Homeಮುಖಪುಟಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

ಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

- Advertisement -
- Advertisement -

ದೇಶಭಕ್ತಿ ತೋರಿಕೆಯದಲ್ಲ. ಅದನ್ನು ಬಹಿರಂಗವಾಗಿ ತೋರಿಸಬೇಕಾಗಿಯೂ ಇಲ್ಲ. ದೇಶಭಕ್ತಿ ವ್ಯಾಪಾರದ ಲಾಭಗಳಿಸುವ ಸರಕೂ ಅಲ್ಲ. ಅದು ಹೃದಯದಲ್ಲಿರಬೇಕು. ಸಂದರ್ಭ ಬಂದಾಗ ಅದಾಗಿ ತೆರೆದುಕೊಳ್ಳಬೇಕು. ಆದರೆ ಕೆಲವೊಂದು ವ್ಯಕ್ತಿ-ಸಂಘಟನೆಗಳು ಸಂಕೇತಗಳನ್ನು ಕೈಯಲ್ಲಿಡಿದು ದೇಶಭಕ್ತಿ ಇದೇ ಎಂದು ಕೂಗಿ ಹೇಳುತ್ತಿರುವ ಹೊತ್ತಿನಲ್ಲಿ ನಿಜದ ದೇಶಭಕ್ತಿ ಹೇಗಿರಬೇಕು ಎಂಬುದಕ್ಕೆ ಈತ ಸಾಕ್ಷಿಯಾಗಿದ್ದಾನೆ. ದೇಶವೆಂದರೆ ಗಡಿ ಮಾತ್ರವಲ್ಲ. ಅದರೊಳಗಿರುವ ಜನರಿಗೆ ತನ್ನಿಂದ ತೊಂದರೆಯಾಗುವುದಾದರೆ, ಸಂಕಷ್ಟ ಬರುವುದಾದರೆ ನಾನು ಅಲ್ಲಿಗೆ ಹೋಗಬಾರದು ಎಂಬ ದೃಢವಾದ ತೀರ್ಮಾನ ಕೈಗೊಳ್ಳುವುದು. ದೇಶ ಜನರ ಪರವಾಗಿ ಹೋರಾಡುವುದು ಎಂಬುದನ್ನು ಸಾಹಿಲ್ ಹುಸೇನ್ ಸಾಧಿಸಿ ತೋರಿದ್ದಾರೆ. ಅವರು ತೆಗೆದುಕೊಂಡಿರುವ ಕ್ರಮ ತನ್ನ ಕುಟುಂಬಕ್ಕೆ ನೋವಾದರೂ ದೇಶಕ್ಕೆ ಹಿತಬಯಸುವುದಾಗಿದೆ. ಇದೇ ನಿಜವಾದ ದೇಶಭಕ್ತಿ.

ಹೌದು, ತುಮಕೂರಿನ ಶಿಕ್ಷಕ ರಿಜ್ಞಾನ್ ಪಾಷಾ ಮತ್ತು ಸಮೀನಾ ಖಾನಂ ದಂಪತಿಯ ಎರಡನೇ ಪುತ್ರ ಸಾಹಿಲ್ ಹುಸೇನ್ ತಾನು ತೆಗೆದುಕೊಂಡು ನಿರ್ಧಾರದಿಂದ ನಕಲಿ ದೇಶಭಕ್ತರಿಗೆ ಮಾದರಿಯಾಗಿದ್ದಾರೆ. ದೇಶಭಕ್ತಿ ಕೂಗುವುದಲ್ಲ, ಸಂದರ್ಭ ಬಂದಾಗ ಮೆರೆಯುವುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾನಿರುವ ಸ್ಥಳದಿಂದ ತನ್ನ ದೇಶಕ್ಕೆ ಬಂದರೆ ಜನರು ಬಾಧಿತರಾಗುತ್ತಾರೆಂಬ ಸಾಹಿಲ್ ಹುಸೇನ್ ತಿಳುವಳಿಕೆ ಮೆಚ್ಚುವಂತಹದ್ದು. ಚಿಕ್ಕ ವಯಸ್ಸಿಗೆ ಇಂತಹ ತೀರ್ಮಾನ ಕೈಗೊಂಡಿರುವುದು ಆತನ ತಂದೆ-ತಾಯಿಗಳಲ್ಲಿ ಮಗನ ಬಗ್ಗೆ ಅಭಿಮಾನ ಉಕ್ಕಿ ಬಂದಿದೆ.

ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಕರ್ನಾಟಕದಿಂದ ಚೀನಾದ ವಾಸ್ಲಿ ಡಿಸ್ಟ್ರಿಕ್ ನಾನ್ ಚೆಂಗ್ ಪ್ರಾವಿನ್ಸ್ ಗೆ 5 ಮಂದಿ ಸ್ನೇಹಿತರು ತೆರಳುತ್ತಾರೆ. ಈ ಐವರಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಸೇರಿರುತ್ತಾರೆ. ನಾಬ್ ಆಫ್ರಿನ್, ಅರುಣ್ ಕುಮಾರ್, ಲೋಕೇಶ್ ಮತ್ತು ತುಮಕೂರಿನಿಂದ ಸಾಹಿಲ್ ಹುಸೇನ್ ಜಿಯಾಂಗ್ ಯೂನಿವರ್ ಸಿಟಿ ಆಫ್ ಚೈನೀಸ್ ಟ್ರೆಡಿಷನ್ಸ್ ಮೆಡಿಸನ್ ವಿವಿಗೆ ಎಂಬಿಬಿಎಸ್ ಓದಲು ಹೋಗುತ್ತಾರೆ. ಈಗ ಅವರೆಲ್ಲರೂ 6ನೇ ಸೆಮಿಸ್ಟರ್ ಓದುತ್ತಿದ್ದಾರೆ. ಆದರೆ ಚೀನಾದಲ್ಲಿ ಕರೋನಾ ವೈರಸ್ ದಾಳಿ ಇಡುತ್ತಿದ್ದಂತೆಯೇ ವಿವಿಗೆ ರಜೆ ಘೋಷಿಸಲಾಗುತ್ತದೆ. ತನ್ನ ತವರು ದೇಶಗಳಿಗೆ ತೆರಳುವಂತೆ ಸೂಚಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಎಂಬಿಬಿಎಸ್ ವ್ಯಾಸಂಗಕ್ಕೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅವರ ಪೋಷಕರು ಕೂಡಲೇ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಾರೆ. ಕೊರೋನ ವೈರಸ್ ಇಡೀ ಚೀನಾವನ್ನೇ ಬಾಧಿಸುತ್ತಿರುವಾಗ ಸಾಹಿಲ್ ಹುಸೇನ್ ತನ್ನ ತವರಿಗೆ ಹೋಗದೇ ಇರಲು ತೀರ್ಮಾನಿಸುತ್ತಾರೆ. ಎಲ್ಲಾ ಪೋಷಕರಂತೆ ರಿಜ್ವನ್ ಪಾಷಾ ಅವರು ಕೂಡ ತನ್ನ ಮಗನಿಗೆ ಪೋನ್ ಮಾಡಿ ತುಮಕೂರಿಗೆ ವಾಪಸ್ ಆಗುವಂತೆ ಕೇಳಿಕೊಳ್ಳುತ್ತಾರೆ. ಆಗ ಸಾಹಿಲ್ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಇದರಿಂದ ರಿಜ್ವನ್ ಪಾಷ ಅವರು ಅದಕ್ಕೆ ತಲೆದೂಗುತ್ತಾರೆ.

ತಂದೆ ರಿಜ್ವಾನ್ ಪಾಷ ಅವರಿಗೆ ಮಗ ಸಾಹಿಲ್ ಕಳಿಸಿರುವ ವಿಡಿಯೋದಲ್ಲಿ ಹೇಳಿರುವಂತೆ “ನಾನು ಇಲ್ಲಿ ಚನ್ನಾಗಿಯೇ ಇದ್ದೇನೆ. ಚೀನಾ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯವೂ ನಮಗೆ ಬೆಂಬಲಕ್ಕೆ ನಿಂತಿದೆ. ನೀವು ಹೆದರಬೇಡಿ. ನಾನು ದೇಶಕ್ಕೆ ಬರಬೇಕಾದರೆ ಮೂರು ವಿಮಾನಗಳನ್ನು ಬದಲಿಸಿ ಬರಬೇಕು. ಇದರಿಂದ ನಾನು ಭಾರತಕ್ಕೆ ಬಂದರೆ ಅಲ್ಲಿಗೂ ಕೊರೋನ ವೈರಸ್ ಹರಡುತ್ತದೆ. ಹಾಗಾಗಿ ನಾನು ಬರುವುದಿಲ್ಲ. ನೀವು ಭಯಬೀಳಬೇಡಿ”  ಎಂದು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಕ ರಿಜ್ವಾನ್ ಪಾಷ, ನಾನು ಮಗನಿಗೆ ಪೋನ್ ಮಾಡಿದೆ. ಬೇಗ ಚೀನಾ ಬಿಟ್ಟುಬರುವಂತೆ ಹೇಳಿದೆ. ಆದರೆ ಮಗ ಬರುವುದಿಲ್ಲ ಹೇಳಿದ. ನಾನು ಇರುವ ಜಾಗದಿಂದ ಬ್ಯಾಂಕಾಕ್‌ಗೆ ಬರಬೇಕು. ಅಲ್ಲಿಂದ ದೆಹಲಿ ಅಥವಾ ಮುಂಬೈಗೆ ಬರಬೇಕು. ನಾನು ದೇಶಕ್ಕೆ ಬಂದರೆ ತೊಂದರೆಯಾಗಬಹುದು. ಹಾಗಾಗಿ ನಾನು ಬರುತ್ತಿಲ್ಲ. ಇಲ್ಲಿ ನಾನು ಚೆನ್ನಾಗಿಯೇ ಇದ್ದೇನೆ. ನೀವು ಆರಾಮವಾಗಿರಿ ಎಂದು ಹೇಳಿದ. ನನಗೆ ಮಗನ ಬಗ್ಗೆ ಅಭಿಮಾನ ಉಕ್ಕಿಬಂತು. ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ತಿಳುವಳಿಕೆ ಇದೆ. ದೇಶದ ಬಗ್ಗೆ ಆತನಿಗಿರುವ ಅಭಿಮಾನ ಕಂಡು ನನ್ನ ಕಣ್ಣು ನೀರಾಡಿತು. ಒಳ್ಳೆಯ ಮಗನನ್ನು ಪಡೆದಿದ್ದೇನೆ. ಆಯ್ತು ಚನ್ನಾಗಿರು ಎಂದು ಹೇಳಿದೆ ಎಂದು ತಿಳಿಸಿದರು.

ಈಗ ಚೀನಾದಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಸಾವಿರಾರು ಮಂದಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ನರಳುತ್ತಿದ್ದಾರೆ. ಕೊರೋನ ಸೋಂಕು ಇಡೀ ವಿಶ್ವಕ್ಕೆ ಹಬ್ಬುತ್ತಿದೆ. ಭಾರತದಲ್ಲೂ ಸುಮಾರು 80ಕ್ಕೂ ಹೆಚ್ಚು ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ ಆಗಿವೆ. ಜನರು ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ತಾನು ಚೀನಾದಲ್ಲಿಯೇ ಇರುತ್ತೇನೆ. ಭಾರತಕ್ಕೆ ಬಂದರೆ ಕೋರೋನಾ ವೈರಸ್ ಹರಡಿದರೆ ನನ್ನ ಜನರು ಸಂಕಟ, ನೋವು ಅನುಭವಿಸುತ್ತಾರೆಂದು ತೀರ್ಮಾನಿಸಿರುವುದು ನಿಜವಾಗಿಯೇ ಆತನ ದೇಶಪ್ರೇಮಕ್ಕೆ ಬೆಲೆ ಕಟ್ಟುವಂತಿಲ್ಲ. ತಾನು ಎಷ್ಟೇ ಕಷ್ಟ ಎದುರಿಸಿದರೂ ನನ್ನ ಜನರಿಗೆ ನೋವಾಗದಿರಲಿ ಎಂಬ ಅಚಲ ನಿಲುವಿಗೆ ಹ್ಯಾಟ್ಸಪ್ ಹೇಳಲೇಬೇಕು. ನಿಜಕ್ಕೂ ರಿಜ್ವಾನ್ ಪಾಷ ಮತ್ತು ಸಮೀನಾ ಖಾನಂ ದಂಪತಿಗೆ ಅಭಿನಂದನೆ ಸಲ್ಲಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...