162 ಶಾಸಕರ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ದಂಡನ್ನು ನೋಡಲು ಬನ್ನಿ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಯನ್ನು ಆಹ್ವಾನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ನಾವೆಲ್ಲರೂ ಒಂದಾಗಿರುತ್ತೇವೆ, ನಮ್ಮ 162 ಶಾಸಕರು ಮೊದಲ ಬಾರಿಗೆ ಗ್ರ್ಯಾಂಡ್ ಹ್ಯಾಟ್ ಹೋಟೆಲ್ನಲ್ಲಿ ಸೇರುತ್ತಿದ್ದೇವೆ. 7 ಗಂಟೆಗೆ ಬಂದು ನೀವೇ ನೋಡಿ ಎಂದು ಸಂಜಯ್ ರಾವತ್ ಸವಾಲು ಹಾಕಿದ್ದರೆ. ಆ ಟ್ವೀಟ್ಗೆ ಅವರು ರಾಜ್ಯಪಾಲರ ಅಕೌಂಟ್ ಅನ್ನು ಸಹ ಟ್ಯಾಗ್ ಮಾಡಿದ್ದಾರೆ.
We are all one and together , watch our 162 together for the first time at grand Hyatt at 7 pm , come and watch yourself @maha_governor pic.twitter.com/hUSS4KoS7B
— Sanjay Raut (@rautsanjay61) November 25, 2019
162 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಮೂರು ಪಕ್ಷಗಳು ಹೇಳಿಕೊಂಡ ನಂತರ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ತಮ್ಮ ಶಾಸಕರನ್ನು ಮುಂಬಯಿಯ ಹೋಟೆಲ್ಗೆ ಮಂಗಳವಾರ ಸಂಜೆ ಕರೆಸಿದ ನಂತರ ರಾವತ್ ಅವರು ಟ್ವೀಟ್ ಮಾಡಿದ್ದಾರೆ.
ಈ ನಡುವೆ ಬಿಜೆಪಿ ಕೂಡ ನಮಗೆ 170 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.