ಉತ್ತರ ಪ್ರದೇಶ ಸರ್ಕಾರ ಕುಸಿಯದಂತೆ ರಕ್ಷಿಸಲು ಈ ಹತ್ಯೆಯನ್ನು ಪೂರ್ವಯೋಜಿತವಾಗಿ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ದುಬೆ ಶರಣಾಗಿದ್ದಾನೋ ಅಥವಾ ಆತನನ್ನು ಬಂಧಿಸಲಾಗಿದೆಯೇ ಎಂದು ಸ್ಪಷ್ಟಪಡಿಸುವಂತೆ ಅವರು ಗುರುವಾರ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದರು. ಆತನೊಂದಿಗೆ ಕೈ ಮಿಲಾಯಿಸಿರುವವರನ್ನು ಬಹಿರಂಗಪಡಿಸಲು ಆತನ ಫೋನ್ ಕರೆ ವಿವರಗಳ ದಾಖಲೆಯನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದರು.
दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020
ವಿಕಾಸ್ ದುಬೆಯನ್ನು ಕರೆದೊಯ್ಯುತ್ತಿದ್ದ ವಾಹನದ ಅಪಘಾತ ಮತ್ತು ನಂತರ ನಡೆದ ಪೊಲೀಸ್ ಹತ್ಯೆಯ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕೆಂದು ಬಹುಜನ ಸಮಾಜ ಪಕ್ಷದ ಮುಖಂಡೆ ಮಾಯಾವತಿ ಒತ್ತಾಯಿಸಿದ್ದಾರೆ.
ಕಾನ್ಪುರ ಹತ್ಯಾಕಾಂಡದಲ್ಲಿ ಕೊಲ್ಲಲ್ಪಟ್ಟ 8 ಪೊಲೀಸರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಈ ಉನ್ನತ ಮಟ್ಟದ ತನಿಖೆ ಕೂಡ ಅಗತ್ಯವಾಗಿದೆ. ಅಲ್ಲದೆ ಆತನೊಂದಿಗೆ ಸಂಬಂಧಹೊಂದಿದ್ದ ಪೊಲೀಸ್ ಮತ್ತು ಕ್ರಿಮಿನಲ್ ರಾಜಕೀಯ ವ್ಯಕ್ತಿಗಳನ್ನು ಗುರುತಿಸಿ, ಕಠಿಣವಾಗಿ ಶಿಕ್ಷಿಸಬಹುದು. ಅಂತಹ ಕ್ರಮಗಳಿಂದ ಮಾತ್ರ ಉತ್ತರ ಪ್ರದೇಶ ಅಪರಾಧ ಭಾವದಿಮದ ಮುಕ್ತವಾಗಬಹುದು ಎಂದು ಮಾಯಾವತಿ ತಿಳಿಸಿದ್ದಾರೆ.
2. यह उच्च-स्तरीय जाँच इसलिए भी जरूरी है ताकि कानपुर नरसंहार में शहीद हुए 8 पुलिसकर्मियों के परिवार को सही इन्साफ मिल सके। साथ ही, पुलिस व आपराधिक राजनीतिक तत्वों के गठजोड़ की भी सही शिनाख्त करके उन्हें भी सख्त सजा दिलाई जा सके। ऐसे कदमों से ही यूपी अपराध-मुक्त हो सकता है। 2/2
— Mayawati (@Mayawati) July 10, 2020
“ಅಪರಾಧಿಯನ್ನು ಮುಗಿಸಲಾಗಿದೆ, ಆದರೆ ಅಪರಾಧ ಮತ್ತು ಅವನನ್ನು ರಕ್ಷಿಸುವವರ ಬಗ್ಗೆ ಏನು?” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
यह पता लगाना आवश्यक है विकास दुबे ने मध्यप्रदेश के उज्जैन महाकाल मंदिर को सरेंडर के लिए क्यों चुना? मध्यप्रदेश के कौन से प्रभावशाली व्यक्ति के भरोसे वो यहाँ उत्तर प्रदेश पुलिस के एनकाउंटर से बचने आया था?
— digvijaya singh (@digvijaya_28) July 10, 2020
ಇದನ್ನು ನಿರೀಕ್ಷಿಸಲಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಹೇಳಿದ್ದಾರೆ. “ವಿಕಾಸ್ ದುಬೆಯೊಂದಿಗೆ ಸಂಪರ್ಕ ಹೊಂದಿದ್ದ ರಾಜಕೀಯ ವ್ಯಕ್ತಿಗಳು, ಪೊಲೀಸರು ಮತ್ತು ಇತರ ಅಧಿಕಾರಿಗಳು ಈಗ ಎಂದಿಗೂ ತಿಳಿಯುವುದಿಲ್ಲ.” ಎಂದು ಅವರು ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಸತ್ತವರು ಯಾವುದೇ ಕಥೆಗಳನ್ನು ಹೇಳುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
Dead men tell no tales #VikasDubey
— Omar Abdullah (@OmarAbdullah) July 10, 2020
ಫರಿದಾಬಾದ್ನಲ್ಲಿ ಕೊನೆಯದಾಗಿ ಗುರುತಿಸಿಕೊಂಡಿದ್ದ ದುಬೆ ಹರಿಯಾಣದಿಂದ ಮಧ್ಯಪ್ರದೇಶಕ್ಕೆ ಹೇಗೆ ಪ್ರಯಾಣ ಬೆಳೆಸಿದರು ಎಂಬ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.
ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ: ಉತ್ತರ ಪ್ರದೇಶ ಪೊಲೀಸರ ತೀವ್ರ ವೈಫಲ್ಯಕ್ಕೆ ಸಾಕ್ಷಿ…