Homeಅಂತರಾಷ್ಟ್ರೀಯರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

- Advertisement -
- Advertisement -

| ಆರ್.ಜಗನ್ನಾಥ್ |

ಮನಶಾಸ್ತ್ರದ ಬಗ್ಗೆ ಪಾಠ ಮಾಡುವ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಒಂದು ಅಸಾಧರಿವಾದ ಪ್ರಯೋಗವನ್ನು ದಿನಾಂಕ 1971 ಆಗಸ್ಟ್ 14 ರಿಂದ 21ರ ವರೆಗೆ ನಡೆಸಿದ್ದು ಇದಕ್ಕೆ (Stanford Prison Experiment) ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್(ಎಸ್‍ಪಿಇ) ಎಂದು ಕರೆದಿರುತ್ತಾರೆ.

ಅಮೇರಿಕಾದ ನೌಕಾಪಡೆಯ ಸಂಶೋಧನೆಗಾಗಿ ನಡೆದ ಪ್ರಯೋಗದಲ್ಲಿ ಪ್ರೊ.ಫಿಲಿಪ್ ಜಿಂಬರ್‍ಡೊ ಪ್ರಯೋಗಕ್ಕಾಗಿ ಸೇರಿಸಿಕೊಂಡದ್ದು ತನ್ನ ಇಪ್ಪತ್ತನಾಲ್ಕು ಜನ ವಿದ್ಯಾರ್ಥಿಗಳನ್ನು. ಈ ಇಪ್ಪತ್ತನಾಲ್ಕು ಜನರನ್ನು ಆಯ್ಕೆ ಮಾಡಿಕೊಳ್ಳುವಾಗ ಆರೋಗ್ಯ ಸಮಸ್ಯೆ ಇಲ್ಲದ ಕ್ರಿಮಿನಲ್ ಹಿನ್ನೆಲೆಯಿಲ್ಲದ, ಮಾನಸಿಕ ಸಮಸ್ಯೆ ಇಲ್ಲದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.

ಇಪ್ಪತ್ನಾಲ್ಕು ಜನರನ್ನು ತಲಾ ಎರಡು ತಂಡಗಳಾಗಿ ವಿಭಜಿಸಿ 12 ಜನರ ಒಂದು ತಂಡವನ್ನು ಸೆರೆವಾಸಿಗಳಾಗಿ, ಮತ್ತೊಂದು 12 ಜನರ ತಂಡವನ್ನು ಜೈಲರ್‍ಗಳಾಗಿ ವಿಭಾಗಿಸಲಾಗುತ್ತದೆ. ಯೂನಿವರ್ಸಿಟಿಯ ಸೆಲ್ಲರ್‍ನ್ನು ನಿಜವಾದ ಜೈಲಿನ ರೀತಿಯಲ್ಲಿ ಪರಿವರ್ತಿಸಿ ಸದರಿ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

ಹನ್ನೆರಡು ಜನರ ಸೆರೆವಾಸಿಗಳಿಗೆ ಹೆಸರಿನ ಬದಲಾಗಿ ನಂಬರ್‍ಗಳನ್ನು, ಸೆರೆವಾಸಿಗಳ ಯೂನಿಫಾರಂನ್ನು ನೀಡಲಾಗಿರುತ್ತದೆ. ಅದೇ ರೀತಿ ಜೈಲರ್‍ಗಳಿಗೂ ಸಹ ನಿಜವಾದ ಜೈಲರ್‍ಗಳಿಗೆ ನೀಡಲಾಗುವ ಸಮವಸ್ತ್ರ ಮತ್ತು ಪರಿಕರಗಳನ್ನು ನೀಡಲಾಗುತ್ತದೆ.

ಜೊತೆಯಲ್ಲಿ ಊಟ ಮಾಡುತ್ತಿದ್ದ, ಜೊತೆಯಲ್ಲಿ ಪಾಠ ಕೇಳುತ್ತಿದ್ದ, ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಗಳಲ್ಲಿನ ಒಂದು ತಂಡಕ್ಕೆ ‘ಅಧಿಕಾರ’ ಸಿಕ್ಕಕೂಡಲೇ ಯಾವ ರೀತಿಯಲ್ಲಿ ವರ್ತಿಸತೊಡಗುತ್ತಾರೆ ಎಂಬುದೇ ಪ್ರಯೋಗದ ಉದ್ದೇಶ.

ಸ್ವತಃ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಜೈಲಿನ ಸೂಪರಿಂಟೆಂಡೆಟ್ ಆಗಿ ಜೈಲರ್‍ಗಳನ್ನು ಮುನ್ನಡೆಸುತ್ತಿರುತ್ತಾನೆ. 15 ದಿನಗಳ ಕಾಲದ ಈ ಪ್ರಯೋಗ ಜೈಲರ್‍ಗಳ ಮಿತಿಮೀರಿದ ಅಧಿಕಾರದ ದುರ್ಬಳಕೆಯ ಕಾರಣ 6ನೇ ದಿವಸಕ್ಕೇ ಕೊನೆಯಾಗಬೇಕಾಗುತ್ತದೆ.

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

ಇವತ್ತು ದೇಶದಲ್ಲಿ ಒಟ್ಟಿಗೆ ಬೆಳೆದ, ಒಟ್ಟಿಗೆ ಆಟವಾಡಿದ, ಒಟ್ಟಿಗೆ ಬದುಕು ಕಟ್ಟಿಕೊಂಡ ಸ್ನೇಹಿತರ ನಡುವೆ ಜೈಲರ್‍ಗಳು ಮತ್ತು ಸೆರೆವಾಸಿಗಳು ಎಂಬ ಸ್ಪಷ್ಟವಾದ ವಿಭಾಗ ಉಂಟಾಗಿದೆ.

ಈ ಸೊಕಾಲ್ಡ್ ಜೈಲರ್‍ಗಳು ತಮ್ಮನ್ನು ತಾವೇ ಅಪರಿಮಿತ ಅಧಿಕಾರವುಳ್ಳ ದೇಶಭಕ್ತರೆಂದು, ಗೋರಕ್ಷಕರೆಂದೂ, ಈ ದೇಶದ ನಿಜವಾದ ರಕ್ಷಕರೆಂದೂ ಬಿಂಬಿಸಿಕೊಂಡಿದ್ದಾರೆ. ವಾಟ್ಸಾಪ್, ಫೇಸ್‍ಬುಕ್, ಸಮಾಜ ಎಲ್ಲಾ ಕಡೆ ತನ್ನ ರಾಜಕೀಯ ವಿರೋಧಿಗಳನ್ನು ತನ್ನ ವಿಚಾರಧಾರೆಯ ವಿರೋಧಿಗಳನ್ನು ಸೆರೆಯಾಳುಗಳ ರೀತಿಯಲ್ಲಿ ಭಾವಿಸಿ ಬಗ್ಗುಬಡಿಯಲೆತ್ನಿಸುತ್ತಿದ್ದಾರೆ. ಅವರುಗಳ ವಿರುದ್ಧ ಸುಳ್ಳುಗಳನ್ನು ಸೃಷ್ಟಿಸಿ ದೇಶವಿರೋಧಿಗಳು, ತುಕಡೆ ತುಕಡೆ ಗ್ಯಾಂಗ್, ಕಾಂಗಿ, ಕಮ್ಮಿ, ಹುಸಿ ಜಾತ್ಯಾತೀತರೆಂದು ಕರೆದು ವಿವಿಧ ರೀತಿಯ ಮಾನಸಿಕ ಹಿಂಸೆ ಮತ್ತು ಒತ್ತಡ ಹೇರುವ ಕೆಲಸದಲ್ಲಿ ನಿರತವಾಗಿದೆ.

ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್ (ಎಸ್.ಪಿ.ಎ) ಹದಿನೈದು ದಿನ ನಡೆಯಬೇಕಾದ ಪ್ರಯೋಗ ‘ಅಧಿಕಾರ’ದ ಅಪರಿಮಿತ ದುರ್ಬಳಕೆಯ ಕಾರಣ ಆರು ದಿವಸಕ್ಕೆ ಮುಕ್ತಾಯವಾಯಿತು. ಅದೇ ರೀತಿಯಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವ ಪ್ರಯೋಗ ಸಹ ಅದಷ್ಟು ಬೇಗ ಮುಕ್ತಾಯಗೊಳ್ಳಲಿ ಎಂಬುದಷ್ಟೇ ಸದ್ಯದ ಆಶಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...