Homeಅಂಕಣಗಳುವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

ವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

- Advertisement -
- Advertisement -

ವಿಧಾನ ಪರಿಷತ್ತಿಗೆ ಹಾಲಿ ಇದ್ದ ಸದಸ್ಯರ ಅವಧಿ ಮುಗಿದಿದ್ದರಿಂದ ಅವರ ಸ್ಥಾನದಲ್ಲಿ ಹೊಸಬರನ್ನು ಚುನಾಯಿಸುವ ಸಂದರ್ಭ ಒದಗಿದೆ. ವಿಧಾನ ಪರಿಷತ್ತನ್ನು ಸಾಮಾನ್ಯವಾಗಿ ಮೇಲ್ಮನೆ ಎಂದು ಕರೆಯಲಾಗುತ್ತದೆ. ಮೇಲ್ಮನೆಯ ಕೆಲಸ ವಿಧಾನ ಸಭೆಯಲ್ಲಿ ಮಂಡಿಸಲಾಗುವ ಹಾಗೂ ಅಂಗೀಕಾರವಾಗುವ ಮಸೂದೆಗಳು ಜನಪರವಾಗಿವೆಯೇ ಇಲ್ಲವೇ ಎಂಬುದನ್ನು ಅಥವಾ ಏನಾದರೂ ದೋಷಗಳಿವೆಯೇ ಎಂಬುದನ್ನು ಪರಿಶೀಲಿಸುವುದು; ಒಂದುವೇಳೆ ಏನಾದರೂ ದೋಷಗಳು ಕಂಡುಬಂದಲ್ಲಿ ಸದರಿ ಮಸೂದೆಯನ್ನು ಪುನರ್‍ಪರಿಶೀಲನೆಗಾಗಿ ವಿಧಾನಸಭೆಗೆ ವಾಪಸ್ ಕಳಿಸಲಾಗುತ್ತದೆ. ಮೇಲ್ಮನೆಯಲ್ಲಿ ಎತ್ತಲಾದ ಎಲ್ಲಾ ಆಕ್ಷೇಪಣೆಗಳನ್ನು ಪುನಃ ಪರಿಶೀಲಿಸಿ ಮತ್ತೆ ವಿಧಾನಸಭೆಯ ಮುಂದೆ ಮಂಡಿಸಿ ಹೀಗೆ ತಿದ್ದುಪಡಿಯಾದ ಮಸೂದೆಯನ್ನು ಮತ್ತೆ ವಿಧಾನಪರಿಷತ್ತಿಗೆ ರವಾನಿಸಬೇಕು. ವಿಧಾನ ಪರಿಷತ್ತು ಈ ತಿದ್ದುಪಡಿಯಾದ ಮಸೂದೆಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಅದಕ್ಕೆ ಒಪ್ಪಿಗೆ ಕೊಟ್ಟ ನಂತರ ಮತ್ತೆ ವಿಧಾನಸಭೆಗೆ ಕಳಿಸಲಾಗುವುದು. ಈ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದ ಮೇಲೆಯೇ ಮಸೂದೆ ಶಾಸನವಾಗಿ ಪರಿವರ್ತನೆಯಾಗುವುದು. ಅದರಂತೆಯೇ, ಸರ್ಕಾರ ರೂಪಿಸುವ ಎಲ್ಲವನ್ನೂ ಪ್ರಶ್ನಿಸುವ ಅಧಿಕಾರ ಕೂಡ ಈ ಮೇಲ್ಮನೆಗೆ ಇದೆ.

ಮೇಲ್ಮನೆಯಲ್ಲಿ ಶಾಸನಸಭೆಯಿಂದ ಆರಿಸಿ ಹೋಗುವ 25 ಸದಸ್ಯರು, ಸ್ಥಳೀಯ ಸಂಸ್ಥೆಗಳಿಂದ 25, ಶಿಕ್ಷಕರ ಕ್ಷೇತ್ರದಿಂದ 7 ಮತ್ತು ಪದವೀಧರರ ಕ್ಷೇತ್ರದಿಂದ 7 ಸದಸ್ಯರು ಆಯ್ಕೆಯಾಗುತ್ತಾರೆ. ಇವರ ಜೊತೆಗೆ ಸರ್ಕಾರ (ರಾಜ್ಯಪಾಲರ ಮೂಲಕ) 11 ಮಂದಿ ಗಣ್ಯರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಹೀಗೆ ನಮ್ಮ ವಿಧಾನ ಪರಿಷತ್ತಿನಲ್ಲಿ ಒಟ್ಟು 75 ಸದಸ್ಯ ಬಲವಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 1/3 ಭಾಗದಷ್ಟು ಸದಸ್ಯರು ನಿವೃತ್ತಿಯಾಗಿ ಹೊಸಸದಸ್ಯರು ಆಯ್ಕೆಯಾಗಬೇಕಾಗುತ್ತದೆ. ಈಗಿನ ಚುನಾವಣೆ ಕೂಡ ಅಂಥ ಒಂದು ಪ್ರಕ್ರಿಯೆಯೇ.

ಒಟ್ಟಿನಲ್ಲಿ ಈ ಮೇಲ್ಮನೆ ವಿಧಾನಸಭೆಯ ಕಾವಲು ಸಮಿತಿಯಾಗಿ ಕೆಲಸ ಮಾಡಬೇಕು. ಈ ಕಾವಲು ಸಮಿತಿಯಲ್ಲಿ ಪಕ್ಷಾತೀತರೂ, ಗಣ್ಯರೂ, ಕಾನೂನು ಕಟ್ಟಲೆಗಳ ಜ್ಞಾನ ಇರುವವರೂ, ಶಾಸನ ಸಭೆಯ ಸದಸ್ಯರ ಮನ್ನಣೆಗೆ ಪಾತ್ರರಾದವರು ಮಾತ್ರ ಇರಬೇಕು. ಹಾಗಾದಾಗ ಮಾತ್ರ ಮೇಲ್ಮನೆಯ ಪರಿಕಲ್ಪನೆ ಸಾರ್ಥಕವಾಗುತ್ತದೆ. ರಾಜ್ಯದ ವಿಧಾನ ಪರಿಷತ್ತಿನ ರೀತಿಯಲ್ಲೇ ಕೇಂದ್ರದಲ್ಲಿ ರಾಜ್ಯಸಭೆ ಇದೆ. ಪ್ರತಿಭಾವಂತರು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉತ್ತಮ ಕೊಡುಗೆ ನೀಡಬಲ್ಲವರನ್ನು ಇಂಥಾ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರೆಂಬುದಕ್ಕೆ ಅಂಬೇಡ್ಕರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿದ್ದು ಉತ್ತಮ ಉದಾಹರಣೆ. ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣನಂಥವರೂ ಕೂಡ ರಾಜ್ಯಸಭೆ ಸದಸ್ಯರಾಗಿದ್ದರು. ಕರ್ನಾಟಕದ ಉದಾಹರಣೆ ನೋಡುವುದಾದರೂ ಕಾರ್ಮಿಕ ನಾಯಕ ಬಿವಿ ಕಕ್ಕಿಲ್ಲಾಯ, ಅಬ್ದುಲ್ ನಜೀರ್ ಸಾಬ್, ವೈಕುಂಠ ಬಾಳಿಗಾ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಸವರಾಜ ಕಟ್ಟೀಮನಿ ಮುಂತಾದ ಗಣ್ಯರು ಈ ಮೇಲ್ಮನೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಇದು ಇತಿಹಾಸದ ಮಾತು.
ಸ್ವಾತಂತ್ರ್ಯ ಬಂದ ಮೇಲೆ ಹತ್ತಾರು ವರ್ಷಗಳ ಕಾಲ ಇಂತಹ ಗಣ್ಯರನ್ನೇ ಆಡಳಿತ ನಡೆಸುವ ಸರ್ಕಾರಗಳು ಆಯ್ಕೆಮಾಡುತ್ತಿದ್ದವು. ನಂತರದ ದಿನಮಾನಗಳಲ್ಲಿ ಆರಂಭವಾಯಿತು ಅಧಃಪತನ. ಜಾತಿವಾರು ಆಯ್ಕೆ, ಸ್ವಜನ ಪಕ್ಷಪಾತ, ತಮ್ಮ ಪಕ್ಷದವರನ್ನೇ ಆಯ್ಕೆ ಮಾಡಿಕೊಳ್ಳುವುದು, ಚುನಾವಣೆಗಳಲ್ಲಿ ಸೋತ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮೇಲ್ಮನೆಯಲ್ಲಿ ‘ಪುನರ್‍ವಸತಿ ಕಲ್ಪಿಸುವುದು’ ಇಂದು ಎಲ್ಲ ಪಕ್ಷಗಳಲ್ಲೂ ವ್ಯಾಪಕವಾಗಿದೆ. ಕೆಲವು ಉದ್ಯಮಿಗಳ ಬಳಿ ಕೋಟ್ಯಾಂತರ ರೂಪಾಯಿ ಹಣ ಪಡೆದು ಮೇಲ್ಮನೆಯ ಸದಸ್ಯತ್ವವನ್ನು ಮಾರಾಟ ಮಾಡುವ ಅಧಮ ರಾಜಕೀಯ ನಾಯಕರು ಹುಟ್ಟಿಕೊಂಡಿದ್ದಾರೆ. ಈಗಿನ ಮೇಲ್ಮನೆಯಲ್ಲಿ 50 ವರ್ಷಗಳ ಹಿಂದಿನಂತೆ ಅರ್ಹತೆಯುಳ್ಳವರು, ವರ್ಚಸುಳ್ಳವರು, ಗಣ್ಯರು, ಪಾರ್ಲಮೆಂಟೇರಿಯನ್‍ಗಳು, ಜನರ ಗೌರವಕ್ಕೆ ಪಾತ್ರರಾದವರ ಸಂಖ್ಯೆ ವಿರಳವಾಗುತ್ತಿದೆ. ವಾಸ್ತವದಲ್ಲಿ, ಮೇಲ್ಮನೆ ಕೆಳಮನೆಯ ಮಟ್ಟಕ್ಕೇ ಇಳಿದುಬಿಟ್ಟಿದೆ.


ಮೇಲ್ಮನೆ ಈಗ ವಿಧಾನಸಭೆಯ ಕಾಲೆಳೆಯುವ, ಕುಹಕಿಗಳಿಂದ ಕೂಡಿದ ಕೂಟವಾಗಿದೆ. ಇದರ ಘನತೆ ಗೌರವಗಳು ಹಾರಿಹೋಗಿವೆ. ಮೇಲ್ಮನೆ ವಿಧಾನಸಭೆಯ ಹಿತೈಷಿಯಾಗಿದ್ದರ ಬದಲಾಗಿ, ವಿಧಾನಸಭೆಯ ಶತ್ರು ಎನಿಸಿದೆ. ವಿಧಾನಸಭೆಯ ಘನತೆಯನ್ನು ಹೆಚ್ಚಿಸುವ ಕೆಲಸ ವಿಧಾನಪರಿಷತ್ತು ಮಾಡಬೇಕು. ಕಾಲ ಕಾಲಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಿ, ವಿಧಾನ ಸಭೆ ಸರಿಯಾದ ದಾರಿಯಲ್ಲಿ ಸಾಗಲು ನೆರವಾಗಬೇಕು.
ವಿಧಾನಸಭೆ ಜನಪರವಾಗಿ ಕೆಲಸಮಾಡಲಿಕ್ಕೂ, ಸಂವಿಧಾನದ ಆಶಯವಾದ ಬಡವ – ಬಲ್ಲಿದ ಅಂತರವನ್ನು ತಗ್ಗಿಸುವ ಸಾಧನವನ್ನಾಗಿ ಪರಿವರ್ತಿಸುವ ಕೆಲಸವನ್ನೂ ವಿಧಾನ ಪರಿಷತ್ತು ಮಾಡಬೇಕಿತ್ತು. ಸರ್ಕಾರ ನಡೆಸುವವರ ಓರೆಕೋರೆಗಳನ್ನು ತಿದ್ದಿ, ಕಾನೂನಿಗನುಸಾರ ಕೆಲಸ ಮಾಡಿಸುವ ಕಾವಲು ಸಮಿತಿಯ ಪಾತ್ರವನ್ನು ನಿರ್ವಹಿಸಬೇಕು.
ಈಗಿನ ದುರಂತವೆಂದರೆ, ಹಾಲಿ ವಿಧಾನ ಪರಿಷತ್ತಿನಲ್ಲಿ ಕ್ರಿಮಿನಲ್‍ಗಳು, ಭೂಗಳ್ಳರು, ರಿಯಲ್ ಎಸ್ಟೇಟ್ ಧಂಧೆಯವರು, ಪಕ್ಷದ ನಾಯಕರ ಆಸ್ತಿಗಳನ್ನು ಕಾಪಾಡುವ ಏಜೆಂಟರು… ಎಲ್ಲರೂ ಇದ್ದಾರೆ. ಇಂತಹ ವಿಧಾನಪರಿಷತ್ತಿನ ಅಗತ್ಯತೆ ಇದೆಯೇ?
ಕುಮಾರಸ್ವಾಮಿಯವರ ಸರ್ಕಾರದಲ್ಲಿಯಾದರೂ ಘನತೆವೆತ್ತ ಜನರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಪರಿಪಾಠ ಆರಂಭವಾಗುತ್ತದೆಯೆಂಬ ನಿರೀಕ್ಷೆ ಹುಸಿಯಾಗಿದೆ. ವಿಧಾನ ಪರಿಷತ್ತನ್ನು ಯಾವ ಉದಾತ್ತ ದೃಷ್ಟಿಯಿಂದ ಆರಂಭಿಸಲಾಯಿತೋ ಆ ದಿನಗಳು ಮತ್ತೆ ಬರುತ್ತವೆಯೆ?
– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...