Homeಮುಖಪುಟನಾವು 162 ಜನ ಶಾಸಕರಿದ್ದೇವೆ: ಬೇಕಿದ್ದರೆ ಬಂದು ನೋಡಿ - ರಾಜ್ಯಪಾಲರಿಗೆ ಶಿವಸೇನೆ ಸಂಜಯ್‌ ರಾವತ್‌...

ನಾವು 162 ಜನ ಶಾಸಕರಿದ್ದೇವೆ: ಬೇಕಿದ್ದರೆ ಬಂದು ನೋಡಿ – ರಾಜ್ಯಪಾಲರಿಗೆ ಶಿವಸೇನೆ ಸಂಜಯ್‌ ರಾವತ್‌ ಆಹ್ವಾನ

- Advertisement -
- Advertisement -

162 ಶಾಸಕರ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ದಂಡನ್ನು ನೋಡಲು ಬನ್ನಿ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್‌, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಯನ್ನು ಆಹ್ವಾನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು “ನಾವೆಲ್ಲರೂ ಒಂದಾಗಿರುತ್ತೇವೆ, ನಮ್ಮ 162 ಶಾಸಕರು ಮೊದಲ ಬಾರಿಗೆ ಗ್ರ್ಯಾಂಡ್ ಹ್ಯಾಟ್‌ ಹೋಟೆಲ್‌ನಲ್ಲಿ ಸೇರುತ್ತಿದ್ದೇವೆ. 7 ಗಂಟೆಗೆ ಬಂದು ನೀವೇ ನೋಡಿ ಎಂದು ಸಂಜಯ್‌ ರಾವತ್‌ ಸವಾಲು ಹಾಕಿದ್ದರೆ. ಆ ಟ್ವೀಟ್‌ಗೆ ಅವರು ರಾಜ್ಯಪಾಲರ ಅಕೌಂಟ್‌ ಅನ್ನು ಸಹ ಟ್ಯಾಗ್‌ ಮಾಡಿದ್ದಾರೆ.

162 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಮೂರು ಪಕ್ಷಗಳು ಹೇಳಿಕೊಂಡ ನಂತರ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ತಮ್ಮ ಶಾಸಕರನ್ನು ಮುಂಬಯಿಯ ಹೋಟೆಲ್‌ಗೆ ಮಂಗಳವಾರ ಸಂಜೆ ಕರೆಸಿದ ನಂತರ ರಾವತ್‌ ಅವರು ಟ್ವೀಟ್ ಮಾಡಿದ್ದಾರೆ.

ಈ ನಡುವೆ ಬಿಜೆಪಿ ಕೂಡ ನಮಗೆ 170 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read