Homeಚಳವಳಿಪ್ರತ್ಯೇಕವಾಗುಳಿವುದ ನಿಲ್ಲಿಸಿ ಜೊತೆಗೂಡಿದರೆ, ನಾವೇ ಈ ದೇಶದ ಬಲಶಾಲಿ ಬಹುಸಂಖ್ಯಾತರು

ಪ್ರತ್ಯೇಕವಾಗುಳಿವುದ ನಿಲ್ಲಿಸಿ ಜೊತೆಗೂಡಿದರೆ, ನಾವೇ ಈ ದೇಶದ ಬಲಶಾಲಿ ಬಹುಸಂಖ್ಯಾತರು

- Advertisement -
- Advertisement -

ತೆಲಂಗಾಣದ ಸುಜಾತಾ ಸೂರೆಪಲ್ಲಿ ಸುಸ್ತೇ ಆಗದ ದಿಟ್ಟ ಹೋರಾಟಗಾರ್ತಿ ಎಂದು ಹೆಸರು ಪಡೆದವರು. ಬಿಎಸ್‍ಪಿ ಪಕ್ಷದಿಂದ ಒಮ್ಮೆ ಚುನಾವಣೆಗೂ ಸ್ಪರ್ಧಿಸಿದ್ದ ಆಕೆ, ಜಾತಿ ದೌರ್ಜನ್ಯ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಡುತ್ತಿರುವವರು. ಬರಹಗಾರ್ತಿ ಮತ್ತು ಪರಿಸರ ಸಂಬಂಧಿ ಆಂದೋಲನಗಳಲ್ಲೂ ಅವರು ಸಕ್ರಿಯರು. ಶಾತವಾಹನ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರವನ್ನು ಬೋಧಿಸುವ ಸುಜಾತಾ ಅವರು ತಮ್ಮ ನಿಲುವುಗಳಿಗಾಗಿ ಬಲಪಂಥೀಯರಿಂದ ಟ್ರೋಲ್‍ಗೂ ಒಳಗಾಗಿದ್ದರು ಈ ಲೇಖನವನ್ನು ಕನ್ನಡಕ್ಕೆ ಮಲ್ಲಿಗೆ ಸಿರಿಮನೆಯವರು ಅನುವಾದಿಸಿದ್ದಾರೆ.

ಆಗಸ್ಟ್ 15ರಂದು ಮೋದಿ `ಒಂದು ರಾಷ್ಟ್ರ, ಒಂದು ಗ್ರಿಡ್’ (ಬಹುಶಃ ಒಂದು ಧರ್ಮ ಎಂಬುದು ನೇರವಾಗಿ ಉಚ್ಚರಿಸದಿರುವ ಪದ ಇರಬಹುದು) ಎಂದು ಹೇಳಿದರು. ಇದು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಮತ್ತು ನಮ್ಮೆಲ್ಲರಿಗೆ ಒಂದು ಎಚ್ಚರಿಕೆಯೆಂದು ಭಾವಿಸಬೇಕಾದದ್ದು.

ಭಾರತ ಈಗ ಕಷ್ಟಕಾಲದ ಮೂಲಕ ಹಾದುಹೋಗುತ್ತಿದೆ. ಭಾರತದ ಸನ್ನಿವೇಶವನ್ನು ಮೋದಿಗು ಮೊದಲು ಮತ್ತು ಮೋದಿಯ ನಂತರ ಎಂದು ನಾವು ವಿಭಾಗಿಸಿಕೊಂಡು ಅರ್ಥಮಾಡಿಕೊಳ್ಳಬೇಕು. ಈ ಅವಧಿಯಲ್ಲಿ ನಾವು ಗೌರಿ ಲಂಕೇಶ್ ಮತ್ತು ಅವರಂತಹ ಅನೇಕ ಅನೇಕ ದಿಟ್ಟ ಹೋರಾಟಗಾರರನ್ನು ಕಳೆದುಕೊಂಡೆವು. ಗೌರಿ ಧರ್ಮದ ದಬ್ಬಾಳಿಕೆಯನ್ನು ಪ್ರಶ್ನಿಸಿದರು; ಇಂದಿನ ಕಾಲದಲ್ಲಿ ಸಹಿಸಲಸಾಧ್ಯವೆನ್ನಿಸಿಕೊಳ್ಳುವಂತಹ ಹಲವು ವಿಷಯಗಳ ಬಗ್ಗೆ ದಿಟ್ಟವಾಗಿ ಬರೆದರು ಮಾತ್ರವಲ್ಲ, ಒಂಟಿಗೈಯ್ಯಲ್ಲಿ ಅನೇಕ ಮೂಲಭೂತ ವಿಚಾರಗಳಿಗಾಗಿ ಹೋರಾಟ ನಡೆಸಿದರು.

ಇಂದು ರಾಜಕೀಯ ಅಧಿಕಾರ ಪಡೆದ ನಂತರ ಹಿಂದುತ್ವವು ಸಮಾಜದ ಎಲ್ಲ ಸ್ತರಗಳ ಜನರಲ್ಲೂ ಬೇರೂರಿಬಿಟ್ಟಿದೆ. ಅದಕ್ಕಿಂತ ಭಿನ್ನವಾಗಿ ಆಲೋಚಿಸುವವರನ್ನು ಒಂದೋ ಒಳಗೆ ಹಾಕಿಕೊಳ್ಳಲು ನೋಡುತ್ತಿದ್ದಾರೆ ಅಥವಾ ಕೊಲ್ಲುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ದುಸ್ಥಿತಿ ತಲುಪಿರುವ ಜನರು ಸ್ಥಳೀಯ ಸಂಘಟನೆಗಳ ನೆರವು ಪಡೆಯಲು ನೋಡುತ್ತಿದ್ದಾರೆ. ಆದರೆ ಬಹುಪಾಲು ಸಂಘಟನೆಗಳು ಕೇಸರಿ ವಿಷ ತುಂಬಿಕೊಂಡಿವೆ. ನೋಟು ರದ್ಧತಿ ಮತ್ತು ಜಿಎಸ್‍ಟಿಯು ಭಾರೀ ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಾ ಕೆಳ ಮತ್ತು ಮಧ್ಯಮ ವರ್ಗವನ್ನು ಹೆಚ್ಚೂಕಡಿಮೆ ಕೊಂದೇ ಬಿಟ್ಟಿದೆ. ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್‍ಗಳು ರಾಜಕೀಯ ಅಧಿಕಾರ ಪಡೆಯಲು ದಾರಿ ಮಾಡಿಕೊಟ್ಟವು. ಇದರಿಂದಾಗಿ ಕಾಶ್ಮೀರದ ಪ್ರಜಾತಂತ್ರದ ಮೇಲೆ ದಾಳಿ ಮಾಡಲು, 370ನೇ ವಿಧಿಯನ್ನು ಕಿತ್ತು ಹಾಕಲು ಸಾಧ್ಯವಾಯಿತು. ಇಷ್ಟೆಲ್ಲ ನಡೆದರೂ ಬಹುಸಂಖ್ಯಾತರ ಮೌನವು ಆತಂಕ ಹುಟ್ಟಿಸುವಂತಿದೆ. ಭಾರತದ ನಿಜವಾದ ಗುಣ ಇದಾಗಿರಲಿಲ್ಲ!

ನಮಗೆ ಭಾರತದ ಬಗ್ಗೆ ಹೆಮ್ಮೆ ಇತ್ತು; ಅದರ `ವಿವಿಧತೆಯಲ್ಲಿ ಏಕತೆ’ಯ ಕಾರಣಕ್ಕಲ್ಲ, ಬದಲಿಗೆ ಅದರ ನಿಜವಾದ ಬಹುತ್ವದ ಗುಣದ ಕಾರಣಕ್ಕೆ. ಈ ಬಹುತ್ವವೇ ನಮ್ಮ ಸಂವಿಧಾನಗಳಲ್ಲಿ ಅಡಕಗೊಂಡಿರುವುದು ಮತ್ತು ಅದಕ್ಕಾಗಿ ಭಾರತದ ಈ ಗುಣವನ್ನೇ ನಾವೆಲ್ಲ ಕಲಿತದ್ದು ಮತ್ತು ಬದುಕಿದ್ದು. ದಾರ್ಶನಿಕ ಮತ್ತು ಮಾನವ ಹಕ್ಕುಗಳ ದಂತಕಥೆ, ಡಾ.ಬಾಬಾ ಸಾಹೇಬರು ತಮ್ಮ ಬದುಕಿನುದ್ದಕ್ಕೂ ಹಲವು ಬಗೆಯ ಸಿದ್ಧಾಂತಗಳ ಜೊತೆ ಪ್ರಯೋಗಗಳನ್ನು ನಡೆಸಿದ್ದು ಈ ನಿಟ್ಟಿನಲ್ಲಿ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಜೊತೆ. ಭಾರತದ ಬಹುಸಂಖ್ಯಾತ ಜನರಿಗೆ, ತಮ್ಮನ್ನು ಹಿಂದುತ್ವದ ಸಾಂಸ್ಕೃತಿಕ ದಬ್ಬಾಳಿಕೆಯಿಂದ ರಕ್ಷಿಸುವ ಏಕೈಕ ಆಸರೆಯೆಂದರೆ ಬಾಬಾಸಾಹೇಬರ ಸಂವಿಧಾನ ಮಾತ್ರ.

ಜಾತಿಯ ದಬ್ಬಾಳಿಕೆಯ ಕುರಿತು ಮಾತನಾಡದಿದ್ದರೆ ಭಾರತದ ಚಿತ್ರಣ ಅಪೂರ್ಣವಾಗುತ್ತದೆ. ಈಗ ಜಾತಿ ಕ್ರೌರ್ಯವೆಂಬುದು ಕೇವಲ ಬಡ, ಶೋಷಿತ, ಹಳ್ಳಿಗಳ ದಲಿತರ ಮೇಲೆ ಮಾತ್ರ ನಡೆಯುತ್ತಿರುವಂಥದ್ದಾಗಿ ಉಳಿದಿಲ್ಲ. ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ರೋಹಿತ್ ವೇಮುಲನ ಕ್ರೂರವಾದ ಕೊಲೆಯನ್ನು (ನಾವು ಅದನ್ನು ಆತ್ಮಹತ್ಯೆಯೆಂದು ಕರೆಯುವುದಿಲ್ಲ), ಪೆರುಮಲ್ಲ ಪ್ರಣಯ್ ಎಂಬ ಯುವಕ ವೈಶ್ಯ ಸಮುದಾಯದ ಯುವತಿಯನ್ನು ಮದುವೆಯಾದದ್ದಕ್ಕಾಗಿ ಪ್ರಾಣ ತೆತ್ತದ್ದನ್ನು ನೋಡಿದರೆ, ಜಾತಿಯನ್ನು ಪ್ರಶ್ನಿಸುವ ವಿದ್ಯಾವಂತರನ್ನೂ, ರಾಜಕೀಯ ತಿಳಿವಳಿಕೆ ಉಳ್ಳವರನ್ನೂ ಬಿಡದೆ ಅದು ಬಲಿಪಡೆಯುತ್ತದೆಂದು ಒಪ್ಪಬೇಕಾಗುತ್ತದೆ. ಶೋಷಿತರ ಪರವಾಗಿ ದನಿಯೆತ್ತಿದ್ದಕ್ಕಾಗಿ ಇಂದು ದಲಿತರು ಬಲಿಯಾಗುತ್ತಿದ್ದಾರೆ. ದಲಿತ ಹೋರಾಟಗಾರ ಚಂದ್ರಶೇಖರ್ ಆಜಾದರ ಬಂಧನ ಮತ್ತು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಚಿಂತಕರು, ಬುದ್ಧಿಜೀವಿಗಳು, ವಕೀಲರು ಮತ್ತು ಹೋರಾಟಗಾರರ ಬಂಧನವಾಗುತ್ತಿರುವುದು ಸಮಾಜದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳು ಬಿಕ್ಕಟ್ಟಿನಲ್ಲಿರುವುದನ್ನು ತೋರುತ್ತದೆ. ದಲಿತ ಮತ್ತು ಮುಸ್ಲಿಂ ಸಮುದಾಯಗಳನ್ನು ಕೇವಲ ಗೋವಿನ ಹೆಸರಿನಲ್ಲಷ್ಟೇ ಅಲ್ಲ, ಶ್ರೀರಾಮನ ಜಯಘೋಷ ಮಾಡಲಿಲ್ಲವೆಂದೂ ಕೂಡಾ ದಾಳಿಗಳಿಗೆ ಗುರಿಮಾಡಲಾಗುತ್ತಿದೆ. ಜಾರ್ಖಂಡದ ಘಟನೆ, ಅನ್ಸಾರಿಯ ಸಾವನ್ನು ನಾವು ಇನ್ನೂ ಮರೆತಿಲ್ಲ.

ತೆಲಂಗಾಣದ ವಿಷಯಕ್ಕೆ ಬಂದರೆ, ಈ ನಾಡು ಸಾಂಸ್ಕೃತಿಕ ಮತ್ತು ಧಾರ್ಮಿಕ ಬಹುತ್ವದ ಪರಂಪರೆಯುಳ್ಳ ಪ್ರದೇಶ. ಹೋರಾಟಗಳ ತವರು, ಸ್ವಾಭಿಮಾನ ಚಳವಳಿಯ ನೆಲ, ಭೂಮಿ ಮತ್ತು ಬದುಕಿನ ಸಂಘರ್ಷದ ಸ್ಥಳವಾಗಿ ಪ್ರಸಿದ್ಧಿ ಪಡೆದಿತ್ತು. ಆದರೆ, ಸ್ವತಂತ್ರ ರಾಜ್ಯ ನಿರ್ಮಾಣದ ನಂತರ ಇಲ್ಲಿನ ಸಾಮಾನ್ಯ ಜನರ ಮೇಲಿನ ಶೋಷಣೆ ಹಲವು ಪಟ್ಟು ಹೆಚ್ಚಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬರೆದರೆಂಬ ಕಾರಣಕ್ಕೆ ಹೋರಾಟಗಾರರನ್ನು ಬಂಧಿಸಲಾಗಿದೆ, ವಿದ್ಯಾರ್ಥಿಗಳನ್ನು ಮೂರನೇ ದರ್ಜೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಇತ್ತೀಚಿನವರೆಗೆ ಅಸಾಧ್ಯವಾಗಿದ್ದ ಬಿಜೆಪಿಯ ಪ್ರವೇಶ ಆಳುತ್ತಿರುವ ಪಕ್ಷದ ಮೂಲಕವೇ ರಾಜಕೀಯ ವಾತಾವರಣದೊಳಗೆ ಸಾಧ್ಯವಾಗುತ್ತಿದೆ. ಹೆಸರುಗಳು ಬೇರೆಬೇರೆಯಾದರೂ ಎಲ್ಲ ಪಕ್ಷಗಳೂ ಜಾತಿ-ವರ್ಗ ದಮನವನ್ನು ನಡೆಸುವುದರಲ್ಲಿ ಒಂದೇ ಬಗೆಯ ನೀತಿಗಳನ್ನು ಅನುಸರಿಸುತ್ತಿವೆ. ಬಹುಜನರ ಹೆಸರಿಟ್ಟುಕೊಂಡ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಮುಂದೊಂದು ದಿನ ಈ ಎಲ್ಲ ಪಕ್ಷಗಳೂ ತಮ್ಮ ಸ್ವಾರ್ಥಸಾಧನೆಗಾಗಿ ಒಗ್ಗೂಡಿ ಕೆಲಸ ಮಾಡಿದರೆ ಆಶ್ಚರ್ಯವೇನೂ ಇಲ್ಲ!

ತೆಲಂಗಾಣ ರಾಜ್ಯವೂ ಈಗ ಪೂರ್ತಿ ಮೋದಿ ಸರ್ಕಾರದ ಮಾದರಿಯಲ್ಲೇ ಆಳ್ವಿಕೆ ನಡೆಸುತ್ತಿದೆ. ಬಹುಸಂಖ್ಯಾತರನ್ನು ಅವರ ಪಾಲಿನ ಸಂಪನ್ಮೂಲಗಳನ್ನು ಪಡೆಯಲು ಬಿಡದೆ ವಂಚಿಸಲಾಗುತ್ತಿದೆ; ಬಹುರಾಷ್ಟ್ರೀಯ ಕಂಪನಿಗಳನ್ನು ಮುಕ್ತವಾಗಿ ಆಹ್ವಾನಿಸಲಾಗುತ್ತಿದೆ, ಸಶಸ್ತ್ರ ಪಡೆಗಳನ್ನು ಬಲಗೊಳಿಸುತ್ತಿದೆ ಮತ್ತು ಭಿನ್ನದನಿಗಳನ್ನು ಅಡಗಿಸಲು ನೋಡುತ್ತಿದೆ. ಈಗ ಅವರ ಮುಖ್ಯ ಉದ್ದೇಶವೇ ಆದಾಯ ಸೃಷ್ಟಿಯ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗೀಕರಿಸುವುದು, ಯುರೇನಿಯಮ್ ಗಣಿಗಾರಿಕೆಯನ್ನು ಪ್ರೋತ್ಸಾಹಿಸುವುದು ಮೊದಲಾದವಾಗಿವೆ. ಒಂದು ಇಡೀ ಅವಧಿಯ ಆಳ್ವಿಕೆಯ ನಂತರವೂ ಟಿಆರ್‌ಎಸ್ ತನ್ನ ವಾಗ್ದಾನಗಳನ್ನು ಈಡೇರಿಸಲು ವಿಫಲವಾಗಿದೆ ಮಾತ್ರವಲ್ಲ, ಕುಟುಂಬ ಮತ್ತು ದಬ್ಬಾಳಿಕೆಯ ರಾಜಕಾರಣ ನಡೆಸುತ್ತಾ ರಾಜ್ಯವನ್ನು ಸಂಪೂರ್ಣ ಕಡುಬಡತನಕ್ಕೆ ದೂಡಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ನಿರ್ಲಕ್ಷಿಸಲ್ಪಟ್ಟಿವೆ. ಒಟ್ಟಿನಲ್ಲಿ, ಅಮಾಯಕರನ್ನು ಕೊಲ್ಲುವುದರಲ್ಲಿ, ಹೋರಾಟಗಾರರನ್ನು ಬಂಧಿಸುವುದರಲ್ಲಿ ಮತ್ತು ಹಿಂದುತ್ವವನ್ನು ಹರಡುವುದರಲ್ಲಿ ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳೆರಡೂ ಒಂದೇ ನೀತಿಯನ್ನು ಅನುಸರಿಸುತ್ತಿವೆ.

ಈಗ ನಮ್ಮ ಮುಂದಿರುವ ಒಂದೇ ಮಾರ್ಗವೆಂದರೆ, ನಮ್ಮ ಸಮಾನ ಶತ್ರುವನ್ನು ಗುರುತಿಸುವುದು ಮತ್ತು ಜಾತಿ ವಿರೋಧಿ, ವರ್ಗ ವಿರೋಧಿ ಮತ್ತು ಎಲ್ಲ ಬಗೆಯ ಪ್ರಜಾತಾಂತ್ರಿಕ ಶಕ್ತಿಗಳೂ ಜೊತೆಗೂಡುವುದು. ಇಂದು ದೇಶದ ಪ್ರತಿಯೊಂದು ಪ್ರಜಾತಾಂತ್ರಿಕ ಶಕ್ತಿ ಕೂಡಾ ದಾಳಿಯ ಭೀತಿಯಲ್ಲಿದೆ. ನಾವೆಲ್ಲರೂ ಸಣ್ಣಪುಟ್ಟ ಸೈದ್ಧಾಂತಿಕ ವಿಚಾರಗಳ ಸುತ್ತ ಪ್ರತ್ಯೇಕವಾಗುಳಿಯುವುದನ್ನು ನಿಲ್ಲಿಸಿ ಜೊತೆಗೂಡಿದರೆ, ನಾವೇ ಈ ದೇಶದ ಬಲಶಾಲಿ ಬಹುಸಂಖ್ಯೆಯಾಗುತ್ತೇವೆ; ನಾವೇ ಪ್ರತಿಪಕ್ಷದ ಪಾತ್ರ ವಹಿಸುತ್ತೇವೆ ಮತ್ತು ಬಹುಶಃ ವಿಶಾಲ ಜನಸಮೂಹವನ್ನು ಮುಂದಿನ ದಾಳಿಗಳಿಂದ ಪಾರುಮಾಡಬಹುದು. ಇದಕ್ಕಾಗಿ ನಾವು ಎಲ್ಲ ಬಗೆಯ ವಿಧಾನಗಳನ್ನೂ, ವೇದಿಕೆಗಳನ್ನೂ, ತಂತ್ರಗಳನ್ನೂ ಅನುಸರಿಸಬೇಕಾಗಬಹುದು. ಗೌರಿ ಲಂಕೇಶ್ ಬಹುಶಃ ಒಂಟಿದನಿಯಾದ ಕಾರಣಕ್ಕೆ ಆಕೆಯ ಹತ್ಯೆ ನಡೆದಿರಬಹುದು, ಆದರೆ ನಾವೆಲ್ಲರೂ ಯಾವಾಗ ಜೊತೆಗೂಡಿ ಒಟ್ಟಾಗಿ ಎದ್ದುನಿಲ್ಲುತ್ತೇವೋ ಆಗ ಇಂತಹ ಯಾವ ಬಲಿಗಳೂ ಸಂಭವಿಸಲು ಸಾಧ್ಯವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...