Homeಚಳವಳಿಕೃಷಿ ಶ್ರಮಿಕರ ಬೆವರನ್ನು ಅವಮಾನಿಸುವ ಮಾತುಗಳು ಬೇಡ - ಅವರ ಮಾತು ಆಲಿಸಿ

ಕೃಷಿ ಶ್ರಮಿಕರ ಬೆವರನ್ನು ಅವಮಾನಿಸುವ ಮಾತುಗಳು ಬೇಡ – ಅವರ ಮಾತು ಆಲಿಸಿ

ಉದ್ಯೋಗ ಸೃಷ್ಟಿಯಲ್ಲಿ ಈಗಲೂ ಕೃಷಿ ಕ್ಷೇತ್ರದ್ದೆ ಸಿಂಹಪಾಲು. ಇಂದಿಗೂ ದೇಶದ ಉದ್ಯೋಗ ಸೃಷ್ಟಿಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.53ರಷ್ಟು.

- Advertisement -
- Advertisement -

‘ಪ್ರಧಾನಿ ನರೇಂದ್ರ ಮೋದಿ ಸೇವಿಸುತ್ತಿರುವ ರೊಟ್ಟಿ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಧಾನ್ಯದಿಂದ ತಯಾರಿಸಿದ್ದು ಎಂದು ಹೇಳಿ’. ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತದ ಮೂರು ಮಸೂದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಎಪ್ಪತ್ತು ವರ್ಷದ ದೇವ್‍ಸಿಂಗ್ ನೀಡಿರುವ ಎಚ್ಚರಿಕೆ. ಕಳೆದ ಹಲವು ವರ್ಷಗಳಿಂದ ಮನ್‍ಕಿ ಬಾತ್ ಕೇಳಿದ್ದು ಸಾಕು, ಇನ್ನು ರೈತರ ಮಾತನ್ನು ಪ್ರಧಾನಿಗಳು ಆಲಿಸಬೇಕೆಂದು ಆಕ್ರೋಶಭರಿತರಾಗಿ ಹೇಳಿದ್ದಾರೆ. ದೇವ್‍ಸಿಂಗ್ ಅವರ ಪತ್ನಿ, ಸೇರಿದಂತೆ ಇಡೀ ಕುಟುಂಬ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ. ದೇವ್‍ಸಿಂಗ್ ಅವರ ಆರೋಗ್ಯಕ್ಕೆ ಏನಾದರೂ ತೊಂದರೆಯಾದೀತು ಎಂಬುದು ಅವರ ಮನೆಯವರ ಆತಂಕ. ಆದರೆ ದೇವ್‍ಸಿಂಗ್ ಮಾತ್ರ ನನಗೆ ಏನಾದರೂ ಸರಿಯೇ ನಮ್ಮ ಮಕ್ಕಳ ಭವಿಷ್ಯ ಉಳಿಸುವುದು ನನ್ನ ಜವಾಬ್ದಾರಿ ಎಂದು ಹಗಲು ರಾತ್ರಿ ಈ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕೇವಲ ಒಂದು ಕುಟುಂಬದ ಪ್ರಶ್ನೆ ಅಲ್ಲ. ದೇಶದ ವಿವಿಧ ರಾಜ್ಯಗಳ ಎರಡು ಲಕ್ಷ ರೈತರು ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಉದ್ಯಮಿಯೊಬ್ಬ ಕಚ್ಚಾ ಉತ್ಪನ್ನಗಳನ್ನು ಖರೀದಿಸುತ್ತಾನೆ. ಸಿದ್ಧ ಉತ್ಪನ್ನಗಳನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾನೆ. ಅದೇ ರೀತಿ ರೈತನೊಬ್ಬ ತನಗೆ ಬೇಕಾದ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಖರೀದಿಸುತ್ತಾನೆ ಬೆಳೆದ ಫಸಲನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಾನೆ. ಇಲ್ಲಿ ಮೇಲ್ನೋಟಕ್ಕೆ ಇಬ್ಬರೂ ಒಂದೇ ರೀತಿ ಕಾಣಿಸುತ್ತಾರೆ. ಆದರೆ ಇಲ್ಲಿರುವ ವ್ಯತ್ಯಾಸವನ್ನು ಗಮನಿಸಬೇಕು. ಅದೆಂದರೆ ಉದ್ಯಮಿ ವ್ಯಾಪಾರ ಮಾಡುತ್ತಾನೆ ಕೃಷಿಕ ಕರ್ತವ್ಯ ನಿರ್ವಹಿಸುತ್ತಾನೆ. ಈ ವ್ಯತ್ಯಾಸವನ್ನು ಅರಿಯದಿದ್ದರೆ ಜಗತ್ತು ನಾಶವಾಗುತ್ತೆ. ಈ ಆಯಾಮದಲ್ಲಿ ನಾವು ರೈತರ ಪ್ರತಿಭಟನೆಯನ್ನು ನೋಡುವ ಅಗತ್ಯವಿದೆ.

ರೈತರು ಭಯೋತ್ಪಾದಕರು, ಈ ರೈತರ ಪ್ರತಿಭಟನೆಗೆ ಖಲಿಸ್ತಾನ್ ಬೆಂಬಲವಿದೆ, ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್‍ನವರು ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಹೇಳುವುದು ಸುಲಭ. ಅಂತವರು ಕೃಷಿಕನ ಹೃದಯದಲ್ಲಿ ಕೂತು ಮಾತನಾಡಿದರೆ ಅರಿವಿಗೆ ಬರುತ್ತೆ ಕೃಷಿ ಮತ್ತು ಕೃಷಿಕ ಅಂದರೆ ಏನು ಅಂತ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವವರು ದೇಶಕ್ಕೆ ಅನ್ನವನ್ನಷ್ಟೆ ನೀಡುತ್ತಿಲ್ಲ. ಆ ರೈತರ ಕುಟುಂಬಗಳಲ್ಲಿ ಜನಿಸಿದ ಹಲವಾರು ಯುವಕರು ಗಡಿಯಲ್ಲಿ ಈ ದೇಶದ ರಕ್ಷಣೆಗಾಗಿ ಪ್ರಾಣ ಕೊಟ್ಟಿದ್ದಾರೆ ಎಂಬುದನ್ನು ಅರಿಯಬೇಕು. ಅಪ್ಪ ಅಮ್ಮ ಹೊಲ, ತೋಟಗಳಲ್ಲಿ ದುಡಿಯುತ್ತಿದ್ದರೆ ಅವರ ಮಕ್ಕಳು ದೇಶ ರಕ್ಷಣೆಗಾಗಿ ಸೇನೆಯಲ್ಲಿ ದುಡಿಯುತ್ತಿದ್ದಾರೆ. ಮುಂಬೈನ ದಲಾಲ್ ಸ್ಟ್ರೀಟ್, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಶ್ರಮಿಕರ ಬೆವರನ್ನು ಕದಿಯುವವರ ನಾಲಿಗೆಗಳು ಮಾತ್ರ ಹೀಗೆ ಒದರಲು ಸಾಧ್ಯ.

ಅರ್ಥಶಾಸ್ತ್ರ ವ್ಯಾಖ್ಯಾನದ ಅನುಸಾರ ಕೃಷಿ ಪ್ರಾಥಮಿಕ ವಲಯ, ತಯಾರಿಕಾ ಕ್ಷೇತ್ರ ದ್ವಿತೀಯ ಮತ್ತು ಸೇವಾ ಕ್ಷೇತ್ರ ತೃತೀಯ ವಲಯ. ತೃತೀಯ ವಲಯ ಇಲ್ಲದಿದ್ದರೂ ದ್ವಿತೀಯ ವಲಯ ಉಳಿಯಬಲ್ಲದು. ದ್ವಿತೀಯ ವಲಯ ಇಲ್ಲದಿದ್ದರೂ ಪ್ರಾಥಮಿಕ ವಲಯ ಉಳಿಯಬಲ್ಲದು. ಆದರೆ ಪ್ರಾಥಮಿಕ ವಲಯ ಇಲ್ಲದಿದ್ದರೆ ಉಳಿದ ಯಾವ ವಲಯಗಳೂ ಉಳಿಯಲು ಸಾಧ್ಯವಿಲ್ಲ. ಹೀಗಾಗಿಯೇ ಕೃಷಿಗೆ ಪ್ರಾಥಮಿಕ ವಲಯದ ಮಾನ್ಯತೆ ನೀಡಿರುವುದು. ಸದ್ಯ ದ್ವಿತೀಯ ಮತ್ತು ತೃತೀಯ ವಲಯವನ್ನು ಕಾರ್ಪೊರೆಟ್‍ಗಳು ಆಕ್ರಮಿಸಿದ್ದಾರೆ. ಇನ್ನು ಉಳಿದಿರುವುದು ಪ್ರಾಥಮಿಕ ವಲಯ. ಅದನ್ನೂ ಆಕ್ರಮಿಸಿದರೆ ಮತ್ತೆ ಉಳಿಯುವುದು ಬೇರೇನೂ ಇಲ್ಲ. ಇಂತಹ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ. ಭಾರತ ಇಂದು ಆಹಾರ ಧಾನ್ಯಗಳು, ಸಕ್ಕರೆ ಮತ್ತು ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸ್ಥಾಪಿಸಿದೆ. ಇದರಿಂದ ಪ್ರತಿ ವ್ಯಕ್ತಿಯ ಸಂವಿಧಾನಬದ್ಧವಾದ ಆಹಾರದ ಹಕ್ಕು ಜೀವಂತವಾಗಿದೆ. ಒಂದು ವೇಳೆ ಕೃಷಿ ಕ್ಷೇತ್ರ ಕಾರ್ಪೊರೇಟ್‍ಗಳ ಹಿಡಿತಕ್ಕೆ ಸಿಲುಕಿದರೆ ಆಹಾರದ ಹಕ್ಕು ಉಳಿಯುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ರೈತರ ಇಂದಿನ ಪ್ರತಿಭಟನೆಯನ್ನು ನೋಡುವ ಅಗತ್ಯತೆ ಇದೆ.

ದೇಶದ ಜಿಡಿಪಿಗೆ ಸೇವಾ ಕ್ಷೇತ್ರದ ಕೊಡುಗೆಗೆ ಹೋಲಿಸಿದರೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆ. ಆದರೆ ಉದ್ಯೋಗ ಸೃಷ್ಟಿಯಲ್ಲಿ ಈಗಲೂ ಕೃಷಿ ಕ್ಷೇತ್ರದ್ದೆ ಸಿಂಹಪಾಲು. ಇಂದಿಗೂ ದೇಶದ ಉದ್ಯೋಗ ಸೃಷ್ಟಿಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.53ರಷ್ಟು. ಉಳಿದಿದ್ದರಲ್ಲಿ ತಯಾರಿಕೆ ಮತ್ತು ಸೇವಾಕ್ಷೇತ್ರಗಳು ಹಂಚಿಕೊಂಡಿವೆ. ಇಂತಹ ಕ್ಷೇತ್ರವನ್ನು ಕಾರ್ಪೊರೆಟ್‍ಗಳ ಹಿಡಿತಕ್ಕೆ ನೀಡುವುದರಿಂದ ಯುವಕರು ನಿರುದ್ಯೋಗಿಗಳಾಗುವುದರೊಂದಿಗೆ ಆಹಾರದ ಹಕ್ಕು ಇಲ್ಲವಾಗಿ ಅರಾಜಕತೆ ಸೃಷ್ಟಿಯಾಗಲಿದೆ ಎಂಬ ಎಚ್ಚರಿಕೆ ಕೇಂದ್ರ ಸರ್ಕಾರಕ್ಕೆ ಇರಬೇಕಾಗಿದೆ. ಈ ನಾಗರಿಕತೆ ಯಾವುದರ ಆಧಾರದಲ್ಲಿ ಇಲ್ಲಿವರೆಗೂ ವಿಕಾಸವಾಗುತ್ತಾ ಬಂದಿದೆಯೋ ಆ ವ್ಯವಸ್ಥೆಯೇ ನಾಶವಾಗುತ್ತದೆ.

ಪ್ರತಿಭಟನೆ ನಡೆಸುವುದು ಈ ದೇಶದ ಪ್ರತಿಯೊಬ್ಬರಿಗೂ ನಮ್ಮ ಸಂವಿಧಾನ ನೀಡಿರುವ ಹಕ್ಕು. ಸಂವಿಧಾನ ಕರಡನ್ನು ಸಮರ್ಪಿಸಿದ ಸಂವಿಧಾನ ದಿನವಾದ ನ.26ರಂದೇ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ, ಜಲಫಿರಂಗಿಗಳು, ಟಿಯರ್‌ಗ್ಯಾಸ್‍ಗಳನ್ನು ಬಳಸಿರುವುದು ಕನಿಷ್ಠ ನಾಚಿಕೆಯೂ ಇಲ್ಲದವರು ಎಸಗುವ ಕೃತ್ಯವಲ್ಲದೆ ಮತ್ತೇನೂ ಅಲ್ಲ. ಭಟಿಂಡಾದ ಕೃಷಿ ಮಹಿಳೆ ಹರಿಂದರ್ ಭಾನು ಈ ಪ್ರತಿಭಟನೆಯಲ್ಲಿ ಹತ್ತು ಸಾವಿರ ಕೃಷಿ ಮಹಿಳೆಯರನ್ನು ಮುನ್ನಡೆಸುತ್ತಿದ್ದಾಳೆ. ಈ ಮೂರೂ ಮಸೂದೆಗೆ ಅನುಷ್ಠಾನಕ್ಕೆ ಬಂದರೆ ಕೃಷಿಕರು ಅವರ ಮನೆಗಳಲ್ಲಿ ರೊಟ್ಟಿ ಮಾಡುವುದನ್ನೇ ನಿಲ್ಲಿಸಬೇಕಾಗುತ್ತದೆ ಎಂದು ತಮ್ಮ ಅಂತರಾಳದ ನೋವನ್ನು ಹೊರಗೆಡಹಿದ್ದಾರೆ. ಕೃಷಿ ಎಂದೂ ಬಿಸಿನೆಸ್ ಅಲ್ಲ ಅದೊಂದು ಧರ್ಮ ಮತ್ತು ಕರ್ತವ್ಯ. ತಾನೂ ಉಂಡು ಮತ್ತೊಬ್ಬರಿಗೂ ಉಣಬಡಿಸುವುದೇ ಆ ಧರ್ಮ. ನವಿಲು ಮತ್ತು ಗಿಣಿಗಳನ್ನು ಸಾಕಿದಂತಲ್ಲ.

ದೇಶದ ರೈತರ ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿದೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರದ ಅಂಕಿಅಂಶಗಳತ್ತ ನೋಟ ಹರಿಸಿದರೆ ಅರಿವಿಗೆ ಬರಲಿದೆ. 1995ರಿಂದ ಇಲ್ಲಿವರೆಗೂ ದೇಶದಲ್ಲಿ 2,96,438 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಇದರ ಪ್ರಮಾಣ ಶೇ.11.2. ಈ ಪೈಕಿ ಮಹಾರಾಷ್ಟ್ರದಲ್ಲಿ ಮಾತ್ರವೇ 60,750 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದಂತೆ ಉತ್ತರ ಪ್ರದೇಶ, ಹರಿಯಾಣ, ಛತ್ತೀಸ್‍ಗಡ, ಆಂದ್ರ, ತೆಲಂಗಾಣ, ಒಡಿಸಾ ಮತ್ತಿತರ ರಾಜ್ಯಗಳ ರೈತರು ಈ ಹಾದಿ ಹಿಡಿದಿದ್ದಾರೆ. ಅತಿಹೆಚ್ಚು ಆತ್ಮಹತ್ಯೆ ಸಂಭವಿಸಿರುವ ರಾಜ್ಯಗಳಲ್ಲಿ ಕೃಷಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡದಿರುವುದು ಮತ್ತು ಕೃಷಿ ಮಾರುಕಟ್ಟೆಗಳಲ್ಲಿ ಖಾಸಗಿ ಭಾಗವಹಿಸುವಿಕೆಗೆ ಹೆಚ್ಚು ಅವಕಾಶ ನೀಡಿದ್ದು ಕಾರಣವಾಗಿದೆ.

ಈಗ ಪ್ರತಿಭಟನೆಯಲ್ಲಿ ತೊಡಗಿರುವುದು ಹರಿಯಾಣ ಮತ್ತು ಪಂಜಾಬ್ ರೈತರು ಮಾತ್ರವಲ್ಲ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಆಂಧ್ರ, ತೆಲಂಗಾಣ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ರೈತರು ಭಾಗವಹಿಸಿದ್ದಾರೆ. ಅವರು ವಾರ, ಹದಿನೈದು ದಿನ, ತಿಂಗಳಿಗೆ ಸಾಕಾಗುವಷ್ಟು ದವಸಧಾನ್ಯಗಳನ್ನೂ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಪ್ರತಿಭಟನೆಗೆ ಬಂದು ಸೇರುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬೇರೆ ಪ್ರತಿಭಟನೆಗಳಾದರೆ ದಾರಿ ತಪ್ಪಿಸಲು ನೂರು ಪಿತೂರಿಗಳನ್ನು ಮಾಡಬಹುದು. ಆದರೆ ದೇಶದ ಬೆನ್ನೆಲುಬು ರೈತರು ಬೀದಿಗಿಳಿದಿದ್ದಾರೆ.

  • ಮುರಳಿಕೃಷ್ಣ ಜಿ ಆರ್

ಹಿರಿಯ ಪತ್ರಕರ್ತ, ಅಂಕಣಕಾರ. ಗ್ರಾಮೀಣ ಆರ್ಥಿಕತೆ ಮತ್ತು ಮೈಕ್ರೋ ಎಕಾನಾಮಿಕ್ಸ್ ಸಂಬಂಧಿಸಿ ಅಂಕಣಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಕೃಷಿಕರು


ಇದನ್ನೂ ಓದಿ: ಇದು ರೈತರು ಮತ್ತು ಕೇಂದ್ರದ ನಡುವಿನ ಸಂಘರ್ಷ: ಪಂಜಾಬ್ ಮುಖ್ಯಮಂತ್ರಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...