Homeಪ್ರಪಂಚ'ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ' - ನ್ಯೂಯಾರ್ಕ್ ಟೈಮ್ಸ್

‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

- Advertisement -
(2018 ಏಪ್ರಿಲ್ 16ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗ)
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ಟ್ವೀಟ್ ಮಾಡುತ್ತ ತಮ್ಮನ್ನು ತಾವು ಒಬ್ಬ ಪ್ರತಿಭಾವಂತ ವಾಗ್ಮಿ ಎಂದು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಅಡಿಪಾಯದಲ್ಲಿ ಸದಾ ಸನ್ನದ್ಧವಾಗಿರುವ ಅದರ ಅಂಗಸಂಸ್ಥೆಗಳಾದ ಕೋಮುವಾದಿ ಸಂಘಟನೆಗಳು, ಉಗ್ರ ರಾಷ್ಟ್ರೀಯವಾದಿಗಳು ಅಲ್ಲಿನ ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ಕ್ರೂರವಾಗಿ ಹಿಂಸಿಸುತ್ತಿರುವಾಗ ಮಾತ್ರ ಮೋದಿಯವರ ಬಾಯಿ ಕಟ್ಟಿಬಿಡುತ್ತದೆ, ಅವರ ಧ್ವನಿ ಹೊರಡುವುದೇ ಇಲ್ಲ. ಕಳೆದ ಜನವರಿಯಲ್ಲಿ ಜಮ್ಮುವಿನ ಎಂಟು ವರ್ಷದ ಬಾಲಕಿಯನ್ನು ಆರು ಜನ ಅತ್ಯಾಚಾರ ಮಾಡಿ ಕೊಂದು ಹಾಕಿದ್ದರು… ಇಂಥಾ ಭಯಾನಕ ಘಟನೆಗೆ ಕಾರಣರಾದವರನ್ನು ಸಮರ್ಥಿಸಲು ನರೇಂದ್ರ ಮೋದಿಯವರ ಪಕ್ಷದ ಮಂತ್ರಿಗಳೇ ಮೆರವಣಿಗೆ ಹೊರಟರು. ಭಾರತದ ಜನ ತಮ್ಮದೇ ಸರಕಾರದ ಈ ಕಠೋರ ನಿಲುವನ್ನು ಖಂಡಿಸಿ ಈಗ ಬೀದಿಗಿಳಿದಿದ್ದಾರೆ. ಆದರೆ ಮಿಸ್ಟರ್ ಮೋದಿ ಮಾತ್ರ ಈ ಹೀನ ಪ್ರಕರಣಗಳ ಹಿಂದಿರುವ ತಮ್ಮದೇ ಬೆಂಬಲರಿಗರ ಕುರಿತು ಮಾತನಾಡುತ್ತಲೇ ಇಲ್ಲ.
…. ಅಲೆಮಾರಿ ಕುರಿಗಾಹಿ ಸಮುದಾಯವನ್ನು ಹೆದರಿಸಿ ಓಡಿಸಲು ಆ ಎಂಟು ವರ್ಷದ ಬಾಲಕಿ ಆಸೀಫಾಳನ್ನು ಜನವರಿಯಲ್ಲಿ ಅಪಹರಿಸಲಾಗಿತ್ತು. ಆಕೆಯನ್ನು ಒಂದು ಹಿಂದೂ ದೇವಾಲಯದಲ್ಲಿ ಅನೇಕ ದಿನಗಳವರೆಗೆ ಕೂಡಿ ಹಾಕಿ ಅತ್ಯಾಚಾರ ಮಾಡಿ ನಂತರ ಕೊಂದು ಹಾಕಲಾಯಿತು. ಈ ಕೃತ್ಯ ಮಾನವನ ನೈತಿಕ ಭ್ರಷ್ಟತೆಯ ಅಧಃಪತನವನ್ನು ಸಂಕೇತಿಸುತ್ತದೆ. ಇಷ್ಟೆಲ್ಲ ನಡೆದರೂ, ಜನ ಬೀದಿಗೆ ಇಳಿಯುವವರೆಗೂ ಮೋದಿ ಈ ಭಯಾನಕ ಕೃತ್ಯದ ಕುರಿತು ಬಾಯಿಬಿಡಲು ಸಿದ್ಧರಿರಲಿಲ್ಲ.
…. ಜಮ್ಮು ಕಾಶ್ಮೀರದ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಪಕ್ಷದ ಇಬ್ಬರು ಮಂತ್ರಿಗಳು ಈ ಬಂಧಿತ ಆಪಾದಿತರ ಪರವಾಗಿ ನಡೆದ ರ್ಯಾಲಿಗಳಲ್ಲಿ ಪಾಲ್ಗೊಂಡು ಬೀದಿಗಿಳಿದರು. ಆಪಾದಿತರ ಪರವಾದ ಈ ರ್ಯಾಲಿಗಳ ಮುಖ್ಯ ಉದ್ದೇಶ, ಈ ಪ್ರಕರಣದ ತನಿಖೆಯನ್ನ ಸ್ಥಳೀಯ ಆಡಳಿತದಲ್ಲಿರುವ ಮುಸ್ಲಿಂ ಅಧಿಕಾರಿಗಳಿಗೆ ವಹಿಸದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಿಬಿಐಗೆ ವಹಿಸಬೇಕು ಎಂಬುದೇ ಆಗಿತ್ತು. ಪೊಲೀಸರು ಸದರಿ ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು ಮತ್ತು ಕೋರ್ಟಿನಲ್ಲಿ ಚಾರ್ಜ್‍ಷೀಟ್ ಹಾಕುವುದನ್ನೂ ಅಲ್ಲಿನ ಹಿಂದೂ ವಕೀಲರು ತಡೆದಿದ್ದರು….
ತನ್ನದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಇನ್ನೊಂದು ಪ್ರಭಾವಿ ರಾಜ್ಯವಾದ ಉತ್ತರ ಪ್ರದೇಶದ ಉನ್ನಾವೋದಲ್ಲಿ ತನ್ನದೇ ಪಕ್ಷದ ಶಾಸಕನೊಬ್ಬ ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಆಪಾದಿತನಾಗಿದ್ದರೂ ಮಿಸ್ಟರ್ ಮೋದಿ ಮಾತನಾಡಲು ಬಯಸಲಿಲ್ಲ…. ತನ್ನ ಮೇಲೆ ಸದರಿ ಶಾಸಕ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆ ಪುಟ್ಟ ಹುಡುಗಿ ಪೊಲೀಸರಿಗೆ ದೂರು ನೀಡಲು ಹೋದರೂ ಸಂಬಂಧಿಸಿದ ಠಾಣಾಧಿಕಾರಿ ಆ ಶಾಸಕನ ವಿರುದ್ಧದ  ದೂರನ್ನು ದಾಖಲಿಸಿಕೊಳ್ಳದೆ ನಿರ್ಲಕ್ಷಿಸಿದ. ಇಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯನ್ನು ಸುಳ್ಳು ಕೇಸಿನ ಮೇಲೆ ಅರೆಸ್ಟ್ ಮಾಡಲಾಯಿತು. ಪೊಲೀಸ್ ಕಸ್ಟಡಿಯಲ್ಲಿದ್ದ ಬಾಲಕಿಯ ತಂದೆಯನ್ನು ಅತ್ಯಾಚಾರಿ ಶಾಸಕ ಮತ್ತು ಅವನ ತಮ್ಮ ಹೊಡೆದು ಸಾಯಿಸಿದರು.
ಹಲವು ವಾರಗಳ ನಂತರ, ಮೊನ್ನೆ ಶುಕ್ರವಾರ ಮೋದಿ `ಈ ಪ್ರಕರಣಗಳು ದೇಶಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ, ಇವು ಅತ್ಯಂತ ನಾಚಿಕೆಗೇಡಿನ ಪ್ರಕರಣಗಳು, ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ’ ಎಂಬ ಲೋಕಾಭಿರಾಮದ ಮಾತುಗಳನ್ನು ಆಡಿದ್ದಾರೆ. ಗಾಳಿಯಲ್ಲಿ ಕಡ್ಡಿಯಾಡಿಸಿದಂತಹ ಮೋದಿಯ ಮಾತುಗಳು ಈ ಕ್ರೂರ ಹಿಂಸೆಯ ಪ್ರಕರಣಗಳನ್ನು ಸಾಮಾನ್ಯ ಕ್ರೈಮ್ ಮಟ್ಟಕ್ಕೆ ಇಳಿಸಿದ್ದವು. ಬಿಜೆಪಿ ಪಕ್ಷದ ಅಂಗಸಂಘಟನೆಗಳಾದ ಹಿಂದೂ ಮಿಲಿಟಂಟ್ ಗುಂಪುಗಳಿಗೆ ಸೇರಿದ ಹಂತಕರು, ತಾವು ಪವಿತ್ರವೆಂದು ಭಾವಿಸುವ ಹಸುಗಳನ್ನು ಕೊಂದು ತಿಂದಿದ್ದಾರೆ ಎಂದು ಭಾರತದ ಶ್ರೇಣೀಕರಣದ ಕೆಳಹಂತದಲ್ಲಿರುವ ದಲಿತರ ಮೇಲೆ ಮತ್ತು ಮುಸ್ಲಿಮರ ಮೇಲೆ ಸುಳ್ಳು ಆರೋಪ ಹೊರಿಸಿ ಅನೇಕರನ್ನು ಕೊಂದು ಹಾಕಿದ್ದಾರೆ. ಇಂತಹ ಭೀಕರ ಹಿಂಸಾ ಕೃತ್ಯಗಳು ನಡೆದರೂ ಮೋದಿ ತಮ್ಮ ದಿವ್ಯ ಮೌನದ ಆಚೆಗೆ ಬರುವುದಿಲ್ಲ.
ಮೋದಿಯ ಈ ಮೌನ ಅತ್ಯಂತ ಗೊಂದಲಮಯ ಮತ್ತು ಅವರ ಶೋಚನೀಯ ಮನಃಸ್ಥಿತಿಯ ದ್ಯೋತಕ. 2012-13ರಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಮೋದಿಗಿಂತ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರದ ಮುಖ್ಯಸ್ಥರು ಜನ ಬೀದಿಗಿಳಿಯುವ ಮುನ್ನವೇ ಘಟನೆಯನ್ನು ಖಂಡಿಸಿದ್ದರು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು. ತಮ್ಮ ಹಿಂದಿನ ಸರ್ಕಾರದ ಒಳ್ಳೆಯ ನಡವಳಿಕೆಗಳನ್ನು ಮಿಸ್ಟರ್ ಮೋದಿ ಅನುಸರಿಸಲು ಮುಂದಾದ ಉದಾಹರಣೆಗಳೇ ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಅನೇಕ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಮತ್ತು ಮೋದಿಯ ಬಿಜೆಪಿ ಪಕ್ಷ 2014ರ ಚುನಾವಣೆಯಲ್ಲಿ ಹಿಂದೆಂದೂ ಪಡೆಯದಷ್ಟು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತು. ಹಿಂದಿನ ಸರ್ಕಾರದ ಹೊಣೆಗೇಡಿತನ, ಪ್ರಚ್ಛನ್ನ ಭ್ರಷ್ಟಾಚಾರಗಳನ್ನು ಟೀಕಿಸುತ್ತಲೇ ಮೋದಿ ಚುನಾವಣಾ ಪ್ರಚಾರ ಮಾಡಿದರು. ಮತ್ತು ಸಾಮಾನ್ಯ ಜನರ ಉತ್ತರದಾಯಿತ್ವವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದುಕೊಂಡಿದೆ ಎನ್ನುತ್ತಲೇ ಮಿಸ್ಟರ್ ಮೋದಿ ಅಧಿಕಾರಕ್ಕೆ ಬಂದರು.
ಆದರೆ ಇಂದು ಮಿಸ್ಟರ್ ಮೋದಿಯವರು ಒಂದು ಬಗೆಯ ಆತ್ಮವಂಚಕ ಮೌನಕ್ಕೆ ಮರೆಹೋಗಿದ್ದಾರೆ. ಜಗತ್ತಿನ ಬಹುದೊಡ್ಡ ಪ್ರಜಾತಂತ್ರ ದೇಶದ ಆರೋಗ್ಯವನ್ನು ಬಯಸುವ ಎಲ್ಲರೂ ಈ ಕಾರಣಕ್ಕಾಗಿ ಚಿಂತಿತರಾಗಿದ್ದಾರೆ.
ಮಿಸ್ಟರ್ ಮೋದಿ ತನ್ನ ಬೆಂಬಲಿಗರು ನಡೆಸುವ ಎಲ್ಲ ಅಪರಾಧಗಳ ಕುರಿತು ಮಾತಾಡಲೇಬೇಕೆಂದೇನೂ ಇಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಹಿಂಸಾಕೃತ್ಯಗಳು ಮತ್ತು ಅತ್ಯಾಚಾರಗಳು ವೈಯಕ್ತಿಕ ದ್ವೇಷಗಳಿಂದ ನಡೆದಂತವುಗಳಲ್ಲ ಮತ್ತು ನಿತ್ಯ ನಡೆಯಬಹುದಾದ ಮಾಮೂಲು ಕ್ರಿಮಿನಲ್ ಕೃತ್ಯಗಳೂ ಅಲ್ಲ. ಈ ಹಿಂಸಾಚಾರಗಳು ಯೋಜನಾಬದ್ಧ ಸಂಘಟಿತ ಅಪರಾಧ ಕೃತ್ಯಗಳು. ಈ ಕೃತ್ಯಗಳ ಹಿಂದೆ ಉಗ್ರ ರಾಷ್ಟ್ರವಾದಿ ಗುಂಪುಗಳ ಸ್ಪಷ್ಟ ಕೈವಾಡಗಳಿವೆ. ಈ ಸಂಘಟಿತ ಜನವಿರೋಧಿ ಗುಂಪುಗಳು ಮಹಿಳೆಯರಲ್ಲಿ, ದಲಿತರಲ್ಲಿ, ಮುಸ್ಲಿಮರಲ್ಲಿ ಮತ್ತು ಬಡವರಲ್ಲಿ ಭಯದ ವಾತಾವರಣವನ್ನು ಮೂಡಿಸಲೆಂದೇ ಕಾರ್ಯಾಚರಣೆಗಿಳಿದಿವೆ.
ಮಿಸ್ಟರ್ ಪ್ರಧಾನ ಮಂತ್ರಿಯವರು ಸುತ್ತಲು ನೆರೆದಿರುವ ತನ್ನ ರಾಜಕೀಯ ಬೆಂಬಲಿಗರ ಕೃತ್ಯಗಳನ್ನು ನೋಡಿ ಸುಮ್ಮನಿರುವುದಲ್ಲ, ದೇಶದ ಎಲ್ಲ ಜನರ ಹಿತ ಕಾಪಾಡಲು ಮಾತಾಡಬೇಕಿದೆ ಮತ್ತು ಮುಂದಾಗಬೇಕಿದೆ.
ಸಂಪಾದಕೀಯ ಮಂಡಳಿ
ನ್ಯೂಯಾರ್ಕ್ ಟೈಮ್ಸ್, ಅಮೆರಿಕ
ಅನುವಾದ: ಎ ಎಸ್ ಪ್ರಭಾಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...