Homeಅಂಕಣಗಳುಗಾಂಧೀಜಿ 'ತತ್ವರಹಿತ ರಾಜಕೀಯ' ಪಾತಕವೆಂದರು, ಆದರೆ....

ಗಾಂಧೀಜಿ ‘ತತ್ವರಹಿತ ರಾಜಕೀಯ’ ಪಾತಕವೆಂದರು, ಆದರೆ….

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, "ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ.

- Advertisement -
- Advertisement -

| ಎಚ್. ಎಸ್. ದೊರೆಸ್ವಾಮಿ |

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, “ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ. ಅಷ್ಟೇಅಲ್ಲ ಆಂಧ್ರದಲ್ಲಿ, ತೆಲಂಗಾಣದಲ್ಲಿ, ಹರಿಯಾಣದಲ್ಲಿ, ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿರುವುದು ಕುಟುಂಬ ರಾಜಕೀಯ. ಅದಕ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ನೀವು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ’ ಎಂದು ಹೇಳಿ ಬಂದಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕುಟುಂಬ ರಾಜಕೀಯ ನಮ್ಮ ದೇಶಕ್ಕೆ ಅಂಟಿರುವ ಮಹಾವ್ಯಾಧಿ. ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ ಎಂಬುದು ದೇಶದ ದುರ್ದೈವ.

ನಮ್ಮ ಸಂವಿಧಾನವನ್ನು ರಚಿಸಿದವರು ಭಾರತವು ಪ್ರಜಾತಂತ್ರವನ್ನು ಪಾಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 562 ಸಂಸ್ಥಾನಿಕ ರಾಜರುಗಳಿದ್ದರು. ನಾವಷ್ಟೇ ಪೃಥ್ವೀಪತಿಗಳೆಂದು ಅವರು ಭಾವಿಸಿದ್ದರು. ಈ ಪೃಥ್ವೀಪತಿಗಳು ದೇವರ ಅಂಶ ಎಂದು ಅಂದಿನ ಸಮಾಜ ಒಪ್ಪಿಕೊಂಡಿತ್ತು. ಇಂಗ್ಲೆಂಡಿನಲ್ಲಿ ಒಂದು ಭಾವನೆಯಿತ್ತು. ಅದೆಂದರೆ The King does no wrong! ರಾಜನು ತಪ್ಪೇ ಮಾಡುವುದಿಲ್ಲ, ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಿಲ್ಲ ಎಂದೇ ಇದಕ್ಕೆ ಅರ್ಥ.

ಈ ರಾಜರುಗಳಿಗೆ, ತಾವು ಆಳ್ವಿಕೆ ಮಾಡುವ ಈ ರಾಜ್ಯವೆಲ್ಲ ತನ್ನ ಸ್ವತ್ತು, ಇದನ್ನು ಪ್ರಶ್ನಿಸುವ ಹಕ್ಕು ಯಾವ ಪ್ರಜೆಗೂ ಇಲ್ಲ ಎಂಬ ಭಾವನೆ ಇತ್ತು. ಸ್ವಾತಂತ್ರ್ಯ ಬಂದನಂತರ ಸರ್ದಾರ್ ಪಟೇಲರು ಈ 562 ರಾಜರಿಂದಲೂ ರಾಜತ್ವ ಅಧಿಕಾರ ಕಿತ್ತುಕೊಂಡು ಸಂಸ್ಥಾನಗಳಲ್ಲಿ ಪ್ರಜಾರಾಜ್ಯ ಸ್ಥಾಪಿಸಿದರು. ಸ್ವಾತಂತ್ರ್ಯ ಪ್ರಾಪ್ತವಾದ ಈ 72 ವರ್ಷಗಳಲ್ಲಿ ರಾಜಕೀಯ ಬದಲಾಗುತ್ತಾ ಬಂತು. ನೆಹರೂ ಸಂತತಿಯವರು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದರು. ಅವರನ್ನು ಅನುಸರಿಸಿ ಒಂದೊಂದು ರಾಜ್ಯದಲ್ಲೂ ಒಂದೊಂದು ಮನೆತನದವರೂ ತಾವು ರಚಿಸಿದ ರಾಜಕೀಯ ಪಕ್ಷವನ್ನು ತಮ್ಮ ಕುಟುಂಬ ರಾಜಕೀಯವಾಗಿ ಪರಿವರ್ತನೆ ಮಾಡಿದರು.

ಆದರೆ ಹಾಗೆಂದು ಅವರ್ಯಾರು ಇದನ್ನು ಜಗಜ್ಜಾಹೀರು ಮಾಡಲಿಲ್ಲ. ಚಾಣಾಕ್ಷತೆಯಿಂದ ಕುಟುಂಬ ರಾಜಕೀಯವನ್ನು ಬೆಳೆಸುತ್ತಾ ಬಂದರು. ಮೊದಮೊದಲು ನಮ್ಮದು ಕುಟುಂಬ ರಾಜಕೀಯ ಎಂಬುದನ್ನು ಸಮರ್ಥನೆ ಮಾಡುತ್ತಲೂ ಹಿಂಜರಿಯುತ್ತಿದ್ದರು. ಪ್ರಜಾಪ್ರಭುತ್ವ ತತ್ವಗಳನ್ನೇ ಆಚರಣೆಗೆ ತಂದಿದ್ದೇವೆ ಎಂಬ ಭ್ರಾಂತಿ ಹುಟ್ಟಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲೂ ಮುಂದಾದರು. ನಮ್ಮ ಮನೆಯವರಿಗೆ ಒಬ್ಬಿಬ್ಬರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕೊಟ್ಟ ಮಾತ್ರಕ್ಕೆ ಇದನ್ನು ಕುಟುಂಬ ರಾಜಕೀಯ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ ಎಂದರು. ಕಾಲಕ್ರಮೇಣ ಮನೆಮಂದಿಗೆಲ್ಲ ಚುನಾವಣೆಗೆ ಸೀಟು ನೀಡಲು ಆರಂಭಿಸಿದಾಗ ಜನಕ್ಕೆ ಇವರ ಹುನ್ನಾರ ಗೊತ್ತಾಯಿತು.

ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಜನ ತಿರುಗಿಬಿದ್ದರು. ಚುನಾವಣೆಯಲ್ಲಿ ಆ ಮನೆತನದ ಕೆಲವರನ್ನು ಪರಾಭವಗೊಳಿಸಲು ಉದ್ಯುಕ್ತರಾದರು. ಈಗ ಲೋಕಕ್ಕೆ ಗೊತ್ತಾಯಿತು, ಇವರೆಲ್ಲ ಕುಟುಂಬ ರಾಜಕೀಯಕ್ಕೆ ಪ್ರಜಾಪ್ರಭುತ್ವವನ್ನು ಬಲಿ ಕೊಡುತ್ತಿದ್ದಾರೆಂಬುದು. ಆದರೆ ಕುಟುಂಬ ರಾಜಕೀಯ ನಡೆಸಿದವರಿಗೆ ಈಗ ತಮ್ಮನ್ನು ಸಮರ್ಥಿಸಿಕೊಳ್ಳುವ ಧೈರ್ಯ ಬಂದಿದೆ. ರಾಹುಲ್ ಗಾಂಧಿಗೆ ಕುಮಾರಸ್ವಾಮಿಯವರು ಕುಟುಂಬ ರಾಜಕಾರಣದ ಧೈರ್ಯ ತುಂಬಿ ಬಂದಿದ್ದಾರೆ ಎನ್ನುವ ಸುದ್ದಿ ಇದನ್ನು ಸಾಬೀತು ಮಾಡುತ್ತದೆ.

ಇದು ನಿಜವೇ ಆಗಿದ್ದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ದೊಡ್ಡ ದುರಂತವಾಗಲಿದೆ. ಜನ ಅಜ್ಞಾನಿಗಳು, ಅಸಹಾಯಕರು, ಅವರನ್ನು ತುಳಿದಷ್ಟು ನಮ್ಮ ಬೇಳೆ ಬೇಯಿಸಿ ಕೊಳ್ಳಬಹುದು ಎಂದು ಈ ಕುಟುಂಬ ರಾಜಕಾರಣದ ಫಲಾನುಭವಿಗಳು ಭಾವಿಸಿರುವಂತಿದೆ.

ಬಹುಶಃ ದೇವೇಗೌಡರಿಗೆ ತಮ್ಮ ಸೋಲಿಗೆ ಕಾರಣ ತಮ್ಮ ಕುಟುಂಬ ರಾಜಕಾರಣ ಎಂಬುದು ಈಗ ಮನವರಿಕೆಯಾಗಿರಬಹುದು. ಆದರೆ ಅದನ್ನು ಅವರೆಲ್ಲು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲವಷ್ಟೆ. ಅವರು ಇತ್ತೀಚಿನ ಸಭೆ ಸಮ್ಮೇಳನಗಳಲ್ಲಿ ಅಧಿಕಾರವನ್ನು ಎಲ್ಲ ಕೋಮಿನ ನಾಯಕರೊಡನೆ ಹಂಚಿಕೊಳ್ಳುವ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕೀಯ ಮುಂದುವರೆಸುತ್ತಾ, ಈ ಸೋಗಲಾಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಅವರದಾಗಿರಬಹುದು. ಜನರನ್ನು ಒಂದು ಸಾರಿಯೋ, ಎರಡು ಸಾರಿಯೋ ಯಾಮಾರಿಸಬಹುದು. ಅವರನ್ನು ಸದಾಕಾಲ ವಂಚಿಸಲು ಸಾಧ್ಯವಿಲ್ಲ ಎಂಬ ಗಾದೆ ಇದೆ.

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಈ ಸಾರಿ ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ ಕರ್ನಾಟಕದ ಜನ (ಇದ್ದಕ್ಕಿದ್ದ ಹಾಗೆ) ಮತಾಂಧರಾಗಿ ಬಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಡಿ. ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಅನೇಕ ಶ್ರೇಷ್ಠ ಕವಿಗಳು, ಬರಹಗಾರರು, ವಿಚಾರವಂತರು, ಕಲಾವಿದರು, ಕರ್ನಾಟಕದಲ್ಲಿದ್ದಾರೆ. ಇವರ್ಯಾರು partian ಗಳಲ್ಲ. ಇಂದಿರಾಗಾಂಧಿ ತನ್ನ ಪ್ರಧಾನಿ ಸ್ಥಾನ ಅಭದ್ರವೆಂದೆನಿಸಿದಾಗ ತನ್ನ ಮಕ್ಕಳನ್ನೇ ಅಧಿಕಾರಕ್ಕೆ ತರುವ ವಿಚಾರ ಮಾಡಿದರು. ಅಲ್ಲಿಂದ ಆರಂಭವಾಯಿತು ಕುಟುಂಬ ರಾಜಕಾರಣ. ದೇವೇಗೌಡರು ತನ್ನ ಮಗನನ್ನು ರಾಜಕೀಯಕ್ಕೆ ತಂದಿದ್ದು ಅವರನ್ನು ಗದ್ದುಗೆಗೆ ಕೂಡಿಸುವ ದೃಷ್ಟಿಯಿಂದ. ಭಾಜಪ ಜೊತೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೇಶದಿಂದ. ಆಮೇಲೆ ತಮ್ಮ ಕುಟುಂಬದ ರೇವಣ್ಣ, ಅನಿತಾ, ಭವಾನಿ, ಪ್ರಜ್ವಲ್, ನಿಖಿಲ್ ಕುಮಾರಸ್ವಾಮಿ ಹೀಗೆ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ರಾಜಕೀಯಕ್ಕೆ ಎಳೆದರು. ರಾಜಕೀಯ ಸಮ್ಮೇಳನ ನಡೆಸಿ, ಅಲ್ಲಿ ‘ನನ್ನನ್ನೂ ಜನ ಕುಟುಂಬ ರಾಜಕೀಯ ಮಾಡುವವನು ಎಂದು ಜರಿಯುತ್ತಾರೆ’ ಎಂದು ಹೇಳಿ ‘ಗಳಗಳ’ ಅತ್ತುಬಿಟ್ಟರು. ಪತ್ರಿಕಾಗೋಷ್ಠಿಯ ಮುಂದೆಯೂ ದೃಶ್ಯ ಮಾಧ್ಯಮಗಳ ಮುಂದೆಯೂ ಅಳುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಮುಂದೆ ಪಾರ್ಲಿಮೆಂಟ್ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ಮಧ್ಯೆ ಘರ್ಷಣೆ ಆರಂಭವಾಯಿತು. ಇದು ಸಾಲದೆಂಬಂತೆ, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಸರ್ಕಾರದ ಇರುವಿಗೆ ಭಂಗ ಬರುವಂತೆ ರೆಸಾರ್ಟ್ ರಾಜಕೀಯಕ್ಕೆ ಮುಂದಾದರು. ಇದೆಲ್ಲ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಸೋತರು.

ಈ ಯಾದವಿ ಕಲಹ ಕರ್ನಾಟಕದ ಘಟಾನುಘಟಿ ನಾಯಕರೆಲ್ಲರನ್ನು ಆಹುತಿ ತೆಗೆದುಕೊಂಡಿತು.

ತತ್ವ ರಹಿತ ರಾಜಕೀಯ ಮಾಡುವುದು ಸಪ್ತ ಸಾಮಾಜಿಕ ಪಾತಕಗಳಲ್ಲಿ ಒಂದು ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ, ಈಗ ಭಾರತದಲ್ಲಿ ಆಚರಣೆಯಲ್ಲಿರುವುದು ಅದೇ ತತ್ವರಹಿತ, ಸ್ವಾರ್ಥಹಿತದ ರಾಜಕೀಯ ಎನ್ನುವ ದುರಂತವನ್ನು ನಾವೆಲ್ಲರೂ
ಒಪ್ಪಿಕೊಳ್ಳಲೇಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...