Homeಚಳವಳಿಭಾಷೆಗೆ ಧರ್ಮದ ಹಂಗಿಲ್ಲ: ಫಿರೋಜ್‌ ಖಾನ್‌ ಪ್ರಕರಣದಲ್ಲಿ ನೆಟ್ಟಿಗರ ಅಭಿಪ್ರಾಯಗಳು....

ಭಾಷೆಗೆ ಧರ್ಮದ ಹಂಗಿಲ್ಲ: ಫಿರೋಜ್‌ ಖಾನ್‌ ಪ್ರಕರಣದಲ್ಲಿ ನೆಟ್ಟಿಗರ ಅಭಿಪ್ರಾಯಗಳು….

- Advertisement -
- Advertisement -

ಮೊದಲನೆಯ ಫೋಟೋದಲ್ಲಿರುವವರ ಹೆಸರು ಗೋಪಾಲಿಕ ಅಂತರ್ಜನಂ..ಸಂಪ್ರದಾಯವಾದಿ ನಂಬೂದಿರಿ ಬ್ರಾಹ್ಮಣ ಕುಟುಂಬದ ಮಗಳು.
ಕಳೆದ 29 ವರ್ಷದಿಂದ ಮಲಪ್ಪುರಂ ಜಿಲ್ಲೆಯ ಸರಕಾರೀ ಶಾಲೆಯೊಂದರಲ್ಲಿ ಅರೇಬಿಕ್ ಶಿಕ್ಷಕಿ..
ಅನ್ಯಮತೀಯ ಅದ್ಯಾಪಕಿಗೆ ಮೊದಲು ಕರ್ಮಠರಿಂದ ವಿರೋಧ ವ್ಯಕ್ತವಾದರೂ ನಂತರ ಊರವರ , ವಿದ್ಯಾರ್ಥಿಗಳ ಹೆಮ್ಮೆಗೆ ಪಾತ್ರವಾದ ಈ ಅಧ್ಯಾಪಕಿಯನ್ನು ವಿಶ್ವ ಅರೇಬಿಕ್ ದಿನದಂದು ಮಲಪ್ಪುರಂ ಜಿಲ್ಲೆಯ ಸಮಸ್ತ ಮುಸ್ಲಿಂ ಸಂಘಟನೆಗಳು ಆದರಿಸಿ ಸನ್ಮಾನಿಸಿತ್ತು..

ಎರಡನೆಯ ಚಿತ್ರದಲ್ಲಿರುವವರು ಡಾ. ಫಿರೋಜ್ ಖಾನ್.
ತಾತ ಪ್ರಸಿದ್ಧ ಭಜನೆಕಾರ ಗಫೂರ್ ಖಾನರಿಂದ ತೊಡಗಿ ಸ್ವಯಂ ಸಂಸ್ಕೃತ ಅಭ್ಯಸಿಸಿದ್ದ ತಂದೆ ರಂಜಾನ್ ಖಾನ್ ರವರೆಗೆ ಸಂಸ್ಕೃತದ ಸೆಳೆತ ರಕ್ತದಲ್ಲೇ ಇದ್ದ ವಿದ್ಯಾರ್ಥಿ.

ಸಂಸ್ಕೃತ ಅಧ್ಯಯನದಲ್ಲಿ ಶಾಸ್ತ್ರಿ, ಶಿಕ್ಷಾ ಶಾಸ್ತ್ರಿ, ಆಚಾರ್ಯ ಅಧ್ಯಯನ ಮುಗಿಸಿ ಜೈಪುರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಪಿಹೆಚ್ ಡಿ ಪದವಿ ಪಡೆದ ಪ್ರತಿಭಾವಂತ.
ತನ್ನ ಅರ್ಹತೆಯ ಮೇರೆಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರೊಫೆಸರ್ ಆಗಿ ಆಯ್ಕೆಯಾದ ಫಿರೋಜ್ ಮುಸಲ್ಮಾನ ಎನ್ನುವ ಒಂದೇ ಕಾರಣಕ್ಕಾಗಿ ಅಲ್ಲಿಯ “ದೇಶಪ್ರೇಮಿ” ವಿದ್ಯಾರ್ಥಿಗಳ ವಿರೋಧದಿಂದಾಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡುವಂತಾಯಿತು…
ಮೊದಲನೆಯವರಿಗೆ ಸಮಾಜ, ಸಮುದಾಯ ಎರಡೂ ಸ್ವಾಗತಿಸಿ ಗೌರವಿಸಿದರೆ ಎರಡನೆಯವರು ಮೋದಿಜಿಯ ಸ್ವಂತ ಕ್ಷೇತ್ರದಲ್ಲೇ ಯಾರ ಸಹಕಾರವೂ ದೊರೆಯದೆ ತನ್ನ ಧರ್ಮದ ಕಾರಣದಿಂದ ಸೋಲೊಪ್ಪಿಕೊಂಡರು…

ವ್ಯತ್ಯಾಸ ಇಷ್ಟೇ.. ಮೊದಲನೆಯದು ನಡೆದದ್ದು ಕೇರಳದಲ್ಲಿ .. ಎರಡನೆಯದು ಯೋಗಿಯ ರಾಮರಾಜ್ಯದಲ್ಲಿ… ಎಂದು ಕಿಶನ್‌ ಕುಮಾರ್‌ ಹೆಗಡೆಯವರು ಪ್ರಸ್ತುತ ವಿದ್ಯಾಮಾನಕ್ಕೆ ಮೌಲಿಕ ಬೆಳಕು ಚೆಲ್ಲಿದ್ದಾರೆ.

ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಇನ್ನು “ಆಚಂಗಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ವನ್ನು ಮಡಿಬಟ್ಟೆಯಲ್ಲಿ ಸುತ್ತಿಟ್ಟಿದ್ದರೆ. ನಮಗೆ ಎಸ್.ಕೆ. ಕರೀಂಖಾನರಂತ ಮೇರು ವ್ಯಕ್ತಿಗಳು ದೊರೆಯುತ್ತಿರಲಿಲ್ಲ”

ತಾನು ಗಳಿಸಿದ ಜ್ಞಾನವನ್ಬು ಇತರರಿಗೆ ಹಂಚಲೇಬೇಕೆಂದು ಈ ನೆಲದಲ್ಲಿ ಕಾನೂನಿಲ್ಲ. ಆದರೆ ಅದು ಆಶಯ. ಸಂವಿಧಾನದ ಆಶಯ ಕೂಡಾ. ನಾರಾಯಣ ಶಾಸ್ತ್ರಿಯವರು ಕರೀಂಖಾನರಿಗೆ ಸಂಸ್ಕೃತ ಕಲಿಸಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ಇನ್ನೂ ಸಂವಿಧಾನ ರಚನೆಯೂ ಆಗಿರಲಿಲ್ಲ.

ನಾರಾಯಣ ಶಾಸ್ತ್ರಿಗಳ ನಡೆ ನಮ್ಮ ಪರಂಪರೆಯಾಗಬೇಕಿತ್ತು. ದುರಾದೃಷ್ಡವೆಂದರೆ ಅವರ ಮುಂದುವರಿಕೆಯಾಗಬೇಕಾದವರು ಮುಸ್ಲಿಮನಿಂದ ಸಂಸ್ಕೃತ ಕಲಿಯಲಾರೆವೆಂದು ಹೋಮ ಹವನ ಮಾಡುತ್ತ ಕುಳಿತಿದ್ದಾರೆ ” ಎಂದು ಪ್ರಸಾದ್ ರಕ್ಷಿದಿಯವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಂಸ್ಕೃತ ಕಲಿಸಲು ಮುಸ್ಲಿಂ ಪ್ರಾಧ್ಯಾಪಕರನ್ನು ನೇಮಿಸಿಕೊಂಡ ಬಂಗಾಳದ ರಾಮಕೃಷ್ಣ ಮಿಷನ್ ವಿದ್ಯಾಮಂದಿರ..

ಸಂಸ್ಕೃತದಿಂದ ಸಂಸ್ಕೃತಿ ಎಂಬ ಮಾತು ಅರ್ಥಹೀನ ಎಂಬುದಕ್ಕೆ ಬನಾರಸ್ ವಿಶ್ವವಿದ್ಯಾಲಯದ
ಈ ಅಸಂಸ್ಕೃತ ವಿದ್ಯಾರ್ಥಿಗಳೇ ಸಾಕ್ಷಿ. ಉರ್ದು ಜ್ಞಾನಪೀಠ ಪ್ರಶಸ್ತಿ‌ ಪುರಸ್ಕೃತರು
ಪ್ರೊ ಗೋಪಿಚಂದ್ ನಾರಂಗ್. ಭಾಷೆಗೂ ಮತಧರ್ಮಕ್ಕೂ ಸಂಬಂಧವಿಲ್ಲ. ವಿಶ್ವವಿದ್ಯಾನಿಲಯಗಳ ಜೊತೆ ಮತಧರ್ಮಗಳ ಹೆಸರುಗಳನ್ನು ಮೊದಲು ಕಿತ್ತೊಗೆಯಬೇಕು. ಅವು ಮತಧರ್ಮ ನಿರಪೇಕ್ಷತೆಗೆ ಸಲ್ಲುವುದಿಲ್ಲ. ಬನಾರಸ್ ಸಂಸ್ಕೃತ ವಿದ್ಯಾರ್ಥಿಗಳ ವರ್ತನೆ ಜಗತ್ತಿನ ಎದುರು ಭಾರತ ತಲೆತಗ್ಗಿಸುವಂತೆ ಮಾಡಿದೆ ಎಂದು ಪಂಡಿತಾರಾಧ್ಯ ಮೈಸೂರುರವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...