Homeಎಕಾನಮಿಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

ಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

- Advertisement -
- Advertisement -

ನಮ್ಮ ದೇಶ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ? ಇನ್ನು ಈ ಪ್ರಶ್ನೆಯನ್ನು ಕೇಳದೇ ಇರಲು ಆಗುವುದಿಲ್ಲ. ಒಂದು ಕಡೆ ಇಡೀ ದೇಶವೇ ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯಲ್ಲಿ ಸಿಲುಕಿಕೊಂಡಿದ್ದರೆ ಅದೇ ಸಮಯದಲ್ಲಿ ದೇಶದ ಅರ್ಥವ್ಯವಸ್ಥೆಯು ನಿಧಾನವಾಗಿ ಕುಸಿಯುತ್ತಿದೆ. ಮೊದಲು ಸಮಸ್ಯೆಯಾಗಿ ಕಂಡುಬಂದಿದ್ದು, ಈಗ ಸಂಕಟದ ರೂಪ ಪಡೆದುಕೊಳ್ಳುತ್ತಿದೆ.

ಇತ್ತೀಚಿಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಆರ್ಥಿಕ ಹಿಂಜರಿತದ ಲಕ್ಷಣಗಳು ಚಿಂತಾಜನಕವಾಗಿವೆ, ಇದಕ್ಕೆ ತುರ್ತಾಗಿ ಏನಾದರೂ ಮಾಡಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇದೇ ರಘುರಾಮ್ ರಾಜನ್ ಅವರು ವಿಶ್ವದಲ್ಲಿ 2008ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಮುಂದೆ ಹೀಗಾಗುವುದಿದೆ ಎನ್ನುವ ಭವಿಷ್ಯವಾಣಿ ನುಡಿದಿದ್ದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಹಾಗಾಗಿ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಕಳೆದ ಕೆಲವು ದಿನಗಳಲ್ಲಿ ಅರ್ಥವ್ಯವಸ್ಥೆಯ ಭಿನ್ನಭಿನ್ನ ಕ್ಷೇತ್ರಗಳಿಂದ ಕೆಟ್ಟ ಸುದ್ದಿಗಳು ಬರುತ್ತಿವೆ. ಆಟೋ ಉದ್ಯಮದಲ್ಲಿ ಹಿಂಜರಿತ ಮತ್ತು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುವ ವಿಷಯ ಈಗ ಸಾಮಾನ್ಯ ವಿಷಯವಾಗಿಬಿಟ್ಟಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ರಾಹುಲ್ ಬಜಾಜ್‍ರಂತಹ ಉದ್ಯಮಿಯೇ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಇಲ್ಲ ಹಾಗೂ ಹೂಡಿಕೆಯೂ ಇಲ್ಲದಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕೇಳಬೇಕಾಯಿತು. ರೈತರ ಸಂಘಟನೆಗಳು ಹಾಗೂ ಡೇರಿ ಉತ್ಪಾದಕರೂ ಸಹ ಅನೇಕ ದಿನಗಳಿಂದ ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. ಈಗ ಬಟ್ಟೆ ತಯಾರಕರು ಆ ಕ್ಷೇತ್ರದಲ್ಲಿ ಪರಿಸ್ಥಿತಿ ದಿನೇದಿನೆ ಕೆಡುತ್ತಿದೆ ಎಂದು ನಿರ್ದಿಷ್ಟವಾಗಿ ಜಾಹೀರಾತನ್ನೇ ಪ್ರಕಟಿಸಿದ್ದಾರೆ. ಪ್ರಾಪರ್ಟಿಯ ವ್ಯಾಪಾರ ಹಲವು ವರ್ಷಗಳಿಂದ ನಿಧಾನವಾಗಿದೆ. ನೋಟುರದ್ದತಿಯ ಸಮಯದಿಂದಲೇ ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯಾಪಾರ ಹದಗಟ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆದಾಗ್ಯೂ ಜನರ ಹೇಳಿಕೆಯ ಮೇಲೆ ಭರವಸೆ ಮಾಡುವುದರ ಬದಲಿಗೆ ನಿಜವಾದ ಅಂಕಿಅಂಶಗಳ ಆಧಾರದ ಮೇಲೆಯೇ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ. ಇತ್ತೀಚಿಗೆ ಹಿಂಜರಿತವನ್ನು ಪುಷ್ಟೀಕರಿಸುವಂತಹ ಅನೇಕ ಅಂಕಿಅಂಶಗಳು ಬಂದಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರಕಾರ ಅರ್ಥವ್ಯವಸ್ಥೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಕಳೆದ 9 ತಿಂಗಳಿಂದ ಈ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅರ್ಥಿಕ ವೃದ್ಧಿಯ ದರ ಕಡಿಮೆಯಾಗುತ್ತಿದೆ. 9% ರಿಂದ 10% ದರದಲ್ಲಿ ವೃದ್ಧಿಯಾಗುತ್ತಿದ್ದ ನಮ್ಮ ಅರ್ಥವ್ಯವಸ್ಥೆ ಈಗ 5.8% ರ ದರಕ್ಕೆ ಕುಸಿದಿದೆ. ಕಳೆದ 20 ವರ್ಷಗಳಲ್ಲಿ ಸತತ ಮೂರು ತ್ರೈಮಾಸಿಕಗಳಲ್ಲೂ (quarterly) ಅಭಿವೃದ್ಧಿ ದರದಲ್ಲಿ ಕುಸಿತ ಕಂಡಿದ್ದು ಕೇವಲ ಮೂರು ಬಾರಿ. ನಿಸ್ಸಂಶಯವಾಗಿಯೂ ಆರ್ಥಿಕ ವೃದ್ಧಿಯ ವಾರ್ಷಿಕ ದರದಲ್ಲಿ ಇಳಿತ ಕಂಡುಬಂದಿದೆಯೇ ಹೊರತು ವೃದ್ಧಿ ನಿಂತಿಲ್ಲ, ಅಥವಾ ಅರ್ಥವ್ಯವಸ್ಥೆಯ ಸಂಕುಚಿತ ಇನ್ನೂ ಶುರು ಆಗಿಲ್ಲ. ಆದರೆ ಭಾರತೀಯ ಅರ್ಥವ್ಯವಸ್ಥೆಗೆ ವೃದ್ಧಿಯ ದರ ಹೆಚ್ಚುತ್ತ ಇರುವುದು ಅತ್ಯಂತ ಅವಶ್ಯಕವಾಗಿದೆ ಹಾಗಾಗಿ ಈ ಸುದ್ದಿಗಳು ಚಿಂತಾಜನಕವಾಗಿವೆ.

ಒಂದು ವೇಳೆ ಕಳೆದ ವರ್ಷ 2018ರಲ್ಲಿ ಜನೆವರಿಯಿಂದ ಮಾರ್ಚ್‍ತನಕದ ತ್ರೈಮಾಸಿಕ ಹಾಗೂ ಈ ವರ್ಷದ ಇವೇ ಮೂರು ತಿಂಗಳ ಹೋಲಿಕೆ ಮಾಡಿದರೆ ಸ್ಪಷ್ಟವಾಗುವುದೇನೆಂದರೆ ಸುಮಾರಾಗಿ ಎಲ್ಲಾ ಮಹತ್ವಪೂರ್ಣ ಕ್ಷೇತ್ರಗಳ ಅರ್ಥವ್ಯವಸ್ಥೆಯಲ್ಲಿ ಕುಸಿತ ಕಂಡುಬಂದಿದೆ. ಕಾರುಗಳು ಮಾರಾಟದಲ್ಲಿ ಕಳೆದ ಬಾರಿ 18% ವೃದ್ಧಿ ಆಗಿತ್ತು, ಈ ಬಾರಿ 23% ಕುಸಿತ ದಾಖಲೆಯಾಗಿದೆ. ಸ್ಕೂಟರ್ ಮತ್ತು ಇತರ ದ್ವೀಚಕ್ರ ವಾಹನಗಳಲ್ಲಿ ಕಳೆದ ಬಾರಿ 16% ಹೆಚ್ಚಳವಿತ್ತು ಆದರೆ ಈ ಬಾರಿ 12% ಕುಸಿತ ಕಾಣಿಸಿಕೊಂಡಿದೆ. ದೈನಂದಿಕ ಬಳಕೆಯ ಉಪಭೋಗದ ವಸ್ತುಗಳ ಮಾರಾಟದಲ್ಲಿ ಕಳೆದ ಬಾರಿಯ 12% ಹೆಚ್ಚಳದ ಹೋಲಿಕೆಯಲ್ಲಿ ಈ ಬಾರಿ ಕೇವಲ 5% ಹೆಚ್ಚಳವಾಗಿದೆ.

ಹೂಡಿಕೆಯಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಹೂಡಿಕೆಯ ಪ್ರೊಜೆಕ್ಟ್ ಗಳ ಮೊತ್ತದಲ್ಲಿ 13% ಹೆಚ್ಚಳವಾಗಿತ್ತು, ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 80% ಕಡಿಮೆ ಆಗಿದೆ. ಆರ್ಥಿಕ ಹಿಂಜರಿತವನ್ನು ಎದರುರಿಸುವುದರಲ್ಲಿ ಸರಕಾರಿ ವೆಚ್ಚದ ಮಹತ್ವಪೂರ್ಣ ಪಾತ್ರ ಇರುತ್ತದೆ. ಆದರೆ ಅದರಲ್ಲೂ ಕುಸಿತವೇ ಕಂಡುಬಂದಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಕಾರದ ಟ್ಯಾಕ್ಸ್ ಆದಾಯ 22% ಹೆಚ್ಚಾಗಿತ್ತು ಆದರೆ ಈ ವರ್ಷ ಕೇವಲ 1.5% ಹೆಚ್ಚಳ ಕಂಡಿದೆ. ರಫ್ತು ಮತ್ತು ಆಮದಿನ ಅಂತರ ಕಳೆದ ಬಾರಿ 15% ಹೆಚ್ಚಾಗಿತ್ತು ಆದರೆ ಈ ಬಾರಿ 1% ಕಡಿಮೆ ಆಗಿದೆ. ಈ ಎಲ್ಲ ಅಂಕಿಅಂಶಗಳು ಹೇಳುವುದೇನೆಂದರೆ ಆರ್ಥಿಕ ಹಿಂಜರಿತದ ಸತ್ಯವನ್ನು ಅಲ್ಲಗೆಳೆಯಲಾಗುವುದಿಲ್ಲ. ಒಂದು ವೇಳೆ ಇದೇ ಪ್ರವೃತ್ತಿ ಇನ್ನೆರಡು ತ್ರೈಮಾಸಿಕಳವರೆಗೆ ಮುಂದುವರೆದರೆ ಕಳೆದ ಮೂರು ದಶಕಗಳ ಅತ್ಯಂತ ಗಂಭೀರ ಸ್ಥಿತಿ ಎದುರಿಸಬೇಕಾಗುವುದು.

ಆರ್ಥಿಕ ಹಿಂಜರಿತವನ್ನು ನಿಭಾಯಿಸಲು ಸಾಧ್ಯವಿದೆ ಆದರೆ ಹಾಗೆ ಮಾಡಲು ಎಲ್ಲಕ್ಕಿಂತ ಮುಂಚೆ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದುರದೃಷ್ಟವಷಾತ್, ಸರಕಾರವು ಇಲ್ಲಿಯತನಕ ಈ ಸತ್ಯವನ್ನು ನೋಡಲು ನಿರಾಕರಿಸುತ್ತಿದೆ. ಜ್ವರದ ಚಿಕಿತ್ಸೆ ಮಾಡುವ ಬದಲಿಗೆ ಥರ್ಮಾಮೀಟರ್ ಅನ್ನು ಒಡೆದುಹಾಕುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಭಾರತದ ಅಂಕಿಅಂಶಗಳ ವಿಭಾಗ ಸಾಧನೆ ಎಷ್ಟಿದೆಯೆಂದರೆ, ವಿಶ್ವಾದ್ಯಂತ ಅದರ ಅಂಕಿಅಂಶಗಳನ್ನು ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತದೆ. ಸ್ವತಃ ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹಾಕಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯಮ್ ಅವರು ಹೇಳುವುದೇನೆಂದರೆ ಭಾರತದ ಜಿಡಿಪಿ ಕನಿಷ್ಠಪಕ್ಷ ಶೇಕಡಾ ಎರಡರಿಂದ ಎರಡೂವರೆವಷ್ಟು ಹೆಚ್ಚಿಸಿ ತೋರಿಸಲಾಗುತ್ತಿದೆ ಎಂದು.

ಇಂತಹದರಲ್ಲಿ ಇನ್ನಷ್ಟು ಚಿಂತೆಯ ವಿಷಯವೇನೆಂದರೆ, ನಿಧಾನವಾಗಿ ಎಲ್ಲಾ ಒಳ್ಳೆಯ ಅರ್ಥಶಾಸ್ತ್ರಜ್ಞರು ಈ ಸರಕಾರವನ್ನು ಬಿಟ್ಟುಹೋಗುತ್ತಿದ್ದಾರೆ. ಕಳೆದ ಕಾರ್ಯಾವಧಿಯಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಬಿಟ್ಟುಹೋದರು. ನಂತರ ಉರ್ಜಿತ್ ಪಟೇಲ್ ನಡುರಸ್ತೆಯಲ್ಲೇ ಬಿಟ್ಟುಹೋದರು. ಅರವಿಂದ ಸುಬ್ರಹ್ಮಣ್ಯಮ್ ಅವರೂ ಕೂಡ ತಮ್ಮ ಕಾರ್ಯಾವಧಿ ಪೂರ್ಣಗೊಳಿಸುವ ಮುನ್ನವೇ ಸರಕಾರವನ್ನು ಬಿಟ್ಟುಹೋದರು. ಹಾಗೂ ಈಗ ಆರ್ಥಿಕ ಸಲಹಾಕಾರ ಸಮಿತಿಯ ಅಧ್ಯಕ್ಷ ವಿವೇಕ್ ದೇಬರಾಯ್ ಕೂಡ ದೂರ ಹೋಗುತ್ತಿದ್ದಾರೆ. ನಿಸ್ಸಂಶಯವಾಗಿಯೂ ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ನಿಪುಣ ಆಟಗಾರರಾಗಿದ್ದಾರೆ ಹಾಗೂ ತಮಗೆ ಬೇಕಾದ ಫಲಿತಾಂಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಅರ್ಥವ್ಯವಸ್ಥೆ ಒಂದು ಬೇರೆಯದೇ ವಿಷಯವಾಗಿದೆ. ನೋಟುರದ್ದತಿಯ ಪ್ರಕರಣವು ವಿವೇಚನೆಯುಳ್ಳ ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಪಡೆಯದೇ ಕೆಲಸ ಮಾಡುವುದರಿಂದ ಎಂತಹ ದುಃಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ತೋರಿಸಿಕೊಟ್ಟಿತು. ಒಬ್ಬ ನಾಯಕದ ಅಜ್ಞಾನ ಮತ್ತು ಅಹಂಕಾರದ ಬೆಲೆಯನ್ನು ಸಂಪೂರ್ಣ ದೇಶ ಭರಿಸಬೇಕಾಗುತ್ತದೆ.

ರೋಗಿಯ ದೇಹ ಜ್ವರದಿಂದ ತಪಿಸುತ್ತಿದೆ. ಕೆಲಸ ಮಾಡಬೇಕಿರುವವರು ಬೇರೆಡೆ ಮುಖ ತಿರುಗಿಸಿ ಕುಳಿತಿದ್ದಾರೆ. ಥರ್ಮಾಮೀಟರ್ ಅನ್ನು ಒಡೆದುಹಾಕಲಾಗಿದೆ. ಹಾಗೂ ಈಗ ಡಾಕ್ಟರ್ ಗಳನ್ನೂ ಒದ್ದೋಡಿಸಲಾಗಿದೆ. ಇದರ ಪರಣಾಮ ಏನಾಗುವುದು ಎನ್ನುವುದನ್ನು ನೀವೇ ಯೋಚಿಸಿನೋಡಿ.

ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...