Homeಕರ್ನಾಟಕಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

- Advertisement -
- Advertisement -

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಣ್ಣಿನ ಸೊಗಡು ಇದ್ದು, ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕಾದದ್ದು ನಾಗರೀಕತೆಯ ಕರ್ತವ್ಯ. ಆದರೆ, ದೇಶವನ್ನು ತಮ್ಮದೇ ಜಾತಿ- ಧರ್ಮ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಕಾಡುತ್ತಿರುವಂತೆಯೇ ಇದೀಗ ಭಾಷಾ ಶ್ರೇಷ್ಠತೆಯ ವ್ಯಸನವೂ ದೇಶಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಭಾರತದಲ್ಲಿ ನೂರೆಂಟು ಭಾಷೆಗಳಿವೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಆದರೆ, ಕನ್ನಡ ಅಭಿವೃದ್ಧಿಗೆ ಬಿಡಿಗಾಸು ನೀಡದ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಿದಂತೆ ಇದೀಗ ಸಂಸ್ಕೃತವನ್ನೂ ಹೇರಲು ಮುಂದಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನೂರಾರು ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಲು ಹೊರಟಿದೆ. ಇದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ, ಹಲವು ಬಲಪಂಥೀಯರು ಸಂಸ್ಕೃತ ಭಾರತದ ಆದಿಭಾಷೆ, ಮೂಲ ಭಾಷೆ, ಭಾರತದ ಮಾತೃಭಾಷೆ ಎಂದೆಲ್ಲಾ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಂಸ್ಕೃತ ಭಾಷೆಯ ಅಬ್ಬರ ಜೋರಾಗಿಯೇ ಇದೆ.

ಈ ಹಿನ್ನೆಲೆಯಲ್ಲಿ ಭಾರತದ ಮೂಲ ಭಾಷೆ ಯಾವುದು? ಸಂಸ್ಕೃತಕ್ಕೂ ಭಾರತಕ್ಕೂ ಇರುವ ಸಂಬಂಧವೇನು? ಸಂಸ್ಕೃತ ನಿಜಕ್ಕೂ ಭಾರತದ ಮೂಲ ಭಾಷೆಯ-ದೇವ ಭಾಷೆಯಾ? ಇಷ್ಟಕ್ಕೂ ಸಂಸ್ಕೃತ ಇದೀಗ ಸತ್ತ ಭಾಷೆಯಾಗಿರುವುದು ಏಕೆ? ಎಂಬ ಅಸಲಿ ವಿಚಾರಗಳ ಕಡೆಗೆ ಗಮನ ಹರಿಸಬೇಕಾದ ತುರ್ತು ಎದುರಾಗಿದೆ.

ಸಂಸ್ಕೃತದ ಮೂಲ ಯಾವುದು?

ಜಗತ್ತಿನಲ್ಲಿ ಅತಿದೊಡ್ಡ ನುಡಿ ಕುಟುಂಬ ಇಂಡೋ ಯುರೋಪಿಯನ್ ಕುಟುಂಬ. ಲಿತುವೇನಿಯಾದ ಪುರಾತತ್ವ ತಜ್ಞೆ ಮಾರಿಜಾ ಗಿಂಬುಟಾಸ್ ಎನ್ನುವವರು ಪ್ರತಿಪಾದಿಸಿದ್ದ ಕುರ್ಗಾನ್ ಹಯ್ಪಾತಿಸಿಸ್ (Kurgan hypothesis) ಪ್ರಕಾರ ಇಂಡೋ ಯೂರೋಪಿಯನ್ನರ ತಾಯ್ನೆಲ ಇರುವುದು ಪಾಂಟಿಕ್ ಸ್ಟೆಪ್ (Pontic Steppe) ಜಾಗದಲ್ಲಿ. ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ ಜಾಗ. ಈಗ್ಗೆ 5000 ವರ್ಷಗಳ ಹಿಂದೆ ಅಲ್ಲಿದ್ದ ಆದಿ ಇಂಡೊ ಯೂರೋಪಿಯನ್ ನುಡಿಗರು ಯೂರೋಪ್ ಮತ್ತು ದಕ್ಶಿಣ ಏಶಿಯಾ ಕಡೆಗೆ ಎರಡು ಕವಲುಗಳಾಗಿ ವಲಸೆ ಹೋದರು. ಈ ಮೂನಲಕ ಜಗತ್ತಿನ ಎಲ್ಲಾ ಕಡೆ ಇಂಡೋ ಯೂರೋಪಿಯನ್ ಕುಟುಂಬದ ನುಡಿಗಳನ್ನು ಹಬ್ಬಿಸಿದರು. ಈ ಕುರ್ಗPನ್ ಹಯ್ಪಾತಿಸೀಸ್ ನ್ನು ಇತ್ತೀಚಿನ DNA ಸಂಶೋದನೆಗಳು ಸಹ ಗಟ್ಟಿಗೊಳಿಸಿವೆ.

ಈ ಇಂಡೋ ಯೂರೋಪಿಯನ್ ನುಡಿ ಕುಟುಂಬದ ಎರಡು ಕವಲುಗಳು ಇಂಡೋ ಆರ್ಯನ್ ಕವಲು ಮತ್ತು ಇರಾನಿಯನ್ ಕವಲು. ಸಂಸ್ಕೃತ ನುಡಿಯು ಇಂಡೋ ಕುಟುಂಬ ಕವಲಿನ ನುಡಿಯಾದರೆ ಅವೆಸ್ತ ಮತ್ತು ಪರ್ಸಿಯನ್ ಇರಾನಿಯನ್ ಕವಲಿನ ನುಡಿಗಳು. ಬಹಳ ಹಳೆಯದಾದ ಋಗ್ವೇದ ಸಂಸ್ಕೃತದಲ್ಲಿ ಇದ್ದರೆ ಜೊರಾಸ್ಟ್ರಿಯನ್ನರ ಜಂಡ್ ಅವೆಸ್ತಾ ಗ್ರಂಥವು ಅವೆಸ್ತಾ ನುಡಿಯಲ್ಲಿದೆ. ಈ ಎರಡೂ ಪ್ರಾಚೀನ ಗ್ರಂಥಗಳ ನಡುವೆ ಬಹಳ ಸಾಮ್ಯತೆ ಇರುವುದು ಸಹ ಕಂಡುಬಂದಿದೆ.

ಸಂಸ್ಕೃತ ನುಡಿಯ ಮೂಲಕ ಇಂಡೋ ಯೂರೋಪಿಯನ್ ಕುಟುಂಬದ ನುಡಿ ಬಾರತಕ್ಕೆ ಬಂದದ್ದು ಇಂದಿಗೆ 3,500 ವರ್ಷಗಳ ಹಿಂದೆ. ಈ ಹೊತ್ತಿಗೆ ಭಾರತದಲ್ಲಿ ದ್ರಾವಿಡ ನುಡಿ ಬಹಳ ಕುಟುಂಬ ದೊಡ್ಡ ನುಡಿ ಕುಟುಂಬವಾಗಿ ಬಾರತದ ಜನರಲ್ಲಿ ಚಾಲ್ತಿಯಲ್ಲಿತ್ತು. ಸಿಂದೂ ಬಯಲಿನ ನಾಗರೀಕತೆಯೂ ದ್ರಾವಿಡ ನುಡಿಗಳ ಮೂಲಕವೇ ಕಟ್ಟಲ್ಪಟ್ಟಿತ್ತು.

ಜೊತೆಗೇ ಮತ್ತೊಂದು ನುಡಿ ಕುಟುಂಬದ ಕೋಲಾ ಮುಂಡಾ ನುಡಿಯೂ ಭಾರತದಲ್ಲಿ ಬೇರು ಬಿಟ್ಟು ಬೆಳೆದಿತ್ತು. ಈ ಭಾಷೆಗಳಲ್ಲಿ ಭಾರತದ ಮಣ್ಣಿನ ಸೊಗಡಿತ್ತು. ಅಷ್ಟರಲ್ಲಾಗಲೇ ದ್ರಾವಿಡ ಬಾಷೆಗಳಲ್ಲಿ ಸಾಹಿತ್ಯಗಳನ್ನೇ ರಚಿಸಲಾಗಿತ್ತು. ಆದರೆ, ತದನಂತರದ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಸಂಸ್ಕೃತ ಹೇಗೆ ಭಾರತದ ಮೂಲ ಮಾತೃ ಭಾಷೆಯಾಯಿತು? ಎಂದು ಪ್ರಶ್ನೆ ಮಾಡುತ್ತಾರೆ ಸಾಮಾಜಿಕ ಹೋರಾಟಗಾರ, ಎಲ್ಲರ ಕನ್ನಡ ಚಳವಳಿಯ ಪ್ರಮುಖರಲ್ಲೊಬ್ಬರಾದ ಹರ್ಷಕುಮಾರ ಕುಗ್ವೆ.

ಪ್ರಖ್ಯಾತ ಸಂಶೋಧಕರಾದ ಷಾ ಶೆಟ್ಟರ್, ಸಂಗಮೇಶ್ ಬದರಿಮಠ್ ರಂತಹ ಸಂಶೋಧಕರೂ ಸಹ ದ್ರಾವಿಡ ಭಾಷೆಯ ಭಾರತದ ಮೂಲ ಭಾಷೆ ಎಂಬುದನ್ನು ಈಗಾಗಲೇ ತಮ್ಮ ಸಂಶೋಧನೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದು ಹಲವರು ಸಂಸ್ಕೃತವೇ ಭಾರತದ ಮಾತೃ ಭಾಷೆ ಎಂದು ಆಧಾರವಿಲ್ಲದೆ ವಾದಿಸುತ್ತಿರುವುದು ವಿಪರ್ಯಾಸ.

(ಮಾಹಿತಿ – ಹರ್ಷಕುಮಾರ್ ಕುಗ್ವೆ)


ಇದನ್ನೂ ಓದಿರಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...