Homeಮುಖಪುಟಶೇ.33 ಹಾಲಿ ರಾಜ್ಯಸಭಾ ಸಂಸದರ ಮೇಲಿದೆ ಕ್ರಿಮಿನಲ್ ಕೇಸ್: ವರದಿ

ಶೇ.33 ಹಾಲಿ ರಾಜ್ಯಸಭಾ ಸಂಸದರ ಮೇಲಿದೆ ಕ್ರಿಮಿನಲ್ ಕೇಸ್: ವರದಿ

- Advertisement -
- Advertisement -

ರಾಜ್ಯಸಭೆಯ 225 ಹಾಲಿ ಸದಸ್ಯರ ಪೈಕಿ, ಶೇಕಡಾ 33ರಷ್ಟು ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌(ಎಡಿಆರ್)ನ ವಿಶ್ಲೇಷಣೆ ತಿಳಿಸಿದೆ.

ಇಬ್ಬರು ರಾಜ್ಯಸಭಾ ಹಾಲಿ ಸದಸ್ಯರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಲ್ವರು ಸದಸ್ಯರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಒಟ್ಟು ಸದಸ್ಯರ ಪೈಕಿ 31 ಮಂದಿ, ಅಂದರೆ ಶೇ.14ರಷ್ಟು ಜನರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ರಾಜ್ಯಸಭೆಯ 225 ಹಾಲಿ ಸಂಸದರ ಪೈಕಿ 75 (ಶೇ. 33) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ. 40 (ಶೇ. 18) ಮಂದಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಎಡಿಆರ್ ವಿಶ್ಲೇಷಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಎಷ್ಟು ಜನ ರಾಜ್ಯಸಭಾ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂಬುವುದನ್ನು ತಿಳಿಸಿದೆ. ಅದರಂತೆ, ಬಿಜೆಪಿಯ 90 (ಶೇ.23), ಕಾಂಗ್ರೆಸ್‌ನ 28 (ಶೇ. 50) ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಟಿಎಂಸಿಯ 13 ರಾಜ್ಯಸಭಾ ಸದಸ್ಯರ ಪೈಕಿ 5 (ಶೇ. 38), ಆರ್‌ಜೆಡಿಯ 6 ಸದಸ್ಯರಲ್ಲಿ 4 (ಶೇ. 67), ಸಿಪಿಐಎಂನ 5 ಸದಸ್ಯರಲ್ಲಿ 4 (ಶೇ.80), ಎಎಪಿಯ 10 ಸದಸ್ಯರ ಪೈಕಿ 3 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 4 (ಶೇ.36) ಮತ್ತು ಡಿಎಂಕೆಯ 10 ಸದಸ್ಯರಲ್ಲಿ 2 (ಶೇ.20) ಮಂದಿ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ಎಡಿಆರ್‌ ವಿಶ್ಲೇಷಣೆ ತಿಳಿಸಿದೆ.

ಬಿಜೆಪಿಯ 90 ಸದಸ್ಯರ ಪೈಕಿ 10 (ಶೇ.11), ಕಾಂಗ್ರೆಸ್‌ನ 28 ಸದಸ್ಯರ ಪೈಕಿ 9 (ಶೇ.32), ಟಿಎಂಸಿಯ 13 ಸದಸ್ಯರ ಪೈಕಿ 3 (ಶೇ.23), ಆರ್‌ಜೆಡಿಯ 6 ಸದಸ್ಯರ ಪೈಕಿ 2 (ಶೇ.33) ಸಿಪಿಐಎಂನ 5 ಸದಸ್ಯರ ಪೈಕಿ 2 (ಶೇ. 40), ಎಎಪಿಯ 10 ಸದಸ್ಯರ ಪೈಕಿ 1 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 3(ಶೇ.27) ಮತ್ತು ಡಿಎಂಕೆಯ 10 ಸದಸ್ಯರ ಪೈಕಿ ಒಬ್ಬರು (ಶೇ.10) ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯವಾರು ಸಂಸದರ ವಿಶ್ಲೇಷಣೆ ನೋಡುವುದಾದರೆ, ಮಹಾರಾಷ್ಟ್ರದ 18 ಸಂಸದರಲ್ಲಿ 11 (ಶೇ.61), ಬಿಹಾರದ 16 ಸಂಸದರಲ್ಲಿ 8 (ಶೇ.50), ಉತ್ತರ ಪ್ರದೇಶದ 31 ಸಂಸದರಲ್ಲಿ 9 (ಶೇ.29), ತಮಿಳುನಾಡಿನ 18 ಸಂಸದರ ಪೈಕಿ 6 (ಶೇ.33), ಕೇರಳದ 9 ಸಂಸದರ ಪೈಕಿ 6 (ಶೇ.67) ಮತ್ತು ಪಶ್ಚಿಮ ಬಂಗಾಳದ 16 ಸಂಸದರ ಪೈಕಿ 7(ಶೇ.44) ಮಂದಿ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ.

ವಿಶ್ಲೇಷಣೆಯು 233 ರಾಜ್ಯಸಭಾ ಸದಸ್ಯರ ಪೈಕಿ 225 ಮಂದಿಯನ್ನು ಒಳಗೊಂಡಿದೆ. ಮಹಾರಾಷ್ಟ್ರದಿಂದ ಒಂದು ಸ್ಥಾನ ಖಾಲಿಯಾಗಿದೆ, ಜಮ್ಮು ಕಾಶ್ಮೀರದ ನಾಲ್ವರನ್ನು ವಿಶ್ಲೇಷಣೆಗೆ ಒಳಪಡಿಸಿಲ್ಲ. ಕರ್ನಾಟಕ, ಪುದುಚ್ಚೇರಿ ಮತ್ತು ಅಸ್ಸಾಂನ ತಲಾ ಒಬ್ಬ ಸಂಸದರ ಅಫಿಡವಿಟ್‌ಗಳ ಅಲಭ್ಯತೆಯಿಂದಾಗಿ ವಿಶ್ಲೇಷಣೆ ಮಾಡಿಲ್ಲ ಎಂದು ಎಡಿಆರ್ ಹೇಳಿದೆ.

ಕ್ರಿಮಿನಲ್ ಪ್ರಕರಣಗಳ ಜೊತೆಗೆ ರಾಜ್ಯಸಭಾ ಸದಸ್ಯರ ಆಸ್ತಿ ಮೌಲ್ಯವನ್ನೂ ವಿಶ್ಲೇಷಿಸಲಾಗಿದೆ. ಪ್ರತಿ ಸಂಸದರ ಸರಾಸರಿ ಆಸ್ತಿ ಮೌಲ್ಯ ₹87.12 ಕೋಟಿಗಳಷ್ಟಿದೆ ಎಂದು ತಿಳಿದು ಬಂದಿದೆ. ದತ್ತಾಂಶಗಳನ್ನು ಮತ್ತಷ್ಟು ವಿಭಜಿಸಿ ವಿಶ್ಲೇಷಿಸಿದಾಗ ವಿವಿಧ ರಾಜಕೀಯ ಪಕ್ಷಗಳ ಸದಸ್ಯರ ಆಸ್ತಿ ಮೌಲ್ಯಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ಕಂಡು ಬಂದಿವೆ.

ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯ 90 ಸದಸ್ಯರಲ್ಲಿ 9 (ಶೇ.10), ಕಾಂಗ್ರೆಸ್‌ನ 28 ಸದಸ್ಯರಲ್ಲಿ 4 (ಶೇ.14), ವೈಎಸ್‌ಆರ್‌ಸಿಪಿಯ 11 ಸದಸ್ಯರಲ್ಲಿ 5 (ಶೇ.45), ಎಎಪಿಯ 10 ಸದಸ್ಯರಲ್ಲಿ 2 (ಶೇ.20) ಟಿಆರ್‌ಎಸ್‌ನ 4 ಸದಸ್ಯರಲ್ಲಿ 3 (ಶೇ.75) ಮತ್ತು ಆರ್‌ಜೆಡಿಯ 6 ಸದಸ್ಯರಲ್ಲಿ 2 (ಶೇ.33) ಮಂದಿ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪ್ರಮುಖ ಪಕ್ಷಗಳ ಸಂಸದರ ಸರಾಸರಿ ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹37.34 ಕೋಟಿ, ಕಾಂಗ್ರೆಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹40.70 ಕೋಟಿ, ಟಿಎಂಸಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹10.25 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹357.68 ಕೋಟಿ, ಟಿಆರ್‌ಎಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹1,383.74 ಕೋಟಿ, ಡಿಎಂಕೆ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹6.37 ಕೋಟಿ ಮತ್ತು ಎಎಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹114.81 ಕೋಟಿಯಾಗಿದೆ. ಇದಲ್ಲದೆ, ವಿಶ್ಲೇಷಿಸಲಾದ ರಾಜ್ಯಸಭೆಯ ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ

ಪಕ್ಷವಾರು ವಿಂಗಡಿಸಿದಾಗ ವಿಶ್ಲೇಷಿಸಿದ ಸಂಸದರ ಒಟ್ಟು ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,360 ಕೋಟಿ, ಕಾಂಗ್ರೆಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹1,139 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,934 ಕೋಟಿ, ಬಿಆರ್‌ಎಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹5,534 ಕೋಟಿ ಆಸ್ತಿ ಮತ್ತು ಎಎಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹ 1,148 ಕೋಟಿ.

ಇದನ್ನೂ ಓದಿ : ಬಿಜೆಪಿಯ ಚುನಾವಣಾ ಬಾಂಡ್‌ ವಂಚನೆ ಪ್ರಕರಣ: ದೂರು ಹಿಂಪಡೆದ ಜಡ್ಜ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...