ದೇಶದಲ್ಲಿ ಸತತವಾಗಿ ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆಯುತ್ತಿರುವುದನ್ನು ಖಂಡಿಸಿ ಕರ್ನಾಟಕ ಕ್ರಾಂತಿಕಾರಿ ಪಡೆ ಕರೆ ನೀಡಿದ್ದ ಟ್ವಿಟರ್ ಅಭಿಯಾನಕ್ಕೆ ಭಾರಿ ಸ್ಪಂದನೆ ಸಿಕ್ಕಿದ್ದು, #ಏರಿದಬೆಲೆ_ಉರಿಯದಒಲೆ ಟ್ವಿಟರ್ನಲ್ಲಿ ನಂಬರ್ ಒನ್ ಟ್ರೆಂಡ್ ಆಗಿದೆ.
ಕರ್ನಾಟಕ ಟ್ರೆಂಡ್ಸ್ನಲ್ಲಿ ಮೊದಲ ಸ್ಥಾನದಲ್ಲಿ ಏರಿದಬೆಲೆ_ಉರಿಯದಒಲೆ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಈ ಬರಹ ಬರೆಯುವ ಹೊತ್ತಿಗೆ ಸುಮಾರು 10 ಸಾವಿರ ಮಂದಿ ಈ ಹ್ಯಾಶ್ಟ್ಯಾಗ್ ಬಳಸಿದ್ದಾರೆ. ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬೆಲೆ ಏರಿಕೆ ಬರೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಕಿವೆ. ಜನ ವಿರೋಧಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇವುಗಳ ನೀತಿಯನ್ನು ವಿರೋಧಿಸಿ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರ್ನಾಟಕ ಕ್ರಾಂತಿಕಾರಿ ಪಡೆ ಕರೆ ನೀಡಿತ್ತು.
ಇದನ್ನೂ ಓದಿ: ಟ್ವಿಟರ್ ಅಭಿಯಾನದ ಮೂಲಕ ಸಾಮಾಜಿಕ ಹೋರಾಟಗಳಿಗೆ ಜೊತೆಯಾದ ಕರ್ನಾಟಕ ಕ್ರಾಂತಿಕಾರಿ ಪಡೆ!
’ಆತ್ಮ ನಿರ್ಬರ!, ಅಚ್ಚೇ ದಿನ್! ನಯಾ ಭಾರತ್! ಮೇಕ್ ಇನ್ ಇಂಡಿಯಾ!, ಬೇಟೀ ಬಚಾವ್, ಬೇಟೀ ಪಡಾವ್!, ಹೀಗೇ ಒಂದರ ನಂತರ ಒಂದರಂತೆ ಘೋಷಣೆಗಳನ್ನು ಹುಟ್ಟುಹಾಕುತ್ತಾ ಇನ್ನೆಷ್ಟು ದಿನ ಜನರನ್ನು ದಿಕ್ಕು ತಪ್ಪಿಸುತ್ತೀರಿ..? ಮೋಸ ಮಾಡುತ್ತೀರಿ..? ತೆರಿಗೆ ಇಳಿಸಿ! ದರ ಇಳಿಸಿ!’ ಎಂದು ರಾಕಿ ಎಂಬ ಟ್ವಿಟರ್ ಖಾತೆ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಆತ್ಮ ನಿಭ೯ರ!, ಅಚ್ಚೇ ದಿನ್! ನಯಾ ಭಾರತ್!ಮೇಕ್ ಇನ್ನ್ ಇಂಡಿಯಾ!,ಬೇಟೀ ಬಚಾವ್, ಬೇಟೀ ಪಡಾವ್!, ಹೀಗೇ ಒಂದರ ನಂತರ ಒಂದರಂತೆ ಘೋಷಣೆಗಳನ್ನು ಹುಟ್ಟುಹಾಕುತ್ತಾ ಇನ್ನೆಷ್ಟು ದಿನ ಜನರನ್ನು ದಿಕ್ಕು ತಪ್ಪಿಸುತ್ತೀರಿ?, ಮೋಸ ಮಾಡುತ್ತೀರಿ?, ತೆರಿಗೆ ಇಳಿಸಿ! ದರ ಇಳಿಸಿ!. #Inflation_kills#ಏರಿದಬೆಲೆ_ಉರಿಯದಒಲೆ
— RAKI | ರಾಕಿ ?☠️ (@R_A_K_I_E) June 24, 2021
ಕಾಂಗ್ರೆಸ್ ನಾಯಕ ಶ್ರೀವತ್ಸ ಟ್ವೀಟ್ ಮಾಡಿ, ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ 26 ರೂ., ಡೀಸೆಲ್ 25 ರೂ, ಎಲ್ಪಿಜಿ ಸಿಲಿಂಡರ್ 250 ರೂ, ಅಡುಗೆ ಎಣ್ಣೆ 80 ರೂ, ಬೆಳೆ 50 ರೂ. ಏರಿಕೆಯಾಗಿರುವುದನ್ನು ತಿಳಿಸಿದ್ದಾರೆ. ಜೊತೆಗೆ ಜಿಡಿಪಿ, ಕೆಲಸಗಳು, ಆರ್ಥಿಕತೆ ಕುಸಿತವಾಗಿರುವುದನ್ನು ಟೀಕಿಸಿದ್ದಾರೆ. ಇಷ್ಟೇಲ್ಲದರ ನಡುವೆಯೂ ಮೋದಿಜಿ ಅಚ್ಚೇ ದಿನ ಜಪ ಮಾಡುತ್ತಿದ್ದಾರೆ ಎಂದಿದ್ದಾರೆ.
In the last 1 year,
?Petrol increased by ₹26
?Diesel increased by ₹25
?Cooking oil increased by ₹80
?LPG gas increased by ₹250
?Dal increased by ₹50But GDP, Jobs & Income decreased.#Inflation_kills but Modi says be positive, it's Acche Din!#ಏರಿದಬೆಲೆ_ಉರಿಯದಒಲೆ
— Srivatsa (@srivatsayb) June 24, 2021
Beautifully explained price hike.#ಏರಿದಬೆಲೆ_ಉರಿಯದಒಲೆ pic.twitter.com/1GId2Jol0C
— Prathap ಕಣಗಾಲ್ (@Kanagalogy) June 24, 2021
’ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಚಾರ ಮತ್ತು ಚುನಾವಣಾ ರಾಜಕೀಯದಿಂದ ಸಮಯ ಸಿಗುತ್ತಿಲ್ಲ. ಹಾಗಾಗಿ ಅದರ ನಾಯಕರಿಗೆ ಬಡಜನರ ಜೀವನದ ವಾಸ್ತವತೆಯ ಅರಿವೇ ಇಲ್ಲ. ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಆದರೆ, ಸರ್ಕಾರಗಳು ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿವೆ!!” ಎಂದು ಲಾವಣ್ಯ ಬಲ್ಲಾಳ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಚಾರ ಮತ್ತು ಚುನಾವಣ ರಾಜಕೀಯದಿಂದ ಸಮಯ ಸಿಗುತ್ತಿಲ್ಲ ಹಾಗಾಗಿ ಅದರ ನಾಯಕರಿಗೆ ಬಡಜನರ ಜೀವನದ ವಾಸ್ತವತೆಯ ಅರಿವೇ ಇಲ್ಲ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ ಆದರೆ ಸರ್ಕಾರಗಳು ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿವೆ!!#ಏರಿದಬೆಲೆ_ಉರಿಯದಒಲೆ#inflation_kills
— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) June 24, 2021
India’s poor were struggling to refill LPG cylinders. Now with record price hike, many have given up.https://t.co/30kNQ73rtC#ಏರಿದಬೆಲೆ_ಉರಿಯದಒಲೆ #Inflation_Kills pic.twitter.com/TAXDPOUkXm
— Vishwas (@vishy0709) June 24, 2021
Everything increased Gas, Petrol, Diesel, Cooking Oil, Dal, Beard, #MukeshAmbani & Adani's income but only GDP decreased. #Inflation_kills#ಏರಿದಬೆಲೆ_ಉರಿಯದಒಲೆ
Searching GDP? pic.twitter.com/bGgCBFiaEF— شهيد الشيخ (@shahidsheik03) June 24, 2021
ಇದನ್ನೂ ಓದಿ: ನಕಲಿ ಲಸಿಕೆ ಜಾಲದಿಂದ ಮೋಸಹೋದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ : ಓರ್ವನ ಬಂಧನ
ಬಡವರ ಬದುಕು ಮೂರ ಬಟ್ಟೆ ಬಿ ಜೆ ಪಿ ಪಕ್ಷ ನಂಬಿ ಕರ್ನಾಟಕ ಜನತೆ ಊಟ ತಿಂಡಿ ಬಿಟ್ಟೆ ಬಿಟ್ಟೆ