Homeಮುಖಪುಟಶೇ.33 ಹಾಲಿ ರಾಜ್ಯಸಭಾ ಸಂಸದರ ಮೇಲಿದೆ ಕ್ರಿಮಿನಲ್ ಕೇಸ್: ವರದಿ

ಶೇ.33 ಹಾಲಿ ರಾಜ್ಯಸಭಾ ಸಂಸದರ ಮೇಲಿದೆ ಕ್ರಿಮಿನಲ್ ಕೇಸ್: ವರದಿ

- Advertisement -
- Advertisement -

ರಾಜ್ಯಸಭೆಯ 225 ಹಾಲಿ ಸದಸ್ಯರ ಪೈಕಿ, ಶೇಕಡಾ 33ರಷ್ಟು ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌(ಎಡಿಆರ್)ನ ವಿಶ್ಲೇಷಣೆ ತಿಳಿಸಿದೆ.

ಇಬ್ಬರು ರಾಜ್ಯಸಭಾ ಹಾಲಿ ಸದಸ್ಯರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಲ್ವರು ಸದಸ್ಯರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಒಟ್ಟು ಸದಸ್ಯರ ಪೈಕಿ 31 ಮಂದಿ, ಅಂದರೆ ಶೇ.14ರಷ್ಟು ಜನರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ರಾಜ್ಯಸಭೆಯ 225 ಹಾಲಿ ಸಂಸದರ ಪೈಕಿ 75 (ಶೇ. 33) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ. 40 (ಶೇ. 18) ಮಂದಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಎಡಿಆರ್ ವಿಶ್ಲೇಷಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಎಷ್ಟು ಜನ ರಾಜ್ಯಸಭಾ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂಬುವುದನ್ನು ತಿಳಿಸಿದೆ. ಅದರಂತೆ, ಬಿಜೆಪಿಯ 90 (ಶೇ.23), ಕಾಂಗ್ರೆಸ್‌ನ 28 (ಶೇ. 50) ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಟಿಎಂಸಿಯ 13 ರಾಜ್ಯಸಭಾ ಸದಸ್ಯರ ಪೈಕಿ 5 (ಶೇ. 38), ಆರ್‌ಜೆಡಿಯ 6 ಸದಸ್ಯರಲ್ಲಿ 4 (ಶೇ. 67), ಸಿಪಿಐಎಂನ 5 ಸದಸ್ಯರಲ್ಲಿ 4 (ಶೇ.80), ಎಎಪಿಯ 10 ಸದಸ್ಯರ ಪೈಕಿ 3 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 4 (ಶೇ.36) ಮತ್ತು ಡಿಎಂಕೆಯ 10 ಸದಸ್ಯರಲ್ಲಿ 2 (ಶೇ.20) ಮಂದಿ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ಎಡಿಆರ್‌ ವಿಶ್ಲೇಷಣೆ ತಿಳಿಸಿದೆ.

ಬಿಜೆಪಿಯ 90 ಸದಸ್ಯರ ಪೈಕಿ 10 (ಶೇ.11), ಕಾಂಗ್ರೆಸ್‌ನ 28 ಸದಸ್ಯರ ಪೈಕಿ 9 (ಶೇ.32), ಟಿಎಂಸಿಯ 13 ಸದಸ್ಯರ ಪೈಕಿ 3 (ಶೇ.23), ಆರ್‌ಜೆಡಿಯ 6 ಸದಸ್ಯರ ಪೈಕಿ 2 (ಶೇ.33) ಸಿಪಿಐಎಂನ 5 ಸದಸ್ಯರ ಪೈಕಿ 2 (ಶೇ. 40), ಎಎಪಿಯ 10 ಸದಸ್ಯರ ಪೈಕಿ 1 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 3(ಶೇ.27) ಮತ್ತು ಡಿಎಂಕೆಯ 10 ಸದಸ್ಯರ ಪೈಕಿ ಒಬ್ಬರು (ಶೇ.10) ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯವಾರು ಸಂಸದರ ವಿಶ್ಲೇಷಣೆ ನೋಡುವುದಾದರೆ, ಮಹಾರಾಷ್ಟ್ರದ 18 ಸಂಸದರಲ್ಲಿ 11 (ಶೇ.61), ಬಿಹಾರದ 16 ಸಂಸದರಲ್ಲಿ 8 (ಶೇ.50), ಉತ್ತರ ಪ್ರದೇಶದ 31 ಸಂಸದರಲ್ಲಿ 9 (ಶೇ.29), ತಮಿಳುನಾಡಿನ 18 ಸಂಸದರ ಪೈಕಿ 6 (ಶೇ.33), ಕೇರಳದ 9 ಸಂಸದರ ಪೈಕಿ 6 (ಶೇ.67) ಮತ್ತು ಪಶ್ಚಿಮ ಬಂಗಾಳದ 16 ಸಂಸದರ ಪೈಕಿ 7(ಶೇ.44) ಮಂದಿ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ.

ವಿಶ್ಲೇಷಣೆಯು 233 ರಾಜ್ಯಸಭಾ ಸದಸ್ಯರ ಪೈಕಿ 225 ಮಂದಿಯನ್ನು ಒಳಗೊಂಡಿದೆ. ಮಹಾರಾಷ್ಟ್ರದಿಂದ ಒಂದು ಸ್ಥಾನ ಖಾಲಿಯಾಗಿದೆ, ಜಮ್ಮು ಕಾಶ್ಮೀರದ ನಾಲ್ವರನ್ನು ವಿಶ್ಲೇಷಣೆಗೆ ಒಳಪಡಿಸಿಲ್ಲ. ಕರ್ನಾಟಕ, ಪುದುಚ್ಚೇರಿ ಮತ್ತು ಅಸ್ಸಾಂನ ತಲಾ ಒಬ್ಬ ಸಂಸದರ ಅಫಿಡವಿಟ್‌ಗಳ ಅಲಭ್ಯತೆಯಿಂದಾಗಿ ವಿಶ್ಲೇಷಣೆ ಮಾಡಿಲ್ಲ ಎಂದು ಎಡಿಆರ್ ಹೇಳಿದೆ.

ಕ್ರಿಮಿನಲ್ ಪ್ರಕರಣಗಳ ಜೊತೆಗೆ ರಾಜ್ಯಸಭಾ ಸದಸ್ಯರ ಆಸ್ತಿ ಮೌಲ್ಯವನ್ನೂ ವಿಶ್ಲೇಷಿಸಲಾಗಿದೆ. ಪ್ರತಿ ಸಂಸದರ ಸರಾಸರಿ ಆಸ್ತಿ ಮೌಲ್ಯ ₹87.12 ಕೋಟಿಗಳಷ್ಟಿದೆ ಎಂದು ತಿಳಿದು ಬಂದಿದೆ. ದತ್ತಾಂಶಗಳನ್ನು ಮತ್ತಷ್ಟು ವಿಭಜಿಸಿ ವಿಶ್ಲೇಷಿಸಿದಾಗ ವಿವಿಧ ರಾಜಕೀಯ ಪಕ್ಷಗಳ ಸದಸ್ಯರ ಆಸ್ತಿ ಮೌಲ್ಯಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ಕಂಡು ಬಂದಿವೆ.

ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯ 90 ಸದಸ್ಯರಲ್ಲಿ 9 (ಶೇ.10), ಕಾಂಗ್ರೆಸ್‌ನ 28 ಸದಸ್ಯರಲ್ಲಿ 4 (ಶೇ.14), ವೈಎಸ್‌ಆರ್‌ಸಿಪಿಯ 11 ಸದಸ್ಯರಲ್ಲಿ 5 (ಶೇ.45), ಎಎಪಿಯ 10 ಸದಸ್ಯರಲ್ಲಿ 2 (ಶೇ.20) ಟಿಆರ್‌ಎಸ್‌ನ 4 ಸದಸ್ಯರಲ್ಲಿ 3 (ಶೇ.75) ಮತ್ತು ಆರ್‌ಜೆಡಿಯ 6 ಸದಸ್ಯರಲ್ಲಿ 2 (ಶೇ.33) ಮಂದಿ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪ್ರಮುಖ ಪಕ್ಷಗಳ ಸಂಸದರ ಸರಾಸರಿ ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹37.34 ಕೋಟಿ, ಕಾಂಗ್ರೆಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹40.70 ಕೋಟಿ, ಟಿಎಂಸಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹10.25 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹357.68 ಕೋಟಿ, ಟಿಆರ್‌ಎಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹1,383.74 ಕೋಟಿ, ಡಿಎಂಕೆ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹6.37 ಕೋಟಿ ಮತ್ತು ಎಎಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹114.81 ಕೋಟಿಯಾಗಿದೆ. ಇದಲ್ಲದೆ, ವಿಶ್ಲೇಷಿಸಲಾದ ರಾಜ್ಯಸಭೆಯ ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ

ಪಕ್ಷವಾರು ವಿಂಗಡಿಸಿದಾಗ ವಿಶ್ಲೇಷಿಸಿದ ಸಂಸದರ ಒಟ್ಟು ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,360 ಕೋಟಿ, ಕಾಂಗ್ರೆಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹1,139 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,934 ಕೋಟಿ, ಬಿಆರ್‌ಎಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹5,534 ಕೋಟಿ ಆಸ್ತಿ ಮತ್ತು ಎಎಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹ 1,148 ಕೋಟಿ.

ಇದನ್ನೂ ಓದಿ : ಬಿಜೆಪಿಯ ಚುನಾವಣಾ ಬಾಂಡ್‌ ವಂಚನೆ ಪ್ರಕರಣ: ದೂರು ಹಿಂಪಡೆದ ಜಡ್ಜ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...