ಇಂದು ಬೆಳಿಗ್ಗೆ ನಡೆದ ಹೈದರಾಬಾದ್ ಎನ್ಕೌಂಟರ್ ಅನ್ನು ಬಿಜೆಪಿಯ ಮನೇಕ ಗಾಂಧಿ ಖಂಡಿಸಿದ್ದಾರೆ. ಈ ಘಟನೆಯು “ಅಪಾಯಕಾರಿ” ಪೂರ್ವನಿದರ್ಶನವನ್ನು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಏನಾಗಿದೆಯೋ ಅದು ತುಂಬಾ ಅಪಾಯಕಾರಿ. ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರನ್ನು ವಿಚಾರಣೆಯ ನಂತರ ಹೇಗಾದರೂ ಗಲ್ಲಿಗೇರಿಸಲಾಗುತ್ತಿತ್ತು. ನ್ಯಾಯಯುತ ವಿಚಾರಣೆಯ ಮೊದಲೇ ನೀವು ಅವರನ್ನು ಹೊಡೆದುರುಳಿಸಿದರೆ, ನಂತರ ನ್ಯಾಯಾಲಯ, ಪೊಲೀಸ್ ಅಥವಾ ಕಾನೂನು ವ್ಯವಸ್ಥೆಯನ್ನು ಹೊಂದಿರುವುದು ಯಾವುದಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.
“ನಾವು ಗನ್ ಎತ್ತಿಕೊಂಡು ಯಾರನ್ನಾದರೂ ಶೂಟ್ ಮಾಡಬಹುದೇ” ಎಂದು ಅವರು ಹೇಳಿದರು.
ಇದನ್ನೂ ಓದಿ: ತೆಲಂಗಾಣ ಪಶು ವೈದ್ಯೆಯ ಅತ್ಯಾಚಾರ, ಕೊಲೆಯ ನಾಲ್ಕು ಆರೋಪಿಗಳು ‘ಎನ್ ಕೌಂಟರ್’ನಲ್ಲಿ ಸಾವು..
ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಅದೇ ಸಮಯದಲ್ಲಿ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಇಂದು ಮುಂಜಾನೆ ತಪ್ಪಿಸಿಕೊಳ್ಳಲು ಯತ್ನಿಸಿದರು ಎಂಬ ಆರೋಪದಲ್ಲಿ ಎನ್ ಕೌಂಟರ್ ಮಾಡಿದ್ದಾರೆ.
Fake ಎನ್ ಕೌಂಟರ್