Homeಮುಖಪುಟಮಹಿಳಾ ನಿಂದನೆ: ಡಾ.ಕೆ.ಸುಧಾಕರ್‌ ಆಯ್ತು, ಈಗ ರಾಜಸ್ತಾನ ಶಿಕ್ಷಣ ಸಚಿವರ ಸರದಿ!

ಮಹಿಳಾ ನಿಂದನೆ: ಡಾ.ಕೆ.ಸುಧಾಕರ್‌ ಆಯ್ತು, ಈಗ ರಾಜಸ್ತಾನ ಶಿಕ್ಷಣ ಸಚಿವರ ಸರದಿ!

- Advertisement -
- Advertisement -

“ಹೆಚ್ಚು ಮಹಿಳಾ ಸಿಬ್ಬಂದಿಗಳು ಇರುವ ಶಾಲೆಗಳಲ್ಲಿ ಜಗಳಗಳು ಹೆಚ್ಚಾಗಿರುತ್ತವೆ” ಎಂದು ರಾಜಸ್ತಾನ ಶಿಕ್ಷಣ ಸಚಿವ ಗೋವಿಂದ ಸಿಂಗ್‌ ದೋಸ್ತಾರ ಸಾರ್ವಜನಿಕವಾಗಿ ಹೇಳಿದ್ದಾರೆ.

ಇದನ್ನು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿದ್ದು, ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಕಾರ್ಯಕ್ರಮದಲ್ಲಿ ಅಕ್ಟೋಬರ್‌ 11ರಂದು ಹೀಗೆ ಮಾತನಾಡಿದ್ದಾರೆ.

“ಶಿಕ್ಷಣ ವಿಭಾಗದ ಮುಖ್ಯಸ್ಥನಾಗಿ ಗಮನಿಸಿದ್ದೇನೆಂದರೆ ಹೆಚ್ಚಿನ ಮಹಿಳಾ ಸಿಬ್ಬಂದಿಯನ್ನು ಹೊಂದಿರುವ ಶಾಲೆಗಳು ವಿವಿಧ ಕಾರಣಗಳಿಗಾಗಿ ಹೆಚ್ಚು ಜಗಳಗಳನ್ನು ಆಡುತ್ತವೆ” ಎಂದಿರುವ ಅವರು, “ಈ ಜಗಳಗಳು ಸಾಮಾನ್ಯವಾಗಿ ತಡವಾಗಿ ಬರುವುದು ಅಥವಾ ಬೇಗ ಹಿಂತಿರುಗುವ ರೀತಿಯ ವಿಷಯಗಳ ಕುರಿತು ಆಗುತ್ತವೆ” ಎಂದು ತಿಳಿಸಿದ್ದಾರೆ.

“ನೀವು ಈ ಸಣ್ಣ ವಿಷಯಗಳನ್ನು ಸರಿಪಡಿಸಿಕೊಂಡರೆ ನೀವು ಯಾವಾಗಲೂ ಪುರುಷರಿಗಿಂತ ಮುಂದೆ ಇರುತ್ತೀರಿ” ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಲೈವ್‌ ಆಗಿರುವ ಈ ವಿಡಿಯೋವನ್ನು ‘ಇಂಡಿಯಾ ಟುಡೇ’ ಅಪ್‌ಲೋಡ್‌ ಮಾಡಿದ್ದು, ಸಚಿವರು ಹೀಗೆ ಮಾತನಾಡುವಾಗ ಇತರರು ತಲೆ ಆಡಿಸುತ್ತಾರೆ ಅಥವಾ ನಗುತ್ತಾರೆ.

ಇದನ್ನೂ ಓದಿರಿ: ಮಹಿಳೆ ಈ 40 ವಿಷಯಗಳನ್ನು ಹೇಳಿದರೆ ಅದನ್ನು ‘ಗುಡ್‌ ನ್ಯೂಸ್‌’ ಎಂದು ಒಪ್ಪಿಕೊಳ್ಳಿ!

ಈ ವರ್ಷದ ಆರಂಭದಲ್ಲಿ, ರಾಜಸ್ತಾನ ಆಡಳಿತ ಸೇವೆಗಳಿಗೆ (ಆರ್‌ಎಎಸ್) ತನ್ನ ಸೊಸೆಯ ಸಹೋದರಿ ಮತ್ತು ಸಹೋದರನ ಆಯ್ಕೆಯಲ್ಲಿ ದೋತ್ಸರ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರು ಆರೋಪವನ್ನು ನಿರಾಕರಿಸಿದ್ದರು ಹಾಗೂ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಹೇಳಿದ್ದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಹಿಳೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಿರುವುದು ಹೆಚ್ಚಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (ವೈದ್ಯ ವೃತ್ತಿ ಹಿನ್ನೆಲೆಯವರು) ಹೀಗೆಯೇ ಮಾತನಾಡಿದ್ದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ಸಂಸ್ಥೆ(ನಿಮ್ಹಾನ್ಸ್)ಯಲ್ಲಿ ಭಾನುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ್ದ ಸಚಿವ ಸುಧಾಕರ್‌, ‘‘ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದ ನಂತರ ಕೂಡಾ ಅವರು ಜನ್ಮ ನೀಡಲು ಇಷ್ಟಪಡುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಾರೆ, ಇದು ಸರಿಯಲ್ಲ’’ ಎಂದಿದ್ದರು.

“ಇಂದು ಇದನ್ನು ಹೇಳಲು ನನಗೆ ಬೇಸರವಾಗುತ್ತಿದೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಅವರು ಮದುವೆಯಾಗಿದ್ದರೂ ಜನ್ಮ ನೀಡಲು ಬಯಸುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಿದ್ದಾರೆ. ನಮ್ಮ ಆಲೋಚನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಇದು ಒಳ್ಳೆಯದಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿರಿ: ಇಂದೋರ್‌ ಕಾಲೇಜಿನಲ್ಲಿ ಲವ್‌ ಜಿಹಾದ್‌ ನಡೆದಿದೆ: ಬಜರಂಗ ದಳ ಆರೋಪ

ಭಾರತೀಯ ಸಮಾಜದ ಮೇಲೆ “ಪಾಶ್ಚಿಮಾತ್ಯ ಪ್ರಭಾವ” ಹೆಚ್ಚಾಗಿದೆ ಎಂದಿದ್ದ ಸುಧಾಕರ್‌, ಜನರು ತಮ್ಮ ಹೆತ್ತವರು ತಮ್ಮೊಂದಿಗೆ ಇರಲು ಇಷ್ಟಪಡುತ್ತಿಲ್ಲ ಎಂದು ಹೇಳಿದ್ದರು.

“ದುರದೃಷ್ಟವಶಾತ್, ಇಂದು ನಾವು ಪಾಶ್ಚಿಮಾತ್ಯ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಅಜ್ಜ-ಅಜ್ಜಿಯರು ನಮ್ಮೊಂದಿಗೆ ಇರುವುದನ್ನು ಬಿಡಿ, ಹೆತ್ತವರೇ ನಮ್ಮೊಂದಿಗೆ ಇರುವುದನ್ನು ನಾವು ಬಯಸುತ್ತಿಲ್ಲ” ಎಂದಿದ್ದರು.

ರಾಜ್ಯದಲ್ಲಿ 97 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ, ನಾಲ್ವರು ಬಲಿ- ಸಚಿವ ಸುಧಾಕರ್‌

ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಸುಧಾಕರ್‌, “ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಒಂದು ರೀತಿಯ ಮಾನಸಿಕ ಸಮಸ್ಯೆ ಹೊಂದಿದ್ದಾರೆ. ಅದು ಸೌಮ್ಯ, ಮಧ್ಯಮ ಮತ್ತು ತೀವ್ರವಾಗಿರಬಹುದು. ಒತ್ತಡ ನಿರ್ವಹಣೆ ಒಂದು ಕಲೆಯಾಗಿದ್ದು, ಈ ಕಲೆಯನ್ನು ಭಾರತೀಯರಾದ ನಾವು ಕಲಿಯಬೇಕಾಗಿಲ್ಲ. ನಾವು ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಜಗತ್ತಿಗೆ ಬೋಧಿಸಬೇಕಾಗಿದೆ. ಯಾಕೆಂದರೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಜಗತ್ತಿಗೆ ಕಲಿಸಿದ ಅದ್ಭುತ ಸಾಧನಗಳಾಗಿವೆ” ಎಂದು ಹೇಳಿದ್ದರು.

ಸುಧಾಕರ್‌ ಅವರು ಮಹಿಳೆಯರ ವಿರುದ್ದ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಸಾಮಾಜಿಕ ಕಾರ್ಯಕರ್ತೆ ಸಂಜ್ಯೋತಿ ಅವರು, “ಮಾನ್ಯ ಆರೋಗ್ಯ ಸಚಿವರೇ ನಿಮಗೆ ಉತ್ತಮವಾದ ಗಂಭೀರ ಚಿಕಿತ್ಸೆಯ ಅಗತ್ಯವಿದೆ. ಅದೃಷ್ಟವಶಾತ್ ನಮ್ಮಲ್ಲಿ ವಿಶ್ವದ ಅತ್ಯುತ್ತಮ ಮಾನಸಿಕ ಆರೋಗ್ಯ ವ್ಯವಸ್ಥೆಯಾಗಿರುವ ಬೆಂಗಳೂರಿನ ನಿಮ್ಹಾನ್ಸ್ ಇದೆ” ಎಂದು ಕಿಡಿ ಕಾರಿದ್ದಾರೆ.

ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ ಎಂಬ ಸಚಿವ ಸುಧಾಕರ್‌ ರವರ ವಿವಾದಾತ್ಮಕ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಆ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದರು.

ಸುದ್ದಿವಾಹಿನಿ ಎಎನ್‌ಐ ಜೊತೆ ಮಾತನಾಡಿದ್ದ ಸಿ.ಟಿ ರವಿಯವರು, “ಸುಧಾಕರ್‌ರವರು ಹೇಳಿಕೆ ಗಮನಿಸಿದೆ. ಎಲ್ಲ ಮಹಿಳೆಯರು ಹಾಗಿಲ್ಲ. ಆದರೆ ಸ್ವಲ್ಪ ಓದಿರುವವರು, ಕೆಲಸ ಮಾಡುವವರು, ಮುಖ್ಯವಾಗಿ ಐಟಿ-ಬಿಟಿಯಲ್ಲಿ ಕೆಲಸ ಮಾಡುವವರ ಮನಸ್ಥಿತಿ ಹೆಚ್ಚು ಹಾಗಾಗಿದೆ. ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದ್ದು ನಾವು ಇದರ ಬಗ್ಗೆ ಆಲೋಚಿಸುತ್ತೇವೆ” ಎಂದಿದ್ದರು.

ಇದನ್ನೂ ಓದಿರಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...