ಮಿಸ್ ಇಂಡಿಯಾ ದೆಹಲಿ- 2019ರ ವಿಜೇತೆ ಮಾನ್ಸಿ ಸೆಹಗಲ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಮುಖಂಡ ರಾಘವ್ ಚಾಡ್ಡಾ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿಕೊಂಡಿದ್ದಾರೆ ಎಂದು ಎಎಪಿ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ಆಡಳಿತ ಆಪ್ ಪಕ್ಷಕ್ಕೆ ಸೇರಲು ಪ್ರೇರಣೆ ನೀಡಿತು ಎಂದು ಮಾಜಿ ಮಿಸ್ ಇಂಡಿಯಾ ದೆಹಲಿ ಮಾನ್ಸಿ ಸೆಹಗಲ್ ಹೇಳಿದ್ದಾರೆ.
“ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ಆಡಳಿತ ಮತ್ತು ಶಾಸಕ ರಾಘವ್ ಚಾಡ್ಡಾ ಅವರ ಕಠಿಣ ಪರಿಶ್ರಮದಿಂದ ಪ್ರೇರಿತರಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರಲು ಮನಸ್ಸು ಮಾಡಿದೆ. ಶುದ್ಧ ರಾಜಕಾರಣದ ಮೂಲಕ ನಾವು ಬದುಕುವ ಈ ಜಗತ್ತಿನಲ್ಲಿ ಗಣನೀಯ ಬದಲಾವಣೆಯನ್ನು ತರಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಮಾನ್ಸಿ ಸೆಹಗಲ್ ಹೇಳಿದ್ದಾರೆ.
ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್
AAP family is growing!
Miss India Delhi 2019 Mansi Sehgal joins AAP after getting inspired by @ArvindKejriwal Govt's revolutionary work in Delhi. pic.twitter.com/3kALChlTWa
— AAP (@AamAadmiParty) March 1, 2021
ತಾವು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿರುವ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಮಾನ್ಸಿ, ದೇಶದಲ್ಲಿ ಬದಲಾವಣೆ ತರಲು ಯುವಜನರು ಮತ್ತು ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಮತ್ತು ಎಎಪಿಗೆ ಸೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ನಾನು ಎಎಪಿ ಸೇರಿದ್ದೇನೆ. ಆರೋಗ್ಯ ಮತ್ತು ಶಿಕ್ಷಣದಲ್ಲಿ ಬದಲಾವಣೆಯಾದರೇ ದೇಶದ ಬದಲಾವಣೆಯಾಗುತ್ತದೆ. ದೆಹಲಿ ನಿವಾಸಿಯಾಗಿ ಈ ವಿಷಯಗಳಲ್ಲಿ ಇಲ್ಲಿ ಆಗಿರುವ ಬದಲಾವಣೆಯನ್ನು ನಾನು ನೋಡಿದ್ದೇನೆ. ಸರ್ಕಾರದ ಕೆಲಸದಿಂದ ನಾನು ಪ್ರೇರಿತಳಾಗಿದ್ದೇನೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ಆಡಳಿತ ಮತ್ತು ಶಾಸಕ ರಾಘವ್ ಚಾಡ್ಡಾ ಅವರ ಕಠಿಣ ಪರಿಶ್ರಮದಿಂದ ಪ್ರೇರಿತರಾಗಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ: ಪ್ರಾಮಾಣಿಕ ರಾಜಕೀಯಕ್ಕೆ ಸಿಕ್ಕ ಜಯ: ಗುಜರಾತ್ ಜನರಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್
“ನಮ್ಮ ಯುವಜನರನ್ನು ಮತ್ತು ವಿಶೇಷವಾಗಿ ನಮ್ಮ ಮಹಿಳೆಯರನ್ನು ನಮ್ಮೊಂದಿಗೆ ಬರಲು ಮತ್ತು ಸೇರಲು ನಾನು ಒತ್ತಾಯಿಸುತ್ತೇನೆ ಜೊತೆಗೆ ನಾವೆಲ್ಲರೂ ನೋಡಲು ಬಯಸುವ ಬದಲಾವಣೆಯನ್ನು ತರಬೇಕು” ಎಂದು ಹೇಳಿದ್ದಾರೆ.
“ರಾಜಕೀಯದಲ್ಲಿ ಯುವಜನತೆ ತೊಡಗಿಸಿಕೊಳ್ಳಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಯುವಜನರಲ್ಲಿ ವಿಶ್ವಾಸ ಮೂಡಿಸಿರುವುದಕ್ಕೆ ನನಗೆ ಖುಷಿಯಾಗಿದೆ. ಎಎಪಿ ಕುಟುಂಬವು ಪ್ರತಿ ದಿನ ದೊಡ್ಡದಾಗುತ್ತಿದೆ. ನಾನು ಮಾನ್ಸಿ ಅವರನ್ನು ಎಎಪಿ ಕುಟುಂಬಕ್ಕೆ ಸ್ವಾಗತಿಸುತ್ತೇನೆ” ಎಂದು ಶಾಸಕ ರಾಘವ್ ಚಾಡ್ಡಾ ಹೇಳಿದ್ದಾರೆ. ಮಾನ್ಸಿ ಸೆಹಗಲ್ ಎಂಜಿನಿಯರ್ ಆಗಿದ್ದು, ತನ್ನದೇ ಆದ ಉದ್ಯಮ ನಡೆಸುತ್ತಿದ್ದಾರೆ ಎಂದು ಎಎಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ 25 ವರ್ಷದಿಂದ ಬಿಜೆಪಿಯೊಂದೇ ಏಕೆ ಆಡಳಿತ ನಡೆಸುತ್ತಿದೆ..?- ಕೇಜ್ರಿವಾಲ್