

“ಯುದ್ಧದ ಸಮಯದಲ್ಲಿ ಪ್ರೀತಿಯ ಕಥೆಯನ್ನು ಹೇಳು, ಶಾಂತಿಯ ಸಮಯದಲ್ಲಿ ಯುದ್ಧದ ಕಥೆಯನ್ನು” ಯಾರೋ ಹೇಳಿದ್ದು.

“ಮನಸ್ಸಿಗೆ ನೆಮ್ಮದಿ (ಸುಕೂನ್) ಸಿಗುತ್ತೆ” ಉತ್ತರಪ್ರದೇಶದಲ್ಲಿ ನಿಜವಾದ ರೇಪ್ ವೀಡಿಯೊಗಳನ್ನು ಮಾರುವ ಅಂಗಡಿಗೆ ಬಂದ ಗ್ರಾಹಕನೊಬ್ಬ ಹೇಳಿದ್ದು.

“ನನಗೆ ಕಥೆ ಇಷ್ಟವಾಯಿತು ಎಂದರೆ ಸಾಕಲ್ಲ, ಅದನ್ನಿಟ್ಟುಕೊಂಡು ಸಿನೆಮಾ ಮಾಡಲು ಏನು ತೊಂದರೆ?”
ಕಥೆಗಳನ್ನು ಬರೆಯುವುದಕ್ಕೆ ಮತ್ತು ನಾಟಕ ಅಥವಾ ಸಿನೆಮಾ ಮಾಡಲು ಒಂದು ದೊಡ್ಡ ವ್ಯತ್ಯಾಸವಿದೆ. ಒಬ್ಬ ಲೇಖಕನಿಗೆ ತಟ್ಟಿದ ವಿಷಯ, ಕತೆಯನ್ನು ಇಟ್ಟುಕೊಂಡು ಬರೆಯಲು ನೇರವಾಗಿ ಪ್ರಾರಂಭಿಸಬಹುದು ಆದರೆ ಸಿನೆಮಾ ಮತ್ತು ನಾಟಕದಲ್ಲಿ ಹಾಗಲ್ಲ. ಒಂದು ಸಿನೆಮಾ ನಿರ್ಮಿಸಲು ಕೆಲವು ವರ್ಷಗಳೇ ಬೇಕಾಗುವುದೆಂಬ ಮತ್ತು ಇದೊಂದು ಸಾಮೂಹಿಕ ಕಲೆಯಾಗಿರುವ ಕಾರಣದಿಂದ ಹಾಗೂ ಒಂದು ನಿರ್ದಿಷ್ಟ ಸಂಖ್ಯೆಯ ನೋಡುಗರನ್ನು ತಲುಪಲೇಬೇಕಾದ ಕಾರಣದಿಂದ ನಾವು ಹೇಳುವ ಕಥೆಯನ್ನು ಆಯ್ಕೆ ಮಾಡುವಾಗ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.

ಒಂದು ಕಥೆ ಇಷ್ಟವಾಯಿತು ಎನ್ನುವುದು ಖಂಡಿತವಾಗಿಯೂ ಸಮಾಧಾನಕರ ಉತ್ತರವಲ್ಲ. ಆ ಕಥೆ ನಮಗೆ ಯಾವ ಕಾರಣಕ್ಕೆ ಇಷ್ಟವಾಯಿತು ಎನ್ನುವ ಪ್ರಶ್ನೆಗೂ ಸೂಕ್ತ ಉತ್ತರವನ್ನು ಪಡೆಯಬೇಕಾಗುತ್ತದೆ. ನಾವಿರುವ ಸಮಯದಲ್ಲಿ ನಮಗಿಷ್ಟವಾದ ಕಥೆಯು ಪ್ರಸ್ತುತವೇ? ಏನಾದರೂ ಹೊಸತನ್ನು ಹೊಂದಿದೆಯೇ ಈ ಕಥೆ? ಮೊದಲಿಗೆ ಈ ಎರಡು ಪ್ರಶ್ನೆಗಳನ್ನು ನೋಡುವ.

ಪ್ರಸ್ತುತ ಎಂದರೇನು? ನಾಟಕ ಮಾಡುವಾಗಂತೂ ನಮ್ಮ ಪರಿಚಯದ ಅನೇಕರಿಗೆ ಇನ್ನೂ ಬಾದಲ್ ಸರ್ಕಾರ್, ಮೋಹನ್ ರಾಕೇಶ್, ಟೆಂಡುಳ್ಕರ್, ಗಿರೀಶ್ ಕಾರ್ನಾಡ್ ಅವರ ಕೃತಿಗಳೇ ಸೆಳೆಯುತ್ತವೆ. ತಮಗಿಷ್ಟವಾದ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಗಟ್ಟಿಯಾಗಿಯೇ ಪ್ರತಿಪಾದಿಸುತ್ತಾರೆ. ಆದರೆ ಈ ಶ್ರೇಷ್ಠ ಲೇಖಕರ ಅದ್ಭುತ ಕೃತಿಗಳು ನಿಜವಾಗಿಯೂ ಪ್ರಸ್ತುತವಾಗಿ ಉಳಿದಿವೆಯೇ? ಅದನ್ನು ಪತ್ತೆ ಹಚ್ಚುವುದು ಹೇಗೆ? ಆಯಾ ಕೃತಿಗಳು ಸದಾಕಾಲ ಚಾಲ್ತಿಯಲ್ಲಿರುವ ಮಾನವೀಯ ಅಂಶಗಳನ್ನು, ಮನುಷ್ಯನ ತುಡಿತಗಳನ್ನು ಹೊಂದಿರುವ ಕಾರಣದಿಂದ ಅ ಕೃತಿಗಳು ಇಂದಿಗೂ ಪ್ರಸ್ತುತ ಎನ್ನುವ ಉತ್ತರವನ್ನು ನೀಡಬಹುದು. ಇನ್ನು ಆಯಾಕಾಲದಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಸಮಸ್ಯೆಗಳನ್ನು ಕೆಲವು ಕೃತಿಗಳು ಉದ್ದೇಶಿಸಿದ್ದರಿಂದ ಅವುಗಳು ಪ್ರಸ್ತುತವಲ್ಲ ಎಂದು ಉತ್ತರ ಸಿಗಬಹುದು; ಉದಾಹರಣೆಗೆ ವರದಕ್ಷಿಣೆ ಅಥವಾ ನಿರುದ್ಯೋಗ (ಇವುಗಳು ಮುಂಚೆ ಇದ್ದವು ಈಗ ಇಲ್ಲ ಎಂದು ಹೇಳುತ್ತಿಲ್ಲ, ಆದರೆ ಇಂತಹ ಸಮಸ್ಯೆಗಳು ಆ ಬ್ರ್ಯಾಕೆಟ್‍ನಲ್ಲಿ ಹಾಕಬಹುದು). ಆದರೆ ಪ್ರಸಕ್ತ ಸಮಯದಲ್ಲಿ ಇರುವ ಸಮಸ್ಯೆಗಳನ್ನು ಉದ್ದೇಶಿಸುವ ಕೃತಿಗಳೇ ಪ್ರಸ್ತುತ ಎಂತಲೂ ಹೇಳಲಾಗುವುದಿಲ್ಲ. ರಾಜರಾಣಿಯರ, ರಾಜಕುಮಾರರ, ಪೌರಾಣಿಕ ಕಥೆಗಳ ಕೃತಿಗಳು ಪ್ರಸ್ತುತವಲ್ಲ ಹಾಗೂ ಇತ್ತೀಚಿನ ಇತಿಹಾಸದ ಮತ್ತು ಕೆಲವು ದಶಕ, ಶತಕಗಳ ಹಿಂದಿನ ಸಬ್‍ಆಲ್ಟರ್ನ್ ಇತಿಹಾಸವನ್ನು, ಜನರ ಸಮಸ್ಯೆಗಳನ್ನು ಪ್ರಸಕ್ತ ಸಮಾಜಕ್ಕೆ ತೋರಿಸುವುದೂ ಪ್ರಸ್ತುತವಲ್ಲ ಎಂದು ಹೇಳಲಾಗದು. ಅಂದರೆ ಇಂದು ಹೆಚ್ಚಾಗಿ ಕಾಣುತ್ತಿರುವ ಸಮಸ್ಯೆಗಳನ್ನು ಉದ್ದೇಶಿಸಿ ಕೃತಿ ರಚಿಸಿದಲ್ಲಿ ಅದನ್ನು ಪ್ರಸ್ತುತ ಎಂದು ಖಡಾಖಂಡಿತವಾಗಿ ಹೇಳಬಹುದೇ? ಪ್ರಸ್ತುತ ಏನು ಎಂದು ನಿರ್ಧರಿಸುವುದನ್ನು ಆಯಾ ಕರ್ತೃ ಮತ್ತು ನೋಡುಗರಿಗೆ ಬಿಟ್ಟ ವಿಷಯವೇ? ಒಂದು ಕೃತಿಯನ್ನು ಇದು ಪ್ರಸ್ತುತ ಅಥವಾ ಇಲ್ಲ ಎಂದು ಹೇಳಬಹುದೇ ಹೊರತು, ಪ್ರಸ್ತುತ ಎನ್ನುವುದಕ್ಕೆ ಮಾನದಂಡಗಳೇನು ಎನ್ನುವುದಕ್ಕೆ ಮಾನದಂಡಗಳನ್ನು ನಿರ್ಧರಿಸಲು ಸಾಧ್ಯವೋ ಇಲ್ಲವೋ, ನನಗೂ ಹೊಳೆಯುತ್ತಿಲ್ಲ.

ಇನ್ನೂ ಹೊಸತು ಎಂದರೇನು ಎನ್ನುವ ಪ್ರಶ್ನೆಗೂ ನಮ್ಮ ಬಳಿ ಸರಳ ಉತ್ತರಗಳಿಲ್ಲ. ಜಗತ್ತಿನಲ್ಲಿ ಇರುವ ಜೋಕ್‍ಗಳು ಕೇವಲ ಏಳೋ ಎಂಟೋ ಎಂದು ಹೇಳಲಾಗುತ್ತದೆ. ಅವೇ ಜೋಕ್‍ಗಳನ್ನು ಬೇರೆ ಬೇರೆ ಪಾತ್ರಗಳು ಮತ್ತು ಸಂದರ್ಭಗಳಿಗೆ ತುರುಕಿಸಿ ಹೊಸ ಜೋಕ್‍ಗಳೆಂದು ಹೇಳಲಾಗುತ್ತದೆ. ಇದೇ ಮಾತನ್ನು ಕಥೆಗಳಿಗೂ ಅನ್ವಯಿಸಬಹುದಾದರೆ, ಹೊಸ ಕಥೆ ಎಂದರೇನು? ಹೊಸ ಕಥೆಗಳನ್ನು ತರಲು ಸಾಧ್ಯವೇ ಇಲ್ಲವೇ? ಅನೇಕರು ಅನೇಕ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಬಹುದು ಆದರೆ ಮುಖ್ಯ ವಿಷಯವೆಂದರೆ, ನಾವು ಯಾವುದಾದರೂ ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಈ ಎಲ್ಲ ಪ್ರಶ್ನೆಗಳನ್ನು ಆ ಕಥೆಗೆ ಕೇಳಲೇಬೇಕಾಗುತ್ತದೆ. ಅಲ್ಲಿ ಸಮಾಧಾನಕರ ಉತ್ತರ ಸಿಗಬಹುದು ಅಥವಾ ಸಿಗದೇ ಇರಬಹುದು.

ಕೆಲವರು ನೋಡುಗರ ಆಯ್ಕೆಯ ಅಧ್ಯಯನ ಮಾಡಿ ತಾವು ಯಾವ ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ‘ಜನ ಇಂಥದ್ದನ್ನೇ ಇಷ್ಟಪಡ್ತಾರೆ, ನಾವೇನು ಮಾಡಬೇಕು?’ ಎನ್ನುವ ಉಡಾಫೆಯ ಕಾರಣಗಳನ್ನು ತಮ್ಮ ರಚನೆಗಳಿಗೆ ನೀಡುತ್ತಾರೆ. ಈ ಧೋರಣೆ ತಪ್ಪು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ. ಇದಕ್ಕೆ ಹಲವಾರು ಕಾರಣಗಳಿವೆ. ಒಂದು, ಜನ ಏನು ಇಷ್ಟ ಪಡುತ್ತಾರೆ ಎಂದು ಯೋಚಿಸಿ ಚಿತ್ರವನ್ನು ಮಾಡಿದಾಗ, ಅವರು ಆ ಚಿತ್ರವನ್ನು ಮಾಡುವಷ್ಟರಲ್ಲಿ ಅಂತಹ ಕಥೆಗಳನ್ನು ನೋಡಿರುತ್ತಾರೆ. ಮತ್ತೇ ಅಂತಹ ಕಥೆಗಳನ್ನು ಜನರು ಏಕೆ ಇಷ್ಟಪಡಬೇಕು ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿರುವುದಿಲ್ಲ. ಇಲ್ಲಿ ಕೆಲವು ವರ್ಷಗಳ ಹಿಂದೆ ಬಂದ ಕನ್ನಡ ಚಿತ್ರ ‘ತಿಥಿ’ಯ ಉದಾಹರಣೆ ಕೊಡಬಹುದು. ತಿಥಿ ಚಿತ್ರ ಹಿಟ್ ಆದಕೂಡಲೇ ಅಂತಹದ್ದೇ ಹಲವಾರು ಚಿತ್ರಗಳು ಬಂದವು ಆದರೆ ಅವ್ಯಾವೂ ಸ್ವಾಭಾವಿಕವಾಗಿಯೇ ಯಶಸ್ವಿಯಾಗಲಿಲ್ಲ. ಹಾಗೂ ‘ಜನ ಏನು ಇಷ್ಟಪಡುತ್ತಾರೆ’ ಎನ್ನುವ ನಿರ್ಣಯಕ್ಕೆ ಆಳವಾದ ಅಧ್ಯಯನದಿಂದ ಬಂದಿರುವುದಿಲ್ಲ.

ಇದರೊಂದಿಗೆ, ಆಳವಾದ ಸಾಮಾಜಿಕ ವಿಷಯವನ್ನು ಹೊಂದಿರುವ ಕಥೆಗಳಿಂದ ಹಿಡಿದು ಕೇವಲ ವೈಭವೀಕರಿಸಿದ ಹಿಂಸೆ, ಪೊಳ್ಳು ಕಥೆಗಳನ್ನು ಹೊಂದಿರುವ ಚಿತ್ರಗಳೂ ಯಶಸ್ವಿಯಾಗಿದ್ದು ವಾಸ್ತವ. ಹಾಗಾದರೆ ಜನ ಏನು ಇಷ್ಟಪಡುತ್ತಾರೆ ಎಂದು ಖಚಿತವಾಗಿ ಹೇಳುವುದು ಹೇಗೆ? ಹಾಗೂ ಅವರ ಇಷ್ಟ ಚಿತ್ರ ನಿರ್ಮಿಸುವವರಿಗೆ ಏಕೆ ಮಾನದಂಡವಾಗಬೇಕು? ಮೇಲೆ ಹೇಳಿದಂತೆ, ರೇಪ್ ವಿಡಿಯೋಗಳನ್ನು ಮಾರಾಟ ಮಾಡಲಾಗುತ್ತದೆ, ಅದಕ್ಕೂ ಗ್ರಾಹಕರಿದ್ದಾರೆ, ಹಾಗಿರುವಾಗ ಅವೇ ಚಿತ್ರಗಳನ್ನೇಕೆ ನಿರ್ಮಿಸಬಾರದು? ಕಥೆ ಹೇಳುವವರೇ ತನಗೆ ಈ ಕಥೆ ಇಷ್ಟವೇ? ಯಾವ ಕಾರಣಕ್ಕೆ ಇಷ್ಟ ಎನ್ನುವ ನಿರ್ದಿಷ್ಟ ಉತ್ತರವನ್ನು ಕಂಡುಕೊಳ್ಳಬೇಕಾಗುತ್ತದೆ. ಆ ಉತ್ತರ ಇತರರಿಗೆ ಸಮಂಜಸ ಎನ್ನಿಸದೇ ಇರಬಹುದು, ಆದರೆ ತನ್ನ ಉತ್ತರಗಳಲ್ಲಿ ರಚಿಸುವವನಿಗೆ ಬಲವಾದ ನಂಬಿಕೆಯಿದ್ದರೆ ಅಲ್ಲೊಂದು ಉತ್ತಮ ಕೃತಿ ಬೆಳೆಯುತ್ತಿರುತ್ತದೆ. ಜಗತ್ತಿನ ಎಲ್ಲಾ ಶ್ರೇಷ್ಠ ಕೃತಿಗಳು ಹುಟ್ಟಿದ್ದು ಹೀಗೆ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....