Homeಮುಖಪುಟಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

ಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

- Advertisement -
- Advertisement -

ದೇಶಭಕ್ತಿ ತೋರಿಕೆಯದಲ್ಲ. ಅದನ್ನು ಬಹಿರಂಗವಾಗಿ ತೋರಿಸಬೇಕಾಗಿಯೂ ಇಲ್ಲ. ದೇಶಭಕ್ತಿ ವ್ಯಾಪಾರದ ಲಾಭಗಳಿಸುವ ಸರಕೂ ಅಲ್ಲ. ಅದು ಹೃದಯದಲ್ಲಿರಬೇಕು. ಸಂದರ್ಭ ಬಂದಾಗ ಅದಾಗಿ ತೆರೆದುಕೊಳ್ಳಬೇಕು. ಆದರೆ ಕೆಲವೊಂದು ವ್ಯಕ್ತಿ-ಸಂಘಟನೆಗಳು ಸಂಕೇತಗಳನ್ನು ಕೈಯಲ್ಲಿಡಿದು ದೇಶಭಕ್ತಿ ಇದೇ ಎಂದು ಕೂಗಿ ಹೇಳುತ್ತಿರುವ ಹೊತ್ತಿನಲ್ಲಿ ನಿಜದ ದೇಶಭಕ್ತಿ ಹೇಗಿರಬೇಕು ಎಂಬುದಕ್ಕೆ ಈತ ಸಾಕ್ಷಿಯಾಗಿದ್ದಾನೆ. ದೇಶವೆಂದರೆ ಗಡಿ ಮಾತ್ರವಲ್ಲ. ಅದರೊಳಗಿರುವ ಜನರಿಗೆ ತನ್ನಿಂದ ತೊಂದರೆಯಾಗುವುದಾದರೆ, ಸಂಕಷ್ಟ ಬರುವುದಾದರೆ ನಾನು ಅಲ್ಲಿಗೆ ಹೋಗಬಾರದು ಎಂಬ ದೃಢವಾದ ತೀರ್ಮಾನ ಕೈಗೊಳ್ಳುವುದು. ದೇಶ ಜನರ ಪರವಾಗಿ ಹೋರಾಡುವುದು ಎಂಬುದನ್ನು ಸಾಹಿಲ್ ಹುಸೇನ್ ಸಾಧಿಸಿ ತೋರಿದ್ದಾರೆ. ಅವರು ತೆಗೆದುಕೊಂಡಿರುವ ಕ್ರಮ ತನ್ನ ಕುಟುಂಬಕ್ಕೆ ನೋವಾದರೂ ದೇಶಕ್ಕೆ ಹಿತಬಯಸುವುದಾಗಿದೆ. ಇದೇ ನಿಜವಾದ ದೇಶಭಕ್ತಿ.

ಹೌದು, ತುಮಕೂರಿನ ಶಿಕ್ಷಕ ರಿಜ್ಞಾನ್ ಪಾಷಾ ಮತ್ತು ಸಮೀನಾ ಖಾನಂ ದಂಪತಿಯ ಎರಡನೇ ಪುತ್ರ ಸಾಹಿಲ್ ಹುಸೇನ್ ತಾನು ತೆಗೆದುಕೊಂಡು ನಿರ್ಧಾರದಿಂದ ನಕಲಿ ದೇಶಭಕ್ತರಿಗೆ ಮಾದರಿಯಾಗಿದ್ದಾರೆ. ದೇಶಭಕ್ತಿ ಕೂಗುವುದಲ್ಲ, ಸಂದರ್ಭ ಬಂದಾಗ ಮೆರೆಯುವುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾನಿರುವ ಸ್ಥಳದಿಂದ ತನ್ನ ದೇಶಕ್ಕೆ ಬಂದರೆ ಜನರು ಬಾಧಿತರಾಗುತ್ತಾರೆಂಬ ಸಾಹಿಲ್ ಹುಸೇನ್ ತಿಳುವಳಿಕೆ ಮೆಚ್ಚುವಂತಹದ್ದು. ಚಿಕ್ಕ ವಯಸ್ಸಿಗೆ ಇಂತಹ ತೀರ್ಮಾನ ಕೈಗೊಂಡಿರುವುದು ಆತನ ತಂದೆ-ತಾಯಿಗಳಲ್ಲಿ ಮಗನ ಬಗ್ಗೆ ಅಭಿಮಾನ ಉಕ್ಕಿ ಬಂದಿದೆ.

ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಕರ್ನಾಟಕದಿಂದ ಚೀನಾದ ವಾಸ್ಲಿ ಡಿಸ್ಟ್ರಿಕ್ ನಾನ್ ಚೆಂಗ್ ಪ್ರಾವಿನ್ಸ್ ಗೆ 5 ಮಂದಿ ಸ್ನೇಹಿತರು ತೆರಳುತ್ತಾರೆ. ಈ ಐವರಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಸೇರಿರುತ್ತಾರೆ. ನಾಬ್ ಆಫ್ರಿನ್, ಅರುಣ್ ಕುಮಾರ್, ಲೋಕೇಶ್ ಮತ್ತು ತುಮಕೂರಿನಿಂದ ಸಾಹಿಲ್ ಹುಸೇನ್ ಜಿಯಾಂಗ್ ಯೂನಿವರ್ ಸಿಟಿ ಆಫ್ ಚೈನೀಸ್ ಟ್ರೆಡಿಷನ್ಸ್ ಮೆಡಿಸನ್ ವಿವಿಗೆ ಎಂಬಿಬಿಎಸ್ ಓದಲು ಹೋಗುತ್ತಾರೆ. ಈಗ ಅವರೆಲ್ಲರೂ 6ನೇ ಸೆಮಿಸ್ಟರ್ ಓದುತ್ತಿದ್ದಾರೆ. ಆದರೆ ಚೀನಾದಲ್ಲಿ ಕರೋನಾ ವೈರಸ್ ದಾಳಿ ಇಡುತ್ತಿದ್ದಂತೆಯೇ ವಿವಿಗೆ ರಜೆ ಘೋಷಿಸಲಾಗುತ್ತದೆ. ತನ್ನ ತವರು ದೇಶಗಳಿಗೆ ತೆರಳುವಂತೆ ಸೂಚಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಎಂಬಿಬಿಎಸ್ ವ್ಯಾಸಂಗಕ್ಕೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅವರ ಪೋಷಕರು ಕೂಡಲೇ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಾರೆ. ಕೊರೋನ ವೈರಸ್ ಇಡೀ ಚೀನಾವನ್ನೇ ಬಾಧಿಸುತ್ತಿರುವಾಗ ಸಾಹಿಲ್ ಹುಸೇನ್ ತನ್ನ ತವರಿಗೆ ಹೋಗದೇ ಇರಲು ತೀರ್ಮಾನಿಸುತ್ತಾರೆ. ಎಲ್ಲಾ ಪೋಷಕರಂತೆ ರಿಜ್ವನ್ ಪಾಷಾ ಅವರು ಕೂಡ ತನ್ನ ಮಗನಿಗೆ ಪೋನ್ ಮಾಡಿ ತುಮಕೂರಿಗೆ ವಾಪಸ್ ಆಗುವಂತೆ ಕೇಳಿಕೊಳ್ಳುತ್ತಾರೆ. ಆಗ ಸಾಹಿಲ್ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಇದರಿಂದ ರಿಜ್ವನ್ ಪಾಷ ಅವರು ಅದಕ್ಕೆ ತಲೆದೂಗುತ್ತಾರೆ.

ತಂದೆ ರಿಜ್ವಾನ್ ಪಾಷ ಅವರಿಗೆ ಮಗ ಸಾಹಿಲ್ ಕಳಿಸಿರುವ ವಿಡಿಯೋದಲ್ಲಿ ಹೇಳಿರುವಂತೆ “ನಾನು ಇಲ್ಲಿ ಚನ್ನಾಗಿಯೇ ಇದ್ದೇನೆ. ಚೀನಾ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯವೂ ನಮಗೆ ಬೆಂಬಲಕ್ಕೆ ನಿಂತಿದೆ. ನೀವು ಹೆದರಬೇಡಿ. ನಾನು ದೇಶಕ್ಕೆ ಬರಬೇಕಾದರೆ ಮೂರು ವಿಮಾನಗಳನ್ನು ಬದಲಿಸಿ ಬರಬೇಕು. ಇದರಿಂದ ನಾನು ಭಾರತಕ್ಕೆ ಬಂದರೆ ಅಲ್ಲಿಗೂ ಕೊರೋನ ವೈರಸ್ ಹರಡುತ್ತದೆ. ಹಾಗಾಗಿ ನಾನು ಬರುವುದಿಲ್ಲ. ನೀವು ಭಯಬೀಳಬೇಡಿ”  ಎಂದು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಕ ರಿಜ್ವಾನ್ ಪಾಷ, ನಾನು ಮಗನಿಗೆ ಪೋನ್ ಮಾಡಿದೆ. ಬೇಗ ಚೀನಾ ಬಿಟ್ಟುಬರುವಂತೆ ಹೇಳಿದೆ. ಆದರೆ ಮಗ ಬರುವುದಿಲ್ಲ ಹೇಳಿದ. ನಾನು ಇರುವ ಜಾಗದಿಂದ ಬ್ಯಾಂಕಾಕ್‌ಗೆ ಬರಬೇಕು. ಅಲ್ಲಿಂದ ದೆಹಲಿ ಅಥವಾ ಮುಂಬೈಗೆ ಬರಬೇಕು. ನಾನು ದೇಶಕ್ಕೆ ಬಂದರೆ ತೊಂದರೆಯಾಗಬಹುದು. ಹಾಗಾಗಿ ನಾನು ಬರುತ್ತಿಲ್ಲ. ಇಲ್ಲಿ ನಾನು ಚೆನ್ನಾಗಿಯೇ ಇದ್ದೇನೆ. ನೀವು ಆರಾಮವಾಗಿರಿ ಎಂದು ಹೇಳಿದ. ನನಗೆ ಮಗನ ಬಗ್ಗೆ ಅಭಿಮಾನ ಉಕ್ಕಿಬಂತು. ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ತಿಳುವಳಿಕೆ ಇದೆ. ದೇಶದ ಬಗ್ಗೆ ಆತನಿಗಿರುವ ಅಭಿಮಾನ ಕಂಡು ನನ್ನ ಕಣ್ಣು ನೀರಾಡಿತು. ಒಳ್ಳೆಯ ಮಗನನ್ನು ಪಡೆದಿದ್ದೇನೆ. ಆಯ್ತು ಚನ್ನಾಗಿರು ಎಂದು ಹೇಳಿದೆ ಎಂದು ತಿಳಿಸಿದರು.

ಈಗ ಚೀನಾದಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಸಾವಿರಾರು ಮಂದಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ನರಳುತ್ತಿದ್ದಾರೆ. ಕೊರೋನ ಸೋಂಕು ಇಡೀ ವಿಶ್ವಕ್ಕೆ ಹಬ್ಬುತ್ತಿದೆ. ಭಾರತದಲ್ಲೂ ಸುಮಾರು 80ಕ್ಕೂ ಹೆಚ್ಚು ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ ಆಗಿವೆ. ಜನರು ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ತಾನು ಚೀನಾದಲ್ಲಿಯೇ ಇರುತ್ತೇನೆ. ಭಾರತಕ್ಕೆ ಬಂದರೆ ಕೋರೋನಾ ವೈರಸ್ ಹರಡಿದರೆ ನನ್ನ ಜನರು ಸಂಕಟ, ನೋವು ಅನುಭವಿಸುತ್ತಾರೆಂದು ತೀರ್ಮಾನಿಸಿರುವುದು ನಿಜವಾಗಿಯೇ ಆತನ ದೇಶಪ್ರೇಮಕ್ಕೆ ಬೆಲೆ ಕಟ್ಟುವಂತಿಲ್ಲ. ತಾನು ಎಷ್ಟೇ ಕಷ್ಟ ಎದುರಿಸಿದರೂ ನನ್ನ ಜನರಿಗೆ ನೋವಾಗದಿರಲಿ ಎಂಬ ಅಚಲ ನಿಲುವಿಗೆ ಹ್ಯಾಟ್ಸಪ್ ಹೇಳಲೇಬೇಕು. ನಿಜಕ್ಕೂ ರಿಜ್ವಾನ್ ಪಾಷ ಮತ್ತು ಸಮೀನಾ ಖಾನಂ ದಂಪತಿಗೆ ಅಭಿನಂದನೆ ಸಲ್ಲಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...