Homeಪುಸ್ತಕ ವಿಮರ್ಶೆಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

ಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

- Advertisement -
- Advertisement -

ಗಾಂಧೀಜಿಗೆ ಸರ್ವೋದಯವಾಗಿ ಕಂಡ ಜಾನ್ ರಸ್ಕಿನ್ ಅವರ ಅನ್ಟು ದಿಸ್ ಲಾಸ್ಟ್ ಶಿರೋಬರಹದ ಬೇರು ಬೈಬಲ್ಲಿನ ಒಬ್ಬ ಉದಾರ ಮನದ ಮಾಲಿಕನ ದೃಷ್ಟಾಂತದಲ್ಲಿದೆ. ಸ್ವರ್ಗ ಸಾಮ್ರಾಜ್ಯದ ರೂಪಕವನ್ನು ಅರ್ಥೈಸಲು ಯೇಸು ಹೇಳುವ ಕತೆ.

ದ್ರಾಕ್ಷಿತೋಟದ ಯಜಮಾನ ಕೂಲಿಯಾಳುಗಳಿಗೆ ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಗೊತ್ತು ಮಾಡಿ ಕೆಲಸಕ್ಕೆ ಕಳುಹಿಸುತ್ತಾನೆ. ತೋಟದೊಡೆಯ ಕೆಲಸವಿಲ್ಲದೇ ಇರುವ ಇತರರನ್ನೂ ಕಂಡು ತಡವಾಗಿದ್ದರೂ ಅವರನ್ನೂ ಕೂಲಿಗೆ ಕಳುಹಿಸುತ್ತಾನೆ. ಅದೇ ರೀತಿಯಲ್ಲಿ ಇನ್ನೂ ದಿನದ ಕೊನೆಯ ಭಾಗದಲ್ಲಿ ಬಂದು ಸೇರಿಕೊಂಡವರಿಗೆಲ್ಲಾ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ಸಂಜೆ ಎಲ್ಲರೂ ಹೊರಡುವಾಗ ಎಲ್ಲರಿಗೂ ಸಮನಾಗಿ ಒಂದು ಬೆಳ್ಳಿ ನಾಣ್ಯದ ಕೂಲಿಯೇ ಸಿಗುತ್ತದೆ. ಮೊದಲು ಕೆಲಸಕ್ಕೆ ಬಂದವರು ಮೊದಲು, ನಡುವೆ ಮತ್ತು ಕೊನೆಗೆ ಬಂದವರೆಲ್ಲರಿಗೂ ಒಂದೇ ಸರಿಸಮ ಕೂಲಿ ಎಂದು ಗೊಣಗಿದಾಗ ತೋಟದೊಡೆಯ ಹೇಳುತ್ತಾನೆ.

“ನಿನಗೆ ಅನ್ಯಾಯ ಮಾಡಲಿಲ್ಲ. ಒಪ್ಪಂದದ ಪ್ರಕಾರ ನಿನಗೆ ನಿನ್ನ ಬೆಳ್ಳಿನಾಣ್ಯ ಸಿಕ್ಕಿದೆ. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನ ಔದಾರ್ಯ ಕಂಡು ನಿನಗೇಕೆ ಅಸೂಯೆ?”

ಈ ಕಟ್ಟ ಕಡೆಯವನಿಗೆ ಎನ್ನುವುದೇ “ಅನ್ ಟು ದಿಸ್ ಲಾಸ್ಟ್.”

ನ್ಯಾಯ ಮತ್ತು ಪ್ರಾಮಾಣಿಕತೆಗಳೆಂಬ ಮೌಲ್ಯಾಧಾರದಲ್ಲಿ ಸಂಪತ್ತನ್ನು ವ್ಯಾಖ್ಯಾನಿಸುವ ರಸ್ಕಿನ್ ಗಾಂಧಿ ಮತ್ತು ಟಾಲ್‌ ಸ್ಟಾಯ್‌ ಒಳಗೊಂಡಂತೆ ಅನೇಕಾನೇಕರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದ್ದರು. ಹಾಗೆಯೇ ಅವರನ್ನು ಬಂಡವಾಳಶಾಹಿಯನ್ನು ಪ್ರತಿನಿಧಿಸುವವರು ವಿರೋಧಿಸುತ್ತಿದ್ದರು. ಸೃಷ್ಟಿಯ ಸಂರಚನೆಯಲ್ಲಿ ಕೈಗಾರಿಕೆಗಳ ಆಡಳಿತಯಂತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಅಮಾನ್ಯವಾಗುತ್ತದೆ ಎಂಬ ಅರಿವನ್ನೂ ಈ ಕೃತಿಯಲ್ಲಿ ಉಸುರಿದ್ದರು.

ಎಲ್ಲಾ ಕೆಲಸಗಳನ್ನೂ ಗೌರವಿಸುತ್ತಾ ಕೊಟ್ಟೆಲ್ಲಾ ಕೆಲಸಗಳಿಗೆ ಸಮವಾಗಿ ಸಂದಾಯ ಮಾಡಬೇಕೆನ್ನುವ ರಸ್ಕಿನ್ ಪ್ರತಿಯೊಬ್ಬರನ್ನೂ ಕುಶಲಿಗಳನ್ನಾಗಿ, ವಿದ್ಯಾವಂತರನ್ನಾಗಿ ರೂಪಿಸುವುದು ಸರಕಾರದ ಕೆಲಸವೆನ್ನುತ್ತಾರೆ. ಅವರ ಆದರ್ಶವೆಂದರೆ; ಯಜಮಾನನು ತನ್ನ ಮಗನನ್ನು ವಿದ್ಯಾವಂತನನ್ನಾಗಿ, ಹಣವಂತನನ್ನಾಗಿ ಆಸ್ಥೆಯಿಂದ ರೂಪಿಸುವಂತೆ ತನ್ನ ಕೆಲಸಗಾರರನ್ನೂ ರೂಪಿಸಬೇಕು.

ಮತ್ತೊಬ್ಬರನ್ನು ಬಳಸಿಕೊಳ್ಳುತ್ತಾ ತಾನು ಸಿರಿವಂತನಾಗುವುದು ಪಾಪದ ಕೆಲಸ. ಅದು ಸರಕಾರದ ಆರ್ಥಿಕತೆಗೂ ಅನ್ಯಾಯ. ತನ್ನ ನೆರೆಯವನನ್ನು ಬಡತನಕ್ಕೆ ದೂಡುತ್ತಾ ತನ್ನನ್ನು ಶ್ರೀಮಂತಗೊಳಿಸಿಕೊಳ್ಳುವ ಯಾವುದೇ ವಿಧಾನ ಅನ್ಯಾಯ. ತಾನೊಬ್ಬ ಸಿರಿವಂತನಾಗಿ ಬಡ ಸಮಾಜದಲ್ಲಿರುವುದು ಮೌಲ್ಯಹೀನ. ಹಾಗಾಗಿ ಸಂಪತ್ತು ಎಂಬುದು ನ್ಯಾಯದ ಆಧಾರದಲ್ಲಿರಬೇಕು. ಇತರರ ದುಡಿಮೆಯಿಂದ ತಾನು ಶ್ರೀಮಂತನಾಗುವುದು ಶೀಲವಲ್ಲ.

ರಾಷ್ಟ್ರೀಯ ಸಂಪತ್ತೆನ್ನುವುದು ಕೆಲವು ಜನರ ಒಟ್ಟುಗೂಡಿಸಿದ ಸಂಪತ್ತಾಗಬಾರದು. ರಾಷ್ಟ್ರದ ಎಲ್ಲಾ ಜನರ ವಿದ್ಯಾರ್ಹತೆ, ಪ್ರತಿಭೆ, ದುಡಿಮೆಗಳಿಂದ ಕ್ರೋಢೀಕರಿಸಿರುವಂತಹ ಸಂಪತ್ತಾಗಬೇಕು. ವ್ಯಕ್ತಿಗತವಾಗಿ ಶ್ರೀಮಂತರಾಗಿರುವವರಿಂದ ಸಮಾಜಕ್ಕೆ ಎಂತಹ ಕೊಡುಗೆ ದೊರಕುತ್ತದೆ!

ವಾಣಿಜ್ಯ ವ್ಯವಹಾರವು ನ್ಯಾಯಸಮ್ಮತವಾಗಿಯೇ ನಡೆಯಬೇಕು. ಏಕೆಂದರೆ ಸೃಷ್ಟಿಯ ವ್ಯವಹಾರಗಳಲ್ಲಿ ತಾರತಮ್ಯವಿಲ್ಲ. ಅದೇರೀತಿ ನ್ಯಾಯದ ಪ್ರಜ್ಞೆಯಿಂದ ಆರ್ಥಿಕ ವ್ಯವಹಾರಗಳೂ ನಡೆಯಬೇಕು. ಆರ್ಥಿಕತೆಯೂ ಕೆಲವು ಜನರ ಕೈಯೊಡೆತನದಲ್ಲಿರದೇ ಸಹಜೀವಿಗಳೆಲ್ಲ ಸರಣಿಯಲ್ಲಿ ವ್ಯಾಪ್ತವಾಗಿ ಪ್ರಾಪ್ತಿಯಲ್ಲಿರಬೇಕು. ರಸ್ಕಿನ್ ಹೇಳುವಂತೆ ಯಾರುಯಾರನ್ನೂ ಕಡೆಯಾಗಿ ನೋಡಬಾರದು, ಯಾರು ಯಾರಿಗೂ ಗುಲಾಮರಾಗಿರಕೂಡದು. ಕೆಲವು ಜನರ ಕೈಯೊಡೆತನದಲ್ಲಿರುವ ಸಂಪತ್ತು ಹಲವು ಜನರನ್ನು ಬಡತನಕ್ಕೆ ದೂಡುತ್ತದೆ.

ರಸ್ಕಿನ್ ಧ್ವನಿಸುವುದಿಷ್ಟೇ, ಜೀವನಕ್ಕೆ ಆಧಾರವಾಗುವುದೋ ಅದೇ ಮೌಲ್ಯ. ಹಣ, ಬೆಲೆ, ಉತ್ಪಾದನೆ ಯಾವುದಾದರೂ ಜೀವಿಗಳ ಜೀವನಕ್ಕೆ ಆಧಾರವಾಗುವುದಾದರೆ ಮಾತ್ರವೇ ಅವು ಮೌಲ್ಯ. ಉಪಯೋಗಿಸದ ಸಂಪತ್ತನ್ನು ಶೇಖರಿಸಿಟ್ಟುಕೊಳ್ಳುವುದು ಸಿರಿವಂತಿಕೆಯ ರೋಗ. ಉತ್ಪಾದನೆಗಳು ಹಣವನ್ನು ಸೃಷ್ಟಿಸುವ ಆಧಾರದಲ್ಲಾಗದೇ ಬಳಕೆಯ ಆಧಾರದಲ್ಲಾದರೆ ಅದು ಉಪಯುಕ್ತ ಮತ್ತು ಮೌಲ್ಯಾಧಾರಿತವಾದ ಪ್ರಗತಿ.

ರಸ್ಕಿನ್‍ರವರ ಆರ್ಥಿಕ ತತ್ವ, ಜೀವನಕ್ಕೆ ಹೊರತಾದ ಸಂಪತ್ತಿಲ್ಲ. ಪ್ರೀತಿ, ಆನಂದ, ಅಭಿಮಾನ ಎಲ್ಲವನ್ನೂ ಒಳಗೊಳ್ಳುವ ಶಕ್ತಿಯೇ ಜೀವನವಾಗಿರುವಾಗ ದೇಶದ ಸರ್ಕಾರವೂ ಕೂಡಾ ಘನತೆಯ ಮತ್ತು ಸಂತೋಷದ ಮನುಷ್ಯರನ್ನು ತನ್ನ ನೆಲದಲ್ಲಿ ರೂಪಿಸಬೇಕು. ಇತರರ ಮರ್ಜಿಯಲ್ಲಿ ದೈನೇಸಿಯಿಂದ ಬದುಕುವಂತಹ ಪರಾವಲಂಬಿಗಳನ್ನಾಗಿ ಮಾಡುವುದಲ್ಲ.

ಇದೇ ರಸ್ಕಿನ್ನನ್ನಿಂದ ಗಾಂಧೀಜಿ ಗ್ರಹಿಸಿದ ಸರ್ವೋದಯ ತತ್ವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...