Homeಮುಖಪುಟಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಏಪ್ರಿಲ್ 18ರಂದು ತೀರ್ಪು ಕಾಯ್ದಿರಿಸಿತ್ತು. ಬಳಿಕ ಚುನಾವಣಾ ಆಯೋಗದಿಂದ ಕೆಲವು ತಾಂತ್ರಿಕ ಸ್ಪಷ್ಟೀಕರಣಗಳನ್ನು ಬಯಸಿದ್ದರಿಂದ ಪ್ರಕರಣವನ್ನು ಏಪ್ರಿಲ್ 24 ರಂದು ಮತ್ತೆ ವಿಚಾರಣೆಗೆ ಪಟ್ಟಿ ಮಾಡಿತ್ತು. ಅಂತಿಮವಾಗಿ ಇಂದು (ಏ.26) ತೀರ್ಪು ಪ್ರಕಟಿಸಿದೆ.

ಗಮನಾರ್ಹವಾಗಿ, ಇಬ್ಬರು ನ್ಯಾಯಾಧೀಶರು ಈ ಪ್ರಕರಣದಲ್ಲಿ ಪ್ರತ್ಯೇಕವಾದ, ಆದರೆ ಸಹಮತದ ತೀರ್ಪುಗಳನ್ನು ನೀಡಿದ್ದಾರೆ.

ತೀರ್ಪು ಓದಿದ ನ್ಯಾಯಮೂರ್ತಿ ಖನ್ನಾ ಅವರು, “ಬ್ಯಾಲೆಟ್ ಪೇಪರ್ ಮತದಾನಕ್ಕೆ ಹಿಂತಿರುಗುವುದು, ಇವಿಎಂ-ವಿವಿಪ್ಯಾಟ್‌ನ ಎಲ್ಲಾ ಮತಗಳನ್ನು ತಾಳೆ ಮಾಡಿ ನೋಡುವುದು, ಇವಿಎಂ ಸ್ಲಿಪ್‌ಗಳನ್ನು ಮತ ಪೆಟ್ಟಿಗೆಯಲ್ಲಿ ಹಾಕಲು ಮತದಾರರಿಗೆ ಅವಕಾಶ ನೀಡುವುದು ಸೇರಿದಂತೆ ಎಲ್ಲಾ ಮನವಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು. ಮತದಾನ ಸ್ಥಳದ ಪ್ರೋಟೋಕಾಲ್, ತಾಂತ್ರಿಕ ಅಂಶಗಳು ಮತ್ತು ದಾಖಲೆಯಲ್ಲಿರುವ ಡೇಟಾವನ್ನು ಪರಿಶೀಲಿಸಿದ ನಂತರ ನಾವು ಅರ್ಜಿ ತಿರಸ್ಕರಿಸಿದ್ದೇವೆ ಎಂದರು.

ಆದರೆ, ತೀರ್ಪು ಪ್ರಕಟಿಸುವಾಗ ನ್ಯಾಯಮೂರ್ತಿಗಳು ಚುನಾವಣಾ ಆಯೋಗಕ್ಕೆ ಎರಡು ನಿರ್ದೇಶನಗಳನ್ನು ನೀಡಿದ್ದಾರೆ. ಅವುಗಳು ಹೀಗಿವೆ..

1. ಮೇ,1,2024ರಂದು ಅಥವಾ ನಂತರ ವಿವಿಪ್ಯಾಟ್‌ನಲ್ಲಿ ಚಿಹ್ನೆ ಲೋಡಿಂಗ್ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಸಿಂಬಲ್ ಲೋಡಿಂಗ್ ಯೂನಿಟ್ (ಎಸ್‌ಎಲ್‌ಯು) ಅನ್ನು ಸೀಲ್ ಮಾಡಬೇಕು ಮತ್ತು ಕಂಟೈನರ್‌ಗಳಲ್ಲಿ ಭದ್ರಪಡಿಸಬೇಕು. ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಮುದ್ರೆಗೆ ಸಹಿ ಹಾಕಬೇಕು. ಎಸ್‌ಎಲ್‌ಯುಗಳನ್ನು ಹೊಂದಿರುವ ಸೀಲ್ ಮಾಡಿದ ಕಂಟೈನರ್‌ಗಳನ್ನು ಇವಿಎಂಗಳ ಜೊತೆಗೆ ಸ್ಟ್ರಾಂಗ್ ರೂಮ್‌ಗಳಲ್ಲಿ ಕನಿಷ್ಠ 45 ದಿನಗಳ ಅವಧಿಯವರೆಗೆ ಫಲಿತಾಂಶಗಳ ಘೋಷಣೆಯ ನಂತರ ಇರಿಸಬೇಕು. ಇವಿಎಂಗಳಂತೆಯೇ ಅವುಗಳನ್ನು ತೆರೆಯಬೇಕು ಮತ್ತು ಪರಿಶೀಲಿಸಬೇಕು ಮತ್ತು ವ್ಯವಹರಿಸಬೇಕು.

2. ಚುನಾವಣೆಯ ಫಲಿತಾಂಶ ಪ್ರಕಟಿಸಿದ ಬಳಿಕ ಎರಡರಿಂದ ಮೂರು ಅಭ್ಯರ್ಥಿಗಳು ಲಿಖಿತ ಮನವಿ ಮಾಡಿದರೆ, ಪ್ರತೀ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಶೇ. 5ರಷ್ಟು ಇವಿಎಂಗಳ ಬರ್ನ್ಟ್ ಮೆಮೊರಿ ಸೆಮಿಕಂಟ್ರೋಲರ್, ಅಂದರೆ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಅನ್ನು ಇವಿಎಂ ತಯಾರಕರ ಇಂಜಿನಿಯರ್‌ಗಳ ತಂಡವು ಪರಿಶೀಲಿಸಬೇಕು. ಆದರೆ, ಅಭ್ಯರ್ಥಿಗಳು ಫಲಿತಾಂಶಗಳ ಘೋಷಣೆಯ 7 ದಿನಗಳೊಳಗೆ ಲಿಖಿತ ಮನವಿ ಮಾಡಬೇಕು. ಇಂಜಿನಿಯರ್‌ಗಳ ಪರಿಶೀಲನೆಯಲ್ಲಿ ಇವಿಎಂ ಟ್ಯಾಂಪರ್ ಆಗಿರುವುದು ಕಂಡು ಬಂದಲ್ಲಿ ಅಭ್ಯರ್ಥಿಗಳು ಮನವಿ ಸಲ್ಲಿಸುವಾಗ ನೀಡಿದ ಹಣವನ್ನು ಹಿಂದಿರುಗಿಸಬೇಕು.

ಚಿಹ್ನೆಯ ಜೊತೆಗೆ ಪ್ರತಿ ಪಕ್ಷಕ್ಕೂ ಬಾರ್ ಕೋಡ್ ನೀಡಬಹುದೇ? ಎಂಬುವುದನ್ನು ಪರಿಶೀಲಿಸಲು ನ್ಯಾಯಮೂರ್ತಿ ಖನ್ನಾ ಅವರು ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾರೆ.

ನ್ಯಾಯಮೂರ್ತಿ ದತ್ತಾ ಅವರು ತಮ್ಮ ತೀರ್ಪಿನ ಹೆಚ್ಚುವರಿ ಅಂಶಗಳನ್ನು ಉಲ್ಲೇಖಿಸಿ, ವ್ಯವಸ್ಥೆಯನ್ನು ಕುರುಡಾಗಿ ನಂಬುವುದು ಅನಗತ್ಯ ಸಂದೇಹಕ್ಕೆ ಕಾರಣವಾಗಬಹುದು ಎಂದು ಹೇಳಿದರು. ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಸಾಕ್ಷ್ಯ ಮತ್ತು ಕಾರಣದಿಂದ ಮಾರ್ಗದರ್ಶಿಸಲ್ಪಟ್ಟ ನಿರ್ಣಾಯಕ ಆದರೆ ರಚನಾತ್ಮಕ ವಿಧಾನವನ್ನು ಅನುಸರಿಸಬೇಕು ಎಂದು ಹೇಳಿದರು.

ನ್ಯಾಯಾಲಯ ನೀಡಿರುವ ಇಂದಿನ ತೀರ್ಪು 2024ರ ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನಕ್ಕೆ ಅನ್ವಯವಾಗಲಿದೆ.

ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್) ಚೀಟಿಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...