Homeರಾಜಕೀಯಇಟ್ಸ್ me....ರಜನಿಕಾಂತ್! ಸೂಪರ್ ಸ್ಟಾರ್ ಹೊಣೆಗೇಡಿಯಾದಾಗ....

ಇಟ್ಸ್ me….ರಜನಿಕಾಂತ್! ಸೂಪರ್ ಸ್ಟಾರ್ ಹೊಣೆಗೇಡಿಯಾದಾಗ….

- Advertisement -
- Advertisement -

ದೊಡ್ಡಿಪಾಳ್ಯ ನರಸಿಂಹಮೂರ್ತಿ |

ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ತಮಿಳರಿಗೆ ಎಂಥಾ ಅಭಿಮಾನ, ಭಕ್ತಿಯಿದೆ ಎಂಬುದು ತಿಳಿದ ಸಂಗತಿ. ಇಂಥಾ ತಮಿಳುನಾಡಿನಲ್ಲಿ ಈಗ ರಜನಿಕಾಂತ್ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದ್ದಕ್ಕಿದ್ದಂತೆ ರಜನಿ ಬಗ್ಗೆ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದೇಕೆಂದು ನೋಡಿದರೆ ಅದಕ್ಕೆ ಸ್ವತಃ ರಜನಿಯವರ ಜನವಿರೋಧಿ ರಾಜಕೀಯ ಧೋರಣೆಯೇ ಕಾರಣ ಎಂಬುದು ಬೆಳಕಿಗೆ ಬಂದಿದೆ. ನಡೆದದ್ದಿಷ್ಟು. ಮೊನ್ನೆ ತುತ್ತುಕುಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ 13 ಜನರನ್ನು ಕೊಂದ ಘಟನೆಯ ಬಗ್ಗೆ ಇಡೀ ತಮಿಳುನಾಡು ಕುದಿಯುತ್ತಿದೆ. ಹೀಗಿರುವಾಗ ತೂತ್ತುಕುಡಿಗೆ ಭೇಟಿ ಕೊಟ್ಟ ಸೂಪರ್‍ಸ್ಟಾರ್ ಮಾಧ್ಯಮದವರನ್ನುದ್ದೇಶಿಸಿ ಮಾತಾಡಿ “ಈ ಘಟನೆಗೆ ಸಮಾಜಘಾತುಕ ಶಕ್ತಿಗಳೇ ಕಾರಣ. ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದಲೇ ಫೈರಿಂಗ್ ನಡೆಸಬೇಕಾಯ್ತು…” ಎಂದು ಅಪ್ಪಟ ಪೊಲೀಸ್ ಏಜೆಂಟರಂತೆ ಮಾತಾಡಿದ್ದಾರೆ. ಈ ಭೀಕರ ಮಾರಣಹೋಮವನ್ನು ಕಣ್ಣಾರೆ ಕಂಡಿರುವ ಅಭಿಮಾನಿಗಳಿಗೆ ರಜನಿ ಹೇಳಿಕೆಯಿಂದ ಶಾಕ್ ಆಗಿರುವುದಂತೂ ನಿಜ. ಇಡೀ ತಮಿಳುನಾಡಿನಲ್ಲಿ ರಜನಿಯ ಈ ನಿಲುವಿಗೆ ವ್ಯಾಪಕ ಖಂಡನೆ ವ್ಯಕ್ರವಾಗಿದೆ. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ನಾಗರಿಕರು ರಜನಿಯವರ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ‘ಫೈರಿಂಗ್‍ನಲ್ಲಿ ಜೀವತೆತ್ತ 11 ವರ್ಷದ ಬಾಲಕಿ ಸಮಾಜಘಾತುಕ ಶಕ್ತಿಯೇ? ರಜನಿ ಯಾರ ಪರವಾಗಿ ಮಾತಾಡುತ್ತಿದ್ದಾರೆ? ಯಾರೋ ಹೇಳಿಕೊಟ್ಟ ಮಾತುಗಳನ್ನು ಹೇಳುತ್ತಿದ್ದಾರೆ’ ಎಂದು ಜನರು ತಿರುಗೇಟು ನೀಡಿದ್ದಾರೆ.

‘ಸ್ಟೆರ್‍ಲೈಟ್ ಕಂಪನಿಯ ಮಾಲಿನ್ಯದಿಂದ ತೂತ್ತುಕುಡಿಯ ಜನರ ಜೀವನವೇ ದುಸ್ತರವಾಗಿತ್ತಲ್ಲಾ, ಅದಕ್ಕಾಗಿ ಜನರು ಹೋರಾಟ ಮಾಡಿದ್ದನ್ನು ತಪ್ಪು ಎನ್ನುತ್ತೀರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸ್ಟಾರ್ “ಏನ್ ಹೋರಾಟ? ಎಲ್ಲದಕ್ಕೂ ಹೋರಾಟ ಹೋರಾಟ ಅಂತ ಹೋಗ್ತಾ ಇದ್ದರೆ ತಮಿಳುನಾಡು ಸುಡುಗಾಡು ಆಗೋಗುತ್ತೆ” ಎಂದು ಪ್ರಶ್ನೆ ಕೇಳಿದವರ ಮೇಲೆಯೇ ಜೋರು ಮಾಡಿದ್ದಾರೆ. ಮತ್ತೂ ಮುಂದುವರೆದು “ಹೀಗಾದರೆ ತಮಿಳುನಾಡಿಗೆ ವಿದೇಶಿ ಬಂಡವಾಳ ಹೂಡಲು ಯಾರೂ ಬರೋದಿಲ್ಲ” ಎಂದು ತಮ್ಮ ಆರ್ಥಿಕ ನೀತಿಯನ್ನೂ ಹೊರಗೆಡವಿದ್ದಾರೆ.

ವಿಪರ್ಯಾಸ ನೋಡಿ ಹೇಗಿದೆ. ಇನ್ನೇನು ರಿಲೀಸ್ ಆಗಬೇಕಿರುವ ‘ಕಾಲಾ’ ಸಿನಿಮಾದಲ್ಲಿ ಬಡಜನರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಕೆಂಡಕಾರುವ ಹೀರೋ ರಜನಿಕಾಂತ್ ‘ಎಲ್ಲ ಜನರನ್ನು ಕರೆತನ್ನಿ, ಹೋರಾಟ ಮಾಡೋಣ’ ಅಂತ ಕರೆಕೊಡುತ್ತಾನೆ. ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಿಯೇ ಗೆಲ್ಲುತ್ತಾನೆ. ಆದರೆ ನಿಜಜೀವನದಲ್ಲಿ ಎಲ್ಲಾ ಉಲ್ಟಾಪಲ್ಟಾ.

ತೂತ್ತುಕುಡಿಯ ಭೇಟಿಯ ನಂತರ ಅವರು ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಲು ಹೊರಟರು. ಅಲ್ಲಿ ಅವರಿಗೆ ಭಾರೀ ಮುಖಭಂಗ ಕಾದಿತ್ತು.

ತೀವ್ರ ಗಾಯಗೊಂಡು ಚಿಕಿತ್ಸೆಯಲ್ಲಿರುವ ಸಂತೋಷ್ ರಾಜ್ ಎಂಬ 21 ವರ್ಷದ ಯುವಕನ ಹಾಸಿಗೆಯ ಬಳಿಗೆ ಸೂಪರ್‍ಸ್ಟಾರ್ ಬರುತ್ತಿದ್ದಂತೆ ಸಂತೋಷ್ ಹಾಸಿಗೆಯಿಂದ ಎದ್ದು ಕೂತ. ಸಂತೋಷ್‍ನ ಹೆಗಲ ಮೇಲೆ ಕೈಹಾಕಿ ಮಾತಾಡಿಸಲು ರಾಜಕಾರಣಿಯ ಶೈಲಿಯಲ್ಲಿ ಸೂಪರ್‍ಸ್ಟಾರ್ ಮುಂದಾಗುತ್ತಿದ್ದಂತೆ “ಯಾರು ನೀವು? ಎಲ್ಲಿಂದ ಬಂದಿದ್ದೀರಿ?” ಎಂದು ಖಾರವಾಗಿ ಪ್ರಶ್ನೆ ಎಸೆದ ಗಾಯಾಳು ಯುವಕ. ಇಂಥಾ ಪ್ರಶ್ನೆಯನ್ನು ನಿರೀಕ್ಷಿಸಿರದಿದ್ದ ಸ್ಟಾರ್ ಸಾವರಿಸಿಕೊಂಡು “ನಾನು ರಜನಿಕಾಂತ್, ಚೆನ್ನೈಯಿಂದ ಬಂದಿದ್ದೇನೆ.” ಎಂದು ಉತ್ತರಿಸಿದರು. ನಂತರ ಪ್ರಶ್ನೆಗಳ ಸುರಿಮಳೆಯನ್ನೇ ಆರಂಭಿಸಿದ ಸಂತೋಷ್‍ನ ಕಡೆಗೆ ಕೇಳಿಸಿಕೊಳ್ಳದಂತೆ ಮುಂದೆ ಹೆಜ್ಜೆಹಾಕಿ ಮತ್ತಷ್ಟು ಮುಖಭಂಗದಿಂದ ತಪ್ಪಿಸಿಕೊಂಡರು. ಸೂಪರ್ ಸ್ಟಾರ್ ಆಸ್ಪತ್ರೆಯ ಆವರಣದಲ್ಲಿ ಕರೆದಿದ್ದ ಪ್ರೆಸ್‍ಮೀಟ್ ಅನ್ನು ಖಾಸಗಿ ರೆಸಾರ್ಟ್‍ಗೆ ಸ್ಥಳಾಂತರಿಸಿ ,ತನ್ನ ಪಟಾಲಂ ಸಮೇತ ಕೂಡಲೇ ಅಲ್ಲಿಂದ ಕಾಲ್ಕಿತ್ತರು.

“ಪೊಲೀಸ್ ಫೈರಿಂಗ್‍ನಲ್ಲಿ 13 ಜನ ಸತ್ತು ಒಂದು ವಾರವಾಯ್ತು. ಆಸ್ಪತ್ರೆಯಲ್ಲಿರುವ ಎಷ್ಟೋ ಜನರ ಸ್ಥಿತಿ ಗಂಭೀರವಾಗಿದೆ… ನೂರು ದಿನಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ, ಈ ಸ್ಟಾರ್ ಒಮ್ಮೆಯೂ ಬಾಯಿಬಿಚ್ಚಿಲ್ಲ. ಒಮ್ಮೆಯೂ ನಮ್ಮ ಕಡೆಗೆ ತಿರುಗಿ ನೋಡಿಲ್ಲ. ಒಂದು ವೇಳೆ ಸ್ಟೆರ್‍ಲೈಟ್ ಕಂಪನಿ ಮುಚ್ಚಬೇಕೆಂಬ ಆದೇಶ ಹೊರಬೀಳದೆ ಇದ್ದಿದ್ದರೆ ಬಹುಶಃ ಇವರು ಇಲ್ಲಿಗೆ ಬರುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಈಗ ಬಂದಿರೋದು ಯಾಕೆ? ಇದಕ್ಕೂ ಬಲವಾದ ಕಾರಣ ಇದೆ. ಕೆಲದಿನಗಳಲ್ಲಿ ‘ಕಾಲಾ’ ರಿಲೀಸ್ ಆಗ್ತಾ ಇದೆ. ಈಗಲೂ ತೂತ್ತುಕುಡಿ ಜನರನ್ನು ಮಾತಾಡಿಸದೆ ಹೋದರೆ ತಮಿಳುನಾಡಿನಲ್ಲಿ ಅವರ ಸಿನಿಮಾ ಓಡೋದಿಲ್ಲ ಅಂತ ಅವರಿಗೆ ಚನ್ನಾಗಿ ಗೊತ್ತು. ಅದಕ್ಕೆ ಈ ವರಸೆ ಶುರು ಮಾಡಿದ್ದಾರೆ…” ಎಂದು ನಂತರ ಮಾಧ್ಯಮದವರ ಜೊತೆ ಮಾತಾಡಿದ ಸಂತೋಷ್ ಈ ಸೂಪರ್‍ಸ್ಟಾರ್ ಗುಟ್ಟನ್ನು ಬಿಚ್ಚಿಟ್ಟಿದ್ದಾನೆ. ಇಷ್ಟೆಲ್ಲಾ ಅನಾಹುತಕ್ಕೆ ಸಮಾಜಘಾತುಕ ಶಕ್ತಿಗಳೇ ಕಾರಣ ಎಂದ ರಜನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂತೋಷ್ “ಜನರ ಹೋರಾಟದ ಬಗ್ಗೆ ಮಾತಾಡಲಿಕ್ಕೆ ಅವರಿಗೆ ಯಾವ ಹಕ್ಕಿದೆ? ಕನಿಷ್ಟ ಒಂದು ದಿನವಾದರೂ ತೂತ್ತುಕುಡಿ ಜನರ ಸಂಕಷ್ಟಗಳ ಬಗ್ಗೆ ಮಾತಾಡದೆ ಮೌನ ವಹಿಸಿದ್ದ ಇವರು ಈಗ ಎಂಟ್ರಿ ಕೊಟ್ಟಿರೋದೇ ಅನುಮಾನಾಸ್ಪದ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಪರ್‍ಸ್ಟಾರ್ ‘ನಾನು ರಜನಿಕಾಂತ್’ ಎಂದು ಹೇಳಿಕೊಂಡ ಘಟನೆ ‘ಇಟ್ಸ್ ಮಿ ರನಿಕಾಂತ್’ ಎಂಬ ಹ್ಯಾಷ್‍ಟ್ಯಾಗ್ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ. ರಜನಿಕಾಂತ್ ಅವರ ನಿಲುವನ್ನು ಸಾವಿರಾರು ಜನರು ಪ್ರಶ್ನಿಸಿದ್ದಾರೆ.

ಜನಪ್ರಿಯ ಸ್ಟಾರ್ ರಜನಿಕಾಂತ್ ರಾಜಕಾರಣಿಯಾಗಲು ಹೊರಟಿರುವ ಈ ಸಂದರ್ಭದಲ್ಲಿ, ಆಡಳಿತಾರೂಡ ಎಐಡಿಎಂಕೆ ಪರ ಬ್ಯಾಟಿಂಗ್ ಶುರುವಿಟ್ಟುಕೊಂಡಿರುವುದು ಆಶ್ಚರ್ಯಕರ ಸಂಗತಿ. ಜನರ ಜೀವಗಳ ಬಗ್ಗೆ ಕಾಳಜಿ ತೋರದೆ ಆಡಳಿತ ಪಕ್ಷ ಹಾಗೂ ಸ್ಟೆರ್‍ಲೈಟ್ ಕಾಪರ್ ಕಂಪನಿಯ ವಕ್ತಾರನಂತೆ ರಜನಿ ಮಾತಾಡುತ್ತಿರುವುದು ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ, ತಮಿಳುನಾಡಿನ ಸಾಮಾಜಿಕ, ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ನಿಜಬಣ್ಣಗಳು ಹೊರಬರುವುದೇ ಇಂಥಾ ಸಂದರ್ಭದಲ್ಲಿ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...