Homeಮುಖಪುಟಕವಿತೆ ಬರೆದಿದ್ದಕ್ಕೆ ಯುಎಪಿಎ ಪ್ರಕರಣ: ಅಸ್ಸಾಂ ಯುವ ಕವಯತ್ರಿ ಪರ ಕೋರ್ಟ್ ತೀರ್ಪು

ಕವಿತೆ ಬರೆದಿದ್ದಕ್ಕೆ ಯುಎಪಿಎ ಪ್ರಕರಣ: ಅಸ್ಸಾಂ ಯುವ ಕವಯತ್ರಿ ಪರ ಕೋರ್ಟ್ ತೀರ್ಪು

- Advertisement -
- Advertisement -

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾಜ್ಯ ಪೊಲೀಸರು ಸಲ್ಲಿಸಿದ ಎಲ್ಲಾ ಆರೋಪಗಳಿಂದ ಯುವ ಅಸ್ಸಾಮಿ ಕವಯಿತ್ರಿ ಬಾರ್ಶಶ್ರೀ ಬುರಾಗೊಹೈನ್ ಅವರನ್ನು ಅಸ್ಸಾಂನ ಕೆಳ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) (ಸ್ವತಂತ್ರ) ಬಣದೊಂದಿಗೆ ಸೇರಿ ‘ರಾಷ್ಟ್ರದ ವಿರುದ್ಧ ದಂಗೆಯ ಕೃತ್ಯ’ ಎಸಗಿದ್ದಾರೆ ಎಂದು ರಾಜ್ಯ ಪೊಲೀಸರು ಮಾಡಿರುವ ಆರೋಪವನ್ನು ಮಾರ್ಚ್ 18 ರಂದು ಹೊರಡಿಸಲಾದ ನ್ಯಾಯಾಲಯದ ಆದೇಶದಲ್ಲಿ ತಿರಸ್ಕರಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ನಾಗರಿಕರ ಮೇಲೆ ತನ್ನ ಶಿಸ್ತುಕ್ರಮವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 2022ರಲ್ಲಿ ಆರಂಭಿಸಿತು. ಫೇಸ್‌ಬುಕ್‌ನಲ್ಲಿ ಕವಿತೆ ಪ್ರಕಟಿಸಿದ್ದಕ್ಕಾಗಿ 19 ವರ್ಷದ ವಿದ್ಯಾರ್ಥಿನಿಯನ್ನು ಬಂಧಿಸಿತ್ತು. ಉಲ್ಫಾಗೆ ಸೇರಲು ಯುವಜನರಿಗೆ ಈ ಕವಿತೆಯ ಮೂಲಕ ಪ್ರಚೋದಿಸಲಾಗಿದೆ ಎಂದು ಸರ್ಕಾರ ವಾ‌ದಿಸಿತ್ತು.

ಜೋರ್ಹತ್ ಜಿಲ್ಲೆಯ ಡಿಸಿಬಿ ಕಾಲೇಜಿನಲ್ಲಿ ಗಣಿತಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಬಾರ್ಶಶ್ರೀ ಬಂಧನ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಅವರನ್ನು ಬಿಡುಗಡೆ ಮಾಡುವಂತೆ ಸಾರ್ವಜನಿಕರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಮನವಿ ಸಲ್ಲಿಸಿದ್ದರು.

ಆದರೆ ಶರ್ಮಾ ಅವರು, “ನಿಷೇಧಿತ ಶಸ್ತ್ರಸಜ್ಜಿತ ಸಂಘಟನೆಗೆ ಜನರನ್ನು ಸೇರಿಸಲು ಬಾರ್ಶಶ್ರೀ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಲು ಸಾಧ್ಯವೇ? ಹೇಗೆ ಬಿಡುಗಡೆ ಮಾಡಲು ಸಾಧ್ಯ? ಅವರು ಉಲ್ಫಾಗೆ ಹೋದರೆ ಮಾನವ ಬಾಂಬ್ ಆಗಿ ಹಿಂತಿರುಗುತ್ತಾರೆ, ನಮ್ಮನ್ನು ಕೊಲ್ಲುತ್ತಾರೆ” ಎಂದು ಆರೋಪಿಸಿದ್ದರು.

ಬಾರ್ಶಶ್ರೀ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ, “ಉಲ್ಫಾ ಸ್ವತಂತ್ರ ಸಂಘಟನೆಯು ಸೂಚ್ಯವಾದ ಅನುಮೋದಿಸುವ ಸಾಲುಗಳನ್ನು ಕವಿತೆಯಲ್ಲಿ. ಹೀಗಾಗಿ ಅವರು ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ” ಎಂದು ದೂರಲಾಗಿತ್ತು.

ಇದನ್ನೂ ಓದಿರಿ: ಸಂಸತ್ತಿನ ಮೊದಲ ಮಹಡಿಯಲ್ಲಿ ‘ಮೋದಾನಿ’ ಬ್ಯಾನರ್ ಪ್ರದರ್ಶನ: ಪ್ರತಿಪಕ್ಷಗಳ ವಿನೂತನ ಪ್ರತಿಭಟನೆ

ಬಂಧನಕ್ಕೊಳಗಾದ ಎರಡು ತಿಂಗಳ ನಂತರ, ತನ್ನ ಕಾಲೇಜು ಪರೀಕ್ಷೆಗಳನ್ನು ಬರೆಯುವ ಸಲುವಾಗಿ ಬಾರ್ಶಶ್ರೀ ಅವರು ಗೋಲಾಘಾಟ್ ಜಿಲ್ಲೆಯ ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿದರು. ನ್ಯಾಯಾಲಯವು ಬಾರ್ಶಶ್ರೀ ಪರವಾಗಿ ನಿಂತಿತ್ತು. ಹೀಗಾಗಿ ಜುಲೈ 16, 2022 ರಂದು ಪ್ರಾರಂಭವಾದ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಿತು.

ಮಾರ್ಚ್ 18ರಂದು ಗೋಲಾಘಾಟ್ ಸೆಷನ್ಸ್ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಬಾರ್ಶಶ್ರೀ ಅವರನ್ನು ಖುಲಾಸೆಗೊಳಿಸಿದ ನಂತರ, ಅವರ ಸಹೋದರ ಅರಿಂದೋಮ್ ಬುರ್ಹಾಗೋಹೈನ್ ಅವರು ‘ಇಂಡಿಯಾ ಟುಡೆನೆ’ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, “ನಮಗೆ ನ್ಯಾಯ ಸಿಕ್ಕಿತು, ಅಂತಿಮವಾಗಿ ಸತ್ಯಕ್ಕೆ ಜಯ ಸಂದಿದೆ” ಎಂದಿದ್ದಾರೆ.

ಜುಲೈ 22, 2022 ರಿಂದ ಬಾರ್ಶಶ್ರೀ ಬುರಾಗೊಹೈನ್ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...