ಮಾಂಸಾಹಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಮಾಂಸ ತಿನ್ನುವವರನ್ನು ರಾಕ್ಷಸರು, ಕ್ರೂರಿಗಳು ಎಂದು ಬಿಂಬಿಸಲಾಗುತ್ತಿದೆ. ಆದರೆ ಅದನ್ನು ವಿರೋಧಿಸಿ ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಾರ ‘ಬಾಡು ಸಪ್ತಾಹ’ ಆಚರಿಸುವಂತೆ ಕರೆ ನೀಡಲಾಗಿದೆ. ಈ ಎಲ್ಲಾ ಚರ್ಚೆಗಳ ಹಿನ್ನಲೆಯಲ್ಲಿ ಕನ್ನಡದ ಖ್ಯಾತ ಬಂಡಾಯ ಕವಿ ಎನ್.ಕೆ. ಹನುಮಂತಯ್ಯ ಅವರು ಬರೆದಿರುವ ‘ಗೋವು ತಿಂದು ಗೋವಿನಂತಾದವನು’ ಎಂಬ ಕವಿತೆಯ ಆಯ್ದ ಸಾಲುಗಳು ನಾನುಗೌರಿ.ಕಾಂ ಓದುಗರಿಗಾಗಿ.
ಅಸ್ಪೃಶ್ಯ!
ಹೌದು; ನಾನು ಗೋವು ತಿನ್ನುತ್ತೇನೆ
ಗೋವು ತಿಂದು ಗೋವಿನಂತಾಗಿ
ಗಿರಿ ಕಣಿವೆ ಬಯಲೊಳಗೆಲ್ಲ
ಕುಣಿಯುತ್ತೇನೆ
ನೆಲದ ಮೇಲೆಯೇ ನಿಂತು
ಬಾಲ ಎತ್ತಿ ಕಾಮನಬಿಲ್ಲಿಗೆ
ಬಡಿಯುತ್ತೇನೆ
ಮಳೆಮೋಡಗಳ ತಿವಿದು
ಸುಡುಗಾಡಿಗೆ ಕೆಡವುತ್ತೇನೆ
ಅಸ್ಪೃಶ್ಯ!
ಹೌದು; ನಾನು ಗೋವು ತಿನ್ನುತ್ತೇನೆ
ಗೋವು ತಿಂದು ಗೋವಿನಂತಾಗಿ
ರೋಮರೋಮಗಳಲ್ಲು ಕೆಚ್ಚಲನು ಹೊತ್ತು
ತಿರುಗುತ್ತೇನೆ
ಕಸದ ತೊಟ್ಟಿಯಲಿ ಬಿದ್ದ ಕೂಸುಗಳಿಗೆ
ಹಾಲು ಕುಡಿಸುತ್ತೇನೆ
ಅಸ್ಪೃಶ್ಯ!
ಹೌದು; ನಾನು ಗೋವು ತಿಂದು
ಗೋವಿನಂತಾದವನು
ನೀವು ನೀಡುವ ಮೇವು ತಿಂದು
ನಿಮ್ಮಂಥ ಮನುಷ್ಯನಾಗಲಾರೆ
ಮನುಷ್ಯರನ್ನು ತಿನ್ನಲಾರೆ
ಇದನ್ನೂ ಓದಿ: ಕ್ರಿಯಾ ಮಾಧ್ಯಮ ಪ್ರಕಟನೆಯ ‘ಪ್ಯಾರಿಸ್ ಕಮ್ಯೂನ್-150’
konege govu thindu huchanantaguttene,
dodroga bandhu sayuttene