Homeಕರ್ನಾಟಕಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಪಾಪ! ಯಾರಿಗೂ ಬೇಡ ಸ್ಪೀಕರ್ ಕಾಗೇರಿಯ ಪೀಕಲಾಟ!!

ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

- Advertisement -
- Advertisement -

ಒಲ್ಲದ ಮನಸ್ಸಿನಿಂದಲೇ ಸ್ಪೀಕರಿಕೆ “ದಂಡ” ದೀಕ್ಷೆ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಕತ್ತಲಲ್ಲಿ ಕೋಲು ಕಳಕೊಂಡ ಅರೆ ಕುರುಡನಂತೆ ಕಂಗಾಲು ಬಿದ್ದಿದ್ದಾರೆ. ಸತತ ಆರು ಬಾರಿ ಮತೋನ್ಮತ್ತ ಮಸಲತ್ತಿನ ಬಲದಿಂದ ಶಾಸಕಾಗಿರುವ ಈ ಎಬಿವಿಪಿ ಕೇಡರಿನ “ಹಿರಿಯ” ಸಂಘಿ ಸರದಾರ, ಸದನದಲ್ಲಿ ಸಂಸದೀಯ ಜಾಣ್ಮೆ ಪ್ರದರ್ಶಿಸಿದ ಕುರುಹುಗಳೇನೂ ಕಾಣಿಸುತ್ತಿಲ್ಲ. ಕಾಗೇರಿ ಅಂಥ ಜನತಾಂತ್ರಿಕ, ಜನಪದ ಕುಶಾಗ್ರಮತಿ ರಾಜಕಾರಣಿಯೇನಲ್ಲ ಎಂಬುದು ಆತನ ಕಾಲು ಶತಮಾನದ ಗ್ರಾಫು-ಟ್ಯ್ರಾಕು ನೋಡಿದರೆ ಎಂಥವರಿಗೆ ಪಕ್ಕಾ ಆಗುತ್ತದೆ. ಆತನ ಸ್ವಪಕ್ಷದ ಆಜನ್ಮ ಶತ್ರುವೂ, ಬೆಂಕಿ ಬಡಾಯಿ ಸಂಸದನೂ ಆದ ಅನಂತ್ಮಾಣಿ ಆಗಾಗ ಕಾಗೇರಿಗೆ “ಸಂಭಾವಿತ ಹೇಡಿ” ಎಂದು ಪರೋಕ್ಷವಾಗಿ ತಿವಿಯುತ್ತಲೇ ಇರುತ್ತಾನೆ.

ನಿಧಾನಗತಿಯ ಕಾಗೇರಿಯಲ್ಲಿ ಸದನ ನಿಭಾಯಿಸುವ ಪ್ರಜಾತಾಂತ್ರಿಕ ಕೌಶಲ್ಯವಾಗಲೀ, ಹಾರಾಡುವ ಶಾಸಕರನ್ನು ನಿಯಮ ನೀತಿಗಳ ಅಂಕುಶದಿಂದ ನಿಯಂತ್ರಿಸುವ ಜ್ಞಾನವಾಗಲೀ ಇಲ್ಲವೆಂದು ಕೇಶವಕೃಪದಲ್ಲಿ ಒಂದು ಸುತ್ತಿನ ಚರ್ಚೆಯೂ ಆಗಿದೆಯಂತೆ. ಆತ ಅಧಿವೇಶನ ನಡೆಯುವ ಹೊತ್ತಲ್ಲಿ ವಿಧಾನಸಭಾ ಅಧ್ಯಕ್ಷತೆ ಕುರ್ಚಿಯಲ್ಲಿ ಒಂಥರಾ ಕಕ್ಕಾಬಿಕ್ಕಿ ಆಗಿರುವುದಂತೂ ಹೌದು. ಸಂಸದೀಯ ಪಟ್ಟುಗಳು, ಭಾಷೆಯ ಮೇಲಿನ ಹಿಡಿತ, ಕಾನೂನು, ನೆನಪಿನ ಶಕ್ತಿಯ ಧೈತ್ಯ ಸಿದ್ಧರಾಮಯ್ಯ ಮಾತಿಗೆ ನಿಂತರಂತೂ ಕಾಗೇರಿಗೆ ದಿಕ್ಕೇ ತೋಚದಂತಾಗುತ್ತದೆ.

ಯಡ್ಡಿ ಸರ್ಕಾರದ ಕಡೆಯಲ್ಲಿ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಒಬ್ಬರು ಬಿಟ್ಟರೆ ಸಂಸಧೀಯ ಪರಿಭಾಷೆಯಲ್ಲಿ ಮಾತಾಡುವ ತಂತ್ರಗಾರರು ಇಲ್ಲ. ಸಿ.ಟಿ.ರವಿಯಂಥ ದೇಶ “ಕುಟ್ಟುವ” ಹಿಂದೂತ್ವದ ಹಿರೇಮಣಿಗಳು ಬಿಜೆಪಿ ಬದಿಯಲ್ಲಿದ್ದಾರೆಯೇ ಹೊರತು ಕಾಂಗ್ರೆಸ್‍ನ ಸಿದ್ದು, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ….. ಮುಂತಾದ ನುರಿತ ಸಂಸದೀಯ ಪಟುಗಳಿಗೆ ತಿರುಗೇಟು ಕೊಡುವ ಚತುರರಿಲ್ಲ!

ಇದು ಪೆದ್ದು ಸ್ಪೀಕರ್ ಪೀಕಲಾಟವನ್ನು ಮತ್ತಷ್ಟು ಜಾಸ್ತಿಮಾಡಿದೆ! ಆತ ಯಡ್ಡಿಯ ಅಕ್ರಮ ಸರ್ಕಾರಕ್ಕೆ ಸಂದಿಗ್ಧ ಎದುರಾದಾಗೆಲ್ಲಾ ತಿಣುಕಾಡುವಂತಾಗಿದೆ ಪಾಪ!!. ಕಾಗೇರಿಯ ಇನ್ನೊಂದು ದೊಡ್ಡ ಕಷ್ಣವೆಂದರೆ ಅನರ್ಹ ಶಾಸಕರ ಗಲೀಜು ಪ್ರಕರಣ. ಈ ಕೇಸು ಸುಪ್ರೀಂ ಕೋರ್ಟಿನಲ್ಲಿದೆಯಾದರೂ ವಿಧಾನಸಭಾಧ್ಯಕ್ಷ ಕಾಗೇರಿಯನ್ನೂ ಇದು ಕಂಡೂಕಾಣದಂತೆ ಬಾದಿಸುತ್ತಿದೆ. ಮಾಧ್ಯಮದವರನ್ನು ಅಧಿವೇಶನಕ್ಕೆ ಬರದಂತೆ ನಿರ್ಬಂಧಿಸಿರುವ ಕಾಗೇರಿ ವಿವಾದಕ್ಕೆ ಸಿಲುಕಿದ್ದಾರೆ. ಇಂಥ ಹಲವು “ಧರ್ಮಸೂಕ್ಷ್ಮ”ಕ್ಕೆ ಬಿದ್ದಿರುವ ಕಾಗೇರಿಗೆ ಸ್ಪೀಕರಿಕೆ ಹೊಣೆಗಾರಿಕೆ ಸುಸ್ತು ಹೊಡೆಸುತ್ತಿದೆ.

ಅಧಿಕಾರ ವಹಿಸಿಕೊಂಡ ಮರುಕ್ಷಣದಿಂದಲೇ ಕಾಗೇರಿ ಆಸರೆಗಾಗಿ ತಡಕಾಡುತ್ತಲೇ ಇದ್ದರು. ಸದನ ಮತ್ತು ಕಲಾಪದ ತಂತ್ರಜ್ಞಾನದ ಆಳ-ಅಗಲ ಬಲ್ಲವನೊಬ್ಬನ ಸಹಾಯಕನಾಗಿ ನೇಮಿಸಿಕೊಳ್ಳುವ ಅರ್ಜಂಟಿಗೆ ಬಿದ್ದಿದ್ದರು. ಕಾಗೇರಿಯ ದೌರ್ಬಲ್ಯ ಗೊತ್ತಾಗಿದ್ದೇ ತಡ, ವಿಧಾನ ಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್ ಚುರುಕಾದರು. ಬಿಜೆಪಿ ವಲಯದಲ್ಲಿ ಪ್ರಭಾವಿ ಸಂಪರ್ಕಗಳನ್ನು ಹೊಂದಿರುವ ಓಂ ಪ್ರಕಾಶ್ ಹತ್ತಿರದ ಸಂಬಂಧಿಯೊಬ್ಬರು ಬಿಜೆಪಿಯ ಆಯಕಟ್ಟಿನ ಜಾಗದಲ್ಲೂ ಇದ್ದಾರೆ. ಈತ ಕಾಗೇರಿಗೂ ಪರಮಾಪ್ತ. ಹಿಂದೆ ಇಂಥದೇ ಆಟ ಆಡಿ ವಿಧಾನಸಭೆ-ವಿಧಾನ ಪರಿಷತ್ ಎರಡಕ್ಕೂ ಸೇರಿದ ಮಹಾಪ್ರಧಾನ ಕಾರ್ಯದರ್ಶಿ ಆಗಲು ಓಂ ಪ್ರಕಾಶ್ ಹವಣಿಸಿದ್ದರು. ಆಗ ಯಡ್ಡಿ ಸಿಎಂ ಆಗಿದ್ದರೆ, ಒಂ ಪ್ರಕಾಶ್ ವಿಧಾನಸಭೆಯ ಕಾರ್ಯದರ್ಶಿಯಾಗಿದ್ದರು. ಆದರೆ ಆಗ ಅದು ವಿಫಲವಾಗಿತ್ತು.

ಇದೇ ಓಂ ಪ್ರಕಾಶ್‍ರನ್ನು ಕಾಗೇರಿ ಈಗ ತನ್ನ “ಸಲಹೆಗಾರ”ನಾಗಿ ನೇಮಿಸಿಕೊಂಡಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲೇ ಯಾವ ಸ್ಪೀಕರೂ ಇಂಥ ದೈನೇಸಿ ಸ್ಥಿತಿಗೆ ಬಿದ್ದಿರಲಿಲ್ಲ. ಸ್ಪೀಕರ್ ವಿಶೇಷ ಕರ್ತವ್ಯಾಧಿಕಾರಿ ನೇಮಿಸಿ ಕೊಳ್ಳಬಹುದೇ ಹೊರತು “ಸಲಹೆಗಾರ” ಹುದ್ದೆ ಸೃಷ್ಟಿಗೆ ವಿಧಾನಸಭೆಯ ಸಿ ಆ್ಯಂಡ್ ಆರ್ ನಿಯಮದಂತೆ ಅವಕಾಶವೇ ಇಲ್ಲ! ನಡುಪಕ್ಷೀಯವಾಗಿ ಓಂ ಪ್ರಕಾಶ್‍ರನ್ನು ಸಲಹೆಗಾರನೆಂದು ನೇಮಿಸಿಕೊಂಡಿರುವ ಕಾಗೇರಿ ಸಂಪ್ರದಾಯ, ನೀತಿಯನ್ನೆಲ್ಲಿ ಬುದ್ದಿ ಪೂರ್ವಕವಾಗೇ ದಿಕ್ಕರಿಸಿದ್ದಾರೆ. ಇಂಥ ನೇಮಕಾತಿ ಹೊತ್ತಲ್ಲಿ ವಿಧಾನಸಭೆ ಸಮಿತಿ ಸಭೆ ಕರೆಯುವುದು ಪದ್ಧತಿ. ವಾಡಿಕೆಯನ್ನೆಲ್ಲ ಕಡೆಗಣಿಸಿ ಸಲಹೆಗಾರನ ನೇಮಿಸಿಕೊಂಡಿರುವ ಕಾಗೇರಿ ನಡೆಯಿಂದ ವಿಧಾನಸಭೆ ಸಿಬ್ಬಂದಿ ಬೆಚ್ಚಿಬಿದ್ದಿದೆ. ಇದ್ಯಾವುದಕ್ಕೂ ಕೇರ್ ಮಾಡದ ಕಾಗೇರಿ ತನ್ನ ನಿಲುವು ಅಚಲ ಎಂದು ಸಿಬ್ಬಂದಿಗೆ ರೋಪು ಹಾಕಿದ್ದಾರಂತೆ.

ವಿಧಾನಸಭೆಯ ಕಾರ್ಯದರ್ಶಿಗೆ ತತ್ಸಮಾನವಾದ ಹುದ್ದೆ ಸಲಹೆಗಾರ ಸಾಹೇಬರಿಗೆ ದಯಪಾಲಿಸಲಾಗಿದೆ. ಇದರಿಂದ ಎರಡು ಅಧಿಕಾರ ಕೇಂದ್ರ ಸೃಷ್ಟಿಯಾಗಿ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಅನಾಹುತ ಎದುರಾಗಲಿದೆ. ದೈನಂದಿನ ಕಾರ್ಯನಿರ್ವಹಣೆಯಲ್ಲಿ ಎಡವಟ್ಟಾಗಲಿದೆ. ಅನಗತ್ಯ ದುಂದು ವೆಚ್ಚವಾಗಲಿದೆ. ಅಷ್ಟಕ್ಕೂ ಇಂಥದೊಂದು ಸಲಹೆಗಾರನ ಅಗತ್ಯವಾದರೂ ಇತ್ತೇ ಎಂದರೆ, ಊಹುಂ ಅದೂ ಇಲ್ಲ! ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳಿಗೆ ಸದನದ ಕಲಾಪದ ನಿಯಮಾವಳಿ, ಇನ್ನಿತರ ಕಾನೂನು, ಶಾಸಕರ ಹಕ್ಕು ಬಾಧ್ಯತೆಗಳ ತಿಳುವಳಿಕೆ ಇದ್ದೇ ಇರುತ್ತದೆ. ಇವರೆಲ್ಲ ಸ್ಪೀಕರ್ ಎಂಥ ಮೊದ್ಮಣಿಯಾದರೂ ಗೈಡ್ ಮಾಡಿ ಹಳಿಗೆ ತರುವ ಜಾಣರಿರುತ್ತಾರೆ.

ಆದರೆ ಗೊಂದಲಕ್ಕೆ ಬಿದ್ದಿರುವ ಕಾಗೇರಿಗೆ ಸಿಬ್ಬಂದಿ, ಕಾರ್ಯದರ್ಶಿಗಳಿಗಿಂತ ಖಾಸಗಿ ಸಲಹೆಗಾರನ ಮೇಲೆಯೇ ನಂಬಿಕೆ ಹೆಚ್ಚು! ಸಾಮಾನ್ಯವಾಗಿ ಇಂಥ ಅಯೋಗ್ಯ ನೇಮಕಾತಿಗೆ ಹಣಕಾಸು ಇಲಾಖೆ ಆಕ್ಷೇಪವೆತ್ತಿ ಕಡತ ತಿರಸ್ಕಾರಿಸುತ್ತಾರೆ. ಆದರೆ ವಿಚಿತ್ರವೆಂದರೆ ಕಾಗೇರಿಯ ಈ ಕರಾಮತ್ತನ್ನು ಈವರೆಗೆ ಹಣಕಾಸು ಇಲಾಖೆ ಪ್ರಶ್ನಿಸದೇ ನಿಗೂಢ ಮೌನದಲ್ಲಿದೆ.

ಇದು ಸಂಘದೊಳಗಿನ ಸರ್ಕಸ್ ಮತ್ತು ಕಾಗೇರಿಯ ಪೊಕ್ಕುತನದ ಮಹಿಮೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...