Homeಮುಖಪುಟಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

ಸಾಹಿಲ್‌ ಚೀನಾದಿಂದ ತುಮಕೂರಿಗೆ ಬರುವುದಿಲ್ಲ ಎಂದಿದ್ದು ಏಕೆ? ಆತನ ಮಾತುಗಳಲ್ಲೇ ಕೇಳಿ

- Advertisement -
- Advertisement -

ದೇಶಭಕ್ತಿ ತೋರಿಕೆಯದಲ್ಲ. ಅದನ್ನು ಬಹಿರಂಗವಾಗಿ ತೋರಿಸಬೇಕಾಗಿಯೂ ಇಲ್ಲ. ದೇಶಭಕ್ತಿ ವ್ಯಾಪಾರದ ಲಾಭಗಳಿಸುವ ಸರಕೂ ಅಲ್ಲ. ಅದು ಹೃದಯದಲ್ಲಿರಬೇಕು. ಸಂದರ್ಭ ಬಂದಾಗ ಅದಾಗಿ ತೆರೆದುಕೊಳ್ಳಬೇಕು. ಆದರೆ ಕೆಲವೊಂದು ವ್ಯಕ್ತಿ-ಸಂಘಟನೆಗಳು ಸಂಕೇತಗಳನ್ನು ಕೈಯಲ್ಲಿಡಿದು ದೇಶಭಕ್ತಿ ಇದೇ ಎಂದು ಕೂಗಿ ಹೇಳುತ್ತಿರುವ ಹೊತ್ತಿನಲ್ಲಿ ನಿಜದ ದೇಶಭಕ್ತಿ ಹೇಗಿರಬೇಕು ಎಂಬುದಕ್ಕೆ ಈತ ಸಾಕ್ಷಿಯಾಗಿದ್ದಾನೆ. ದೇಶವೆಂದರೆ ಗಡಿ ಮಾತ್ರವಲ್ಲ. ಅದರೊಳಗಿರುವ ಜನರಿಗೆ ತನ್ನಿಂದ ತೊಂದರೆಯಾಗುವುದಾದರೆ, ಸಂಕಷ್ಟ ಬರುವುದಾದರೆ ನಾನು ಅಲ್ಲಿಗೆ ಹೋಗಬಾರದು ಎಂಬ ದೃಢವಾದ ತೀರ್ಮಾನ ಕೈಗೊಳ್ಳುವುದು. ದೇಶ ಜನರ ಪರವಾಗಿ ಹೋರಾಡುವುದು ಎಂಬುದನ್ನು ಸಾಹಿಲ್ ಹುಸೇನ್ ಸಾಧಿಸಿ ತೋರಿದ್ದಾರೆ. ಅವರು ತೆಗೆದುಕೊಂಡಿರುವ ಕ್ರಮ ತನ್ನ ಕುಟುಂಬಕ್ಕೆ ನೋವಾದರೂ ದೇಶಕ್ಕೆ ಹಿತಬಯಸುವುದಾಗಿದೆ. ಇದೇ ನಿಜವಾದ ದೇಶಭಕ್ತಿ.

ಹೌದು, ತುಮಕೂರಿನ ಶಿಕ್ಷಕ ರಿಜ್ಞಾನ್ ಪಾಷಾ ಮತ್ತು ಸಮೀನಾ ಖಾನಂ ದಂಪತಿಯ ಎರಡನೇ ಪುತ್ರ ಸಾಹಿಲ್ ಹುಸೇನ್ ತಾನು ತೆಗೆದುಕೊಂಡು ನಿರ್ಧಾರದಿಂದ ನಕಲಿ ದೇಶಭಕ್ತರಿಗೆ ಮಾದರಿಯಾಗಿದ್ದಾರೆ. ದೇಶಭಕ್ತಿ ಕೂಗುವುದಲ್ಲ, ಸಂದರ್ಭ ಬಂದಾಗ ಮೆರೆಯುವುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾನಿರುವ ಸ್ಥಳದಿಂದ ತನ್ನ ದೇಶಕ್ಕೆ ಬಂದರೆ ಜನರು ಬಾಧಿತರಾಗುತ್ತಾರೆಂಬ ಸಾಹಿಲ್ ಹುಸೇನ್ ತಿಳುವಳಿಕೆ ಮೆಚ್ಚುವಂತಹದ್ದು. ಚಿಕ್ಕ ವಯಸ್ಸಿಗೆ ಇಂತಹ ತೀರ್ಮಾನ ಕೈಗೊಂಡಿರುವುದು ಆತನ ತಂದೆ-ತಾಯಿಗಳಲ್ಲಿ ಮಗನ ಬಗ್ಗೆ ಅಭಿಮಾನ ಉಕ್ಕಿ ಬಂದಿದೆ.

ಎಂಬಿಬಿಎಸ್ ವ್ಯಾಸಂಗ ಮಾಡಲೆಂದು ಕರ್ನಾಟಕದಿಂದ ಚೀನಾದ ವಾಸ್ಲಿ ಡಿಸ್ಟ್ರಿಕ್ ನಾನ್ ಚೆಂಗ್ ಪ್ರಾವಿನ್ಸ್ ಗೆ 5 ಮಂದಿ ಸ್ನೇಹಿತರು ತೆರಳುತ್ತಾರೆ. ಈ ಐವರಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಸೇರಿರುತ್ತಾರೆ. ನಾಬ್ ಆಫ್ರಿನ್, ಅರುಣ್ ಕುಮಾರ್, ಲೋಕೇಶ್ ಮತ್ತು ತುಮಕೂರಿನಿಂದ ಸಾಹಿಲ್ ಹುಸೇನ್ ಜಿಯಾಂಗ್ ಯೂನಿವರ್ ಸಿಟಿ ಆಫ್ ಚೈನೀಸ್ ಟ್ರೆಡಿಷನ್ಸ್ ಮೆಡಿಸನ್ ವಿವಿಗೆ ಎಂಬಿಬಿಎಸ್ ಓದಲು ಹೋಗುತ್ತಾರೆ. ಈಗ ಅವರೆಲ್ಲರೂ 6ನೇ ಸೆಮಿಸ್ಟರ್ ಓದುತ್ತಿದ್ದಾರೆ. ಆದರೆ ಚೀನಾದಲ್ಲಿ ಕರೋನಾ ವೈರಸ್ ದಾಳಿ ಇಡುತ್ತಿದ್ದಂತೆಯೇ ವಿವಿಗೆ ರಜೆ ಘೋಷಿಸಲಾಗುತ್ತದೆ. ತನ್ನ ತವರು ದೇಶಗಳಿಗೆ ತೆರಳುವಂತೆ ಸೂಚಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಎಂಬಿಬಿಎಸ್ ವ್ಯಾಸಂಗಕ್ಕೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅವರ ಪೋಷಕರು ಕೂಡಲೇ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಾರೆ. ಕೊರೋನ ವೈರಸ್ ಇಡೀ ಚೀನಾವನ್ನೇ ಬಾಧಿಸುತ್ತಿರುವಾಗ ಸಾಹಿಲ್ ಹುಸೇನ್ ತನ್ನ ತವರಿಗೆ ಹೋಗದೇ ಇರಲು ತೀರ್ಮಾನಿಸುತ್ತಾರೆ. ಎಲ್ಲಾ ಪೋಷಕರಂತೆ ರಿಜ್ವನ್ ಪಾಷಾ ಅವರು ಕೂಡ ತನ್ನ ಮಗನಿಗೆ ಪೋನ್ ಮಾಡಿ ತುಮಕೂರಿಗೆ ವಾಪಸ್ ಆಗುವಂತೆ ಕೇಳಿಕೊಳ್ಳುತ್ತಾರೆ. ಆಗ ಸಾಹಿಲ್ ತನ್ನ ನಿರ್ಧಾರವನ್ನು ತಿಳಿಸುತ್ತಾರೆ. ಇದರಿಂದ ರಿಜ್ವನ್ ಪಾಷ ಅವರು ಅದಕ್ಕೆ ತಲೆದೂಗುತ್ತಾರೆ.

ತಂದೆ ರಿಜ್ವಾನ್ ಪಾಷ ಅವರಿಗೆ ಮಗ ಸಾಹಿಲ್ ಕಳಿಸಿರುವ ವಿಡಿಯೋದಲ್ಲಿ ಹೇಳಿರುವಂತೆ “ನಾನು ಇಲ್ಲಿ ಚನ್ನಾಗಿಯೇ ಇದ್ದೇನೆ. ಚೀನಾ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯವೂ ನಮಗೆ ಬೆಂಬಲಕ್ಕೆ ನಿಂತಿದೆ. ನೀವು ಹೆದರಬೇಡಿ. ನಾನು ದೇಶಕ್ಕೆ ಬರಬೇಕಾದರೆ ಮೂರು ವಿಮಾನಗಳನ್ನು ಬದಲಿಸಿ ಬರಬೇಕು. ಇದರಿಂದ ನಾನು ಭಾರತಕ್ಕೆ ಬಂದರೆ ಅಲ್ಲಿಗೂ ಕೊರೋನ ವೈರಸ್ ಹರಡುತ್ತದೆ. ಹಾಗಾಗಿ ನಾನು ಬರುವುದಿಲ್ಲ. ನೀವು ಭಯಬೀಳಬೇಡಿ”  ಎಂದು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಕ ರಿಜ್ವಾನ್ ಪಾಷ, ನಾನು ಮಗನಿಗೆ ಪೋನ್ ಮಾಡಿದೆ. ಬೇಗ ಚೀನಾ ಬಿಟ್ಟುಬರುವಂತೆ ಹೇಳಿದೆ. ಆದರೆ ಮಗ ಬರುವುದಿಲ್ಲ ಹೇಳಿದ. ನಾನು ಇರುವ ಜಾಗದಿಂದ ಬ್ಯಾಂಕಾಕ್‌ಗೆ ಬರಬೇಕು. ಅಲ್ಲಿಂದ ದೆಹಲಿ ಅಥವಾ ಮುಂಬೈಗೆ ಬರಬೇಕು. ನಾನು ದೇಶಕ್ಕೆ ಬಂದರೆ ತೊಂದರೆಯಾಗಬಹುದು. ಹಾಗಾಗಿ ನಾನು ಬರುತ್ತಿಲ್ಲ. ಇಲ್ಲಿ ನಾನು ಚೆನ್ನಾಗಿಯೇ ಇದ್ದೇನೆ. ನೀವು ಆರಾಮವಾಗಿರಿ ಎಂದು ಹೇಳಿದ. ನನಗೆ ಮಗನ ಬಗ್ಗೆ ಅಭಿಮಾನ ಉಕ್ಕಿಬಂತು. ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ತಿಳುವಳಿಕೆ ಇದೆ. ದೇಶದ ಬಗ್ಗೆ ಆತನಿಗಿರುವ ಅಭಿಮಾನ ಕಂಡು ನನ್ನ ಕಣ್ಣು ನೀರಾಡಿತು. ಒಳ್ಳೆಯ ಮಗನನ್ನು ಪಡೆದಿದ್ದೇನೆ. ಆಯ್ತು ಚನ್ನಾಗಿರು ಎಂದು ಹೇಳಿದೆ ಎಂದು ತಿಳಿಸಿದರು.

ಈಗ ಚೀನಾದಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಸಾವಿರಾರು ಮಂದಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನಿಂದ ನರಳುತ್ತಿದ್ದಾರೆ. ಕೊರೋನ ಸೋಂಕು ಇಡೀ ವಿಶ್ವಕ್ಕೆ ಹಬ್ಬುತ್ತಿದೆ. ಭಾರತದಲ್ಲೂ ಸುಮಾರು 80ಕ್ಕೂ ಹೆಚ್ಚು ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ ಆಗಿವೆ. ಜನರು ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ತಾನು ಚೀನಾದಲ್ಲಿಯೇ ಇರುತ್ತೇನೆ. ಭಾರತಕ್ಕೆ ಬಂದರೆ ಕೋರೋನಾ ವೈರಸ್ ಹರಡಿದರೆ ನನ್ನ ಜನರು ಸಂಕಟ, ನೋವು ಅನುಭವಿಸುತ್ತಾರೆಂದು ತೀರ್ಮಾನಿಸಿರುವುದು ನಿಜವಾಗಿಯೇ ಆತನ ದೇಶಪ್ರೇಮಕ್ಕೆ ಬೆಲೆ ಕಟ್ಟುವಂತಿಲ್ಲ. ತಾನು ಎಷ್ಟೇ ಕಷ್ಟ ಎದುರಿಸಿದರೂ ನನ್ನ ಜನರಿಗೆ ನೋವಾಗದಿರಲಿ ಎಂಬ ಅಚಲ ನಿಲುವಿಗೆ ಹ್ಯಾಟ್ಸಪ್ ಹೇಳಲೇಬೇಕು. ನಿಜಕ್ಕೂ ರಿಜ್ವಾನ್ ಪಾಷ ಮತ್ತು ಸಮೀನಾ ಖಾನಂ ದಂಪತಿಗೆ ಅಭಿನಂದನೆ ಸಲ್ಲಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...