Homeಅಂತರಾಷ್ಟ್ರೀಯರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

- Advertisement -
- Advertisement -

| ಆರ್.ಜಗನ್ನಾಥ್ |

ಮನಶಾಸ್ತ್ರದ ಬಗ್ಗೆ ಪಾಠ ಮಾಡುವ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಒಂದು ಅಸಾಧರಿವಾದ ಪ್ರಯೋಗವನ್ನು ದಿನಾಂಕ 1971 ಆಗಸ್ಟ್ 14 ರಿಂದ 21ರ ವರೆಗೆ ನಡೆಸಿದ್ದು ಇದಕ್ಕೆ (Stanford Prison Experiment) ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್(ಎಸ್‍ಪಿಇ) ಎಂದು ಕರೆದಿರುತ್ತಾರೆ.

ಅಮೇರಿಕಾದ ನೌಕಾಪಡೆಯ ಸಂಶೋಧನೆಗಾಗಿ ನಡೆದ ಪ್ರಯೋಗದಲ್ಲಿ ಪ್ರೊ.ಫಿಲಿಪ್ ಜಿಂಬರ್‍ಡೊ ಪ್ರಯೋಗಕ್ಕಾಗಿ ಸೇರಿಸಿಕೊಂಡದ್ದು ತನ್ನ ಇಪ್ಪತ್ತನಾಲ್ಕು ಜನ ವಿದ್ಯಾರ್ಥಿಗಳನ್ನು. ಈ ಇಪ್ಪತ್ತನಾಲ್ಕು ಜನರನ್ನು ಆಯ್ಕೆ ಮಾಡಿಕೊಳ್ಳುವಾಗ ಆರೋಗ್ಯ ಸಮಸ್ಯೆ ಇಲ್ಲದ ಕ್ರಿಮಿನಲ್ ಹಿನ್ನೆಲೆಯಿಲ್ಲದ, ಮಾನಸಿಕ ಸಮಸ್ಯೆ ಇಲ್ಲದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.

ಇಪ್ಪತ್ನಾಲ್ಕು ಜನರನ್ನು ತಲಾ ಎರಡು ತಂಡಗಳಾಗಿ ವಿಭಜಿಸಿ 12 ಜನರ ಒಂದು ತಂಡವನ್ನು ಸೆರೆವಾಸಿಗಳಾಗಿ, ಮತ್ತೊಂದು 12 ಜನರ ತಂಡವನ್ನು ಜೈಲರ್‍ಗಳಾಗಿ ವಿಭಾಗಿಸಲಾಗುತ್ತದೆ. ಯೂನಿವರ್ಸಿಟಿಯ ಸೆಲ್ಲರ್‍ನ್ನು ನಿಜವಾದ ಜೈಲಿನ ರೀತಿಯಲ್ಲಿ ಪರಿವರ್ತಿಸಿ ಸದರಿ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

ಹನ್ನೆರಡು ಜನರ ಸೆರೆವಾಸಿಗಳಿಗೆ ಹೆಸರಿನ ಬದಲಾಗಿ ನಂಬರ್‍ಗಳನ್ನು, ಸೆರೆವಾಸಿಗಳ ಯೂನಿಫಾರಂನ್ನು ನೀಡಲಾಗಿರುತ್ತದೆ. ಅದೇ ರೀತಿ ಜೈಲರ್‍ಗಳಿಗೂ ಸಹ ನಿಜವಾದ ಜೈಲರ್‍ಗಳಿಗೆ ನೀಡಲಾಗುವ ಸಮವಸ್ತ್ರ ಮತ್ತು ಪರಿಕರಗಳನ್ನು ನೀಡಲಾಗುತ್ತದೆ.

ಜೊತೆಯಲ್ಲಿ ಊಟ ಮಾಡುತ್ತಿದ್ದ, ಜೊತೆಯಲ್ಲಿ ಪಾಠ ಕೇಳುತ್ತಿದ್ದ, ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಗಳಲ್ಲಿನ ಒಂದು ತಂಡಕ್ಕೆ ‘ಅಧಿಕಾರ’ ಸಿಕ್ಕಕೂಡಲೇ ಯಾವ ರೀತಿಯಲ್ಲಿ ವರ್ತಿಸತೊಡಗುತ್ತಾರೆ ಎಂಬುದೇ ಪ್ರಯೋಗದ ಉದ್ದೇಶ.

ಸ್ವತಃ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಜೈಲಿನ ಸೂಪರಿಂಟೆಂಡೆಟ್ ಆಗಿ ಜೈಲರ್‍ಗಳನ್ನು ಮುನ್ನಡೆಸುತ್ತಿರುತ್ತಾನೆ. 15 ದಿನಗಳ ಕಾಲದ ಈ ಪ್ರಯೋಗ ಜೈಲರ್‍ಗಳ ಮಿತಿಮೀರಿದ ಅಧಿಕಾರದ ದುರ್ಬಳಕೆಯ ಕಾರಣ 6ನೇ ದಿವಸಕ್ಕೇ ಕೊನೆಯಾಗಬೇಕಾಗುತ್ತದೆ.

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

ಇವತ್ತು ದೇಶದಲ್ಲಿ ಒಟ್ಟಿಗೆ ಬೆಳೆದ, ಒಟ್ಟಿಗೆ ಆಟವಾಡಿದ, ಒಟ್ಟಿಗೆ ಬದುಕು ಕಟ್ಟಿಕೊಂಡ ಸ್ನೇಹಿತರ ನಡುವೆ ಜೈಲರ್‍ಗಳು ಮತ್ತು ಸೆರೆವಾಸಿಗಳು ಎಂಬ ಸ್ಪಷ್ಟವಾದ ವಿಭಾಗ ಉಂಟಾಗಿದೆ.

ಈ ಸೊಕಾಲ್ಡ್ ಜೈಲರ್‍ಗಳು ತಮ್ಮನ್ನು ತಾವೇ ಅಪರಿಮಿತ ಅಧಿಕಾರವುಳ್ಳ ದೇಶಭಕ್ತರೆಂದು, ಗೋರಕ್ಷಕರೆಂದೂ, ಈ ದೇಶದ ನಿಜವಾದ ರಕ್ಷಕರೆಂದೂ ಬಿಂಬಿಸಿಕೊಂಡಿದ್ದಾರೆ. ವಾಟ್ಸಾಪ್, ಫೇಸ್‍ಬುಕ್, ಸಮಾಜ ಎಲ್ಲಾ ಕಡೆ ತನ್ನ ರಾಜಕೀಯ ವಿರೋಧಿಗಳನ್ನು ತನ್ನ ವಿಚಾರಧಾರೆಯ ವಿರೋಧಿಗಳನ್ನು ಸೆರೆಯಾಳುಗಳ ರೀತಿಯಲ್ಲಿ ಭಾವಿಸಿ ಬಗ್ಗುಬಡಿಯಲೆತ್ನಿಸುತ್ತಿದ್ದಾರೆ. ಅವರುಗಳ ವಿರುದ್ಧ ಸುಳ್ಳುಗಳನ್ನು ಸೃಷ್ಟಿಸಿ ದೇಶವಿರೋಧಿಗಳು, ತುಕಡೆ ತುಕಡೆ ಗ್ಯಾಂಗ್, ಕಾಂಗಿ, ಕಮ್ಮಿ, ಹುಸಿ ಜಾತ್ಯಾತೀತರೆಂದು ಕರೆದು ವಿವಿಧ ರೀತಿಯ ಮಾನಸಿಕ ಹಿಂಸೆ ಮತ್ತು ಒತ್ತಡ ಹೇರುವ ಕೆಲಸದಲ್ಲಿ ನಿರತವಾಗಿದೆ.

ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್ (ಎಸ್.ಪಿ.ಎ) ಹದಿನೈದು ದಿನ ನಡೆಯಬೇಕಾದ ಪ್ರಯೋಗ ‘ಅಧಿಕಾರ’ದ ಅಪರಿಮಿತ ದುರ್ಬಳಕೆಯ ಕಾರಣ ಆರು ದಿವಸಕ್ಕೆ ಮುಕ್ತಾಯವಾಯಿತು. ಅದೇ ರೀತಿಯಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವ ಪ್ರಯೋಗ ಸಹ ಅದಷ್ಟು ಬೇಗ ಮುಕ್ತಾಯಗೊಳ್ಳಲಿ ಎಂಬುದಷ್ಟೇ ಸದ್ಯದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...

ರಾಮಮಂದಿರದ ದೇಣಿಗೆ ಕಳ್ಳತನ: ಆರೋಪಿಗಳ ಪರ ಯಾವುದೇ ವಕೀಲರು ವಾದಿಸುವಂತಿಲ್ಲ , ವಾದಿಸಿದರೆ ರೂ. 5ಲಕ್ಷ ದಂಡ

ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಸಂಘದ ಈ ತೀರ್ಮಾನವನ್ನು...

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...