Homeಕರ್ನಾಟಕಜೆಡಿಎಸ್ ಹೊಸ ಅಧ್ಯಕ್ಷರದ್ದೂ ಡಮ್ಮಿ ಕಾಯಕವಾ?

ಜೆಡಿಎಸ್ ಹೊಸ ಅಧ್ಯಕ್ಷರದ್ದೂ ಡಮ್ಮಿ ಕಾಯಕವಾ?

- Advertisement -
- Advertisement -

| ಆಕಾಶ್ ಕೆರೆಕಟ್ಟೆ |

ಈ ಸರ್ಕಾರ ಇರುತ್ತಾ ಅಥವಾ ಉರುಳುತ್ತಾ? ರಾಜೀನಾಮೆಗಳು ಸ್ವೀಕಾರ ಆಗ್ತಾವಾ ಅಥವಾ ಶಾಸಕರೇ ಅನರ್ಹರಾಗ್ತಾರಾ? ಅನ್ನೋ ಹೈಡ್ರಾಮಾಗಳ ನಡುವೆ ಗಮನಿಸಲೇಬೇಕಾದ ಇನ್ನೊಂದು ರಾಜಕೀಯ ವಿದ್ಯಮಾನ ನಡೆದಿದೆ. ಅದು ಜೆಡಿಎಸ್‍ಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ. ವಿಶೇಷ ಅಂದ್ರೆ ಜೆಡಿಎಸ್ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದೊಂದನ್ನು ಹೊರತುಪಡಿಸಿದರೆ ಈ ಆಯ್ಕೆಯಲ್ಲಿ ಇನ್ನ್ಯಾವ ವಿಶೇಷವೂ ಇಲ್ಲ. ಯಾಕೆಂದರೆ ದೇವೇಗೌಡರ ಕುಟುಂಬದ ಹೊರತಾಗಿ ಜೆಡಿಎಸ್‍ಗೆ ಯಾರೇ ಅಧ್ಯಕ್ಷರಾದರು ಅವರು ಡಮ್ಮಿಯಾಗಿರಬೇಕಾಗುತ್ತೆ ಅನ್ನೋದನ್ನು ನಿರ್ಗಮಿತ `ಬಾಂಬೆಹಕ್ಕಿ’ ಎಚ್.ವಿಶ್ವನಾಥ್ ಸಾಬೀತು ಮಾಡಿಹೋಗಿದ್ದಾರೆ.

ಸಿದ್ರಾಮಯ್ಯನವರ ಹೊರತಾಗಿ ಅಧ್ಯಕ್ಷರಾದ ಗೌಡರ ಕುಟುಂಬೇತರ ವ್ಯಕ್ತಿಗಳಾದ ತಿಪ್ಪಣ್ಣ, ಮಿರಾಜುದ್ದೀನ್ ಪಟೇಲ್, ಕೃಷ್ಣಪ್ಪ ಇವರೆಲ್ಲ ಹೆಸರಿಗಷ್ಟೇ ಅಧ್ಯಕ್ಷರಾಗಿದ್ದರೆ ವಿನಾಃ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಯಾವ ಸ್ವತಂತ್ರವೂ ಅವರಿಗಿರಲಿಲ್ಲ. ರಾಜೀನಾಮೆ ಗೀಚಿ ಬಾಂಬೆ ಹೊಟೇಲ್ ಸೇರಿಕೊಂಡಿರುವ ಎಚ್.ವಿಶ್ವನಾಥ್ ಕೆ.ಆರ್.ನಗರದ ಪುರಸಭೆ ಎಲೆಕ್ಷನ್‍ಗೆ ತನಗೆ ಬೇಕಾದವರಿಗೆ ಟಿಕೇಟು ಕೊಡಿಸುವುದಕ್ಕೂ ಸಾಧ್ಯವಾಗಿರಲಿಲ್ಲ ಅಂದಮೇಲೆ `ಜೆಡಿಎಸ್ ಅಧ್ಯಕ್ಷ’ ಹುದ್ದೆ ಅದಿನ್ನೆಷ್ಟು ಗಟ್ಟಿಯದ್ದಾಗಿರಬೇಡ!

ಅಂಥಾ ಸ್ಥಾನಕ್ಕೆ ಈಗ ಎಚ್.ಕೆ.ಕುಮಾರಸ್ವಾಮಿಯನ್ನು ತಂದು ಕೂರಿಸಲಾಗಿದೆ. ನೋ ಡೌಟ್, ಇಂದಿನ ನಿದರ್ಶನಗಳಂತೆ ಅವರೂ ಡಮ್ಮಿ ಅಧ್ಯಕ್ಷರಾಗೇ ಕಾಲ ತಳ್ಳಬೇಕಾಗುತ್ತೆ. ಯಾಕೆಂದರೆ ಬರೋಬ್ಬರಿ ಐದು ಬಾರಿ ಶಾಸಕರಾಗಿರುವ ಸದ್ರಿ ಕುಮಾರಸ್ವಾಮಿ ಈ ಮೈತ್ರಿ ಸರ್ಕಾರದಲ್ಲಿ ತನಗೊಂದು ಮಂತ್ರಿ ಸ್ಥಾನ ಕೊಡಿ ಎಂದು ಕೇಳಿ ಗಿಟ್ಟಿಸಿಕೊಳ್ಳಲಾಗದಷ್ಟು ಮೆತ್ತೆ ಮನುಷ್ಯ. ಇಂಥಾ ವ್ಯಕ್ತಿ ಜೆಡಿಎಸ್ ಅಧ್ಯಕ್ಷಗಿರಿಗಿರುವ ಹಳೇ ಸಂಪ್ರದಾಯ ಮುರಿಯುವ ಯಾವ ಸಾಧ್ಯತೆಯೂ ಇಲ್ಲ. ರಾಜ್ಯ ರಾಜಕಾರಣದ ಮಾತು ಒತ್ತಟ್ಟಿಗಿರಲಿ ತವರು ಜಿಲ್ಲೆ ಹಾಸನದಲ್ಲೇ ಅವರ ಮಾತು ನಡೆಯೋದಿಲ್ಲ ಅನ್ನೋದನ್ನು ಜೆಡಿಎಸ್ ಕಾರ್ಯಕರ್ತರೇ ಮಾತಾಡಿ ಕೊಳ್ಳುತ್ತಿದ್ದಾರೆ. ಯಾಕೆಂದರೆ ಹಾಸನದ ಇಡೀ ರಾಜಕಾರಣವನ್ನು ಮುಷ್ಠಿಯಲ್ಲಿ ಹಿಡಿದು ಕೂತಿರೋದು ಎಚ್.ಡಿ.ರೇವಣ್ಣ. ಅವರ ಮುಂದೆ ಎಚ್.ಕೆ.ಕುಮಾರಸ್ವಾಮಿ ಗಟ್ಟಿಯಾಗಿ ದನಿಬಿಚ್ಚುವ ಧೈರ್ಯ ತೋರುವುದೇ ಡೌಟು.

ಹಾಸನದಲ್ಲಿ ತನ್ನ ಬಿಟ್ಟರೆ ಮತ್ತ್ಯಾವ ಶಕ್ತಿಕೇಂದ್ರಗಳೂ ಸೃಷ್ಟಿ ಆಗಬಾರದೆನ್ನುವ ಕಾರಣಕ್ಕೇ ರೇವಣ್ಣ, ಎಚ್‍ಕೆ ಕುಮಾರಸ್ವಾಮಿ ಮಂತ್ರಿಯಾಗುವುದಕ್ಕೆ ಅಡ್ಡಗಾಲು ಹಾಕಿದ್ದು ಎನ್ನಲಾಗುತ್ತಿದೆ. ಆರಂಭದಲ್ಲಿ ಕುಮಾರಸ್ವಾಮಿ ಹೆಸರು ಮಂತ್ರಿಯಾಗುವವರ ಯಾದಿಯಲ್ಲಿ ಕೇಳಿಬಂದದ್ದು ಸುಳ್ಳಲ್ಲ. ದಲಿತ ವ್ಯಕ್ತಿಗೆ ಮಂತ್ರಿಯಾಗುವ ಅವಕಾಶ ತಪ್ಪಿಸಿ, ಈಗ ಅದೇ ವ್ಯಕ್ತಿಗೆ ಅಧ್ಯಕ್ಷ ಪಟ್ಟ ಕಟ್ಟಿ ದಲಿತರ ಮೂಗಿಗೆ ತುಪ್ಪ ಸವರುವ ಯತ್ನವೂ ಇದರ ಹಿಂದಿದೆ. ಆದರೆ ಗೌಡರ ಹಟ್ಟಿಯ ಪಾರ್ಟಿಯ ಅಧ್ಯಕ್ಷಗಿರಿಯ ವಜನ್ನು ಎಂತದ್ದು ಎಂಬುದು ಗೊತ್ತಿರುವ ಸತ್ಯವಾಗಿರೋದ್ರಿಂದ ದಲಿತರ್ಯಾರು ಈ ಆಯ್ಕೆಯಿಂದ ಹಿಗ್ಗಿಲ್ಲ ಅನ್ನೋದು ವಾಸ್ತವ.

ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷರಾಗಿದ್ದರಿಂದ ಆದ ಒಂದೇ ಲಾಭ ಅಂದ್ರೆ, ಜೆಡಿಎಸ್ ಶಾಸಕರು ತಾಜ್‍ವೆಸ್ಟ್‍ಎಂಡ್‍ನಿಂದ ದೇವನಹಳ್ಳಿ ರೆಸಾರ್ಟ್‍ಗೆ ಹೊರಡುವಾಗ ಮಾಧ್ಯಮಗಳ ಫೋಟೋಗ್ರಾಫರ್‍ಗಳಿಗೆ ಪ್ರಮುಖವಾಗಿ ಕಾಣಲೆಂದು ಅವರಿಗೆ ಬಸ್‍ನಲ್ಲಿ ಮುಂದಿನ ಸೀಟ್ ಸಿಕ್ಕಿದ್ದಷ್ಟೇ!

ಈ ಆಯ್ಕೆಯಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿರೋದು. ಅಂತೂ ದೇವೇಗೌಡರು ಕುಟುಂಬ ರಾಜಕಾರಣದ ಹಳಿ ಬಿಟ್ಟು ಪಕ್ಕಕ್ಕೆ ಸರಿಯಲಾರರು ಎಂಬುದು ಇದರಿಂದ ಸಾಬೀತಾಗಿದೆ. ಜೊತೆಗೆ ರೇವಣ್ಣನವರ ಮಗ ಪ್ರಜ್ವಲ್ ಗೆದ್ದು ಸಂಸದನಾದ ನಂತರ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ದಾಯಾದಿ ಅಸಮಾಧಾನವನ್ನು ಈ ರೀತಿ ಸರಿದೂಗಿಸಲಾಗಿದೆ. ಆದ್ರೆ ಒಂದಂತೂ ಸತ್ಯ, ಹಾಲಿ ಜೆಡಿಎಸ್ ಅಧ್ಯಕ್ಷ ಎಚ್ಕೆ ಕುಮಾರಸ್ವಾಮಿ ದೊಡ್ಡ ಗೌಡರು, ರೇವಣ್ಣ, ಕುಮಾರಣ್ಣನ ಎದುರು ಗಟ್ಟಿ ದನಿಯಾಗುವ ಮಾತಂತಿರಲಿ, ನಿಖಿಲ್ ಎದುರೂ ಗಡುಸಾಗಿ ಮಾತಾಡುವುದಕ್ಕೆ ಸಾಧ್ಯವಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...