Homeಮುಖಪುಟಅಯೋಧ್ಯ ತೀರ್ಪು: ಶಹಾಪುರ ನ್ಯಾಯವೋ, ಹಾವೇರಿ ನ್ಯಾಯವೋ?

ಅಯೋಧ್ಯ ತೀರ್ಪು: ಶಹಾಪುರ ನ್ಯಾಯವೋ, ಹಾವೇರಿ ನ್ಯಾಯವೋ?

ಬಾಬರಿ ಮಸೀದಿಯ ಕಟ್ಟಡ ಧ್ವಂಸ ಹಾಗೂ ರಾಮಲಲ್ಲಾನ ಮೂರ್ತಿ ಇಟ್ಟ ಪ್ರಕರಣಗಳನ್ನು ಕಾನೂನುಬಾಹಿರ ಎಂದು ಕರೆದಿರುವ ತೀರ್ಪು ಅದರ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ’ಮನಸ್ಸು’ ಮಾಡಬಹುದೇ? ಅಂತಹ ಮನಸ್ಸು ಇದೆಯೇ?

- Advertisement -
- Advertisement -

 

 

| ದೇವು ಪತ್ತಾರ್ |

ಬಾಬರಿ ಮಸೀದಿ ಧ್ವಂಸ ಹಾಗೂ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ’ನ್ಯಾಯ’ ನೀಡುವುದಕ್ಕಿಂತ ಹೆಚ್ಚಿನದನ್ನು ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಹೈದರಾಬಾದ್ ಕರ್ನಾಟಕದಲ್ಲಿ ‘ಶಹಾಪುರ ನ್ಯಾಯ’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ‘ಶಹಾಪುರ ನ್ಯಾಯ’ ಮಾಡುವ ವ್ಯಕ್ತಿಯನ್ನು ನಿಂದಾತ್ಮಕ ರೀತಿಯಲ್ಲಿ ಗುರುತಿಸಲಾಗುತ್ತದೆ. ಹಾಗಂತ ಅದು ಅನ್ಯಾಯವೇನಲ್ಲ.

ಏನಿದು ಶಹಾಪುರ ನ್ಯಾಯ?

ಧಾನ್ಯ ಅಳೆಯಲು ಸೇರು ಅಥವಾ ಬಳ್ಳ ಬಳಸಲಾಗುತ್ತದೆ. ಸೇರಿನ ಬಾಯನ್ನು ಮೇಲ್ಮುಖವಾಗಿ ಇಟ್ಟು ಅಳೆದರೆ ಅದು ನ್ಯಾಯ. ಸೇರನ್ನು ಬೋರಲಾಗಿ ಹಾಕಿ ಅಳೆದರೆ ಅನ್ಯಾಯ. ಶಹಾಪುರ ನ್ಯಾಯ ಅದೆರಡನ್ನೂ ಮಾಡುವುದಿಲ್ಲ. ಬದಲಿಗೆ ಸೇರನ್ನು ಅಡ್ಡಲಾಗಿ ಮಲಗಿಸಿ ಅದರ ಮೇಲೆ ಧಾನ್ಯ ಸುರಿಯುತ್ತ ಹೋಗುತ್ತದೆ. ಸೇರಿನ ಎರಡೂ ಬದಿಯಲ್ಲಿ ಬೀಳುವ ಧಾನ್ಯವನ್ನು ಎರಡೂ ಪಕ್ಷಗಳಿಗೆ ಹಂಚಲಾಗುತ್ತದೆ. ಮೇಲ್ನೋಟಕ್ಕೆ ಹಾಗೂ ತಾರ್ಕಿಕವಾಗಿ ಸರಿ ಎನ್ನಿಸುವ ಈ ವಿಧಾನವನ್ನು ’ನ್ಯಾಯ’ ಎಂದು ಯಾರೂ ಪರಿಗಣಿಸಲು ಸಾಧ್ಯವಿಲ್ಲ.

ಮತ್ತೊಂದು ಉದಾಹರಣೆ
ಇಬ್ಬರು ನೆರೆಹೊರೆಯವರ ನಡುವೆ ತಮ್ಮ ಮನೆಯ ನಡುವಿನ ಮರವೊಂದಕ್ಕೆ ಸಂಬಂಧಿಸಿದಂತೆ ಜಗಳ-ಭಿನ್ನಾಭಿಪ್ರಾಯ ಉಂಟಾಯಿತು. ಒಬ್ಬರು ಮರ ಇರುವ ನೆಲ (ಜಾಗ) ನನಗೆ ಸೇರಿದ್ದು ಎಂದು ವಾದಿಸಿದ. ಆದರೆ, ಮತ್ತೊಬ್ಬ ಮರ ಹಚ್ಚಿ, ನೀರೆರೆದು ಬೆಳೆಸಿದ್ದರಿಂದ ಅದು ನನ್ನದು ಹಾಗೂ ಅಷ್ಟೇ ಅಲ್ಲ ಮರ ಇರುವ ಪ್ರದೇಶ ನನಗೇ ಸೇರಿದ್ದು ಎಂದುಕೊಂಡು ಅದನ್ನು ಬೆಳೆಸಿದೆ. ಬೇರೆಯವರ ಜಾಗದಲ್ಲಿರುವ ಮರವನ್ನ ನಾನೇಕೆ ನೀರು ಹಾಕಿ ಬೆಳೆಸಲಿ? ಎಂಬ ಆಕ್ಷೇಪ ವ್ಯಕ್ತಪಡಿಸಿದ. ’ಶಹಾಪುರ ನ್ಯಾಯ ಮಾಡಿದ ಹಿರಿಯ, ಮರವನ್ನು ಎರಡನೆಯವನಿಗೂ ಜಾಗವನ್ನೂ ಮೊದಲನೆಯವನಿಗೂ ಹಂಚಿ ತೀರ್ಪು ನೀಡಿದ. ಊರವರೆಲ್ಲ ಇಬ್ಬರೂ ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚು ಎಂದು ಭಾವಿಸಿ ಸಂಭ್ರಮಿಸಿದರು.

ಯಾವುದೇ ರೀತಿಯ ತಗಾದೆ, ಜಗಳ, ಭಿನ್ನಾಭಿಪ್ರಾಯ ಉಂಟಾದರೆ ಮಧ್ಯಸ್ಥಿಕೆ ವಹಿಸಿ ಮಾತನಾಡುವವರನ್ನು ‘ನೀ ಇಲ್ಲಿ ಶಾಪುರ ನ್ಯಾಯ ಮಾಡಾಕ ಬರಬ್ಯಾಡ’ ಎಂದು ಪ್ರತಿಕ್ರಿಯಿಸುತ್ತಾರೆ. ‘ನ್ಯಾಯ’ ಪ್ರಕ್ರಿಯೆಯ ಅಣಕದಂತಿರುವ ಈ ನ್ಯಾಯವನ್ನು ಅನ್ಯಾಯ ಎಂದು ತಿರಸ್ಕರಿಸಲಾಗುವುದಿಲ್ಲ. ಹಾಗೆಯೇ ನ್ಯಾಯ ಎಂದು ಒಪ್ಪಿಕೊಳ್ಳುವುದು ಕೂಡ ಕಷ್ಟ.

ಈ ರೀತಿಯ ನ್ಯಾಯ ನೀಡುವ ಪ್ರಕ್ರಿಯೆಯನ್ನು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಮುಂಬೈ ಕರ್ನಾಟಕದಲ್ಲಿ ‘ಹಾವೇರಿ ನ್ಯಾಯ’ ಎಂದು ಗುರುತಿಸಲಾಗುತ್ತದೆ. ಹಾವೇರಿ ನ್ಯಾಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಮನಿಸಬೇಕು. ಕೆಲವು ಕಡೆ ಇದನ್ನು ’ಕಾಜಿ ನ್ಯಾಯ’ ಎಂದೂ ಕರೆಯಲಾಗುತ್ತದೆ. ಪತ್ನಿಯ ತಕರಾರು ಇಲ್ಲದ ಕಾರಣ ನೀಡಿ ಪತಿಗೆ ನಾಲ್ಕಕ್ಕಿಂತ ಹೆಚ್ಚು ಮದುವೆಗೆ ಅವಕಾಶ ನೀಡುವ ಪದ್ಧತಿಯಿದು. ಕೆಲವೆಡೆ ಖಾಪ್ ಪಂಚಾಯ್ತಿ ಎಂದೂ ಕರೆಯಲಾಗುತ್ತದೆ. ’ಜಿಸ್ ಲಾಠಿ ಉಸ್ ಕಾ ಭೈಂಸ್’ ಎಂಬ ಮಾತು ಕೂಡ ಇಂತಹ ನ್ಯಾಯಿಕ ಪ್ರಕ್ರಿಯೆಯ ಕಾರಣದಿಂದಾಗಿ ಹುಟ್ಟಿಕೊಂಡದ್ದು.

ನ್ಯಾಯಾಂಗದ ಬಗ್ಗೆ ಇರುವ ಎರಡು ಪ್ರಮುಖ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಬಹುದು. ನ್ಯಾಯ ನೀಡುವುದು ಮಾತ್ರವಲ್ಲ. ನೀಡಿದ್ದು ನ್ಯಾಯ ಎಂದು ಖಚಿತಪಡಿಸುವ ಹಾಗಿರಬೇಕು. ಮತ್ತೊಂದು ನೂರು ಅಪರಾಧಿಗಳು ತಪ್ಪಿಸಿಕೊಂಡರು ಪರವಾಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಈ ಎರಡೂ ಮಾತುಗಳು ನ್ಯಾಯಾಂಗದ ಘನತೆ ಮತ್ತು ಅದಕ್ಕಿರುವ ಮಹತ್ವವನ್ನು ವಿವರಿಸುತ್ತವೆ.

ಬಾಬರಿ ಮಸೀದಿಯ ಕಟ್ಟಡ ಧ್ವಂಸ ಹಾಗೂ ರಾಮಲಲ್ಲಾನ ಮೂರ್ತಿ ಇಟ್ಟ ಪ್ರಕರಣಗಳನ್ನು ಕಾನೂನುಬಾಹಿರ ಎಂದು ಕರೆದಿರುವ ತೀರ್ಪು ಅದರ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ’ಮನಸ್ಸು’ ಮಾಡಬಹುದೇ? ಅಂತಹ ಮನಸ್ಸು ಇದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...