Homeಕರ್ನಾಟಕNPR ಎಂದರೇನು? ಸಾಧಕ-ಬಾಧಕಗಳೇನು? ಇಲ್ಲಿವೆ ಉತ್ತರಗಳು...

NPR ಎಂದರೇನು? ಸಾಧಕ-ಬಾಧಕಗಳೇನು? ಇಲ್ಲಿವೆ ಉತ್ತರಗಳು…

ವಿವಾದಾತ್ಮಕ ರಾಷ್ಟ್ರೀಯ ನಾಗರಿಕರ ನೋಂದಣಿಗೆ (ಎನ್‌ಆರ್‌ಸಿ) ಒಂದು ಮೆಟ್ಟಿಲು ಎಂದು ಪರಿಗಣಿಸಲಾದ ಎನ್‌ಪಿಆರ್ ಅನ್ನು ಜಾರಿಗೆ ತರುವುದಿಲ್ಲ ಎಂದು ಹತ್ತು ರಾಜ್ಯಗಳು ಈಗಾಗಲೇ ಘೋಷಿಸಿವೆ.

- Advertisement -
- Advertisement -

CAA NRC ಜೊತೆಗೆ NPR ಕೂಡ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟವು 2021 ರ ಜನಗಣತಿಯೊಂದಿಗೆ ಕೈಗೊಳ್ಳಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ನವೀಕರಣಕ್ಕಾಗಿ 3,500 ಕೋಟಿ ರೂ ಗಳನ್ನು ಘೋಷಿಸಿದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ತಿಳಿಯೋಣ ಬನ್ನಿ. ಎನ್‌ಪಿಆರ್‌ನಲ್ಲಿನ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ:

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎಂದರೇನು?

ಎನ್‌ಪಿಆರ್ ಎಂಬುದು ದೇಶದ “ಸಾಮಾನ್ಯ ನಿವಾಸಿಗಳ” ಪಟ್ಟಿಯಾಗಿದ್ದು, ಕಳೆದ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ಥಳೀಯ ಪ್ರದೇಶದಲ್ಲಿ ನೆಲೆಸಿರುವ ವ್ಯಕ್ತಿ ಅಥವಾ ಮುಂದಿನ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಆ ಪ್ರದೇಶದಲ್ಲಿ ವಾಸಿಸಲು ಉದ್ದೇಶಿಸಿರುವ ವ್ಯಕ್ತಿ ಎಂದು ವ್ಯಾಖ್ಯಾನಿಸಲಾಗಿದೆ. ಇದು ಹಳ್ಳಿಯಿಂದ, ಜಿಲ್ಲೆಯಿಂದ, ರಾಜ್ಯಕ್ಕೆ ರಾಷ್ಟ್ರಮಟ್ಟದವರೆಗೆ ಭಾರತದ ಪ್ರತಿಯೊಬ್ಬ ನಿವಾಸಿಗಳ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಹೊಂದಿರುವ ರಿಜಿಸ್ಟರ್ ಆಗಿದೆ.

ಎನ್‌ಪಿಆರ್‌ನ ಭಾಗವಾಗಲು ಏನು ಬೇಕು?

ಜನಗಣತಿ ಅಧಿಕಾರಿ ನಿಮ್ಮ ಪೋಷಕರು, ನಿಮ್ಮ ಕುಟುಂಬ (ಹೆಂಡತಿ ಮತ್ತು ಮಕ್ಕಳು), ಹುಟ್ಟಿದ ದಿನಾಂಕ, ರಾಷ್ಟ್ರೀಯತೆ (ಘೋಷಿಸಿದಂತೆ), ಸಾಮಾನ್ಯ ನಿವಾಸದ ಪ್ರಸ್ತುತ ವಿಳಾಸ ಮತ್ತು ಶಾಶ್ವತ ವಿಳಾಸ, ಉದ್ಯೋಗ ಮತ್ತು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಕೇಳುತ್ತಾರೆ. ಇದು ಸ್ವಯಂ ಘೋಷಣೆಯಾಗಿದ್ದು, ಇದರಲ್ಲಿ ಯಾವುದೇ ದಾಖಲೆಗಳ ಅಗತ್ಯವಿಲ್ಲ.

ಒಬ್ಬರು ಎನ್‌ಪಿಆರ್‌ಗೆ ಹೇಗೆ ದಾಖಲಾಗುತ್ತಾರೆ?

ಏಪ್ರಿಲ್ 1 ರಿಂದ, ಮನೆಯ ಜನಗಣತಿ ಪಟ್ಟಿ ಮಾಡುವುದರ ಜೊತೆಗೆ, ಒಬ್ಬರ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಡೇಟಾದ ಬಗ್ಗೆ ಸರ್ಕಾರವು ಟ್ಯಾಬ್ಲೆಟ್‌ನಲ್ಲಿ ಮಾಹಿತಿಯನ್ನು ನೀಡುತ್ತದೆ. ಆಧಾರ್ ಸಂಖ್ಯೆಯನ್ನು ಹೊಂದಿರುವುದು ಒಬ್ಬರ ಬಯೋಮೆಟ್ರಿಕ್ ಡೇಟಾವನ್ನು ಒದಗಿಸಲು ಸಹಾಯ ಮಾಡುತ್ತದೆ. ಆಧಾರ್ ಹೊಂದಿಲ್ಲದವರು, 12 ಅಂಕಿಯ ಅನನ್ಯ ಸಂಖ್ಯೆಗೆ ದಾಖಲಾಗಬಹುದು ಮತ್ತು ಜನಗಣತಿ ಅಧಿಕಾರಿಗೆ ದಾಖಲಾತಿ ಸಂಖ್ಯೆಯನ್ನು ನೀಡಬಹುದು. ಎಲ್ಲಾ ನಿವಾಸಿಗಳು ಕಡ್ಡಾಯವಾಗಿ ರಿಜಿಸ್ಟರ್‌ಗೆ ದಾಖಲಾಗಬೇಕು.

ಎನ್‌ಪಿಆರ್ ಹೇಗೆ ತಯಾರಿಸಲಾಗುತ್ತದೆ?

ಎನ್‌ಪಿಆರ್‌ಗಾಗಿ ಒದಗಿಸಲಾದ ಮಾಹಿತಿಯನ್ನು ರಾಜ್ಯ ಸರ್ಕಾರ ನೇಮಿಸಿದ ಸ್ಥಳೀಯ ರಿಜಿಸ್ಟ್ರಾರ್ ಪರಿಶೀಲಿಸುತ್ತಾರೆ. ಭಾರತ ಪ್ರಜೆಗಳು ಯಾರು – 1987 ಕ್ಕಿಂತ ಮೊದಲು ಜನಿಸಿದವರು, 1987 ಮತ್ತು 2004 ರ ನಡುವೆ ಜನಿಸಿದವರು, ಅವರಲ್ಲಿ ಕನಿಷ್ಠ ಒಬ್ಬ ಪೋಷಕರು ಭಾರತೀಯ ನಾಗರಿಕರು ಮತ್ತು 2004 ರ ನಂತರ, ಜನನದ ಸಮಯದಲ್ಲಿ ಒಬ್ಬ ಪೋಷಕರು ಭಾರತೀಯ ಪ್ರಜೆ ಮತ್ತು ಇನ್ನೊಬ್ಬರು ಅಕ್ರಮ ವಲಸಿಗರಲ್ಲ ಎಂಬ ನಿಯಮಗಳು ಇದರಲ್ಲಿ ಸ್ಪಷ್ಟವಾಗಿವೆ.

ಪೌರತ್ವವು ಅನುಮಾನಾಸ್ಪದವಾಗಿರುವ ವ್ಯಕ್ತಿಗಳ ವಿವರಗಳನ್ನು ಎನ್‌ಪಿಆರ್‌ನಲ್ಲಿ ರಿಜಿಸ್ಟ್ರಾರ್ “ಸೂಕ್ತ ಟೀಕೆ” ಗಳಿಂದ ಗುರುತಿಸಲಾಗುತ್ತದೆ ಮತ್ತು ಅಂತಹ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗುತ್ತದೆ. ಒಬ್ಬ ವ್ಯಕ್ತಿಯು ಅವನು ಅಥವಾ ಅವಳು ಎನ್‌ಪಿಆರ್‌ನ ಭಾಗವಾಗುತ್ತಾರೆಯೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ರಿಜಿಸ್ಟ್ರಾರ್‌ನಿಂದ ಕೇಳಲಾಗುತ್ತದೆ. ಆಕ್ಷೇಪಣೆಗಳನ್ನು ಆಹ್ವಾನಿಸಲು ಕರಡು ಸ್ಥಳೀಯ ಜನಸಂಖ್ಯಾ ರಿಜಿಸ್ಟರ್ ಅನ್ನು ಪ್ರಕಟಿಸಲಾಗುತ್ತದೆ. ರಿಜಿಸ್ಟ್ರಾರ್ ಈ ಆಕ್ಷೇಪಣೆಗಳನ್ನು ಪರಿಗಣಿಸುತ್ತಾರೆ ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸ್ಥಳೀಯ ಜನಸಂಖ್ಯಾ ರಿಜಿಸ್ಟರ್ ಅನ್ನು ಜಿಲ್ಲಾ ರಿಜಿಸ್ಟ್ರಾರ್ಗೆ ಸಲ್ಲಿಸಲಾಗುವುದು, ಅಲ್ಲಿ ಒಬ್ಬ ವ್ಯಕ್ತಿಯು ತನ್ನ ಹಕ್ಕು ನಿರಾಕರಿಸಲಾಗಿದೆ ಎಂದು ಮೇಲ್ಮನವಿ ಸಲ್ಲಿಸಬಹುದು. ಹಕ್ಕು ಸ್ವೀಕರಿಸಿದರೆ, ವ್ಯಕ್ತಿಯ ಹೆಸರನ್ನು “ಸೂಕ್ತ ಟೀಕೆ” ಗಳೊಂದಿಗೆ ರಿಜಿಸ್ಟರ್‌ನಲ್ಲಿ ನಮೂದಿಸಲಾಗುತ್ತದೆ ಮತ್ತು ರಾಷ್ಟ್ರೀಯ ರಿಜಿಸ್ಟರ್‌ಗಾಗಿ ರಾಜ್ಯಕ್ಕೆ ಸಲ್ಲಿಸಲಾಗುತ್ತದೆ.

ಒಬ್ಬರ ಹೆಸರು ಎನ್‌ಪಿಆರ್‌ನಲ್ಲಿ ಇಲ್ಲದಿದ್ದರೆ ಏನಾಗುತ್ತದೆ?

ಎನ್‌ಪಿಆರ್ ಜನಸಂಖ್ಯಾ ರಿಜಿಸ್ಟರ್ ಆಗಿರುವುದರಿಂದ, ಪ್ರತಿ ನಿವಾಸಿಗಳ ಹೆಸರು ಇರುತ್ತದೆ. ಅದು ಇಲ್ಲದಿದ್ದರೆ, ವ್ಯಕ್ತಿಯು ಸ್ಥಳೀಯ ಜಿಲ್ಲಾ ರಿಜಿಸ್ಟ್ರಾರ್‌ಗಿಂತ ಮೇಲಿರುವ ಉಪ-ಜಿಲ್ಲಾ ಮಟ್ಟದ ರಿಜಿಸ್ಟ್ರಾರ್‌ನೊಂದಿಗೆ ಅರ್ಜಿ ಸಲ್ಲಿಸಬಹುದು. ಎನ್‌ಪಿಆರ್‌ನಲ್ಲಿ ರಿಜಿಸ್ಟ್ರಾರ್ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಪ್ರಕ್ರಿಯೆ ಇಲ್ಲ ಮತ್ತು ಈ ಪ್ರಕ್ರಿಯೆಯನ್ನು ಎನ್‌ಆರ್‌ಸಿಗೆ ಪಟ್ಟಿ ಮಾಡಲಾಗಿದೆ.

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಪರ್ಕವೇನು?

ಎನ್‌ಪಿಆರ್ ಪೂರ್ಣಗೊಂಡ ನಂತರ, ಜನಗಣತಿ ಆಯುಕ್ತರು ಭಾರತದ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ರಚಿಸಲು ಸ್ಥಳೀಯ ರಿಜಿಸ್ಟ್ರಾರ್‌ಗೆ ಸೂಚಿಸುತ್ತಾರೆ. ಹಾಗಾಗಿ ಎನ್‌ಆರ್‌ಸಿಯ ಮೊದಲ ಹಂತವೇ ಎನ್‌ಪಿಆರ್‌. ಎನ್‌ಪಿಆರ್‌ನಲ್ಲಿ ಯಾರ ವಿರುದ್ಧ ಟೀಕೆಗಳನ್ನು ಮಾಡಲಾಗಿದೆ ಎಂದು ರಿಜಿಸ್ಟ್ರಾರ್ ವ್ಯಕ್ತಿಗಳಿಂದ ಮಾಹಿತಿ ಪಡೆಯುತ್ತಾರೆ. ಅವರು ರಿಜಿಸ್ಟ್ರಾರ್ ಕೋರಿದಂತೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಜನಗಣತಿ ಆಯೋಗವು ರಾಷ್ಟ್ರೀಯ ಎನ್‌ಆರ್‌ಸಿ ಹೊಂದಿದ್ದಕ್ಕಾಗಿ ನಾಗರಿಕರಲ್ಲದವರ ಹೆಸರನ್ನು ತೆಗೆದುಹಾಕುತ್ತದೆ. ನಾಗರಿಕರಲ್ಲದವರು ಎಂದು ಘೋಷಿಸಲಾದ ವ್ಯಕ್ತಿಯು ಜನಗಣತಿ ಆಯುಕ್ತರ ಆದೇಶದ 30 ದಿನಗಳಲ್ಲಿ “ಗೊತ್ತುಪಡಿಸಿದ ಪ್ರಾಧಿಕಾರ” ದೊಂದಿಗೆ ಮೇಲ್ಮನವಿ ಸಲ್ಲಿಸಬಹುದು.

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ವ್ಯತ್ಯಾಸ

2011 ರ ಜನಗಣತಿಯಂತೆ ಎನ್‌ಆರ್‌ಸಿ ಎನ್‌ಪಿಆರ್‌ನ ಉಪ-ಗುಂಪಾಗಿರಬೇಕು, ಇದು ದೇಶದ ಸಾಮಾನ್ಯ ನಿವಾಸಿಗಳ ನೋಂದಣಿಯಾಗಿದೆ. ಎನ್‌ಆರ್‌ಸಿಗಿಂತ ಭಿನ್ನವಾಗಿ, ಎನ್‌ಪಿಆರ್ ಪೌರತ್ವ ಎಣಿಕೆಯ ಚಾಲನೆಯಲ್ಲ. ಏಕೆಂದರೆ ಇದರಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುವ ವಿದೇಶಿಯರೂ ಸೇರಿದ್ದಾರೆ. ಎನ್‌ಆರ್‌ಸಿ ನಂತರ, ಒಬ್ಬರು ಅನನ್ಯ ಗುರುತಿನ ಸಂಖ್ಯೆಯೊಂದಿಗೆ ಪೌರತ್ವ ಕಾರ್ಡ್ ಪಡೆಯುತ್ತಾರೆ, ಅದು ಎನ್‌ಪಿಆರ್‌ನಂತೆ ಆಗುವುದಿಲ್ಲ.

ರಾಜ್ಯ ಸರ್ಕಾರಗಳ ಸಹಾಯವಿಲ್ಲದೆ ಎನ್‌ಪಿಆರ್ ಜಾರಿಗೆ ತರಬಹುದೇ?

ಪ್ರಸ್ತುತ ನಿಯಮಗಳ ಪ್ರಕಾರ ರಾಜ್ಯಗಳ ಸಹಕಾರವಿಲ್ಲದೇ ಹೋಗುವುದು ಕಷ್ಟ. ಎನ್‌ಪಿಆರ್ ನಿಯಮಗಳಿಗೆ ರಾಜ್ಯಗಳು ಸ್ಥಳೀಯ, ಉಪ ಜಿಲ್ಲೆ ಮತ್ತು ಜಿಲ್ಲಾ ರಿಜಿಸ್ಟ್ರಾರ್ ಮತ್ತು ಮೇಲ್ಮನವಿ ಅಧಿಕಾರಿಗಳನ್ನು ಗುರುತಿಸಲು ರಾಜ್ಯದ ಸಹಾಯ ಬೇಕಿದೆ. ಪುರಸಭೆ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಹಾಯವೂ ಬೇಕಾಗುತ್ತದೆ. ಆದಾಗ್ಯೂ, ಕೇಂದ್ರವು ಸ್ವತಂತ್ರ ಏಜೆನ್ಸಿಗಳಿಂದ ಜನಗಣತಿ ದತ್ತಾಂಶ ಸಂಗ್ರಹಣೆಯನ್ನು ಪಡೆಯಬಹುದು ಆದರೆ ಪರಿಶೀಲನೆಯ ಸತ್ಯಾಸತ್ಯತೆಯನ್ನು ರಾಜ್ಯ ಸರ್ಕಾರದ ಅಧಿಕಾರಿಗಳೇ ಮಾಡಬೇಕು.

ಎನ್‌ಪಿಆರ್ ಜಾರಿಗೊಳಿಸುವುದಿಲ್ಲ ಎಂದು ಎಷ್ಟು ರಾಜ್ಯಗಳು ಘೋಷಿಸಿವೆ?

ಹತ್ತು ರಾಜ್ಯಗಳು ಎನ್‌ಪಿಆರ್ ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿವೆ. ಅವು ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ಆಂಧ್ರಪ್ರದೇಶ, ಬಿಹಾರ, ಒಡಿಶಾ, ರಾಜಸ್ಥಾನ, ಛತ್ತೀಸ್‌ಘಡ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ರಾಷ್ಟ್ರವಾರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಈ ರಾಜ್ಯಗಳು ಎನ್‌ಪಿಆರ್ ವಿರುದ್ಧ ನಿರ್ಧರಿಸಿದೆ.

ಕೃಪೆ: ಹಿಂದೂಸ್ತಾನ ಟೈಮ್ಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...