Homeರಾಜಕೀಯಮಾಯಕೊಂಡದ ಮಾಯಾ`ಬಜಾರಿ’ನಲ್ಲಿ....

ಮಾಯಕೊಂಡದ ಮಾಯಾ`ಬಜಾರಿ’ನಲ್ಲಿ….

- Advertisement -
- Advertisement -
  • ಟಿ.ಎನ್.ಷಣ್ಮುಖ |

ಇತ್ತ ದಾವಣಗೆರೆಯ ಸೆರಗಿಗೂ, ಅತ್ತ ಚಿತ್ರದುರ್ಗದ ಚುಂಗಿಗೂ ಆತುಕೊಂಡಂತಿರುವ ಮಾಯಕೊಂಡದ ಎಲೆಕ್ಷನ್ ಕಣದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಅದರಲ್ಲೂ ಬಿಜೆಪಿಗೆ ಮಾಯಕೊಂಡ ಬಿಸಿ ತುಪ್ಪದಂತಾಗಿದೆ. ಯಾಕಂದ್ರೆ ಬಿಜೆಪಿ ಅಲ್ಲಿ ಇಬ್ಬಿಬ್ಬರು ಬಂಡಾಯಗಾರರನ್ನು ಎದುರಿಸುವಂತಾಗಿದೆ. ಕಳೆದ ಬಾರಿ ಯಡಿಯೂರಪ್ಪ ಕೆಜೆಪಿ ಕಟ್ಟಿ, ಮಾಯಕೊಂಡದಿಂದ ಪ್ರೊ.ಲಿಂಗಪ್ಪನ ಕೈಗೆ ತೆಂಗಿನಕಾಯಿ ಕೊಟ್ಟು ಈಡುಗಾಡಿ ಹೊಡೆಯಲು ಹೇಳಿದ್ದರು. ಹಾಗಾಗಿ ಬಿಜೆಪಿ ಬಸವರಾಜ ನಾಯ್ಕ ಎಂಬ ಅಪರಿಚಿತನನ್ನು ಕಣಕ್ಕಿಳಿಸಿತ್ತು. ಆದರೆ ಈ ಸಲ ಕೆಜೆಪಿ ಬಿಜೆಪಿಯೊಳಗೆ ಐಕ್ಯಗೊಂಡಿದೆ. ಸೋ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಸವರಾಜ ನಾಯ್ಕನಿಗೆ ಟಿಕೇಟು ಕೊಡಬೇಕೊ ಅಥವಾ ಯಡಿಯೂರಪ್ಪನವರನ್ನು ನಂಬಿ ಈಡುಗಾಯಿ ಹೊಡೆದಿದ್ದ ಲಿಂಗಪ್ಪನಿಗೆ ಟಿಕೇಟು ಕೊಡಬೇಕೊ ಎಂಬ ಜಿಜ್ಞಾಸೆ ಆರಂಭದಿಂದಲೂ ಬಿಜೆಪಿಯನ್ನು ಹೈರಾಣು ಮಾಡಿತ್ತು. ಅದರ ನಡುವೆ ಎಚ್.ಆನಂದಪ್ಪ ಅನ್ನೋ ಮತ್ತೊಬ್ಬ ಗಿರಾಕಿ ಬಿಜೆಪಿ ಟಿಕೇಟಿಗೆ ತಾಲೀಮು ನಡೆಸಿದ್ದ.

ಲಿಂಗಪ್ಪ

ಕೊನೆಗೆ ಯಡಿಯೂರಪ್ಪನ ಪವರ್ರೇ ಗೆದ್ದು, ಕೆಜೆಪಿಯಿಂದ ಬಂದ ಲಿಂಗಪ್ಪನಿಗೇ ಟಿಕೇಟು ಸಿಗುವಂತಾಯ್ತು. ಇದರಿಂದ ಬಂಡೆದ್ದ ಬಸವರಾಜ ನಾಯ್ಕ ಮಹಿಮಾ ಪಟೇಲರ ಸಾರಥ್ಯದ ಜೆಡಿಯು ಹೊಕ್ಕು ಆ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯತ್ತ ಬಾಣ ನೆಟ್ಟಿದ್ದಾನೆ. ಇತ್ತ ಮತ್ತೋರ್ವ ಟಿಕೇಟ್ ಆಕಾಂಕ್ಷಿ ಆನಂದಪ್ಪ ಕೂಡಾ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾನೆ. `ಬಿಜೆಪಿ ನಮಗೆ ನಂಬಿಕೆ ದ್ರೋಹ ಮಾಡಿದೆ. ನಮ್ಮನ್ನು ರಾಜಕೀಯವಾಗಿ ತುಳಿಯಲು ಹವಣಿಸಿದೆ. ಹಾಗಾಗಿ ನಾವು ಆ ಪಾರ್ಟಿಯನ್ನು ಮಾಯಕೊಂಡದಲ್ಲಿ ನಿರ್ನಾಮ ಮಾಡ್ತೀವಿ’ ಅನ್ನೋ ಕಾಮನ್ ಸ್ಲೋಗನ್ ಇಟ್ಟುಕೊಂಡು ಇವರಿಬ್ಬರೂ ಬಬ್ರುವಾಹನ ಸ್ಟೈಲಿನಲ್ಲಿ ಅಬ್ಬರಿಸುತ್ತಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಅದರಲ್ಲೂ ಹಾಲಿ ಜೆಡಿಯು ಅಭ್ಯರ್ಥಿಯಾಗಿರುವ ಬಸವರಾಜ ನಾಯ್ಕನ ಜೊತೆ ಬಿಜೆಪಿ ವರ್ತಿಸಿದ ರೀತಿ ಇದೆಯಲ್ಲ ಅದು, ಈ ಕ್ಷೇತ್ರದ ಬಹುಸಂಖ್ಯಾತ ಮತದಾರರಾದ ಲಂಬಾಣಿ ನಾಯ್ಕ ಮತಗಳನ್ನು ರೊಚ್ಚಿಗೆಬ್ಬಿಸಿದೆ. ಲಿಂಗಾಯತ ಮದಗಜ ಕಾದಾಟದ ನಡುವೆ ಒಬ್ಬ ಶೂದ್ರನನ್ನು ಬಲಿಕೊಟ್ಟ ಈ ವೃತ್ತಾಂತಕ್ಕೆ ಐದು ವರ್ಷಗಳ ಇತಿಹಾಸವಿದೆ. ದಾವಣಗೆರೆಯ ಕೇಸರಿ ಮೇಳದಲ್ಲಿ ತಾಳಮೇಳ ತಪ್ಪಿ ಒಂದು ದಶಕವೇ ಕಳೆದುಹೋಗಿದೆ. ಮಾಜಿ ತರ್ಕಾರಿ ಮಂತ್ರಿ ಎಸ್.ಎ.ರವೀಂದ್ರನಾಥನ ಕ್ಷೀಣಬಣ ಒಂದು ಕಡೆಗಾದರೆ, ಯಡ್ಯೂರಪ್ಪನವರ ಬಣ ಮತ್ತೊಂದು ಕಡೆ. ಸಂಸದ ಸಿದ್ದೇಶ್ವರ ಆದಿಯಾಗಿ ಬಹುತೇಕ ಹಾಲಿ, ಮಾಜಿ ಎಂಎಲ್‍ಎಗಳು ಯಡ್ಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಸವರಾಜ ನಾಯ್ಕ ರವೀಂದ್ರನಾಥನ ಕಟ್ಟಾಳುವಾಗಿದ್ದ. 2013ರಲ್ಲಿ ಯಡಿಯೂರಪ್ಪ ಬಿಜೆಪಿ ಕಟ್ಟಿದಾಗ ರವೀಂದ್ರನಾಥ ಮಾಯಕೊಂಡದ ಬಿಜೆಪಿ ಟಿಕೇಟು ಕೊಡಿಸಿ ಕಾದಾಟಕ್ಕೆ ತಳ್ಳಿದ್ದು ಇದೇ ಬಸವರಾಜ ನಾಯ್ಕನನ್ನು.

ಬಸವರಾಜ ನಾಯ್ಕ್

ಆದರೆ ಯಾವಾಗ ಯಡಿಯೂರಪ್ಪ ಬಿಜೆಪಿಗೆ ವಾಪಾಸಾದರೋ ಆಗಿನಿಂದ ಅವರ ವಿರೋಧಿಗಳನ್ನು ವ್ಯವಸ್ಥಿತವಾಗಿ ಮಟ್ಟ ಹಾಕುತ್ತಾ ಬಂದರು. ಅಂಥಾ ಈಶ್ವರಪ್ಪನೇ ಥಂಡಾ ಹೊಡೆದು ರಾಯಣ್ಣ ಬ್ರಿಗೇಡ್ ನೆಪದಲ್ಲಿ ಟಿಕೇಟಿಗೆ ಹೆಣಗಾಡಬೇಕಾಯ್ತು. ಇತ್ತ ದಾವಣಗೆರೆಯಲ್ಲೂ ರವೀಂದ್ರನಾಥರ ಬಣದ ಮೇಲೆ ಅದೇ ದುಷ್ಮನಿಯ ಕಣ್ಣಿಟ್ಟ ಯಡಿಯೂರಪ್ಪ ಅವರ ಬೆಂಬಲಿಗರಿಗೆ ಬಿಸಿನೀರು ಬಿಡುತ್ತಾ ಬಂದರು. ರವೀಂದ್ರನಾಥಗೂ ಟಿಕೇಟ್ ತಪ್ಪಿಸಲು ಯಡ್ಯೂರಪ್ಪ ಯತ್ನಿಸಿದರಾದರೂ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ್‍ಗೆ ಪ್ರಬಲ ಸ್ಪರ್ಧೆಯೊಡ್ಡುವಂತವರು ಬಿಜೆಪಿಯಲ್ಲಿ ಯಾರೂ ಇರದ ಕಾರಣ ರವೀಂದ್ರನಾಥ್‍ಗೆ ಟಿಕೇಟ್ ತಪ್ಪಿಸಲು ಸಾಧ್ಯವಾಗಲಿಲ್ಲ. ಆದರೆ ರವೀಂದ್ರನಾಥ್ ಮೇಲಿನ ಸಿಟ್ಟಿಗೆ ಬಸವರಾಜ ನಾಯ್ಕನಿಗೆ ಟಿಕೇಟ್ ತಪ್ಪಿಸಿ, ಕೆಜೆಪಿಯ ಲಿಂಗಪ್ಪನಿಗೆ ಬಿ ಫಾರಂ ದಯಪಾಲಿಸಿದ್ದಾರೆ. ಯಡ್ಯೂರಪ್ಪ-ರವೀಂದ್ರನಾಥ್ ಎಂಬ ಇಬ್ಬರು ಬಿಜೆಪಿ ಲಿಂಗವಂತರ ಕಾದಾಟಕ್ಕೆ ನಮ್ಮ ಬಸರಾಜ ನಾಯ್ಕ ಬಲಿಪಶು ಆಗುವಂತೆ ಆಯ್ತಲ್ಲ ಎಂಬ ಸಿಟ್ಟು ಈಗ ಲಂಬಾಣಿ ಜನರದ್ದು.

ಶಾಮನೂರು ದಣಿಗಳನ್ನು ವಿಪರೀತ ವಿರೋಧ ಮಾಡಿಕೊಂಡಿದ್ದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ ಕಳೆದ ಎಲೆಕ್ಷನ್‍ನಲ್ಲೇ ಟಿಕೇಟು ಮಿಸ್ ಮಾಡಿಕೊಳ್ಳಬೇಕಿತ್ತು. ಆದರೆ ಹೈಕಮಾಂಡ್ ತಂತ್ರಗಾರಿಕೆ ಬಳಸಿ ಟಿಕೇಟ್ ಗಿಟ್ಟಿಸಿದ್ದಲ್ಲದೆ ಬಿಜೆಪಿ-ಕೆಜೆಪಿ ಕಾದಾಟದ ನಡುವೆ ಗೆದ್ದು ಶಾಸಕನೂ ಆಗಿದ್ದ. ಆಮೇಲೆ ಆತ ಕ್ಷೇತ್ರದತ್ತ ಮುಖ ಮಾಡಿ ನೋಡಿದವನಲ್ಲ. ತನಗೆ ಮಂತ್ರಿಗಿರಿ ಕೊಡಲಿಲ್ಲ ಅಂತ ವಿಧಾನಸೌಧದ ಮುಂದೆ ಧರಣಿ ಕೂತು ನಗೆಪಾಟಲಿಗೆ ಈಡಾದ ಶಿವಮೂರ್ತಿ ನಾಯ್ಕನ ಬೆಂಬಲಕ್ಕೆ ಅವನ ಕ್ಷೇತ್ರದಿಂದ ಒಬ್ಬನೇ ಒಬ್ಬ ಕಾರ್ಯಕರ್ತನೂ ಬರಲಿಲ್ಲ ಎಂದಮೇಲೆ ಅವನ ಜನಪ್ರಿಯತೆ ಇನ್ನೆಂತದ್ದಿರಬೇಡ. ಅದೇ ಕಾರಣಕ್ಕೆ ಈ ಸಲ ಶಿವಮೂರ್ತಿ ನಾಯ್ಕನಿಗೆ ಖೊಕ್ ಕೊಟ್ಟು ಆನಗೋಡು ಜಿಲ್ಲಾ ಪಂಚಾಯ್ತಿ ಮೆಂಬರು ಬಸವರಾಜನಿಗೆ ಟಿಕೇಟ್ ನೀಡಲಾಗಿದೆ. ಈ ಬಸವರಾಜ, ಹಾಲಿ ಸಮಾಜ ಕಲ್ಯಾಣ ಮಂತ್ರಿ ಎಚ್.ಆಂಜನೇಯರ ಖಾಸಾ ಅಳಿಯ. ಅದಕ್ಕಿಂತಲೂ ಮುಖ್ಯವಾಗಿ ಕ್ಷೇತ್ರದಲ್ಲಿ ಜನರ ಒಡನಾಟ ಉಳಿಸಿಕೊಂಡಿರುವಾತ. ಬಸವರಾಜ್ ಅಭ್ಯರ್ಥಿಯಾಗಿರೋದ್ರಿಂದ ಬಂಡಾಯದಿಂದ ಬೆಂಡಾಗಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ ಬಸವರಾಜ್

ಮಾಯಕೊಂಡದಲ್ಲಿ 52 ಸಾವಿರದಷ್ಟಿರುವ ಲಿಂಗಾಯತ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆಯಾದರೂ, ಹೆಚ್ಚೂಕಮ್ಮಿ ಸಮಪ್ರಮಾಣದಲ್ಲಿರುವ ಇತರೆ ಜಾತಿಗಳ ಮತಗಳೂ ನಿರ್ಣಾಯಕ. ಮಾದಿಗ, ಲಂಬಾಣಿ ಮತ್ತು ನಾಯಕ ಜಾತಿಯ ತಲಾ 40 ಸಾವಿರ ಮತಗಳು ತಮ್ಮ ಪೊಲಿಟಿಕಲ್ ಅಸ್ಮಿತೆಯ ಮಹತ್ವವನ್ನು ಸಾರಿ ಹೇಳುತ್ತವೆ. ಕೈ ಪಾರ್ಟಿಯ ಬಸವರಾಜ ಮತ್ತು ಬಿಜೆಪಿಯ ಲಿಂಗಪ್ಪ ಇಬ್ಬರೂ ಮಾದಿಗ ಸಮುದಾಯದವರು. ಆದರೆ ಈ ಮತಗಳ ಮೇಲೆ ಮಂತ್ರಿ ಆಂಜನೇಯರ ಬಿಗಿ ಪ್ರಭಾವ ಇರೋದ್ರಿಂದ ಅವು ಕಾಂಗ್ರೆಸ್‍ಗೆ ಹರಿದು ಬರೋದ್ರಲ್ಲಿ ಸಂಶಯವಿಲ್ಲ. ಅದೂಅಲ್ಲದೇ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ದಲಿತ ವಿರೋಧಿ ನಡವಳಿಕೆ ಹೆಚ್ಚಾಗುತ್ತಿರೋದ್ರಿಂದ ದಲಿತರ ಮತಗಳು ಬಿಜೆಪಿಗೆ ಹೋಗೋದೆ ಡೌಟು. ಇನ್ನು ಬಸವರಾಜ ನಾಯ್ಕನಿಗೆ ಟಿಕೇಟು ತಪ್ಪಿಸಿದ ಬಿಜೆಪಿಯ ಆಂತರಿಕ ಗುದಮುರಗಿ ವಿರುದ್ಧ ಸಿಡಿದೆದ್ದಿರುವ ಲಂಬಾಣಿ ಮತಗಳು ಜೆಡಿಯು ಬಸವರಾಜ ನಾಯ್ಕ, ಜೆಡಿಎಸ್‍ನ ಶೀಲಾ ನಾಯ್ಕ ನಡುವೆ ಹಂಚಿಹೋಗುವುದರ ನಡುವೆ `ಅಹಿಂದ’ ಹಾದಿಗುಂಟ ಕಾಂಗ್ರೆಸ್ಸನ್ನೂ ಎಡತಾಕಲಿವೆ. ಪಾರಂಪರಿಕ ಬಿಜೆಪಿ ಮತಗಳೂ ಆನಂದಪ್ಪನ ಬಂಡಾಯ ಸ್ಪರ್ಧೆಯಿಂದ ಮುಕ್ಕಾಗಲಿವೆ. ನಾಯಕ ಜನಾಂಗದ ಮತಗಳಂತೂ ಕಾಂಗ್ರೆಸ್ ಹಸ್ತದಲ್ಲಿ ಭದ್ರವಾಗಿವೆ. ಮಾಯಕೊಂಡದ ಲಿಂಗಾಯತ ಮತಗಳ ಮೇಲೆ ಯಡಿಯೂರಪ್ಪನ ಖದರ್ರು ಇರೋದಕ್ಕಿಂತ ಶಾಮನೂರು ಧಣಿಗಳ ಛಾಪು ಇದೆ. ಹಾಗಾಗಿ ಏನಿಲ್ಲವೆಂದರೂ ಅವುಗಳಲ್ಲಿ ಕನಿಷ್ಠ ಅರ್ಧದಷ್ಟಾದರು ಕಾಂಗ್ರೆಸ್‍ಗೆ ಬರಲಿವೆ. ಜೊತೆಗೆ, ಸಾಧು ಲಿಂಗಾಯತರ ರವೀಂದ್ರ ನಾಥ ಪಕ್ಷದೊಳಗೆ ಯಡಿಯೂರಪ್ಪನ ಪ್ರಭಾವ ಕುಗ್ಗಿಸಲು ಆತನ ಶಿಷ್ಯನ ವಿರುದ್ಧ ಕರಾಮತ್ತು ಮಾಡುವ ಸಾಧ್ಯತೆಯೂ ಕಾಣುತ್ತಿದೆ. ಹಾಗೇನಾದರು ಆದಲ್ಲಿ ಕಾಂಗ್ರೆಸ್ ಸೇರುವ ಲಿಂಗಾಯತರ ಮತಗಳ ಪ್ರಮಾಣದಲ್ಲಿ ಮತ್ತಷ್ಟೂ ಏರಿಕೆಯಾಗಲಿದೆ. ಈ ಸಮೀಕರಣವನ್ನೆಲ್ಲ ತಾಳೆ ಹಾಕಿ ನೋಡಿದರೆ ಮಾಯಕೊಂಡದಲ್ಲಿ ಕಾಂಗ್ರೆಸ್ ಅಧಿಕಾರವೇ ಮುಂದುವರೆಯುವ ಲಕ್ಷಣಗಳೇ ದಟ್ಟವಾಗಿವೆ. ಫಲಿತಾಂಶದ ದಿನ ಸ್ಪಷ್ಟ ಉತ್ತರ ಸಿಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...