CAA, NRC, NPR ಕುರಿತು ಗೃಹ ಸಚಿವ ಅಮಿತ್ ಶಾರವರು ಚರ್ಚೆಗೆ ಆಹ್ವಾನಿಸಿದ್ದರ ಕುರಿತು ಪತ್ರ ಬರೆದಿರುವ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಭೇಟಿಗೆ ಸಮಯ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಿಎಎ ಯಿಂದ ದೇಶಕ್ಕೆ ಯಾವುದೇ ಅಪಾಯಗಳಿಲ್ಲ. ಈ ಕುರಿತು ಯಾರಾದರೂ ನನ್ನೊಡನೆ ಬಹಿರಂಗ ಚರ್ಚೆಗೆ ಬರಬಹುದು. ಮೂರು ದಿನ ಸಮಯ ಕೊಡುತ್ತೇವೆ ನಮ್ಮ ಕಚೇರಿಯಲ್ಲಿಯೇ ಚರ್ಚಿಸಬಹುದು ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಘೋಷಿಸಿದ್ದರು. ಈ ಕುರಿತು ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿರುವ ಗೋಪಿನಾಥನ್ ಸಮಯ ತಿಳಿಸಿ ಎಂದು ಮನವಿ ಮಾಡಿದ್ದಾರೆ.
As per his invite, have sought appointment with @AmitShah to discuss CAA-NRC-NPR. Looking forward. #notocaa_nrc_npr https://t.co/SxCbCFDwev pic.twitter.com/M5JNUBn7sO
— Kannan Gopinathan (@naukarshah) February 14, 2020
ಡಿಯರ್ ಸರ್, ನಮಸ್ಕಾರಗಳು. ಸಿಎಎ ಕುರಿತು ಚರ್ಚೆಗೆ ನೀವು ಆಹ್ವಾನಿಸಿದ್ದೀರಿ. ನಾನು ನಿಮ್ಮೊಡನೆ ಚರ್ಚೆಗೆ ಸಿದ್ಧನಿದ್ದೇನೆ. ದಯವಿಟ್ಟು ಭೇಟಿಗೆ ಸಮಯ ನೀಡಬೇಕು. ಸದ್ಯಕ್ಕೆ ನಾನು ದೆಹಲಿಯಲ್ಲಿಲ್ಲ. ಹಾಗಾಗಿ ಒಂದು ದಿನದ ನಂತರ ಸಮಯ ನಿಗಧಿ ಮಾಡಿದರೆ ನಾನು ಖಂಡಿತ ಚರ್ಚೆಗೆ ಬರುವೆ ಎಂದು ಗೋಪಿನಾಥನ್ ಮೇಲ್ ಮಾಡಿದ್ದಾರೆ.
ನಿನ್ನೆ ಕೂಡ ಅವರು, ಆತ್ಮೀಯ ಗೃಹ ಮಂತ್ರಿ ಅಮಿತ್ಶಾರವರೆ, ಸಿಎಎಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ನೀವು ಆಹ್ವಾನಿಸಿರುವುದನ್ನು ನೋಡಿದ್ದೇನೆ. ಅದರ ಬಗ್ಗೆ ಚರ್ಚೆಗೆ ಸಮಯ ನೀಡಲು ಗೃಹಕಚೇರಿಗೆ ಮನವಿ ಮಾಡುತ್ತೇನೆ. ಭರವಸೆಯಂತೆ 3 ದಿನಗಳಲ್ಲಿ ದಿನಾಂಕವನ್ನು ನಿರೀಕ್ಷಿಸುವುದು ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ನಾನು ರಾಜಿನಾಮೆ ನೀಡಿದ್ದು ಏಕೆಂದರೆ… : ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಸಂದರ್ಶನ
ಕಾಶ್ಮೀರದ 370ನೇ ವಿಧಿ ರದ್ದತಿ ಮತ್ತು ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಿದ್ದನ್ನು ವಿರೋಧಿಸಿ ಕಣ್ಣನ್ ಗೋಪಿನಾಥನ್ರವರು ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
Why not debate with J.Saideepak on this issue first?