Homeಎಚ್.ಎಸ್.ದೊರೆಸ್ವಾಮಿಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

ಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

- Advertisement -
- Advertisement -

ಮಾಧ್ಯಮಗಳು ಜನರನ್ನು ಎಚ್ಚರಿಸುವಂತ ಕೆಲಸ, ಸರ್ಕಾರಕ್ಕೆ ತಿಳಿವಳಿಕೆ ಹೇಳುವಂತಹ ಕೆಲಸ ಅಗತ್ಯವಾಗಿ ಮಾಡಬೇಕು. ಅವರು ಆ ಕೆಲಸವನ್ನು ಬಿಟ್ಟು ಮಿಕ್ಕೆದ್ದೆಲ್ಲ ಮಾಡ್ತಾರೆ. ಕಾಲಹರಣ ಮಾಡ್ತಾರೆ. ಎಲ್ಲೊ ಒಂದು ಕಡೆ ಸಾವಾಯಿತು ಅಂದ್ರೆ ಐದು ಸರಿ ಅದನ್ನು ಹಾಕ್ತಾರೆ.. ಎಲ್ಲಾದರೂ ಕೊಲೆ ಆದರೂ ಅದನ್ನೆ ಪುನಃ ರಿಪೀಟ್ ಮಾಡಿ ಹಾಕ್ತಾರೆ. ಬರೀ ಈ ತರಹದ ಚರ್ಚೆ ಆಗ್ತಿದೆ ಹೊರತು ಪ್ರಜಾಪ್ರಭುತ್ವವನ್ನು ಮಜಭೂತುಪಡಿಸುವುದಕ್ಕೆ ಮತ್ತು ಸಮಾಜವನ್ನು ತಿದ್ದುವುದಕ್ಕೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದುಷ್ಟ ವಿಚಾರಗಳನ್ನು ಅಳಿಸಲು ಕೆಲಸ ಮಾಡುತ್ತಿಲ್ಲ.

ಒಳ್ಳೇಯದಕ್ಕೆ ಸಮಯ ಕೊಟ್ಟು ಜನರ ಪ್ರಜ್ಞೆಯನ್ನು ಬಳಸಿ, ಅವರಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕಾದಂತಹ ಮಾಧ್ಯಮಗಳು ಕಾಲಹರಣ ಮಾಡುತ್ತಿವೆ. ಇದನ್ನು ನಾವು ನಾಲ್ಕಾರು ವರ್ಷಗಳಿಂದ ನೋಡ್ತ ಬಂದಿದ್ದೇವೆ.. ಇದರ ಬಗ್ಗೆ ಮಾತಾನಾಡುವ ಜನ ಕೂಡ ಇಲ್ಲ. ನಾವು ಸ್ವತಂತ್ರ ಪೂರ್ವದಲ್ಲಿ ಈ ಮಾದ್ಯಮಗಳನ್ನು ಹೇಗೆ ಉಪಯೋಗ ಮಾಡ್ತಿದ್ದೆವು, ಬ್ರಿಟೀಷರ ವಿರೋಧವಾಗಿ ನಾವು ಗುಲಾಮಗಿರಿಯಿಂದ ಹೊರಗೆ ಬರುವುದ್ದಕ್ಕಾಗಿ, ಶತ್ರುಗಳನ್ನು ಹೊಡೆದು ಓಡಿಸುವುದಕ್ಕಾಗಿ, ಪ್ರಜೆಗಳಲ್ಲಿ ಪ್ರಜ್ಞೆಯನ್ನು ತುಂಬಿಸುವಂತಹ ಕೆಲಸವನ್ನು ಮಾಡ್ತಾ ಇದ್ವಿ. ಈವತ್ತಿನ ಪತ್ರಿಕೆಗಳು ಅಂತಹ ಕೆಲಸ ಮಾಡಬೇಕು.

ಪ್ರಜಾಪ್ರಭುತ್ವವನ್ನು ಉಳಿಸುವಂತಹ ಕೆಲಸ, ನಮ್ಮ ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡಬೇಕೇ ಹೊರೆತು ಕಾಲಹರಣ ಮಾಡುವುದು ಸರಿಯಲ್ಲ. ಈವತ್ತಿನ ದಿವಸ ಕರೋನ ಸಂದರ್ಭದಲ್ಲಿ ಹೆಂಡದ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಯಾವಾಗ ಅಂಗಡಿ ತೆಗೀತಾರೆ ಯಾವಾಗ, ಕುಡಿಯೋಣ ಅಂತ. ಅವರಿಗೆ ಈ ಮಾಧ್ಯಮದವರು ಹೇಳುವುದು ದೂರ ದೂರ ನಿಂತುಕೊಳ್ಳಿ ಅಂತ. ಇವರ ಮಾತು ಕೇಳ್ತಾರೇನ್ರಿ ಕುಡಿಯುವ ಆತುರದಲ್ಲಿ ಇರುವಂತಹ ಜನ?

ಅಂಗಡಿ ತೆಗಯಬೇಡಿ ಅಂತ ಹೇಳುವುದು ಮಾದ್ಯಮದವರ ಕರ್ತವ್ಯವಾಗಿತ್ತು. ಯಾಕೆಂದರೆ ಅದರಿಂದ ಅನಾಹುತ ಆಗುತ್ತೆ, ಕರೋನ ಮತ್ತೆ ಜಾಸ್ತಿ ಆಗುತ್ತೆ ಅಂತ ಹೇಳಬೇಕಾಗಿತ್ತೆ ಹೊರೆತು, ಇವರು ತಿಳುವಳಿಕೆ ಕೊಡುವಂತಹ ರೀತಿಯಲ್ಲಿ ಅಲ್ಲ. ಈ ಮಾಧ್ಯಮದವರು ಏನೇನೋ ಮಾತಾಡ್ತಾರೆ, ಆದರೆ ಇದು ಸರಿ ಅಲ್ಲ. ನೀವು ದೂರ ದೂರ ನಿಂತಿಕೊಳ್ಳಿ ಅಂತ ಮಾತು ಬೇರೆ ಸಂದರ್ಭದಲ್ಲಿ ಹೇಳಲಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೆಂಡದಂಗಡಿ ಹತ್ತಿರ ನೀವು ಉಪದೇಶ ಮಾಡ್ತಿದೀರಿ. ಇದು ಆಗುತ್ತೇನ್ರಿ? ಇದು ಆಗದೇ ಇರುವಂತಹದು. ಈವತ್ತು ಕುಡಿಯಲು ನೂಕು ನುಗ್ಗಲು ಮಾಡಿದ್ದರಿಂದ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆದ್ದರಿಂದ ನೀವು ವ್ಯವಹಾರಿಕವಾಗಿ ನಡೀಬೇಕು. ಈವತ್ತು ಸಮಸ್ಯೆ ಏನಿದೆ ಅದರ ಬಗ್ಗೆ ಪರಿಗಣಿಸಬೇಕು.

ಕರೊನ ಕಾರಣದಿಂದ ಈಗ ಜನ ಕುಡಿಯುವುದನ್ನು ನಿಲ್ಲಿಸಿದ್ದಾರೆ. ಯಾರೋ ಕುಡುಕರು ತುಂಬಾ ದಿನಾ ಕುಡೀದೇ ಇದ್ದರೆ ಆಗುವುದೇ ಇಲ್ಲ ಅನ್ನುವ ಜನರಿಗೆ ಬೇಕಾದರೆ ಪರ್ಮಿಟ್ಟು ಕೊಡಿ. ಆದರೆ ಸಾಮನ್ಯ ಜನರು ಕುಡಿಯುವುದನ್ನು ಬಿಡುವುದಕ್ಕೆ ತಯಾರು ಇರಬೇಕಾದ್ರೆ, ಅವರುಗಳಿಗೆ ಅಂಗಡಿಗಳು ಇಲ್ಲದೇ ಇರುವ ಹಾಗೆ ಮಾಡಿದರೆ ಬಿಟ್ಟೇ ಬಿಡ್ತಾರೆ… ಗುಜರಾತ್ ನಲ್ಲಿ ಈ ಕೆಲಸ ಮಾಡಿದ್ದಾರೆ. ತುಂಬಾ ಕುಡಿಯುವ ಚಟ ಇರುವ ಬೆರಳೆಣಿಕೆಯಷ್ಟು ಕುಡಕರಿಗೆ ಪರ್ಮಿಟ್ ಕೊಟ್ಟಿದ್ದಾರೆ, ಉಳಿದವರಿಗೆ ಅಂಗಡಿಗಳಿಲ್ಲ.

ಆ ರೀತಿಯ ವ್ಯವಸ್ಥೆ ಇಲ್ಲಿ ಆಗಬೇಕೇ ಹೊರೆತು ಸಾಲಾಗಿ ನಿಲ್ಲಿಸಿ ಲಾಠಿ ಚಾರ್ಜ್ ಆಗುವಂತೆ ಮಾಡುವುದು ವಿವೇಕವಲ್ಲ. ರೆಡ್ ಜೋನ್‌ನಲ್ಲಿ ಇರುವ ಕುಡುಕರು ಅಲ್ಲಿ ಕುಡಿತದ ಅಂಗಡಿಗಳು ಇಲ್ಲವಾದ್ದರಿಂದ ಕುಡಿತದ ಅಂಗಡಿಗಳು ತೆಗೆದಿರುವ ಬಡಾವಣೆಗಳಿಗೆ ನುಗ್ಗಿ ಬರುತ್ತಿದ್ದಾರೆ. ಮೊದಲು ಅದನ್ನು ತಡೆಗಟ್ಟಿ ಎಂದು ಪೋಲಿಸರಿಗೆ ಮತ್ತು ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

ಸರ್ಕಾರ ಆತುರದಲ್ಲಿ ಕುಡಿತದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಮಾಡಬಾರದು.


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ


ನಮ್ಮ ಇಂಗ್ಲಿಷ್ ವೆಬ್ಸೈಟಿಗೆ ಭೇಟಿ ನೀಡಿ

https://gaurilankeshnews.com/


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...