ದೇಶೀಯ ವಿಮಾನ ಮೂಲಕ ಕರ್ನಾಟಕ್ಕೆ ಬರುವ ಪ್ರಯಾಣಿಕರಿಗೆ 7 ದಿನಗಳ ಸಾಂಸ್ಥಿಕ ಸಂಪರ್ಕತಡೆಗೆ ಒಳಗಾಗ ಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಹೇಳಿದ್ದಾರೆ.
ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್, ತಮಿಳುನಾಡು, ದೆಹಲಿ ಮತ್ತು ಮಧ್ಯಪ್ರದೇಶದಂತಹ ಹೆಚ್ಚು ಕೊರೊನಾ ಬಾಧಿತ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯಸಲಿದೆ. ಈ ರಾಜ್ಯಗಳಿಂದ ಬರುವ ದೇಶೀಯ ವಿಮಾನದ ಪ್ರಯಾಣಿಕರು 7 ದಿನಗಳ ಸಾಂಸ್ಥಿಕ ಕ್ಯಾರೆಂಟೈನ್ಗೆ ಒಳಗಾಗಬೇಕು ಹಾಗೂ ನಂತರ ಮನೆ ಸಂಪರ್ಕತಡೆಯನ್ನು ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.
Incoming domestic flight passenger from Maharashtra, Rajasthan, Delhi, Gujarat, Tamil Nadu, Delhi & Madhya Pradesh will undergo 7 day institutional Quarantine followed by home quarantine.
— DGP KARNATAKA (@DgpKarnataka) May 23, 2020
ಕೊರೊನಾ ಕಾರಣಕ್ಕೆ ಹಾಕಲಾಗಿದ್ದ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ನಾಗರಿಕ ವಿಮಾನ ಯಾನಗಳು ಸೋಮವಾರದಿಂದ ಪುನರಾರಂಭಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮೇ 20 ರಂದು ಹೇಳಿದ್ದರು.
“ದೇಶೀಯ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳು 2020 ರ ಮೇ 25 ರಿಂದ ಸೋಮವಾರ ಮಾಪನಾಂಕ ವಿಧಾನದ ರೀತಿಯಲ್ಲಿ ಪುನರಾರಂಭಗೊಳ್ಳಲಿವೆ. ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ವಾಯುಯಾನ ಸಂಸ್ಥೆಗಳು ಮೇ 25 ರಿಂದ ಕಾರ್ಯಾಚರಣೆಗೆ ಸಿದ್ಧವಾಗುವಂತೆ ತಿಳಿಸಲಾಗುತ್ತಿದೆ“ ಎಂದು ಸಚಿವರು ಹೇಳಿದ್ದರು.
ಪ್ರಯಾಣಿಕರ ಸಂಚಾರಕ್ಕಾಗಿ ಎಸ್ಒಪಿಗಳನ್ನು ಪ್ರತ್ಯೇಕವಾಗಿ ಸಚಿವಾಲಯ ನೀಡುತ್ತಿದೆ ಎಂದು ಅವರು ಹೇಳಿದ್ದರು.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಾಗ ಮಾರ್ಚ್ ಅಂತ್ಯದಲ್ಲಿ ವಿಮಾನ ಯಾನಗಳನ್ನು ಕೂಡಾ ನಿಲ್ಲಿಸಲಾಗಿತ್ತು.
ಓದಿ: ಕರಾಚಿ ವಿಮಾನ ಪತನ: ಪವಾಡಸದೃಸವಾಗಿ ಬದುಕುಳಿದ ಪಂಜಾಬ್ ಬ್ಯಾಂಕ್ ಕಾರ್ಯನಿರ್ವಾಹಕ
Incoming domestic flight passenger from Maharashtra, Rajasthan, Delhi, Gujarat, Tamil Nadu, Delhi & Madhya Pradesh will undergo 7 day institutional Quarantine followed by home quarantine.
— DGP KARNATAKA (@DgpKarnataka) May 23, 2020