Homeಮುಖಪುಟನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ಅಮಿತಾಬ್‌ ಬಚ್ಚನ್‌ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ, ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.

- Advertisement -
- Advertisement -

‘ಸ್ಪೋರ್ಟ್ಸ್ ಡ್ರಾಮಾ’ ಎಂಬ ಜಾನರ್‌ನಲ್ಲಿ ನಾವು ಸಾಕಷ್ಟು ಸಿನಿಮಾಗಳನ್ನು ಈವರೆಗೆ ನೋಡಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಕ್ರೀಡೆಯನ್ನು ಮುಖ್ಯವಾಗಿಟ್ಟುಕೊಂಡು ಬಂದಿರುವ ಹಲವು ಸಿನಿಮಾಗಳು ಪ್ರಚಂಡ ಯಶಸ್ಸನ್ನೂ ಗಳಿಸಿವೆ. ಆದರೆ ಈ ಕ್ರೀಡಾ ಜಗತ್ತಿನ ಸುತ್ತಲಿನ ಅಸ್ಪೃಶ್ಯ ಜಗತ್ತನ್ನು ಮುಟ್ಟಿದವರು ತೀರಾ ಕಡಿಮೆ.

ಅಮೆಜಾ‌ನ್‌ ಪ್ರೈಮ್‌ನಲ್ಲಿ ತೆರೆಕಂಡ ಪ.ರಂಜಿತ್‌ ನಿರ್ದೇಶನದ ‘ಸರ್ಪಟ್ಟ ಪರಂಬರೈ’ ಕ್ರೀಡಾ ಕಥನಕ್ಕೆ ಹೊಸ ರೂಪ ನೀಡಿತ್ತು. ಈ ನೆಲದ ಬೇರುಗಳನ್ನು ಸ್ಪರ್ಶಿಸಲು ಯತ್ನಿಸಿತ್ತು. ಸರ್ಪಟ್ಟ ಸಿನಿಮಾ ನೋಡುತ್ತಿದ್ದರೆ ಬಾಕ್ಸಿಂಗ್ ನಂತಹ ಕ್ರೀಡೆಯೊಳಗೆ ಪ್ರೇಕ್ಷಕನೂ ಪೆಟ್ಟು ತಿನ್ನುವುದು, ಪೆಟ್ಟು ಕೊಡುವುದು ಸಾಗುತ್ತದೆ. ಬಹುಶಃ ಶ್ರಮಸಂಸ್ಕೃತಿಯೊಂದಿಗೆ ಬೆರೆತ ನೆಲಮುಖಿ ಕ್ರೀಡೆಗಳಿಗೆ ಮಾತ್ರ ಈ ಥರದ ಅನುಭವ ತರಲು ಸಾಧ್ಯವೆನಿಸುತ್ತದೆ. ಅಲ್ಲೂ ಪಿತೂರಿಗಳಿವೆ, ಕ್ರೀಡಾ ಮನೋಭಾವವಿದೆ, ಮನುಷ್ಯನ ಪ್ರತಿಷ್ಟೆ ಇದೆ, ರಾಜಕೀಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೂಟೆ ಹೊರುವವನ ಶ್ರಮವನ್ನೂ ಪ್ರತಿನಿಧಿಸುವ ಕ್ರೀಡಾಕ್ಷೇತ್ರವಿದೆ. ಇದು ಪ.ರಂಜಿತ್‌ ಕಟ್ಟಿಕೊಟ್ಟ ಲೋಕ. ಬೇರೆ ಯಾರೋ ಬಾಕ್ಸಿಂಗ್ ಕುರಿತು ಸಿನಿಮಾ ಮಾಡುವುದಕ್ಕೂ ಪ.ರಂಜಿತ್ ಬಾಕ್ಸಿಂಗ್ ಕುರಿತು ಸಿನಿಮಾ ಮಾಡುವುದಕ್ಕೂ ಇರುವ ವ್ಯತ್ಯಾಸ.

ಪ.ರಂಜಿತ್‌ ನೀಡಿದ ಈ ಸುಮಧುರ ಅನುಭವದ ಬಳಿಕ ನಾಗರಾಜ್‌ ಮಂಜುಳೆಯವರು ನಿರ್ದೇಶಿಸಿರುವ ‘ಝುಂಡ್‌’ (ಹಿಂದಿ) ಸಿನಿಮಾ ಅಂಥದ್ದೇ ಕಥನವನ್ನು ಹೊತ್ತು ತಂದಿದೆ. ಅಮಿತಾಬ್‌ ಬಚ್ಚನ್‌ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ, ಅಸ್ಪೃಶ್ಯ ಭಾರತದ ನಿಜಸ್ಥಿತಿಯನ್ನು ಅನಾವರಣ ಮಾಡುತ್ತದೆ.

ಒಲಿಂಪಿಕ್ಸ್‌, ಫುಟ್ಬಾಲ್‌ ವರ್ಡ್‌ಕಪ್‌ ನಡೆದಾಗಲೆಲ್ಲ- ಭಾರತವೇಕೆ ಈ ಕ್ಷೇತ್ರದಲ್ಲಿ ಪ್ರಜ್ವಲಿಸುವುದಿಲ್ಲ, ಸಣ್ಣಪುಟ್ಟ ರಾಷ್ಟ್ರಗಳೇ ಹಲವು ಚಿನ್ನದ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಮುಡಿಗೇರಿಸಿಕೊಳ್ಳುವಾಗ, 130 ಕೋಟಿ ಜನಸಂಖ್ಯೆಯ ಭಾರತವೇಕೆ ಪದಕಗಳನ್ನು ಗೆಲ್ಲುವುದಿಲ್ಲ? ನಾವೇಕೆ ಸಾಕರ್‌ನಂತಹ ವಿಶ್ವವಿಖ್ಯಾತ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿಲ್ಲ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಭಾರತದ ಜಾತಿ ವ್ಯವಸ್ಥೆಗೂ ಕ್ರೀಡೆಯಲ್ಲಿ ಭಾರತ ಹಿಂದುಳಿದಿರುವುದಕ್ಕೂ ಇಲ್ಲಿನ ರೋಗಗ್ರಸ್ತ ವ್ಯವಸ್ಥೆಗೂ ಕಾರಣಗಳಿರುವುದನ್ನು ಢಾಳಾಗಿ ಶೋಧಿಸುತ್ತದೆ ‘ಝುಂಡ್’.

ಇದನ್ನೂ ಓದಿರಿ: ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

‘ಸ್ಲಮ್‌ ಸಾಕರ್‌ ಇನ್‌ ಇಂಡಿಯಾ’ ಸ್ಥಾಪಕರಾದ ಸಾಮಾಜಿಕ ಕಾರ್ಯಕರ್ತ ವಿಜಯ್ ಬರ್ಸೆ ಅವರ ಜೀವನದಿಂದ ಪ್ರೇರಿತವಾದ ‘ಝುಂಡ್‌’ ವಿಜಯ್ ಬರ್ಸೆಯವರ ಜೀವನ ಕಥೆಯಾಗಿಯಷ್ಟೇ ಉಳಿಯುವುದಿಲ್ಲ. ಪೂರ್ಣ ಪ್ರಮಾಣದ ಕ್ರೀಡಾ ಕಥನವೂ ಅಲ್ಲ. ಭಾರತ ಸಾಮಾಜಿಕ ವ್ಯವಸ್ಥೆಯನ್ನು ಕ್ರೀಡೆಯ ನೆಪದಲ್ಲಿ ‘ಝುಂಡ್‌’ ಹೇಳಲು ಯತ್ನಿಸಿದೆ. ಪ್ರತಿಭೆಗಂಟಿರುವ ಅಸ್ಪೃಶ್ಯ ಜಗತ್ತನ್ನು ಬಿಚ್ಚಿಡುತ್ತದೆ.

ಫುಟ್‌ಬಾಲ್‌ ಕೋಚ್‌ ವಿಜಯ್‌ ಬರ್ಸೆ ಒಂದು ದಿನ ನಡೆದು ಹೋಗುತ್ತಿದ್ದಾಗ ಸ್ಲಮ್‌ ಹುಡುಗರು ಖಾಲಿ ಡಬ್ಬವನ್ನೇ ಫುಲ್‌ಬಾಲ್‌ ಮಾಡಿಕೊಂಡು ಆಟವಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಹುಡುಗರು ಶಾಲಾ, ಕಾಲೇಜು ಮೆಟ್ಟಿಲೇರಿದವರಲ್ಲ. ಗಾಂಜಾ ಸೇವನೆ, ಮದ್ಯಪಾನ, ಧೂಮಪಾನ- ಹೀಗೆ ಹಲವು ಚಟಗಳ ದಾಸರಾದವರು. ಚಿಲ್ಲರೆ ಕಳ್ಳತನ ಮಾಡುವವರು. ಹೀಗೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಹುಡುಗರಲ್ಲಿ ಫುಲ್‌ಬಾಲ್‌ ಕೋಚ್‌ ಭಾರತದ ಭವಿಷ್ಯವನ್ನು ಕಾಣುತ್ತಾರೆ. ಮಾರನೇ ದಿನ ಫುಟ್‌ಬಾಲ್‌ ತಂದು, ತಾನೇ ದುಡ್ಡು ಕೊಟ್ಟು ಆಟವಾಡಿಸುತ್ತಾರೆ. ಹೀಗೆ ಕೆಲವು ದಿನ ದುಡ್ಡು ಕೊಟ್ಟು ಆಡವಾಡಿಸಿ, ಫುಟ್‌ಬಾಲ್‌ನ ರುಚಿಯನ್ನು ಆ ಹುಡುಗರಿಗೆ ಹತ್ತಿಸುತ್ತಾರೆ. ಒಂದು ದಿನ, “ನನ್ನ ಬಳಿ ದುಡ್ಡಿಲ್ಲ” ಎಂದು ಕೋಚ್‌ ಮನೆ ಬಾಗಿಲ ಹಾಕಿದಾಗ, “ನೀವು ದುಡ್ಡು ಕೊಡದಿದ್ದರೆ ಪರವಾಗಿಲ್ಲ, ಫುಲ್‌ಬಾಲ್‌ ಕೊಡಿ” ಎಂದು ಸ್ಲಮ್‌ ಹುಡುಗರು ಕೇಳುವಲ್ಲಿಗೆ ಮೊದಲ ಪರಿವರ್ತನೆ ಆರಂಭವಾಗುತ್ತದೆ.

`ಝುಂಡ್‌’ ಸಿನಿಮಾದ ಒಂದು ದೃಶ್ಯ

ಸ್ಲಮ್‌ ಪಕ್ಕದಲ್ಲಿಯೇ ಕಾಲೇಜು. ಆ ಕಾಲೇಜಿಗೆ ದೊಡ್ಡದಾದ ಕಾಂಪೌಂಡ್‌. ಶುಚಿಯಾಗಿರುವ ಅಂಗಳ. ಸ್ಮಮ್‌ ಕಾಣದಂತೆ ಎತ್ತರವಾದ ಕಟ್ಟಡ. ಸ್ಲಮ್‌ ಹಾಗೂ ಕಾಲೇಜಿನ ಅಂಗಳವನ್ನು ಒಂದೇ ಫ್ರೇಮ್‌ನಲ್ಲಿ ಹಿಡಿಯುವ ಹಲವು ದೃಶ್ಯಗಳು ಚಿತ್ರದಲ್ಲಿ ಬಂದು ಹೋಗುತ್ತವೆ. ಒಂದು ಅಂಬಾನಿ ಭಾರತವಾದರೆ ಮತ್ತೊಂದು ಅಸ್ಪೃಶ್ಯ ಭಾರತ. ಸ್ಲಮ್‌ನಲ್ಲಿರುವ ಒಂದಿಷ್ಟು ಜಾಗದಲ್ಲೇ ಹುಡುಗರು ಫುಟ್‌ಬಾಲ್ ಆಡುತ್ತಾರೆ. ಯಾವುದೇ ಸರಿಯಾದ ತರಬೇತಿ ಇಲ್ಲದ ಸ್ಲಮ್‌ ಹುಡುಗರು, ಸಾಕರ್‌ ತರಬೇತಿ ಪಡೆದ ಹುಡುಗರನ್ನು ಸೋಲಿಸುವಲ್ಲಿಗೆ ಎರಡನೇ ಅಧ್ಯಾಯ ಆರಂಭವಾಗುತ್ತದೆ. ಆ ಸ್ಲಮ್‌ ಹುಡುಗರ ಒಡಲ ಸಂಕಟವೂ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ.

ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಲ್ಲಿ ಇಡೀ ಸ್ಲಮ್‌ ಕುಣಿದು ಕುಪ್ಪಳಿಸುವ ದೃಶ್ಯವನ್ನು ನಾಗರಾಜ್‌ ಮಂಜುಳೆ ಚಿತ್ರಿಸಿದ್ದಾರೆ. ಬಾಲಿವುಡ್‌ ಸಿನಿಮಾ ಲೋಕದಲ್ಲಿ ಈವರೆಗೆ ಗಣಪತಿ ಜಯಂತಿ, ಶಿವಾಜಿ ಜಯಂತಿಯನ್ನು ನೋಡುತ್ತಿದ್ದೆವು. ಇದೇ ಮೊದಲ ಬಾರಿಗೆ ಅಂಬೇಡ್ಕರ್‌‌ ಜಯಂತಿಯನ್ನು ನಾಗರಾಜ್‌ ಮಂಜುಳೆ ಪ್ರದರ್ಶಿಸಿದ್ದಾರೆ ಎಂದು ಅನೇಕರು ಪ್ರಶಂಸಿಸಿದ್ದಾರೆ.

`ಝುಂಡ್‌’ ಸಿನಿಮಾದ ಒಂದು ದೃಶ್ಯ

ರಾಷ್ಟ್ರಮಟ್ಟದ ಸ್ಲಮ್‌ ಟೂರ್ನಿಮೆಂಟ್‌ ನಡೆಸುವುದು ಹಾಗೂ ಸ್ಲಮ್‌ ಹುಡುಗರು ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಗೆ ಆಯ್ಕೆಯಾಗುವುದರ ಕುರಿತು ಸಿನಿಮಾದ ದ್ವಿತಿಯಾರ್ಧ ಸಾಗುತ್ತದೆ. ಸಣ್ಣಪುಟ್ಟ ಕ್ರೈಮ್‌ನಲ್ಲಿ ಸಿಲುಕಿರುವ ಈ ಹುಡುಗರು ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ. ಅದ್ಭುತವಾಗಿ ಫುಟ್ಬಾಲ್‌ ಕಲಿತ್ತಿದ್ದಕ್ಕಿಂತ ಇಂಟರ್‌ ನ್ಯಾಷನಲ್‌ ಟೂರ್ನಿಗೆ ಹೋಗುವುದಕ್ಕಾಗಿ ಈ ಹುಡುಗರು ಎದುರಿಸುವ ಸವಾಲೇ ಇಡೀ ಚಿತ್ರದ ನಿಜದ ಸಂದೇಶ. ಸರಿಯಾದ ದಾಖಲೆಗಳಿಲ್ಲ. ಅಧಿಕಾರಿ ವರ್ಗದ ಸಹಕಾರವಿಲ್ಲ. ಪ್ರೋತ್ಸಾಹ ದೊರಕುವುದಿಲ್ಲ. ಓಡುವ ಕಾಲಿಗೆ ಗುಂಡು ಕಟ್ಟಿದ ವ್ಯವಸ್ಥೆ ನಮ್ಮ ಕಣ್ಣೆದುರು ನಿಲ್ಲುತ್ತದೆ. ಈ ಸಮಸ್ಯೆಗಳ ಬೇರುಗಳು ಯಾವುವು? ಅದೇ ಜಾತಿ ವ್ಯವಸ್ಥೆ. ಭಾರತದ ಪ್ರಗತಿಯ ಕಾಲಿಗೆ ಕಟ್ಟಿದ ಗುಂಡು- ಈ ಜಾತಿ, ಅಸ್ಪೃಶ್ಯ ಸಮಾಜ. ನ್ಯಾಯಾಧೀಶರ ಮುಂದೆ ನಿಂತು ಕೋಚ್‌ ಹೇಳುತ್ತಾರೆ- “ತರಬೇತಿ ಶಾಲೆಯಷ್ಟೇ ಭಾರತವಲ್ಲ. ಅದರಾಚೆಯ ಭಾರತವಿದು.”

ಅಜಯ್‌ ಅತುಲ್‌ ಅವರ ಸಂಗೀತ ಸಿನಿಮಾ ಕಥೆಯ ತೂಕವನ್ನು ಹೆಚ್ಚಿಸಿದೆ. ಹೊಸ ಹುಡುಗರಿಂದ ಅಭಿನಯವನ್ನು ಹೊರತೆಗೆಯುವಲ್ಲಿ ನಾಗರಾಜ್‌ ಯಶಸ್ವಿಯಾಗಿದ್ದಾರೆ. ಸುಮಾರು ಮೂರು ಗಂಟೆ ಇರುವ ‘ಝುಂಡ್‌’ ಮೊದಲಾರ್ಧ ವೇಗವಾಗಿದ್ದು, ದ್ವಿತೀಯಾರ್ಧ ಸ್ವಲ್ಪ ನಿಧಾನವೆನಿಸಿದರೂ ವ್ಯವಸ್ಥೆಯನ್ನು ವಿಮರ್ಶೆಗೊಡ್ಡುತ್ತದೆ.


ಇದನ್ನೂ ಓದಿರಿ: ನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್‌‌: ಆ್ಯಡಂ ಬಿದ್ದಪ್ಪ ಅರೆಸ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...