Homeಮುಖಪುಟಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

ಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

- Advertisement -
- Advertisement -

ದೇಶಭಕ್ತಿ ತೋರಿಕೆಯದಲ್ಲ. ಅದನ್ನು ಬಹಿರಂಗವಾಗಿ ತೋರಿಸಬೇಕಾಗಿಯೂ ಇಲ್ಲ. ದೇಶಭಕ್ತಿ ವ್ಯಾಪಾರದ ಲಾಭಗಳಿಸುವ ಸರಕೂ ಅಲ್ಲ. ಅದು ಹೃದಯದಲ್ಲಿರಬೇಕು. ಸಂದರ್ಭ ಬಂದಾಗ ಅದಾಗಿ ತೆರೆದುಕೊಳ್ಳಬೇಕು. ಆದರೆ ಕೆಲವೊಂದು ವ್ಯಕ್ತಿ-ಸಂಘಟನೆಗಳು ಸಂಕೇತಗಳನ್ನು ಕೈಯಲ್ಲಿಡಿದು ದೇಶಭಕ್ತಿ ಇದೇ ಎಂದು ಕೂಗಿ ಹೇಳುತ್ತಿರುವ ಹೊತ್ತಿನಲ್ಲಿ ನಿಜದ ದೇಶಭಕ್ತಿ ಹೇಗಿರಬೇಕು ಎಂಬುದಕ್ಕೆ ಈತ ಸಾಕ್ಷಿಯಾಗಿದ್ದಾನೆ. ದೇಶವೆಂದರೆ ಗಡಿ ಮಾತ್ರವಲ್ಲ. ಅದರೊಳಗಿರುವ ಜನರಿಗೆ ತನ್ನಿಂದ ತೊಂದರೆಯಾಗುವುದಾದರೆ, ಸಂಕಷ್ಟ ಬರುವುದಾದರೆ ನಾನು ಅಲ್ಲಿಗೆ ಹೋಗಬಾರದು ಎಂಬ ದೃಢವಾದ ತೀರ್ಮಾನ ಕೈಗೊಳ್ಳುವುದು. ದೇಶ ಜನರ ಪರವಾಗಿ ಹೋರಾಡುವುದು ಎಂಬುದನ್ನು ಸಾಹಿಲ್ ಹುಸೇನ್ ಸಾಧಿಸಿ ತೋರಿದ್ದಾರೆ. ಅವರು ತೆಗೆದುಕೊಂಡಿರುವ ಕ್ರಮ ತನ್ನ ಕುಟುಂಬಕ್ಕೆ ನೋವಾದರೂ ದೇಶಕ್ಕೆ ಹಿತಬಯಸುವುದಾಗಿದೆ. ಇದೇ ನಿಜವಾದ ದೇಶಭಕ್ತಿ.

ಹೌದು, ತುಮಕೂರಿನ ಶಿಕ್ಷಕ ರಿಜ್ಞಾನ್ ಪಾಷಾ ಮತ್ತು ಸಮೀನಾ ಖಾನಂ ದಂಪತಿಯ ಎರಡನೇ ಪುತ್ರ ಸಾಹಿಲ್ ಹುಸೇನ್ ತಾನು ತೆಗೆದುಕೊಂಡು ನಿರ್ಧಾರದಿಂದ ನಕಲಿ ದೇಶಭಕ್ತರಿಗೆ ಮಾದರಿಯಾಗಿದ್ದಾರೆ. ದೇಶಭಕ್ತಿ ಕೂಗುವುದಲ್ಲ, ಸಂದರ್ಭ ಬಂದಾಗ ಮೆರೆಯುವುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾನಿರುವ ಸ್ಥಳದಿಂದ ತನ್ನ ದೇಶಕ್ಕೆ ಬಂದರೆ ಜನರು ಬಾಧಿತರಾಗುತ್ತಾರೆಂಬ ಸಾಹಿಲ್ ಹುಸೇನ್ ತಿಳುವಳಿಕೆ ಮೆಚ್ಚುವಂತಹದ್ದು. ಚಿಕ್ಕ ವಯಸ್ಸಿಗೆ ಇಂತಹ ತೀರ್ಮಾನ ಕೈಗೊಂಡಿರುವುದು ಆತನ ತಂದೆ-ತಾಯಿಗಳಲ್ಲಿ ಮಗನ ಬಗ್ಗೆ ಅಭಿಮಾನ ಉಕ್ಕಿ ಬಂದಿದೆ.

ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಕರ್ನಾಟಕದಿಂದ ಚೀನಾದ ವಾಸ್ಲಿ ಡಿಸ್ಟ್ರಿಕ್ ನಾನ್ ಚೆಂಗ್ ಪ್ರಾವಿನ್ಸ್ ಗೆ 5 ಮಂದಿ ಸ್ನೇಹಿತರು ತೆರಳುತ್ತಾರೆ. ಈ ಐವರಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಸೇರಿರುತ್ತಾರೆ. ನಾಬ್ ಆಫ್ರಿನ್, ಅರುಣ್ ಕುಮಾರ್, ಲೋಕೇಶ್ ಮತ್ತು ತುಮಕೂರಿನಿಂದ ಸಾಹಿಲ್ ಹುಸೇನ್ ಜಿಯಾಂಗ್ ಯೂನಿವರ್ ಸಿಟಿ ಆಫ್ ಚೈನೀಸ್ ಟ್ರೆಡಿಷನ್ಸ್ ಮೆಡಿಸನ್ ವಿವಿಗೆ ಎಂಬಿಬಿಎಸ್ ಓದಲು ಹೋಗುತ್ತಾರೆ. ಈಗ ಅವರೆಲ್ಲರೂ 6ನೇ ಸೆಮಿಸ್ಟರ್ ಓದುತ್ತಿದ್ದಾರೆ. ಆದರೆ ಚೀನಾದಲ್ಲಿ ಕರೋನಾ ವೈರಸ್ ದಾಳಿ ಇಡುತ್ತಿದ್ದಂತೆಯೇ ವಿವಿಗೆ ರಜೆ ಘೋಷಿಸಲಾಗುತ್ತದೆ. ತನ್ನ ತವರು ದೇಶಗಳಿಗೆ ತೆರಳುವಂತೆ ಸೂಚಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಎಂಬಿಬಿಎಸ್ ವ್ಯಾಸಂಗಕ್ಕೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅವರ ಪೋಷಕರು ಕೂಡಲೇ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಾರೆ. ಕೊರೋನ ವೈರಸ್ ಇಡೀ ಚೀನಾವನ್ನೇ ಬಾಧಿಸುತ್ತಿರುವಾಗ ಸಾಹಿಲ್ ಹುಸೇನ್ ತನ್ನ ತವರಿಗೆ ಹೋಗದೇ ಇರಲು ತೀರ್ಮಾನಿಸುತ್ತಾರೆ. ಎಲ್ಲಾ ಪೋಷಕರಂತೆ ರಿಜ್ವನ್ ಪಾಷಾ ಅವರು ಕೂಡ ತನ್ನ ಮಗನಿಗೆ ಪೋನ್ ಮಾಡಿ ತುಮಕೂರಿಗೆ ವಾಪಸ್ ಆಗುವಂತೆ ಕೇಳಿಕೊಳ್ಳುತ್ತಾರೆ. ಆಗ ಸಾಹಿಲ್ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಇದರಿಂದ ರಿಜ್ವನ್ ಪಾಷ ಅವರು ಅದಕ್ಕೆ ತಲೆದೂಗುತ್ತಾರೆ.

ತಂದೆ ರಿಜ್ವಾನ್ ಪಾಷ ಅವರಿಗೆ ಮಗ ಸಾಹಿಲ್ ಕಳಿಸಿರುವ ವಿಡಿಯೋದಲ್ಲಿ ಹೇಳಿರುವಂತೆ “ನಾನು ಇಲ್ಲಿ ಚನ್ನಾಗಿಯೇ ಇದ್ದೇನೆ. ಚೀನಾ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯವೂ ನಮಗೆ ಬೆಂಬಲಕ್ಕೆ ನಿಂತಿದೆ. ನೀವು ಹೆದರಬೇಡಿ. ನಾನು ದೇಶಕ್ಕೆ ಬರಬೇಕಾದರೆ ಮೂರು ವಿಮಾನಗಳನ್ನು ಬದಲಿಸಿ ಬರಬೇಕು. ಇದರಿಂದ ನಾನು ಭಾರತಕ್ಕೆ ಬಂದರೆ ಅಲ್ಲಿಗೂ ಕೊರೋನ ವೈರಸ್ ಹರಡುತ್ತದೆ. ಹಾಗಾಗಿ ನಾನು ಬರುವುದಿಲ್ಲ. ನೀವು ಭಯಬೀಳಬೇಡಿ”  ಎಂದು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಕ ರಿಜ್ವಾನ್ ಪಾಷ, ನಾನು ಮಗನಿಗೆ ಪೋನ್ ಮಾಡಿದೆ. ಬೇಗ ಚೀನಾ ಬಿಟ್ಟುಬರುವಂತೆ ಹೇಳಿದೆ. ಆದರೆ ಮಗ ಬರುವುದಿಲ್ಲ ಹೇಳಿದ. ನಾನು ಇರುವ ಜಾಗದಿಂದ ಬ್ಯಾಂಕಾಕ್‌ಗೆ ಬರಬೇಕು. ಅಲ್ಲಿಂದ ದೆಹಲಿ ಅಥವಾ ಮುಂಬೈಗೆ ಬರಬೇಕು. ನಾನು ದೇಶಕ್ಕೆ ಬಂದರೆ ತೊಂದರೆಯಾಗಬಹುದು. ಹಾಗಾಗಿ ನಾನು ಬರುತ್ತಿಲ್ಲ. ಇಲ್ಲಿ ನಾನು ಚೆನ್ನಾಗಿಯೇ ಇದ್ದೇನೆ. ನೀವು ಆರಾಮವಾಗಿರಿ ಎಂದು ಹೇಳಿದ. ನನಗೆ ಮಗನ ಬಗ್ಗೆ ಅಭಿಮಾನ ಉಕ್ಕಿಬಂತು. ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ತಿಳುವಳಿಕೆ ಇದೆ. ದೇಶದ ಬಗ್ಗೆ ಆತನಿಗಿರುವ ಅಭಿಮಾನ ಕಂಡು ನನ್ನ ಕಣ್ಣು ನೀರಾಡಿತು. ಒಳ್ಳೆಯ ಮಗನನ್ನು ಪಡೆದಿದ್ದೇನೆ. ಆಯ್ತು ಚನ್ನಾಗಿರು ಎಂದು ಹೇಳಿದೆ ಎಂದು ತಿಳಿಸಿದರು.

ಈಗ ಚೀನಾದಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಸಾವಿರಾರು ಮಂದಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ನರಳುತ್ತಿದ್ದಾರೆ. ಕೊರೋನ ಸೋಂಕು ಇಡೀ ವಿಶ್ವಕ್ಕೆ ಹಬ್ಬುತ್ತಿದೆ. ಭಾರತದಲ್ಲೂ ಸುಮಾರು 80ಕ್ಕೂ ಹೆಚ್ಚು ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ ಆಗಿವೆ. ಜನರು ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ತಾನು ಚೀನಾದಲ್ಲಿಯೇ ಇರುತ್ತೇನೆ. ಭಾರತಕ್ಕೆ ಬಂದರೆ ಕೋರೋನಾ ವೈರಸ್ ಹರಡಿದರೆ ನನ್ನ ಜನರು ಸಂಕಟ, ನೋವು ಅನುಭವಿಸುತ್ತಾರೆಂದು ತೀರ್ಮಾನಿಸಿರುವುದು ನಿಜವಾಗಿಯೇ ಆತನ ದೇಶಪ್ರೇಮಕ್ಕೆ ಬೆಲೆ ಕಟ್ಟುವಂತಿಲ್ಲ. ತಾನು ಎಷ್ಟೇ ಕಷ್ಟ ಎದುರಿಸಿದರೂ ನನ್ನ ಜನರಿಗೆ ನೋವಾಗದಿರಲಿ ಎಂಬ ಅಚಲ ನಿಲುವಿಗೆ ಹ್ಯಾಟ್ಸಪ್ ಹೇಳಲೇಬೇಕು. ನಿಜಕ್ಕೂ ರಿಜ್ವಾನ್ ಪಾಷ ಮತ್ತು ಸಮೀನಾ ಖಾನಂ ದಂಪತಿಗೆ ಅಭಿನಂದನೆ ಸಲ್ಲಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...