Homeಮುಖಪುಟಪಾಕಿಸ್ತಾನಿ ಲೇಖಕನ ಪುಸ್ತಕ ಬೋಧನೆಗೆ ಬಿಜೆಪಿ ಸಂಸದ ಆಕ್ಷೇಪ: 252 ಶಿಕ್ಷಣ ತಜ್ಞರ ಖಂಡನೆ

ಪಾಕಿಸ್ತಾನಿ ಲೇಖಕನ ಪುಸ್ತಕ ಬೋಧನೆಗೆ ಬಿಜೆಪಿ ಸಂಸದ ಆಕ್ಷೇಪ: 252 ಶಿಕ್ಷಣ ತಜ್ಞರ ಖಂಡನೆ

- Advertisement -
- Advertisement -

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವು ಪಾಕಿಸ್ತಾನಿ ಲೇಖಕರೊಬ್ಬರ ಪುಸ್ತಕವನ್ನು ಬೋಧಿಸುತ್ತಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ರಾಜ್ಯಸಭೆಯಲ್ಲಿ ಪಾಕಿಸ್ತಾನಿ ಲೇಖಕರ ಪುಸ್ತಕದ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರ ಪ್ರಶ್ನೆಯನ್ನು 252 ಶಿಕ್ಷಣ ತಜ್ಞರು ಖಂಡಿಸಿದ್ದಾರೆ.

ಪಾಕಿಸ್ತಾನಿ ಲೇಖಕರ ಪುಸ್ತಕದ ಸಿಂಧುತ್ವದ ಬಗ್ಗೆ ಯಾದವ್ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದು, ಇದು “ಭಯೋತ್ಪಾದನೆಯನ್ನು ಬೆಂಬಲಿಸುತ್ತದೆಯೇ?” ಮತ್ತು “ಭಾರತೀಯ ನಾಗರಿಕರಿಗೆ ಅವಮಾನಕರವಾಗಿದೆಯೇ? ಎಂದು ಸಂಸತ್ತಿನಲ್ಲಿ ಶಿಕ್ಷಣ ಸಚಿವಾಲಯದಿಂದ ಉತ್ತರವನ್ನು ಕೇಳಿದ್ದರು.

ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಭಯೋತ್ಪಾದನೆ ಬೋಧಿಸಲಾಗುತ್ತಿದೆ ಎನ್ನುವ ರೀತಿಯಲ್ಲಿ ಬಿಜೆಪಿ ಸಂಸದರು ಪ್ರಶ್ನೆಸಿರುವುದನ್ನು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆ 252 ಶಿಕ್ಷಣ ತಜ್ಞರು ಮತ್ತು ವಿದ್ವಾಂಸರ ಗುಂಪು ಖಂಡಿಸಿ, ಹೇಳಿಕೆ ಬಿಡುಗಡೆ ಮಾಡಿದ್ದಾರೆ.

252 ಶಿಕ್ಷಣ ತಜ್ಞರಲ್ಲಿ ಪ್ರಮುಖ ಇತಿಹಾಸಕಾರ ಮತ್ತು ಶೈಕ್ಷಣಿಕ ರೊಮಿಲಾ ಥಾಪರ್, ಜೆಎನ್‌ಯುನ ಪ್ರೊಫೆಸರ್ ಎಮೆರಿಟಾ ಸೇರಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಸತೀಶ್ ದೇಶಪಾಂಡೆ, ನಂದಿನಿ ಸುಂದರ್, ಅಭಾ ದೇವ್ ಹಬೀಬ್ ಮತ್ತು ಅಪೂರ್ವಾನಂದ್. ಸುಕಾಂತ ಚೌಧುರಿ, ಜಾದವ್‌ಪುರ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ. ಲಕ್ಷ್ಮಿ ಸುಬ್ರಮಣಿಯನ್ ಮತ್ತು ಪಾರ್ಥ ಚಟರ್ಜಿ, ಕಲ್ಕತ್ತಾದ ಸಮಾಜ ವಿಜ್ಞಾನಗಳ ಅಧ್ಯಯನ ಕೇಂದ್ರದ ಗೌರವ ಪ್ರಾಧ್ಯಾಪಕರು. ಜೆಎನ್‌ಯು ಪ್ರಾಧ್ಯಾಪಕಿ ಆಯೇಷಾ ಕಿದ್ವಾಯಿ. ಕೇರಳ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ ನಿರ್ದೇಶಕಿ ಜಿ. ಅರುಣಿಮಾ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಿಂದ ಇತಿಹಾಸ ಪ್ರಾಧ್ಯಾಪಕ ಮೃದು ರೈ. ಮತ್ತು ಐಐಟಿ ದೆಹಲಿಯಿಂದ ಸಿಮೋನಾ ಸಾಹ್ನಿ ಹಲವಾರು ಇತರರು ಬಿಜೆಪಿ ಸಂಸದರ ಪ್ರಶ್ನೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂಬ ಫ್ಲೆಕ್ಸ್ ಹಾಕಿದ ಬಿಜೆಪಿಯ ಆಯನೂರು ಮಂಜುನಾಥ್!

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವು ಪಾಕಿಸ್ತಾನಿ ಲೇಖಕರೊಬ್ಬರ ಪುಸ್ತಕವನ್ನು ಬೋಧಿಸುತ್ತಿತ್ತು. ಈ ಬಗ್ಗೆ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಒಂದು ವರ್ಷದ ಬಳಿಕ ಪಠ್ಯಕ್ರಮದಿಂದ ಅದನ್ನು ತೆಗೆದುಹಾಕಬೇಕಾಯಿತು. ಪಾಕಿಸ್ತಾನಿ ಲೇಖಕರ ಪುಸ್ತಕವನ್ನು ಜಾಮಿಯಾ, ಎಎಂಯು ಅಥವಾ ಇನ್ನಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿಸಲಾಗುತ್ತಿದೆಯೇ? ಎಂದು ಯುಜಿಸಿ (ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು) ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕೇಳಿದೆ.

ಮಾರ್ಚ್ 16 ರಂದು ರಾಜ್ಯಸಭೆಯಲ್ಲಿ ಈ ಪ್ರಶ್ನೆಯನ್ನು ಎತ್ತಲಾಯಿತು, ಅಲ್ಲಿ ಮಾರ್ಚ್ 22, 2023 ರೊಳಗೆ ಪ್ರತಿಕ್ರಿಯಿಸಲು ಕೇಂದ್ರೀಯ ವಿಶ್ವವಿದ್ಯಾಲಯಗಳ ರಿಜಿಸ್ಟ್ರಾರ್‌ಗಳಿಗೆ ತಿಳಿಸಲಾಯಿತು. ಲೇಖಕರ ಹೆಸರನ್ನು ಉಲ್ಲೇಖಿಸದೆ ಯುಜಿಸಿ ತನ್ನ ಪ್ರಶ್ನೆಯಲ್ಲಿ, ”ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಅಥವಾ ಯಾವುದೇ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಪಾಕಿಸ್ತಾನದ ಲೇಖಕರ ಪುಸ್ತಕವನ್ನು ಬೋಧಿಸಲಾಗುತ್ತಿದೆ ಎಂಬ ಅಂಶವನ್ನು ಸರ್ಕಾರ ಗಮನಿಸಿದೆಯೇ? ಎಂದು ಕೇಳಿದೆ. ಆ ಪುಸ್ತಕದಲ್ಲಿ ಭಾರತೀಯ ನಾಗರಿಕರನ್ನು ಅವಮಾನಿಸಲಾಗಿದೆಯೇ? ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುತ್ತದೆಯೇ?” ಎಂದು ಯುಜಿಸಿ ಕೇಳಿದೆ.

ಪಾಕಿಸ್ತಾನಿ ಲೇಖಕರು ಬರೆದಿರುವ ಪಠ್ಯಪುಸ್ತಕಗಳ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸರ್ಕಾರವು ಮುಂದಾಗುತ್ತದೆಯೇ? ಎಂದು ಯುಜಿಸಿ ಪ್ರಶ್ನಿಸಿದೆ.

ಈ ಬಗ್ಗೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊಫೆಸರ್ ನಜೀಮ್ ಹುಸೇನ್ ಜಾಫ್ರಿ ಪ್ರತಿಕ್ರಿಯಿಸಿ, ”ನಮ್ಮ ವಿಶ್ವವಿದ್ಯಾಲಯದ ನಿಗದಿತ ಪಠ್ಯಕ್ರಮದಲ್ಲಿ ಪಾಕಿಸ್ತಾನಿ ಲೇಖಕರ ಪುಸ್ತಕವನ್ನು ಭೋದಿಸಲಾಗುತ್ತದೆ ಆದರೆ ಅದರಲ್ಲಿ ಯಾವದೇ ಅವಹೇಳನಕಾರಿ ಅಥವಾ ಭಯೋತ್ಪಾದನೆಯನ್ನು ಬೆಂಬಲಿಸುವ ಬೋಧನೆಗಳಿಲ್ಲ ಎಂದು ನಾವು ಈಗಾಗಲೇ ಯುಜಿಸಿ ಪತ್ರಕ್ಕೆ ಪ್ರತಿಕ್ರಿಯಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಆದರೂ, ಕಳೆದ ವರ್ಷ ಪಾಕಿಸ್ತಾನಿ ಲೇಖಕರ ಬೋಧನೆಗಳು ಆಕ್ಷೇಪಾರ್ಹವೆಂದು ಕೆಲವು ದೂರುಗಳು ಬಂದ ನಂತರ ಪಾಕಿಸ್ತಾನಿ ಲೇಖಕರೊಬ್ಬರ ಬೋಧನೆಗಳನ್ನು ಪಠ್ಯದಿಂದ ತೆಗೆದುಹಾಕಲು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನಿರ್ಧರಿಸಿತು. ಎರಡು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸುವ ಈ ಕಲ್ಪನೆಯನ್ನು ಜಾಫ್ರಿ ವಿರೋಧಿಸಿದ್ದಾರೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಜಾಮಿಯಾ ಹಮ್ದರ್ದ್ ವಿಶ್ವವಿದ್ಯಾಲಯದಲ್ಲಿ ಜಿಹಾದಿ ಇಸ್ಲಾಮಿಕ್ ಕೋರ್ಸ್ ಪಠ್ಯಕ್ರಮದ ಬಗ್ಗೆ ಕಳೆದ ವರ್ಷ 25 ಶಿಕ್ಷಣತಜ್ಞರು ಭಾರತದ ಪ್ರಧಾನಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಅಬುಲ್ ಅಲಾ ಮೌದೂದಿಯವರ ಬರಹಗಳು ಮೂರು ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದ ಭಾಗವಾಗಿರುವುದು ತೀವ್ರ ಕಳವಳ ಮತ್ತು ಕಳವಳಕಾರಿ ಸಂಗತಿ ಎಂದು ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ವಿಶ್ವವಿದ್ಯಾಲಯವು ಪಠ್ಯಕ್ರಮದಿಂದ ಆ ಭಾಗವನ್ನು ಅಧಿಕೃತವಾಗಿ ತೆಗೆದುಹಾಕಬೇಕಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....