Homeಕ್ರೀಡೆಒಲಂಪಿಕ್‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ

‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ

ಒಲಿಂಪಿಕ್ಸ್‌‌ ಕ್ರೀಡಾ ಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಮೊದಲ ಬಾರಿ ಸಮಿಫೈನಲ್‌ಗೆ ತಲುಪಿ ಇತಿಹಾಸ ನಿರ್ಮಿಸಿತ್ತು

- Advertisement -
- Advertisement -

ಒಲಿಂಪಿಕ್ಸ್‌ ಕ್ರೀಡಾ ಕೂಟದ ಇತಿಹಾಸದಲ್ಲೇ ಭಾರತೀಯ ಮಹಿಳಾ ಹಾಕಿ ತಂಡ ಮೊದಲ ಬಾರಿಗೆ ಸಮಿಫೈನಲ್ ತಲುಪಿದ್ದು, ಸೆಮಿಫೈನಲ್‌‌ನಲ್ಲಿ ಅರ್ಜೆಂಟೀನಾ ವಿರುದ್ದ 1-2 ಗೋಲ್ ಅಂತರದಲ್ಲಿ ಸೋತಿತ್ತು. ಶುಕ್ರವಾರ (ನಾಳೆ) ಗ್ರೇಟ್‌ ಬ್ರಿಟನ್‌ ತಂಡದ ವಿರುದ್ದ ಕಂಚಿಗಾಗಿ ಆಡಲಿದೆ. ಆದರೆ ಈ ಮಧ್ಯೆ ಭಾರತ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಸೆಮಿಫೈನಲ್‌ನಲ್ಲಿ ಸೋತ ಕೆಲವೆ ಗಂಟೆಗಳ ಅಂತರದಲ್ಲಿ ಮಹಿಳಾ ತಂಡದ ಪ್ರಮುಖ ಆಟಗಾರ್ತಿ ‘ವಂದನಾ ಕಟಾರಿಯಾ’ ಅವರು ದಲಿತೆ ಎನ್ನುವ ಕಾರಣಕ್ಕೆ ಜಾತಿ ನಿಂದನೆಗೆ ಒಳಗಾಗಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ವಂದನಾ ಕಟಾರಿಯಾ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲ್‌ ಸಾಧಿಸಿದ ಭಾರತದ ಮೊದಲ ಮಹಿಳಾ ಹಾಕಿ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತೀಯ ಮಹಿಳಾ ತಂಡ ಸೋತ ಕೆಲವೆ ಗಂಟೆಗಲ್ಲಿ ಹರಿದ್ವಾರದ ರೋಷನಾಬಾದ್ ಹಳ್ಳಿಯಲ್ಲಿರುವ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರ ಮನೆಯ ಹತ್ತಿರ ಇಬ್ಬರು ಮೇಲ್ಜಾತಿಯ ವ್ಯಕ್ತಿಗಳು ಆಗಮಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ: ಮಹಿಳಾ ಹಾಕಿ ತಂಡದ ದಿಟ್ಟ ಆಟಗಾರ್ತಿ ಲಾಲ್‌ರೆಮ್ಸಿಯಾಮಿ

ದುಷ್ಕರ್ಮಿಗಳು ಪಟಾಕಿ ಸಿಡಿಸಿ, ಅಣಕು ಸಂಭ್ರಮಾಚರಣೆ ಮಾಡಿ ನೃತ್ಯ ಮಾಡಿದ್ದು, “ತಂಡದಲ್ಲಿ ಹೆಚ್ಚು ದಲಿತ ಆಟಗಾರರು ಇರುವುದರಿಂದಲೇ ಆಟ ಸೋತಿದೆ” ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ವಂದನಾ ಅವರ ಕುಟುಂಬವು ಆರೋಪಿಸಿದೆ ಎಂದು ಪತ್ರಿಕೆ ತಿಳಿಸಿದೆ.

“ಪಂದ್ಯವು ಸೋತಿದ್ದರ ಬಗ್ಗೆ ನಮಗೆ ಬೇಸರವಿದೆ. ಆದರೆ ತಂಡವು ಹೋರಾಟ ನಡೆಸಿಯೆ ಪಂದ್ಯದಲ್ಲಿ ಸೋತಿದೆ. ಅದರ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ವಂದನಾ ಅವರ ಸಹೋದರ ಶೇಖರ್‌ ಅವರು ತಿಳಿಸಿದ್ದಾರೆ ಎಂದು TOI ಉಲ್ಲೇಖ ಮಾಡಿದೆ.

“ಪಂದ್ಯ ಸೋತ ದುಃಖದಲ್ಲಿದಾಗ, ಇದ್ದಕ್ಕಿದ್ದಂತೆ ದೊಡ್ಡ ಶಬ್ದಗಳು ಕೇಳಿ ಬಂದವು. ನಮ್ಮ ಮನೆಯ ಹೊರಗೆ ಪಟಾಕಿ ಸಿಡಿಸಲಾಗಿತ್ತು. ನಾವು ಹೊರಗೆ ತೆರಳಿ ನೋಡಿದಾಗ ನಮಗೆ ತಿಳಿದಿರುವ ನಮ್ಮದೆ ಹಳ್ಳಿಯ ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಮನೆಯ ಮುಂದೆ ನೃತ್ಯ ಮಾಡುತ್ತಿದ್ದರು” ಎಂದು ಶೇಖರ್‌ ಹೇಳಿದ್ದಾರೆ.

ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ 

ಮನೆಯ ಹೊರಗಿನ ಗಲಾಟೆಯನ್ನು ತಡೆಯಲು ವಂದನಾ ಅವರ ಕುಟುಂಬವು ಪ್ರಯತ್ನಿಸಿದಾಗ ಆರೋಪಿಗಳು ಮತ್ತಷ್ಟು ಆಕ್ರೋಶಗೊಂಡು, ಜಾತಿ ನಿಂದನೆ ಮಾಡಿ ಕುಟುಂಬವನ್ನು ಅವಮಾನಿಸಿದ್ದಾರೆ ಎನ್ನಲಾಗಿದೆ.

“ತಂಡದಲ್ಲಿ ಹಲವಾರು ದಲಿತ ಆಟಗಾರರನ್ನು ಸೇರಿಸಿದ್ದರಿಂದಲೇ ಪಂದ್ಯ ಸೋತಿದೆ. ಕೇವಲ ಹಾಕಿ ಮಾತ್ರವಲ್ಲ, ಪ್ರತಿ ಕ್ರೀಡೆಯಲ್ಲೂ ದಲಿತರನ್ನು ಹೊರಗಿಡಬೇಕು ಎಂದು ಅವರು ಹೇಳಿದ್ದಾರೆ. ಇದು ಖಂಡತವಾಗಿಯೂ ಜನಾಂಗೀಯ ನಿಂದನೆಯಾಗಿದೆ” ಎಂದು ಶೇಖರ್ ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ ಎಂದು ವರದಿ ಹೇಳಿದೆ. ದೂರಿನ ಆಧಾರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. “ನಾವು ದೂರು ಸ್ವೀಕರಿಸಿದ್ದೇವೆ ಮತ್ತು ವಿಚಾರಣೆ ನಡೆಯುತ್ತಿದೆ, ನಂತರ ಪ್ರಕರಣ ದಾಖಲಿಸಲಾಗುವುದು” ಎಂದು ಸಿಡ್ಕಲ್‌ ಪೊಲೀಸ್ ಠಾಣೆಯ ಅಧಿಕಾರಿ  ಹೇಳಿದ್ದಾರೆಂದು TOI ವರದಿ ಮಾಡಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದರೂ ವಂದನಾ ಕಟಾರಿಯ ದಲಿತೆ ಎಂಬ ಕಾರಣಕ್ಕೆ ಹಂಗಿಸಲ್ಪಡುವುದು ಕೊಳೆತ ಮನಸ್ಥಿತಿಯ ದ್ಯೋತಕ. ವಂದನಾ, ಚಿಂತಿಸಬೇಡ, ನೀನು ನಮ್ಮೆಲ್ಲರ ಹೆಮ್ಮೆ!

  2. ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದರೂ ವಂದನಾ ಕಟಾರಿಯ ದಲಿತೆ ಎಂಬ ಕಾರಣಕ್ಕೆ ಹಂಗಿಸಲ್ಪಡುವುದು ದುರದ್ರಷ್ಟಕರ ಎದೆಗುಂದದೆ ಮುನ್ನಡೆಯಿರಿ ಎಂತಹಾ ವಿಪರ್ಯಾಸ ನೋಡಿ ಈ ಕಾಲಘಟ್ಟದಲ್ಲಿ ಈ ಕೆಟ್ಟ ಮನಸ್ಸು/ ಕೊಳಕು ಮನಸ್ಸಿರುವ ಜನರಿಂದಲೇ ಈ ದೇಶ ಈಗೆ.ತಾವು ಧೃತಿಗೆಡದೆ ಮುನ್ನೂಗ್ಗಿ ನಿಮ್ಮ ಜೊತೆಗೆ ನಾವಿದ್ದೇವೆ ವಂದನಾ ನಮ್ಮೆಲ್ಲರ ಆಸ್ತಿ, ನಮ್ಮ ಹೆಮ್ಮೆಯ ಪುತ್ರಿ ಚಂತೆಬೇಡ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...