Homeನ್ಯಾಯ ಪಥಮೂರು ಡೇಟಾ ಮತ್ತು ಒಂದು ಖರೇ ಜನ್ಮಸ್ಥಾನ : ಬೈ ಡೇಟಾಮ್ಯಾಟಿಕ್ಸ್

ಮೂರು ಡೇಟಾ ಮತ್ತು ಒಂದು ಖರೇ ಜನ್ಮಸ್ಥಾನ : ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಒಂದು ಸಣ್ಣ ಪಕ್ಷಿಯ ಸಾವು ನಿನ್ನನ್ನು ಕವಿಯಾಗಿಸಿದೆ. ನಿನ್ನ ಕಾವ್ಯ ಕಾಲವನ್ನು ಸೋಲಿಸಲಿದೆ’ ಅಂತ ಬ್ರಹ್ಮ ವಾಲ್ಮೀಕಿಗೆ ಹೇಳಿದ. ಆ ಕಾವ್ಯವೇ ರಾಮಾಯಣ. ಅದರಲ್ಲಿ ರಾಜನ, ರಾಜಕುಮಾರನ, ಅವನ ಭಕ್ತನ, ರಾಜಕುಮಾರಿಯ, ಪ್ರತಿನಾಯಕನ, ಖಳನ, ಅವರೆಲ್ಲರ ಹಿಂಬಾಲಕರ ಕತಿ ಅದ.

ಆ ಕತಿ ಅತ್ಲಾ ಕಡೆ ಇರಲಿ. ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪಿನೊಳಗ ಉಪಯೋಗಿಸಿದ ಕೆಲವು ಪದಗಳ ಈಗ ನೋಡೋಣ.

ಪೊಸೆಷನ್ – ಅನುಭೋಗ, ಸ್ವಾಧೀನ, ಹಿಡುವಳಿ
ಹಿಡುವಳಿ ಅಂದರ ಮಾಲಿಕತ್ವ ಅಲ್ಲ. ಅದು ಸದ್ಯದ ಮಟ್ಟಿಗೆ ಆಸ್ತಿ ಯಾರ ಕೈಯಾಗ ಅದ ಅನ್ನೋ ಪ್ರಶ್ನೆಗೆ ಉತ್ತರ. ಇದು ಸಂಪೂರ್ಣ ಮಾಲಿಕಿ ಹಕ್ಕು ಕೊಡೋದಿಲ್ಲ. ಇದರ ಹಕ್ಕುಗಳಿಗೆ ಮಿತಿ ಅದ. ನೀವು ಸ್ವಾಧೀನ ಪಡೆಯುವಾಗ ಇದ್ದಂಗ ಅದು ಇರಬೇಕು. ಅದನ್ನು ನೀವು ಮಾರಲಿಕ್ಕೆ ಬರೋದಿಲ್ಲ, ಲೀಸು, ಬಾಡಿಗಿ ಕೊಡಲಿಕ್ಕೆ ಬರೋದಿಲ್ಲ. ಅದರ ಮೂಲ ಸ್ವರೂಪ ಬದಲಾಯಿಸಲಿಕ್ಕೆ ಬರೋದಿಲ್ಲ, ಇತ್ಯಾದಿ. ಸ್ವಾಧೀನ ಇದ್ದವರು ಬಿಟ್ಟು ಬೇರೆಯವರು ಅದನ್ನು ಕೆಡವಲಿಕ್ಕೆ, ನಾಶ ಮಾಡಲಿಕ್ಕೆ ಬರೋದಿಲ್ಲ.

ಪೊಸೆಷನ್ ಈಸ್ ನೈನ್ ಪಾಯಿಂಟ್ಸ್ ಇನ್ ಲಾ’ ಅಂತ ಒಂದು ಮಾತು ಅದ. ಅಂದರ ಆಸ್ತಿ ಯಾರಿಗೆ ಹೋಗಬೇಕು ಅನ್ನೋ ಮಾತು ಬಂದಾಗ ಸ್ವಾಧೀನ ಇದ್ದವರ ಕಡೆ ಹತ್ತರಲ್ಲಿ ಒಂಬತ್ತು ಅಂಶ ಇದ್ದಂಗ ಅಂತ ಅದರ ಅರ್ಥ.

ಆದರ ನಮ್ಮ ಗೌರವಾನ್ವಿತ ನ್ಯಾಯಾಧೀಶರು ಈ ಸಮುದಾಯ ಈ ಕಟ್ಟಡವನ್ನು ಐನೂರು ವರ್ಷದಿಂದ ಸ್ವಾಧೀನ ಪಡೆದಿದೆ ಅಂತ ಹೇಳಿ, ಅದನ್ನು ಕೆಡವಿದ್ದು ತಪ್ಪು ಅಂತ ಒಂದು ಕಡೆ ಹೇಳತಾರ. ಇನ್ನೊಂದು ಕಡೆ ಕೆಡವಿದರಿಗೆ ಈ ಜಾಗದ ಮಾಲಿಕತ್ವ ಹೋಗಬೇಕು ಅಂತ ಹೇಳತಾರ. ಅದು ಅವರಿಗೆ ಆಭಾಸ ಅನ್ನಿಸಿಲ್ಲ.

ಓನರಷಿಪ್ – ಒಡೆತನ, ಅಥವಾ ಮಾಲೀಕತ್ವ
ಇದು ಮಾಲೀಕ ಹಾಗೂ ವಸ್ತು ವಿಷಯದ ನಡುವಿನ ಸಂಬಂಧ. ಇದರ ಪ್ರಕಾರ ಮಾಲೀಕನಿಗೆ ಅದರ ಮೇಲೆ ಸಂಪೂರ್ಣ ಹಕ್ಕು ಇರತಾವ. ಅವನು ಅದನ್ನ ಮಾರಬಹುದು, ಲೀಸಿಗೆ ಕೊಡಬಹುದು, ಅದನ್ನು ಸುಟ್ಟು ಹಾಕಿಯೋ, ನೀರಿನಲ್ಲಿ ಹಾಕಿಯೋ ನಾಶ ಮಾಡಬಹುದು. ಅದನ್ನ ಕೆಡವಿ ಕಟ್ಟಬಹುದು. ಕೆಡವಿ ಕಟ್ಟಲಾರದೇ ಇರಬಹುದು. ಅದರ ಸ್ವರೂಪ ಬದಲಿಸಬಹುದು. ಅದನ್ನು ಇಲ್ಲಾ ಅನ್ನಿಸಿ ಬಿಡಬಹುದು. ಅವನ ಹಕ್ಕುಗಳಿಗೆ ಮಿತಿ ಇಲ್ಲ. ಅಯೋಧ್ಯಾ ಕೇಸಿನಲ್ಲಿ ನ್ಯಾಯಾಲಯದ ಮುಂದೆ ಇದ್ದದ್ದು ಮಾಲೀಕತ್ವದ ಪ್ರಶ್ನೆ ಅಷ್ಟ. ಅದರ ಮಾಲೀಕರು ಯಾರು ಅನ್ನೋದು ಗೊತ್ತಾದರ ಹೇಳಬೇಕಿತ್ತು. ಇಲ್ಲಾಂದರ ಇಲ್ಲಾ ಅನ್ನಬೇಕಿತ್ತು. ಅದನ್ನು ಬಿಟ್ಟು

ಅಲ್ಲಿ ಗುಡಿ ಕಟ್ಟಬಹುದು, ಆ ಮಸೀದಿ ಕೆಡವಿದ್ದು ತಪ್ಪು. ಅದು ನಮ್ಮ ಜಾಗ ಅಂತ ಕೇಳತಾ ಇರೋ ನಮಾಜಿಗರಿಗೆ ಅದರ ಡಬಲ್ ಜಾಗ ಕೊಟ್ಟು ಬಿಡಿ ಅಂತ ಹೇಳುವ ಹರಕತ್ತು ಇದ್ದಿದ್ದಿಲ್ಲ. ಇದು ತನ್ನಳವಿಗೆ ಮೀರಿದ ತೀರ್ಪು ಅಂತ ಅದನ್ನು ಕೊಟ್ಟವರಿಗೆ ಅನ್ನಿಸಿಲ್ಲ.

ಬ್ಯಾಲೆನ್ಸ ಆಫ್ ಪ್ರಾಬೆಬಿಲಿಟಿಸ್ – ಸಾಧ್ಯಾಸಾಧ್ಯತೆಗಳ ಸಮತೋಲನ
ಇದು ಅತ್ಯಂತ ಮಜಾಶೀರ ಇರೋ ವಿಷಯ. ಅನೇಕ ವರ್ಷದ ಹಿಂದ ಆಸ್ಟೇಲಿಯಾದೊಳಗ ಬ್ರೂಕ್ಸ ಅನ್ನೋ ಹೆಣಮಗಳ ಗಂಡ ರಸ್ತೆ ಅಪಘಾತದೊಳಗ ತೀರಿಕೊಂಡ. ಅವನು ಆ ಗಾಡಿಯ ಚಾಲಕ. ಅವನಲ್ಲದೇ ಆ ಗಾಡಿಗೆ ಇನ್ನೊಬ್ಬ ಚಾಲಕ ಇದ್ದ. ಅವರಿಬ್ಬರೂ ಸತ್ತು ಹೋದರು. ಅಲ್ಲಿ ಸಾಕ್ಷಿ ಇರಲಿಲ್ಲ. ರಸ್ತೆ ಸೀದಾ ಇತ್ತು. ಅಲ್ಲಿ ಇನ್ನೊಂದು ಗಾಡಿ ಇರಲಿಲ್ಲ. ಹೀಗಿದ್ದಾಗ ತಪ್ಪು ಯಾವ ಚಾಲಕಂದು ಅಂತ ತಿಳಕೊಳ್ಳೋದು ಅಲ್ಲಿನ ನ್ಯಾಯಾಲಯಕ್ಕ ಕಷ್ಟ ಆತು. ಕೊನೆಗೆ ಜಜ್ಜುಗಳೆಲ್ಲಾ ಸೇರಿ ಒಬ್ಬ ಗಣಿತ ತಜ್ಞನ ಕಡೆ ಹೋದರು. ಅವನು ಸಾಧ್ಯಾಸಾಧ್ಯತೆಗಳ ಸಮತೋಲನ ಅನ್ನೋ ಸಂಕಲನ ಬಳಸಿ ಅವರಿಗೆ ವೆನ್ ಡಯಾಗ್ರಾಮು ಹಾಕಿ ತೋರಿಸಿದ.

ಅದರ ಪ್ರಕಾರ ಸಾಕ್ಷಿಗಳು ಕಮ್ಮಿ ಇದ್ದಾಗ, ಲಭ್ಯ ಸಾಕ್ಷಿಗಳಿಂದ ಯಾವುದೇ ವಿಷಯವನ್ನು ನಿಸ್ಸಂದೇಹವಾಗಿ ಪ್ರಮಾಣಿಸಿ ತೋರಿಸಿಲಿಕ್ಕೆ ಸಾಧ್ಯವಾಗದೇ ಇದ್ದಾಗ, ಇದು ಹೀಗಾಗುವ ಸಾಧ್ಯತೆ ಹೆಚ್ಚು, ಹಾಗಾಗುವ ಸಾಧ್ಯತೆ ಕಮ್ಮಿ ಅಂತ ನ್ಯಾಯಾಧೀಶರಿಗೆ ಅನ್ನಿಸಬಹುದು. ಹೀಗೆ ಅವರಿಗೆ ಅನ್ನಿಸುವುದ ಆಧಾರದ ಮೇಲೆ ಅವರು ತೀರ್ಪು ಕೊಡಬಹುದು. ಈಗಾಗಿರೋದು ಹಿಂಗನ. ಈ ತೀರ್ಪು ಸಮಾಜದಲ್ಲಿ ಸಮತೋಲನ ತಂದೀತು ಅಂತ ಭಾಳ ಮಂದಿಗೆ ಅನ್ನಿಸಿದ್ದಕ್ಕ ಎಲ್ಲಾರೂ ಸುಮ್ಮನಿದ್ದಾರ. ಆ ಸಮತೋಲನ ಶಾಂತಿ ಸುವ್ಯವಸ್ಥೆಯ ಸಮತೋಲನವೋ ಅಥವಾ ಸತ್ಯಾಸತ್ಯತೆಯ ಸಮತೋಲನವೋ ಅನ್ನೋ ಪ್ರಶ್ನೆಗೆ ಯಾರ ಹತ್ತರಾನೂ ಉತ್ತರ ಇದ್ದಂಗಿಲ್ಲ.

ಹಿಂದೊಮ್ಮೆ ಸಾಯಿಬಾಬಾ ಅವರ ಭೇಟಿಗೆ ಲಾಲಕೃಷ್ಣ ಅದವಾನಿ ಹಾಗೂ ಕೆಲವು ಇತರ ಮುಖಂಡರು ಪುಟಪರ್ತಿಗೆ ಹೋಗಿದ್ದರಂತ. ಆಗ ಅವರು ಇವರನ್ನ ಕೇಳಿದರಂತೆ. ರಾಮನ ಜನ್ಮಸ್ಥಾನ ಯಾವುದು? ಅಲ್ಲಿದ್ದ ದೊಡ್ಡ ದೊಡ್ಡ ನಾಯಕರೆಲ್ಲಾ ಅಯೋಧ್ಯೆ, ಕೌಸಲ, ರಾಮಜನ್ಮಭೂಮಿ ಅಂತೆಲ್ಲಾ ಹೇಳಿದರಂತ. ಯಾವಾಗಲೂ ಹಸನ್ಮುಖಿಯಾಗಿದ್ದ ಸಾಯಿಬಾಬಾ ಅವರು ಅದೆಲ್ಲಾ ಅಲ್ಲಾ. ಅವನು ಹುಟ್ಟಿದ್ದು ಅವನ ತಾಯಿಯ ಗರ್ಭದಿಂದ ಅಲ್ಲವೇ. ಹಂಗಾದರೆ ಅದೇ ಅವನ ಜನ್ಮಸ್ಥಳ ಅಂತ ಹೇಳಿ ನಕ್ಕರಂತೆ. ಹೌದು ಮಹಾಸ್ವಾಮಿ ಅಂತ ಹೇಳಿ ಇವರೆಲ್ಲಾ ನಕ್ಕು ಸುಮ್ಮನಾದರಂತೆ.

ದೊಡ್ಡವರ ಮಾತುಗಳನ್ನು ಕೇಳದೇ ಇದ್ದದ್ದಕ್ಕ ನಾವು ಇವತ್ತು ಈ ದಿನ ಕಾಣುತ್ತಿದ್ದೇವೆ ಅಂತ ಅನಸತದ.

ಹೆಚ್ಚಿನ ಮಾಹಿತಿಗೆ https://www.sci.gov.in/pdf/JUD_2.pdf

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...