Homeಕರ್ನಾಟಕವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ

ವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ

ತುಮಕೂರು ಕ್ಯಾತ್ಸಂದ್ರದ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ರಾಶಿ ರಾಶಿ ಕಾಂಡೋಮ್‌ಗಳ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದು ಬಯಲಿಗೆ ಬಂದಿದೆ.

- Advertisement -
- Advertisement -

ತುಮಕೂರು ಜಿಲ್ಲೆ ಕ್ಯಾತ್ಸಂದ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದೆರಡು ವಾರಗಳ ಹಿಂದೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ರಾಶಿ ರಾಶಿ ಕಾಂಡೋಮ್‌ಗಳ ವಿಚಾರ ಜನರಲ್ಲಿ ಗೊಂದಲ ಮೂಡಿಸಿತ್ತು. ಇದು ನಗರದಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆಯ ಪರಿಣಾಮ ಎಂದು ಇದೀಗ ತಿಳಿದುಬಂದಿದೆ.

ಕ್ಯಾತ್ಸಂದ್ರದ ನಂದಿ ಡಿಲೆಕ್ಸ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಕಾರ್ಯಕರ್ತರು ಮತ್ತು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಕೆ.ವಿ.ಸ್ಟ್ಯಾನ್ಲಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಐವರು ಪಿಂಪ್‌ಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

“ಇಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಹೊಸದಲ್ಲ. ತುಂಬಾ ವರ್ಷಗಳಿಂದಲೂ ನಡೆಯುತ್ತಿದೆ. ಇವೆಲ್ಲ ಸಂಘಟಿತ ಅಪರಾಧಗಳು. ತಮ್ಮ ಸುತ್ತಮುತ್ತ ಇಂತಹ ದಂಧೆ ನಡೆಯುತ್ತಿದೆ ಎಂದು ತಿಳಿಯದ ಅಮಾಯಕ ಸಮಾಜ ಇದಲ್ಲ. ಮಾಧ್ಯಮ, ಪೊಲೀಸರು, ಸಂಘಟನೆ ನಡೆಸುವವರು, ಲಾಯರ್‌ಗಳು ಎಲ್ಲರೂ ಇದರೊಳಗೆ ಇರ್ತಾರೆ” ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳುತ್ತಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೊ ಮಾಡಿ ಹರಿಬಿಟ್ಟ ಆರೋಪಿಗಳು

ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು ನಾನುಗೌರಿ.ಕಾಂ ಜೊತೆ ತುಮಕೂರಿನಲ್ಲಿನ ನಡೆದ ದಾಳಿ ಬಗ್ಗೆ ಮಾತನಾಡಿದ್ದಾರೆ.

“ಕಳೆದೆರಡು ವಾರಗಳ ಹಿಂದೆ ಕ್ಯಾತ್ಸಂದ್ರ-ಬಟವಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಂಡೋಮ್ ಪ್ರಕರಣದಿಂದ ಇಲ್ಲಿನ ವೇಶ್ಯಾವಾಟಿಕೆ ಬಗ್ಗೆ ಸುಳಿವು ದೊರೆಯಿತು. ಇದೇ ಗುಮಾನಿಯಲ್ಲಿ ತಳ ಮಟ್ಟದಲ್ಲಿ ತನಿಖೆ ನಡೆಸಿದದೆವು. ಇಲ್ಲಿಗೆ 2-3 ಬಾರಿ ಬಂದು ಪರೀಕ್ಷಿಸಿದೆವು. ಇಂದು (ಮಂಗಳವಾರ) ಖಚಿತ ಮಾಹಿತಿ  ಮೇರೆಗೆ ಪೊಲೀಸರೊಂದಿಗೆ ದಾಳಿ ನಡೆಸಿದ್ದೇವೆ” ಎಂದರು.

“ತುಮಕೂರು ರಾಷ್ಟ್ರೀಯ ಹೆದ್ದಾರಿಯು ಬೆಂಗಳೂರು, ಮಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಲಿಂಕ್ ಮಾಡುವ ಜಾಗ. ಹೇವಿ ಟ್ರಕ್‌ಗಳು ಇಲ್ಲಿ ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಬೇರೆ. ಹೀಗಾಗಿ ಇಲ್ಲಿ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು, ಶೋಷಿಸಿ ವ್ಯಾಪಾರ ಮಾಡುತ್ತಾರೆ. ಹಲವು ವರ್ಷಗಳಿಂದ ಇದು ಇದೆ. ಇದೊಂದು ದೊಡ್ಡ ದಂಧೆ ಇದು” ಎಂದರು.

“ಹಣ ಸಂಪಾದನೆಗೆ ಹೆಣ್ಣು ಮಕ್ಕಳನ್ನು ಬಳಸುವುದು, ಅವರ ಮೂಲಕ ಹಣ ಸಂಪಾದಿಸುವುದು ಅಮಾನವೀಯ. ಒಬ್ಬೊಬ್ಬ ಹೆಣ್ಣು ಮಕ್ಕಳು ಪ್ರತಿದಿನ 10, 15, 18 ಗಂಡಸರನ್ನು ನಿಭಾಯಿಸಬೇಕು. ಇದಕ್ಕಾಗಿ ಇವರನ್ನು ಹಿಂಸೆಗೆ ನೂಕಲಾಗುತ್ತದೆ. ಹೆದರಿಸಿ, ಬೆದರಿಸಿ ಇಂತಹ ಮಾನಸಿಕ ಸ್ಥಿತಿಯನ್ನು ಮಹಿಳೆಯರಲ್ಲಿ ಸೃಷ್ಟಿಸುತ್ತಾರೆ. ವಿಳಾಸವಿಲ್ಲದ ಉತ್ತರ ಭಾರತ, ಬಾಂಗ್ಲಾದ ಮಹಿಳೆಯರನ್ನು ಇಂತಹ ಕೆಲಸಗಳಿಗೆ ಬಳಸಲಾಗುತ್ತದೆ” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ನಿಲ್ಲಬೇಕು, ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು: ಸೈಕ್ಲಿಂಗ್ ಜಾಗೃತಿ ಮೂಡಿಸುತ್ತಿರುವ ಕಿರಣ್

“ರಾಜ್ಯದಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಡಗುದಾಣಗಳನ್ನು ನಿರ್ಮಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಇದು ಮುಂಬೈ ಮಾದರಿಯ ವೇಶ್ಯಾವಾಟಿಕೆ. ಇದನ್ನು ಒಡನಾಡಿ ಸಂಸ್ಥೆ 15 ವರ್ಷಗಳ ಹಿಂದೆ ಕಂಡು ಹಿಡಿದಿತ್ತು. ದಾಳಿ ನಡೆಯುವಾಗ ಇಲ್ಲಿ ಅಡಗುದಾಣ ಇದೆ ಎಂಬುದು ತಿಳಿಯುವುದು ಇಲ್ಲ. ಅವರ ಮಾಹಿತಿದಾರರು ಹಲವು ಕಡೆಗಳಲ್ಲಿ ಇರುತ್ತಾರೆ. ಪೊಲೀಸರು, ನಾವುಗಳು ದಾಳಿಗೆ ಹೋಗುತ್ತಿರುವ ಮಾಹಿತಿ ದಂಧೆ ನಡೆಸುವವರಿಗೆ ಬೇಗನೆ ತಿಳಿದುಬಿಡುತ್ತದೆ. ನಮ್ಮ ಚಲನವಲನಗಳನ್ನು ಈ ಇವರು ಗಮನಿಸುತ್ತಿರುತ್ತಾರೆ. ಮಾಧ್ಯಮ, ಪೊಲೀಸರು, ಸಂಘಟನೆ ನಡೆಸುವವರು, ಲಾಯರ್‌ಗಳು ಎಲ್ಲರೂ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ” ಎಂದರು.

ಸ್ಟ್ಯಾನ್ಲಿ ಅವರು ತುಮಕೂರಿನ ವಿಚಾರದ ಬಗ್ಗೆ ವಿವರಸಿದ್ದು ಹೀಗೆ, “ಕಾಂಡೋಮ್‌ಗಳ ಸುದ್ದಿಯಿಂದ ನಾವು ಇದರ ಜಾಡು ಹಿಡಿದೆವು. ಕ್ಯಾತ್ಸಂದ್ರದ ನಂದಿ ಲಾಡ್ಜ್‌, ನಾಲ್ಕು ಅಂತಸ್ತಿನ ಕಟ್ಟಡ. ಉಳಿಯಲು ಅಷ್ಟು ಯೋಗ್ಯವಲ್ಲದ ಅದು, ಹಣ ಮುದ್ರಿಸುವ ಟಂಕಸಾಲೆಯಾಗಿದೆ. ಒಂದು ರೂಮ್‌ನಿಂದ ದಿನಕ್ಕೆ 10, 20 ಸಾವಿರಕ್ಕೂ ಹೆಚ್ಚು ಗಳಿಸುತ್ತಾರೆ. ರೂಮ್‌ಗಳನ್ನು ಮಾರ್ಪಡಿಸಿದ್ದಾರೆ. ಲಾಡ್ಜ್‌ನ ಮೂರನೇ ಮಹಡಿಯಲ್ಲಿ ಒಂದು ಗೇಟ್ ಇದೆ ಅದನ್ನು ಕ್ಲೋಸ್ ಮಾಡಿ, ಅಲ್ಲಿರುವ ಎಲ್ಲಾ ಹುಡುಗಿರನ್ನು ಮೊದಲೇ ರಚನೆ ಮಾಡಿರುವ ಅಡಗುದಾಣಗಳಲ್ಲಿ ಬಚ್ಚಿಡಲಾಗುತ್ತದೆ. ಈ ಅಡಗುದಾಣಗಳು ವಿಚಿತ್ರವಾಗಿರುತ್ತವೆ. ಕಬೋರ್ಡ್, ಟಿವಿಯ ಹಿಂದೆ, ಡ್ರೈನೇಜ್‌ನಲ್ಲಿಯೂ ಅಡಗುದಾಣಗಳು ಇರುತ್ತವೆ. ಇವುಗಳನ್ನ ಒಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ರಿಸ್ಕ್ ತೆಗೆದುಕೊಳ್ಳಬೇಕು ಅಷ್ಟೆ. ಇಲ್ಲಿ ಒಂದು ಟೇಬಲ್‌ ತರಹದ ರಚನೆಯಲ್ಲಿ ಅಡಗುದಾಣವಿತ್ತು. ಸದ್ಯ ಪೊಲಿಸರು ಐವರು ಪಿಂಪ್‌ಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಒಬ್ಬ ಮಹಿಳೆಯನ್ನು ಪಿಂಪ್‌ಗಳು ಆಟೋದಲ್ಲಿ ಕರೆದುಕೊಂಡು ಪರಾರಿಯಾಗಿದ್ದಾರೆ” ಎಂದರು.

“ಇಂದು ಸಿಕ್ಕಿಹಾಕಿಕೊಂಡವರಲ್ಲಿ ಇಬ್ಬರನ್ನು ಈ ಮೊದಲು ಅರೆಸ್ಟ್ ಮಾಡಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದು ಮತ್ತೆ ಇದೆ ಕೆಲಸದಲ್ಲಿ ತೊಡಗುತ್ತಾರೆ. ಇವರಿಗೆ ಭಯ, ಮುಜುಗುರ ಇಲ್ಲ. ಇವರಿಗಾಗಿ ಒಂದು ಸಪೋರ್ಟ್ ಸಿಸ್ಟಮ್ ಇದೆ. ಎಲ್ಲರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಸಂಘಟಿತ ಅಪರಾಧ. ಇದಕ್ಕೆ ಐಟಿಪಿಎ ಸೆಕ್ಷನ್ ಸಾಕಾಗುವುದಿಲ್ಲ. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 (KCOCA Act, 2000) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇದನ್ನು ಕೆಲವೇ ಕೆಲವು ಅಧಿಕಾರಿಗಳು ಬಳಸಿದ್ದಾರೆ. ರಾಜ್ಯದಲ್ಲಿ ವೇಶ್ಯಾವಾಟಿಕೆ ನೆಟ್‌ವರ್ಕ್ ದೊಡ್ಡ ಕ್ಯಾನ್ಸರ್‌ ತರ ಬೆಳೆದಿದೆ. ಮನಸ್ಸು ಮಾಡಿದರೆ ಈ ಜಾಲವನ್ನು ಹಿಡಿಯಬಹುದು” ಎಂದು ಸ್ಟ್ಯಾನ್ಲಿ ಅಭಿಪ್ರಾಯ ಪಟ್ಟರು.

ಹೆಣ್ಣು ಮಕ್ಕಳ ಜೀವನದಲ್ಲಿ ದೌರ್ಜನ್ಯ ನಡೆಸುವ ಈ ಪಿಂಪ್‌ಗಳು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. “ಒಬ್ಬೊಬ್ಬ ಕಿಂಗ್ ಪಿಂಪ್ 150, 175 ಕೋಟಿ ಬೆಲೆ ಬಾಳುತ್ತಾರೆ. ಇವರು ಮುಂದೊಂದು ದಿನ ನಮ್ಮನ್ನು ಆಳುವವರಾಗುತ್ತಾರೆ. ಮಂಗಳೂರಿನಲ್ಲಿ ಒಬ್ಬ ಪಿಂಪ್ 175 ಕೋಟಿ ಬೆಲೆ ಬಾಳುತ್ತಾನೆ. ಆತ ಎಂಎಲ್‌ಎ ಆಗಲು ಕೂಡ ಪ್ರಯತ್ನಿಸಿದ್ದ. ಇನ್ನೊಬ್ಬ ಬೆಂಗಳೂರಿನ ಪಿಂಪ್ ರಾಜಕಾರಣಿಯ ಆಶ್ರಯದಲ್ಲಿದ್ದಾನೆ. ಇವರೆಲ್ಲಾ ತುಂಬಾ ಅಪಾಯಕಾರಿ. ನಮಗೆ ಜನರ ಬೆಂಬಲ ಇರೋದ್ರಿಂದ ನಾವು ಈ ಕೆಲಸದಲ್ಲಿ ಮುಂದುವರೆಯತ್ತಿದ್ದೇವೆ” ಎಂದರು.

ಮುಂದುವರಿದು, “ಇಂತಹ ಅಡಗುತಾಣಗಳನ್ನು ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ನಾಶಗೊಳಿಸಲು, ಕೆಡವಲು ಈಗಾಗಲೇ ಆದೇಶವಿದೆ. ಕಟ್ಟಡಗಳನ್ನು ಕೆಡವಿ, ತನಿಖೆ ನಡೆಸಲ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ. ಎಲ್ಲ ಅಧಿಕಾರಿಗಳ ಬಗ್ಗೆ ಇದರ ಆರ್ಡರ್ ಕಾಪಿ ಇದೆ ಕ್ರಮ ಕೈಗೊಳ್ಳಬೇಕು ಅಷ್ಟೆ. ಒಂದೇ ಜಾಗದಲ್ಲಿ ಪುನರಾವರ್ತಿತ ಅಪರಾಧಗಳು ಮತ್ತು ಕಟ್ಟಡದ ನಕ್ಷೆ ಬದಲಿಸಿದ ಆರೋಪ ಸೇರಿ ಹಲವು ಅಪರಾಧಗಳಿಗೆ ಕಾರಣವಾಗುತ್ತದೆ. ಹಾಗಾಗಿ ಇದಕ್ಕೆ ಇರುವ ಕಾನೂನು ಬಳಸಿ ತೀವ್ರವಾದ  ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರನ್ನು ಮಾನವೀಯ ನೆಲೆಯಲ್ಲಿ ನೋಡಬೇಕು” ಎಂದರು.

ಮೈಸೂರಿನ ಒಡನಾಡಿ… ಒಂದು ಸಾಮಾಜಿಕ, ಸರ್ಕಾರೇತರ ಸಂಸ್ಥೆ. ಈ ಸಂಸ್ಥೆ ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ, ಇತ್ಯಾದಿ ಕೆಲಸಗಳನ್ನು ಮಾಡುತ್ತಿದೆ. ಈ ಸಂಸ್ಥೆಯನ್ನು 1984ರಲ್ಲಿ ಕೆ. ವಿ ಸ್ಟಾನ್ಲಿ ಮತ್ತು ಎಂ. ಎಲ್. ಪರಶುರಾಮ ಅವರು ಪ್ರಾರಂಭಿಸಿದರು. ಅದನ್ನು 1993 ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಾಯಿಸಲಾಗಿದೆ.


ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ – ಸಂಪೂರ್ಣ ವಿವರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...