Homeಅಂಕಣಗಳುವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

ವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

- Advertisement -
- Advertisement -

ವಿಧಾನ ಪರಿಷತ್ತಿಗೆ ಹಾಲಿ ಇದ್ದ ಸದಸ್ಯರ ಅವಧಿ ಮುಗಿದಿದ್ದರಿಂದ ಅವರ ಸ್ಥಾನದಲ್ಲಿ ಹೊಸಬರನ್ನು ಚುನಾಯಿಸುವ ಸಂದರ್ಭ ಒದಗಿದೆ. ವಿಧಾನ ಪರಿಷತ್ತನ್ನು ಸಾಮಾನ್ಯವಾಗಿ ಮೇಲ್ಮನೆ ಎಂದು ಕರೆಯಲಾಗುತ್ತದೆ. ಮೇಲ್ಮನೆಯ ಕೆಲಸ ವಿಧಾನ ಸಭೆಯಲ್ಲಿ ಮಂಡಿಸಲಾಗುವ ಹಾಗೂ ಅಂಗೀಕಾರವಾಗುವ ಮಸೂದೆಗಳು ಜನಪರವಾಗಿವೆಯೇ ಇಲ್ಲವೇ ಎಂಬುದನ್ನು ಅಥವಾ ಏನಾದರೂ ದೋಷಗಳಿವೆಯೇ ಎಂಬುದನ್ನು ಪರಿಶೀಲಿಸುವುದು; ಒಂದುವೇಳೆ ಏನಾದರೂ ದೋಷಗಳು ಕಂಡುಬಂದಲ್ಲಿ ಸದರಿ ಮಸೂದೆಯನ್ನು ಪುನರ್‍ಪರಿಶೀಲನೆಗಾಗಿ ವಿಧಾನಸಭೆಗೆ ವಾಪಸ್ ಕಳಿಸಲಾಗುತ್ತದೆ. ಮೇಲ್ಮನೆಯಲ್ಲಿ ಎತ್ತಲಾದ ಎಲ್ಲಾ ಆಕ್ಷೇಪಣೆಗಳನ್ನು ಪುನಃ ಪರಿಶೀಲಿಸಿ ಮತ್ತೆ ವಿಧಾನಸಭೆಯ ಮುಂದೆ ಮಂಡಿಸಿ ಹೀಗೆ ತಿದ್ದುಪಡಿಯಾದ ಮಸೂದೆಯನ್ನು ಮತ್ತೆ ವಿಧಾನಪರಿಷತ್ತಿಗೆ ರವಾನಿಸಬೇಕು. ವಿಧಾನ ಪರಿಷತ್ತು ಈ ತಿದ್ದುಪಡಿಯಾದ ಮಸೂದೆಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಅದಕ್ಕೆ ಒಪ್ಪಿಗೆ ಕೊಟ್ಟ ನಂತರ ಮತ್ತೆ ವಿಧಾನಸಭೆಗೆ ಕಳಿಸಲಾಗುವುದು. ಈ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದ ಮೇಲೆಯೇ ಮಸೂದೆ ಶಾಸನವಾಗಿ ಪರಿವರ್ತನೆಯಾಗುವುದು. ಅದರಂತೆಯೇ, ಸರ್ಕಾರ ರೂಪಿಸುವ ಎಲ್ಲವನ್ನೂ ಪ್ರಶ್ನಿಸುವ ಅಧಿಕಾರ ಕೂಡ ಈ ಮೇಲ್ಮನೆಗೆ ಇದೆ.

ಮೇಲ್ಮನೆಯಲ್ಲಿ ಶಾಸನಸಭೆಯಿಂದ ಆರಿಸಿ ಹೋಗುವ 25 ಸದಸ್ಯರು, ಸ್ಥಳೀಯ ಸಂಸ್ಥೆಗಳಿಂದ 25, ಶಿಕ್ಷಕರ ಕ್ಷೇತ್ರದಿಂದ 7 ಮತ್ತು ಪದವೀಧರರ ಕ್ಷೇತ್ರದಿಂದ 7 ಸದಸ್ಯರು ಆಯ್ಕೆಯಾಗುತ್ತಾರೆ. ಇವರ ಜೊತೆಗೆ ಸರ್ಕಾರ (ರಾಜ್ಯಪಾಲರ ಮೂಲಕ) 11 ಮಂದಿ ಗಣ್ಯರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಹೀಗೆ ನಮ್ಮ ವಿಧಾನ ಪರಿಷತ್ತಿನಲ್ಲಿ ಒಟ್ಟು 75 ಸದಸ್ಯ ಬಲವಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 1/3 ಭಾಗದಷ್ಟು ಸದಸ್ಯರು ನಿವೃತ್ತಿಯಾಗಿ ಹೊಸಸದಸ್ಯರು ಆಯ್ಕೆಯಾಗಬೇಕಾಗುತ್ತದೆ. ಈಗಿನ ಚುನಾವಣೆ ಕೂಡ ಅಂಥ ಒಂದು ಪ್ರಕ್ರಿಯೆಯೇ.

ಒಟ್ಟಿನಲ್ಲಿ ಈ ಮೇಲ್ಮನೆ ವಿಧಾನಸಭೆಯ ಕಾವಲು ಸಮಿತಿಯಾಗಿ ಕೆಲಸ ಮಾಡಬೇಕು. ಈ ಕಾವಲು ಸಮಿತಿಯಲ್ಲಿ ಪಕ್ಷಾತೀತರೂ, ಗಣ್ಯರೂ, ಕಾನೂನು ಕಟ್ಟಲೆಗಳ ಜ್ಞಾನ ಇರುವವರೂ, ಶಾಸನ ಸಭೆಯ ಸದಸ್ಯರ ಮನ್ನಣೆಗೆ ಪಾತ್ರರಾದವರು ಮಾತ್ರ ಇರಬೇಕು. ಹಾಗಾದಾಗ ಮಾತ್ರ ಮೇಲ್ಮನೆಯ ಪರಿಕಲ್ಪನೆ ಸಾರ್ಥಕವಾಗುತ್ತದೆ. ರಾಜ್ಯದ ವಿಧಾನ ಪರಿಷತ್ತಿನ ರೀತಿಯಲ್ಲೇ ಕೇಂದ್ರದಲ್ಲಿ ರಾಜ್ಯಸಭೆ ಇದೆ. ಪ್ರತಿಭಾವಂತರು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉತ್ತಮ ಕೊಡುಗೆ ನೀಡಬಲ್ಲವರನ್ನು ಇಂಥಾ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರೆಂಬುದಕ್ಕೆ ಅಂಬೇಡ್ಕರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿದ್ದು ಉತ್ತಮ ಉದಾಹರಣೆ. ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣನಂಥವರೂ ಕೂಡ ರಾಜ್ಯಸಭೆ ಸದಸ್ಯರಾಗಿದ್ದರು. ಕರ್ನಾಟಕದ ಉದಾಹರಣೆ ನೋಡುವುದಾದರೂ ಕಾರ್ಮಿಕ ನಾಯಕ ಬಿವಿ ಕಕ್ಕಿಲ್ಲಾಯ, ಅಬ್ದುಲ್ ನಜೀರ್ ಸಾಬ್, ವೈಕುಂಠ ಬಾಳಿಗಾ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಸವರಾಜ ಕಟ್ಟೀಮನಿ ಮುಂತಾದ ಗಣ್ಯರು ಈ ಮೇಲ್ಮನೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಇದು ಇತಿಹಾಸದ ಮಾತು.
ಸ್ವಾತಂತ್ರ್ಯ ಬಂದ ಮೇಲೆ ಹತ್ತಾರು ವರ್ಷಗಳ ಕಾಲ ಇಂತಹ ಗಣ್ಯರನ್ನೇ ಆಡಳಿತ ನಡೆಸುವ ಸರ್ಕಾರಗಳು ಆಯ್ಕೆಮಾಡುತ್ತಿದ್ದವು. ನಂತರದ ದಿನಮಾನಗಳಲ್ಲಿ ಆರಂಭವಾಯಿತು ಅಧಃಪತನ. ಜಾತಿವಾರು ಆಯ್ಕೆ, ಸ್ವಜನ ಪಕ್ಷಪಾತ, ತಮ್ಮ ಪಕ್ಷದವರನ್ನೇ ಆಯ್ಕೆ ಮಾಡಿಕೊಳ್ಳುವುದು, ಚುನಾವಣೆಗಳಲ್ಲಿ ಸೋತ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮೇಲ್ಮನೆಯಲ್ಲಿ ‘ಪುನರ್‍ವಸತಿ ಕಲ್ಪಿಸುವುದು’ ಇಂದು ಎಲ್ಲ ಪಕ್ಷಗಳಲ್ಲೂ ವ್ಯಾಪಕವಾಗಿದೆ. ಕೆಲವು ಉದ್ಯಮಿಗಳ ಬಳಿ ಕೋಟ್ಯಾಂತರ ರೂಪಾಯಿ ಹಣ ಪಡೆದು ಮೇಲ್ಮನೆಯ ಸದಸ್ಯತ್ವವನ್ನು ಮಾರಾಟ ಮಾಡುವ ಅಧಮ ರಾಜಕೀಯ ನಾಯಕರು ಹುಟ್ಟಿಕೊಂಡಿದ್ದಾರೆ. ಈಗಿನ ಮೇಲ್ಮನೆಯಲ್ಲಿ 50 ವರ್ಷಗಳ ಹಿಂದಿನಂತೆ ಅರ್ಹತೆಯುಳ್ಳವರು, ವರ್ಚಸುಳ್ಳವರು, ಗಣ್ಯರು, ಪಾರ್ಲಮೆಂಟೇರಿಯನ್‍ಗಳು, ಜನರ ಗೌರವಕ್ಕೆ ಪಾತ್ರರಾದವರ ಸಂಖ್ಯೆ ವಿರಳವಾಗುತ್ತಿದೆ. ವಾಸ್ತವದಲ್ಲಿ, ಮೇಲ್ಮನೆ ಕೆಳಮನೆಯ ಮಟ್ಟಕ್ಕೇ ಇಳಿದುಬಿಟ್ಟಿದೆ.


ಮೇಲ್ಮನೆ ಈಗ ವಿಧಾನಸಭೆಯ ಕಾಲೆಳೆಯುವ, ಕುಹಕಿಗಳಿಂದ ಕೂಡಿದ ಕೂಟವಾಗಿದೆ. ಇದರ ಘನತೆ ಗೌರವಗಳು ಹಾರಿಹೋಗಿವೆ. ಮೇಲ್ಮನೆ ವಿಧಾನಸಭೆಯ ಹಿತೈಷಿಯಾಗಿದ್ದರ ಬದಲಾಗಿ, ವಿಧಾನಸಭೆಯ ಶತ್ರು ಎನಿಸಿದೆ. ವಿಧಾನಸಭೆಯ ಘನತೆಯನ್ನು ಹೆಚ್ಚಿಸುವ ಕೆಲಸ ವಿಧಾನಪರಿಷತ್ತು ಮಾಡಬೇಕು. ಕಾಲ ಕಾಲಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಿ, ವಿಧಾನ ಸಭೆ ಸರಿಯಾದ ದಾರಿಯಲ್ಲಿ ಸಾಗಲು ನೆರವಾಗಬೇಕು.
ವಿಧಾನಸಭೆ ಜನಪರವಾಗಿ ಕೆಲಸಮಾಡಲಿಕ್ಕೂ, ಸಂವಿಧಾನದ ಆಶಯವಾದ ಬಡವ – ಬಲ್ಲಿದ ಅಂತರವನ್ನು ತಗ್ಗಿಸುವ ಸಾಧನವನ್ನಾಗಿ ಪರಿವರ್ತಿಸುವ ಕೆಲಸವನ್ನೂ ವಿಧಾನ ಪರಿಷತ್ತು ಮಾಡಬೇಕಿತ್ತು. ಸರ್ಕಾರ ನಡೆಸುವವರ ಓರೆಕೋರೆಗಳನ್ನು ತಿದ್ದಿ, ಕಾನೂನಿಗನುಸಾರ ಕೆಲಸ ಮಾಡಿಸುವ ಕಾವಲು ಸಮಿತಿಯ ಪಾತ್ರವನ್ನು ನಿರ್ವಹಿಸಬೇಕು.
ಈಗಿನ ದುರಂತವೆಂದರೆ, ಹಾಲಿ ವಿಧಾನ ಪರಿಷತ್ತಿನಲ್ಲಿ ಕ್ರಿಮಿನಲ್‍ಗಳು, ಭೂಗಳ್ಳರು, ರಿಯಲ್ ಎಸ್ಟೇಟ್ ಧಂಧೆಯವರು, ಪಕ್ಷದ ನಾಯಕರ ಆಸ್ತಿಗಳನ್ನು ಕಾಪಾಡುವ ಏಜೆಂಟರು… ಎಲ್ಲರೂ ಇದ್ದಾರೆ. ಇಂತಹ ವಿಧಾನಪರಿಷತ್ತಿನ ಅಗತ್ಯತೆ ಇದೆಯೇ?
ಕುಮಾರಸ್ವಾಮಿಯವರ ಸರ್ಕಾರದಲ್ಲಿಯಾದರೂ ಘನತೆವೆತ್ತ ಜನರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಪರಿಪಾಠ ಆರಂಭವಾಗುತ್ತದೆಯೆಂಬ ನಿರೀಕ್ಷೆ ಹುಸಿಯಾಗಿದೆ. ವಿಧಾನ ಪರಿಷತ್ತನ್ನು ಯಾವ ಉದಾತ್ತ ದೃಷ್ಟಿಯಿಂದ ಆರಂಭಿಸಲಾಯಿತೋ ಆ ದಿನಗಳು ಮತ್ತೆ ಬರುತ್ತವೆಯೆ?
– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...