HomeUncategorizedರೆಡ್ಡಿಯ ಗುಡ್ ಟೈಮ್ - ಮೋದಿಯ ಅಚ್ಚೆ ದಿನ್

ರೆಡ್ಡಿಯ ಗುಡ್ ಟೈಮ್ – ಮೋದಿಯ ಅಚ್ಚೆ ದಿನ್

- Advertisement -
- Advertisement -

‘ನೋಡಪಾ… ಕೆಟ್ಟ ಘಳಿಗೆಯಲ್ಲಿ ಏನೇನಾಗಿದೆಯೋ ಅದ್ನೆಲ್ಲಾ ಮರ್‍ತೊಗ್ಬಿಡು, ನನ್ನ ಟೈಮು ಈಗ ಚೆನ್ನಾಗಿ ಶುರುವಾಗಿದೆ.’
ರಾಯಚೂರು ರೂರಲ್ ಎಂಎಲ್‌ಎ ಬಸನಗೌಡರನ್ನು ಆಪರೇಷನ್ ಮಾಡಲು ಹೋಗಿದ್ದ ದಿ ಗ್ರೇಟ್ ಜೆನ್ನಿ ಅಲಿಯಾಸ್ ಜನಾರ್ಧನ ರೆಡ್ಡಿಯ ಡೀಲಿಂಗ್ ಡೈಲಾಗ್ ಇದು. ಇವಿಎಂ ಮಷೀನ್‌ಗಳ ಪಕಡ್ಬಂದಿಯೂ ಸೇರಿದಂತೆ ಮಾಡಬಾರದ ಮಸಲತ್ತುಗಳನ್ನೆಲ್ಲ ಮಾಡಿದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪಲಾರದ ಅತಂತ್ರ ಸ್ಥಿತಿಯಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿಯ ಆಸರೆಯಲ್ಲದೆ ಮತ್ತೇನೂ ಬಾಕಿ ಉಳಿದಿರಲಿಲ್ಲ. ಸ್ವತಃ ಅಮಿತ್ ಶಾ, ಯಡ್ಯೂರಪ್ಪನವರ ಹೆಗಲಿಗೆ ಅಧಿಕಾರದ ಜೋಳಿಗೆ ನೇತುಹಾಕಿ ದಿಲ್ಲಿ ಸೇರಿಕೊಂಡು ರಿಮೋಟ್ ಹಿಡಿದು ಕೂತಮೇಲೆ ಪಾಪ, ರೆಡ್ಡಿಯಾದರು ಇನ್ನೇನು ಮಾಡಬೇಕಿತ್ತು. ಆದ್ರೆ ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದು ಜೆನ್ನಿ ರೆಡ್ಡಿಯ ಬಾಯಿಂದ ಹೊರಬಿದ್ದ ‘ನನ್ನ ಟೈಮು ಚೆನ್ನಾಗಿ ಶುರುವಾಗಿದೆ’ ಅನ್ನೋ ಸಂಗತಿ. ಇದು ಯಾಕಷ್ಟು imporatant ವಿಷಯವಾಗುತ್ತೆ ಅನ್ನೋದಕ್ಕೆ 2014ರ ಲೋಕಸಭಾ ಸಮರ ಕಣದಲ್ಲಿ ಮೋದಿ ಮಹಾತ್ಮರು ಉದುರಿಸಿದ್ದ ಡೈಲಾಗ್ ನೆನಪಿಸಿಕೊಳ್ಳಿ. ಅವತ್ತು ಹೋದಬಂದ ಕಡೆಯಲ್ಲೆಲ್ಲ ‘ಅಚ್ಚೇ ದಿನ್ ಆಯೇಗಾ, ಜರೂರ್ ಆಯೇಗಾ’ ಅಂತ ಮಹಾತ್ಮರು ಬಂಬಡಾ ಬಜಾಯಿಸಿದ್ದಕ್ಕೂ ಇವತ್ತು ರೆಡ್ಡಿಯಂತಹ ಮಾಫಿಯಾಗಳು ‘ನಮಗೆ ಗುಡ್ ಟೈಮ್ ಶುರುವಾಗಿದೆ’ ಅನ್ನೋದಕ್ಕೂ ಸಂಬಂಧ ಇರೋದು ಕಾಣಿಸುತ್ತೆ ಅಲ್ವಾ?

ಮೋದಿ ‘ಅಚ್ಚೇ ದಿನ್ ಅಂದಾಗ, ನಮ್ಮ ಬಡ ಬೋರೇಗೌಡಪ್ಪಗಳು ತಮ್ಮ ಮನೆಯ ದೀಪಕ್ಕೆ ಎಣ್ಣೆ ಬರುತ್ತೆ, ತಟ್ಟೆಗೆ ಅನ್ನ ಬಂದು ಬೀಳುತ್ತೆ, ಬೆಲೆಯೇರಿಕೆಯ ಗ್ರಾಫು ಕುಸಿಯುತ್ತೆ ಅಂತ ಕನಸು ಕಂಡಿದ್ದರು. ಆದರೆ ಮೋದಿಯ ಅಚ್ಚೇ ದಿನ್ ವಾಸ್ತವ ಅಂತಹ ಬೋರೇಗೌಡರಿಗಲ್ಲ, ಇಂಥಾ ಜನಾರ್ಧನ ರೆಡ್ಡಿಗಳಿಗೆ. ಇಲ್ಲದೇ ಹೋಗಿದ್ದರೆ, ಅನಾಮತ್ತು ಹದಿನಾರೂವರೆ ಸಾವಿರ ಕೋಟಿಯ ಅದಿರು ಲಫಡಾ ಕೇಸಿನಲ್ಲಿ
ನಂಬರ್1 ಆರೋಪಿಯಾಗಿ ಜೈಲು ಸೇರಿ, ಬೇಲ್‌ಡೀಲ್ ಕೇಸಲ್ಲಿ ಜಡ್ಜ್‌ಗೆ 10 ಕೋಟಿಯ ಬೇಲ್‌ಪೂರಿ ತಿನ್ನಿಸಲು ಹೋಗಿ ತಗಲಾಕ್ಕೊಂಡು ಜೈಲೂಟ ಭದ್ರ ಮಾಡಿಕೊಂಡಿದ್ದ ಜನಾರ್ಧನ ರೆಡ್ಡಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಸುಲಭವಾಗಿ ಬೇಲ್ ಮೇಲೆ ಹೊರಬಂದು ನಿಟ್ಟುಸಿರು ಬಿಡುತ್ತಿರಲಿಲ್ಲ. ಸಿಬಿಐ ರೇಡುಗಳಿಂದ ಇನ್ನು ರೆಡ್ಡಿಯ ಕಥೆ ಮುಗಿದೇಹೋಯ್ತು, ಅವನ ಆಸ್ತಿಯೆಲ್ಲ ಜಪ್ತಿಯಾಗಿ ಬೀದಿಗೆ ಬಂದ ಅನ್ನುವವರ ಮುಂದೆ ಮುನ್ನೂರು ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿ ಕುಟುಂಬ ಸಮೇತ ಹಾಡಿ ಕುಣಿಯುತ್ತಾನೆಂದರೆ ಅವನ ‘ಗುಡ್ ಟೈಂ’ ಹಿಂದೆ ಮೋದಿಯ ‘ಅಚ್ಚೇ ದಿನ್ ಕೆಲಸ ಮಾಡಿಲ್ಲ ಅನ್ನಲಿಕ್ಕಾಗುತ್ತಾ? ಅದೂ ಇಡೀ ದೇಶಕ್ಕೆ ದೇಶವೇ ಮೋದಿ ಮಾಡಿದ ‘ನೋಟ್‌ಬಂಧಿಯಿಂದ ದುಡ್ಡಿಗಾಗಿ ಪರದಾಡುತ್ತಿರುವ ಹೊತ್ತಲ್ಲಿ!

ರೆಡ್ಡಿ ಒಬ್ಬನೇ ಅಲ್ಲ, ಮೋದಿಯ ಅಚ್ಚೇ ದಿನ್‌ಗಳ ಫಾಯಿದೆ ಪಡೆದವರು ಬಹಳಷ್ಟು ಮಂದಿಯಿದ್ದಾರೆ. ಆದರೆ ಅವರೆಲ್ಲ ಈ ನೆಲದ ಸಿರಿವಂತರು, ಇಂಡಸ್ಟ್ರಿಯಲಿಸ್ಟುಗಳು, ಕಾರ್ಪೊರೇಟ್ ಕಂಪನಿಗಳು ಮಾತ್ರ! ಆಮ್ ಆದ್ಮಿಯ ಪಾಲಿಗೆ ಅಚ್ಚೇ ದಿನವೂ ಬರಲಿಲ್ಲ, ಹದಿನೈದು ಲಕ್ಷವೂ ಇಣುಕಿ ನೋಡಲಿಲ್ಲ. ಇದೇ ವರ್ಷ ಚೀನಾದ ಶಾಂಘೈ ಮೂಲದ ಹುರೂನ್ ಎಂಬ ಇಂಟರ್‌ನ್ಯಾಷನಲ್ ಅನಾಲಿಟಿಕಲ್ ಸಂಸ್ಥೆಯೊಂದು ಜಗತ್ತಿನ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿತು. ಅದರ ಪ್ರಕಾರ ಕಳೆದ ಮೂರ್‍ನಾಲ್ಕು ವರ್ಷದಲ್ಲಿ ಇಂಡಿಯಾದ ಬಿಲಿಯನೇರುಗಳ ಆಸ್ತಿಗಳಿಕೆ ಶೇ.49ರಷ್ಟು ಹೆಚ್ಚಾಗಿದೆಯಂತೆ. ಅಂದಹಾಗೆ ಆ ಲಿಸ್ಟಿನಲ್ಲಿ ಸ್ಥಾನ ಪಡೆದ ಭಾರತದ ಬಿಲಿಯನೇರುಗಳ ಸಂಖ್ಯೆ 131. ಅಂದರೆ 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ 131 ಜನರ ಆಸ್ತಿ ಮಾತ್ರ ರಾಕೆಟ್ ವೇಗದಲ್ಲಿ ಹೆಚ್ಚಾಗಿದೆ. ಈ ರಿಪೋರ್ಟು ಹೇಳುವ ಪ್ರಕಾರ ಮೋದಿ ಮಹಾತ್ಮರ ಚೆಡ್ಡಿ ದೋಸ್ತು ಅದಾನಿಯ ಆಸ್ತಿ ಕಳೆದ ಒಂದು ವರ್ಷದಲ್ಲೇ 109% ಜಾಸ್ತಿಯಾಗಿದೆಯಂತೆ! ಇನ್ನು ಅಂಬಾನಿ ಬ್ರದರ್‍ಸ್‌ಗಳದ್ದು, ಜಿಂದಾಲ್ ಕುಡಿಗಳದ್ದು, ಮಿತ್ತಲ್ ಕುಟುಂಬಗಳದ್ದು ಕೇಳೋದೆ ಬೇಡ. ದುರಂತವೆಂದರೆ ಮೋದಿ ಹೇಳಿದ್ದ ಅಚ್ಚೇ ದಿನ್ ಇವರೆಲ್ಲ ಆಸ್ತಿಗಳನ್ನು ಇಷ್ಟೆಲ್ಲ ಹೆಚ್ಚು ಮಾಡಿದ್ದರೂ, ಸುಮಾರು 60 ಕೋಟಿ ಬಡ ಭಾರತೀಯರ ಆದಾಯ ಈ ಅವಧಿಯಲ್ಲಿ ಏನಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಒಟ್ಟಿನಲ್ಲಿ ಮೋದಿ ಮಹಾತ್ಮರ ಅಚ್ಚೇ ದಿನ್ ಜನಸಾಮಾನ್ಯರಿಗೆ ದಕ್ಕಲಿಲ್ಲ, ರೆಡ್ಡಿಯಂಥಾ, ಅಂಬಾನಿ-ಅದಾನಿಗಳಂಥ ಕಾಳಧನಿಕರಿಗೆ ‘ಗುಡ್ ಟೈಂ’ ರೂಪದಲ್ಲಿ ವಕ್ಕರಿಸಿಕೊಂಡಿದೆ ಅನ್ನೋದು ರೆಡ್ಡಿ ಮಾತಿನಿಂದಲೇ ದೃಢವಾಗುತ್ತೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...